ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಜನವರಿ 12, 2018

ಆಲುಗಡ್ಡೆಯಿಂದ ಇಷ್ಟೆಲ್ಲಾ ಉಪಯೋಗಗಳಿವೆ ಎಂದು ನಿಮಗೆ ಈ ಮೊದಲು ಗೊತ್ತಿತ್ತೇ?

ಬೋಲ್ಡ್ ಸ್ಕೈ. ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://tinyurl.com/yc3sv8sp

ಹೆಚ್ಚು ಕಾಲ ಕೆಡದೇ ಇರುವ, ಅಗ್ಗವಾದ, ವರ್ಷದ ಎಲ್ಲಾ ಋತುಗಳಲ್ಲೂ ಲಭ್ಯವಿರುವ ತರಕಾರಿಗಳೆಂದರೆ ಆಲುಗಡ್ಡೆ ಮತ್ತು ನೀರುಳ್ಳಿ. ಬಡವರ ನೆಚ್ಚಿನ ಈ ಆಲುಗಡ್ಡೆಯನ್ನು ಉದ್ದದ ಬೆರಳುಗಳಂತೆ ಚೌಕಾಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಚೆಂದದ ಕಾಗದದ ಪೊಟ್ಟಣದಲ್ಲಿ ಕಟ್ಟಿಕೊಟ್ಟರೆ ಶ್ರೀಮಂತರಿಗೆ ಅದು ದುಬಾರಿಬೆಲೆಯ ಸ್ವಾದಿಷ್ಟ ಖಾದ್ಯ. ರೆಸಿಪಿಗಳಲ್ಲಿ ಹುಡುಕಹೊರಟರೆ ಆಲು ಜೊತೆಗಿನ ಇತರ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸಬಹುದಾದ ಖಾದ್ಯಗಳ ಪಟ್ಟಿ ನೂರಕ್ಕೂ ಹೆಚ್ಚಿವೆ. ಇದರಲ್ಲಿರುವ ವಿಟಮಿನ್ ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಕೊಬ್ಬನ್ನು ಕರಗಿಸುವ ಮೂಲಕ ತೂಕ ಇಳಿಯಲೂ ನೆರವಾಗುತ್ತವೆ. ಆಲುಗಡ್ಡೆಯನ್ನು ಚೆನ್ನಾಗಿ ಹುರಿದು ತಿನ್ನುವುದರಿಂದ ಕೊಬ್ಬು ಕಡಿಮೆಯಾಗುತ್ತದೆ.
ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ

ಆದರೆ ಆಲುಗಡ್ಡೆಯ ಉಪಯೋಗ ಅಡುಗೆಗೆ ಹೊರತಾಗಿಯೂ ಬಹಳಷ್ಟಿದೆ. ಇದರ ಪರ್ಯಾಯ ಉಪಯೋಗಗಳಲ್ಲಿ ಪ್ರಮುಖವಾದುವನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ:

ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ
೧) ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ
ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಉಳಿದ ನೀರನ್ನು ಚೆಲ್ಲಬೇಡಿ, ಬದಲಿಗೆ ತಣಿದ ಬಳಿಕ ಇದೇ ನೀರಿಗೆ ಒಂದು ಬೆಂದಿರುವ ಆಲುಗಡ್ಡೆಯನ್ನು ಚೆನ್ನಾಗಿ ಕಿವುಚಿ ನೀರನ್ನು ಗಾಢವಾಗಿಸಿ. ಈ ನೀರಿನಿಂದ ಕೂದಲನ್ನು ತೊಳೆದುಕೊಂಡರೆ ಕೂದಲಿಗೆ ಅಪ್ರತಿಮ ಕಾಂತಿ ದೊರಕುತ್ತದೆ. ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಉದುರುವುದನ್ನು ನಿಯಂತ್ರಿಸುತ್ತದೆ ಅಲ್ಲದೇ ತಲೆಹೊಟ್ಟನ್ನೂ ನಿವಾರಿಸುತ್ತದೆ.
ರಕ್ತದೊತ್ತಡ ಕಡಿಮೆಗೊಳಿಸುತ್ತದೆ
೨) ರಕ್ತದೊತ್ತಡ ಕಡಿಮೆಗೊಳಿಸುತ್ತದೆ.
ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆಯಿದ್ದಲ್ಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಆಲುಗಡ್ಡೆಗಳಿರುವಂತೆ ನೋಡಿಕೊಳ್ಳುವುದರಿಂದ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ.
ಮಲಬದ್ಧತೆ ನಿವಾರಿಸುತ್ತದೆ
೩) ಮಲಬದ್ದತೆ ನಿವಾರಿಸುತ್ತದೆ.
ಮಲಬದ್ಧತೆ ನಿವಾರಿಸುತ್ತದೆ
ಒಂದು ವೇಳೆ ಮಲಬದ್ದತೆಯ ತೊಂದರೆ ಇದ್ದರೆ ಒಂದೆರಡು ಆಲುಗಡ್ಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದು ತಿನ್ನುವ ಮೂಲಕ ಮಲಬದ್ದತೆಯ ತೊಂದರೆ ದೂರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಲವಣ ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುವ ದ್ರವಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಹೊಟ್ಟೆಯುರಿ ಮೊದಲಾದ ತೊಂದರೆಗಳಿಂದ ತಪ್ಪಿಸುತ್ತದೆ.

