ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಡಿಸೆಂಬರ್ 30, 2017

ಬಾಸ್ಮತಿ ಅಕ್ಕಿ: ನೋಡಲಿಕ್ಕೇನೋ ಮಲ್ಲಿಗೆ ಹೂವು, ಆದರೆ ಆರೋಗ್ಯಕ್ಕೆ?

ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://kannada.boldsky.com/health/wellness/2017/is-basmati-rice-healthy-013785.html



ಕೆಲವೇ ವರ್ಷಗಳ ಹಿಂದೆ ಬಾಸ್ಮತಿ ಅಕ್ಕಿ ಎಂದರೆ ಮಧ್ಯಮವರ್ಗದವರ ಕೈಗೆ ಎಟುಕದ ಹಾಗೂ ಅತಿ ಕಡಿಮೆ ಪ್ರಮಾಣದಲ್ಲಿ, ಅತಿ ದುಬಾರಿ ಬೆಲೆಗೆ ಲಭ್ಯವಾಗುತ್ತಿದ್ದ ಅಕ್ಕಿಯಾಗಿತ್ತು. ಶ್ರೀಮಂತರು ಮಾತ್ರ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲೇ ಈ ಅಕ್ಕಿಯಿಂದ ಮದುವೆ ಮೊದಲಾದ ಪ್ರಮುಖ ಸಮಾರಂಭಗಳಲ್ಲಿ ಅಡುಗೆ ಮಾಡಿಸಿ ಮೀಸೆ ತಿರುವಿಕೊಳ್ಳುತ್ತಿದ್ದರು. ಈ ಅಕ್ಕಿಯ ಗುಣವೇ ಹಾಗೆ. ಬೆಂದ ಬಳಿಕ ಉದ್ದುದ್ದನೆ, ಮಲ್ಲಿಗೆಯಂತೆ ಬೆಳ್ಳಗೆ ಹರಡಿ, ನಸು ಪರಿಮಳದಿಂದ ಊಟಮಾಡುವವರ ಹೊಟ್ಟೆಗಿಂತಲೂ ಮನವನ್ನು ತಣಿಸುತ್ತದೆ. ಬರೆಯ ಅನ್ನಕ್ಕಿಂತಲೂ ಇದರ ಪಲಾವ್ ಹಾಗೂ ವಿಶೇಷವಾಗಿ ಬಿರಿಯಾನಿ ಹಾಗೂ ಇತರ ಮಸಾಲೆಭರಿತ ಮಾಂಸಾಹಾರ ಹಾಗೂ ಸಸ್ಯಾಹಾರ ಅಡುಗೆಗಳಿಗೆ ಅತ್ಯುತ್ತಮವಾಗಿದೆ.

ಆದರೆ ಈ ಅಕ್ಕಿ ನೋಡುವುದಕ್ಕೆ ಮಾತ್ರವೇ ಉತ್ತಮವೇ ಅಥವಾ ಆರೋಗ್ಯಕರವೂ ಹೌದೇ?  ಈ ಅಕ್ಕಿಯನ್ನು ಕಡಿಮೆ ಪಾಲಿಶ್ ಮಾಡಿದ್ದರೆ ಇದರ ಬಣ್ಣ ಕಂದು ಬಣ್ಣಕ್ಕಿದ್ದು ಇದು ನಿಜವಾಗಿಯೂ ಆರೋಗ್ಯಕರ ಹೌದು. ಆದರೆ ಬಿಳಿ ಅಕ್ಕಿ? ಈ ಬಗ್ಗೆ ತಜ್ಞರನ್ನು ವಿಚಾರಿಸಿದರೆ, ಹೌದು, ಕಂದು ಅಕ್ಕಿಯಷ್ಟು ಪರಿಪೂರ್ಣವಲ್ಲದಿದ್ದರೂ ಕೊಂಚವೇ ಕಡಿಮೆಯಾಗಿ ಇದು ಆರೋಗ್ಯಕರವೇ ಹೌದು ಎಂದು ತಿಳಿಸುತ್ತಾರೆ. ಈ ಅಕ್ಕಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳೂ, ಕಡಿಮೆ ಪ್ರಮಾಣದ ಪ್ರೋಟೀನ್, ಅತಿ ಕಡಿಮೆ ಕೊಬ್ಬು , ಉತ್ತಮ ಪ್ರಮಾಣದ ವಿಟಮಿನ್, ಖನಿಜಗಳು ಮತ್ತು ಅಗತ್ಯ ಪ್ರಮಾಣದ ಕರಗುವ ನಾರು ಇದ್ದು ಆರೋಗ್ಯಕ್ಕೆ ಪೂರಕವಾಗಿದೆ. ಬನ್ನಿ ಈ ಅಕ್ಕಿಯ ಸೇವನೆಯಿಂದ ಲಭ್ಯವಾಗುವ ಪ್ರಯೋಜನಗಳನ್ನು ನೋಡೋಣ:
ಪ್ರಯೋಜನ #1

ಪ್ರಯೋಜನ #1
ನಮ್ಮ ಆಹಾರದಲ್ಲಿ ಸಾಕಷ್ಟು ನಾರು ಇದ್ದರೆ ಕರುಳುಗಳ ಮೇಲೆ ಭಾರ ಬೀಳುವುದು ತಪ್ಪುತ್ತದೆ ಹಾಗೂ ತನ್ಮೂಲಕ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಬಾಸ್ಮತಿ ಅಕ್ಕಿಯಲ್ಲಿ ಇತರ ಅಕ್ಕಿಯಲ್ಲಿರುವುದಕ್ಕಿಂತ ಕೊಂಚ ಹೆಚ್ಚೇ ಕರಗುವ ನಾರು ಇರುತ್ತದೆ. ಕಂದು ಬಾಸ್ಮತಿಯಲ್ಲಿ ಇನ್ನೂ ಹೆಚ್ಚಿರುತ್ತದೆ. ಆದ್ದರಿಂದ ಲಭ್ಯವಿದ್ದರೆ ಕಂದು ಅಕ್ಕಿಯನ್ನೇ ಕೊಳ್ಳುವುದು ಉತ್ತಮ