೪) ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ
ನಿಯಮಿತವಾಗಿ ಮುಖದ ಚರ್ಮವನ್ನು ಆಲುಗಡ್ಡೆಯ ಚಿಕ್ಕದಾಗಿ ತುರಿದ ಪುಡಿಯಿಂದ ಸುಮಾರು ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿಕೊಳ್ಳುವ ಮೂಲಕ ಸಹಜವಾದ ಕಾಂತಿಯನ್ನು ಪಡೆಯಬಹುದು.

೫) ಮೊಡವೆಗಳನ್ನು ನಿವಾರಿಸುತ್ತದೆ.
ಮೊಡವೆಗಳನ್ನು ನಿವಾರಿಸುತ್ತದೆ
ಮೊಡವೆಗಳ ತೊಂದರೆಯಿದ್ದರೆ ಒಂದು ಚಮಚ ಆಲುಗಡ್ಡೆಯ ರಸಕ್ಕೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಮೊಡವೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲ, ಮತ್ತೆ ಬರದಂತೆಯೂ ತಡೆಯಬಹುದು. 


೬) ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ.
ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ
ಕೆಲವೊಮ್ಮೆ ಚರ್ಮದಡಿಯಲ್ಲಿ ಕೆಲವು ಗ್ರಂಥಿಗಳು ಸ್ರವಿತವಾಗಿ ಗಂಟುಗಳು ಉಂಟಾಗುತ್ತವೆ. ಇದಕ್ಕೆ ಒಂದು ಉದಾಹರಣೆ ಮಣಿಕಟ್ಟಿನಲ್ಲಿ ಉಂಟಾಗುವ ಗ್ಯಾಂಗ್ಲಿಯಾನ್ ಎಂಬ ಗಂಟು. ಇದನ್ನು ನಿವಾರಿಸಲು ಸುಮಾರು ಮೂರು ಅಥವಾ ನಾಲ್ಕು ಆಲುಗಡ್ದೆಗಳನ್ನು ನೇರವಾಗಿ ಬೆಂಕಿಯ ಮೇಲಿಟ್ಟು ಸುಡಬೇಕು. ಬಳಿಕ ಸಿಪ್ಪೆ ಸುಲಿದು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಚಿಮುಕಿಸಿಕೊಂದು ಬಿಸಿಬಿಸಿಯಾಗಿಯೇ ತಿನ್ನಬೇಕು. ಇದರಿಂದ ಗಂಟುಗಳು ಕರಗತೊಡಗುತ್ತವೆ.

೭) ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ.

ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಅರ್ಧ ಚಮಚದಷ್ಟು ಹಸಿ ಆಲುಗಡ್ಡೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹರಿಗೆಯ ರೇಖೆಗಳ ಮೇಲೆ ಮತ್ತು ಮುಖದ ನೆರಿಗೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಈ ಸ್ಥಳಗಳೂ ಅಕ್ಕಪಕ್ಕದ ಚರ್ಮದ ಬಣ್ಣವನ್ನೇ ಪಡೆದು ರೇಖೆಗಳು ಮಾಯವಾಗುತ್ತವೆ.

೮) ಬಿಸಿಲಿನ ಝಳಕ್ಕೆ ಒಣಗಿದ ಬಣ್ಣವನ್ನು ನಿವಾರಿಸುತ್ತದೆ.
ಊತವನ್ನು ನಿವಾರಿಸುತ್ತದೆ
ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗದ ಬಣ್ಣ ಬದಲಾಗಿದ್ದು ಇದನ್ನು ನಿಜವರ್ಣಕ್ಕೆ ತರಲು ಹಸಿ ಆಲುಗಡ್ಡೆಯನ್ನು ಅಡ್ಡಲಾಗಿ ಕತ್ತರಿಸಿ ಅದರಿಂದ ಬಿಸಿಲಿಗೆ ಒಡ್ಡಿ ಬಣ್ಣಬದಲಾದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಧಾನವಾಗಿ ಚರ್ಮ ಸಹಜವರ್ಣದತ್ತ ಬದಲಾಗುತ್ತದೆ.

೯) ಊತವನ್ನು ನಿವಾರಿಸುತ್ತದೆ.
ಅಲರ್ಜಿಗಳಿಗೆ ಉತ್ತಮವಾಗಿದೆ
ಕೆಲವೊಮ್ಮೆ ಪೆಟ್ಟು ಬಿದ್ದು ಅಥವಾ ಬೇರಾವುದೋ ಕಾರಣದಿಂದ ದೇಹದ ಯಾವುದಾದರೂ ಭಾಗಕ್ಕೆ ಬಾವು ಅಥವಾ ಊತ ಬಂದಿದ್ದರೆ ಆ ಸ್ಥಳಕ್ಕೆ ಆಲುಗಡ್ಡೆ ಬೇಯಿಸಿದ್ದ ನೀರಿನಿಂದ ಅದ್ದಿದ ಬಟ್ಟೆಯನ್ನು ಕಟ್ಟುವ ಮೂಲಕ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಅಥವಾ ಎರಡು ಆಲುಗಡ್ಡೆಯನ್ನು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿಸಿ ಹಾಕಿ. ಈ ತುಂಡುಗಳ ಒಟ್ಟು ತೂಕದ ಎರಡರಷ್ಟು ತೂಕದ ನೀರನ್ನು ಸೇರಿಸಿ. ಉದಾಹರಣೆಗೆ ಐವತ್ತು ಗ್ರಾಂ ಆಲುಗಡ್ಡೆಯಿದ್ದರೆ ನೀರು ನೂರು ಗ್ರಾಂ ಇರಬೇಕು. ಹೆಚ್ಚು ಕಡಿಮೆ ಆಗಬಾರದು. ಈ ನೀರನ್ನು ಚೆನ್ನಾಗಿ ಕುದಿಸಿ ತಣಿಸಿ. ತಣಿದ ನೀರನ್ನು ಸ್ವಚ್ಛವಾದ ಬಟ್ಟೆಯಲ್ಲಿ ಅದ್ದಿ ಬಾವು ಬಂದ ಸ್ಥಳದ ಮೇಲೆ ಇಡಿಯ ರಾತ್ರಿ ಕಟ್ಟುವುದರಿಂದ ಬಾವು ಕಡಿಮೆಯಾಗುತ್ತದೆ.

೧೦) ಅಲರ್ಜಿಗಳಿಗೆ ಉತ್ತಮವಾಗಿದೆ
ಮೂಲವ್ಯಾಧಿಯನ್ನು ಗುಣಪಡಿಸುತ್ತದೆ
ಹಸಿ ಆಲುಗಡ್ಡೆಯ ರಸವನ್ನು ಸೇವಿಸುವುದರಿಂದ ಹಲವು ವಿಧದ ಅಲರ್ಜಿಗಳು ದೂರವಾಗುತ್ತವೆ.

೧೧) ಮೂಲವ್ಯಾಧಿಯನ್ನು ಗುಣಪಡಿಸುತ್ತದೆ.
ನೆರಿಗೆಗಳನ್ನು ನಿವಾರಿಸುತ್ತದೆ
ಮೂಲವ್ಯಾಧಿಯ ರೋಗಿಗಳು ಆಲುಗಡ್ಡೆಯನ್ನು ಚೆನ್ನಾಗಿ ಬೇಯಿಸಿ ತಯಾರಿಸಿದ ಸೂಪ್ ಕುಡಿಯುವ ಮೂಲಕ ಶಮನ ಪಡೆಯಬಹುದು. 

೧೨) ನೆರಿಗೆಗಳನ್ನು ನಿವಾರಿಸುತ್ತದೆ.
ಚರ್ಮದ ಕಾಂತಿ ಹೆಚ್ಚಲು
ಹಸಿ ಆಲುಗಡ್ಡೆಯ ರಸದಿಂದ ನೆರಿಗೆಗಳಿರುವ ಭಾಗದಲ್ಲಿ ನಯವಾಗಿ ಮಸಾಜ್ ಮಾಡಿದರೆ ನೆರಿಗೆಗಳು ದೂರವಾಗುತ್ತವೆ.

೧೩) ಚರ್ಮದ ಕಾಂತಿ ಹೆಚ್ಚಲು
ಆಲುಗಡ್ಡೆ ಬೇಯಿಸಿದ್ದ ನೀರನ್ನು ಚೆಲ್ಲದೇ ಸ್ನಾನ ಮಾಡಲು ತೆಗೆದಿರಿಸಿದ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ. 

1 ಕಾಮೆಂಟ್‌:

  1. ಆಲೂಗಡ್ಡೆಯಿಂದ ಸಕ್ಕರೆ ಕಾಯಿಲೆ ಉಲ್ಭಣಗೊಳ್ಳುತ್ತದೆ. ಸಕ್ಕರೆ ಕಾಹಿಲೆ ಇದ್ದವರು ಇದನ್ನು ಸೇವಿಸಕೂಡದು.

    ಪ್ರತ್ಯುತ್ತರಅಳಿಸಿ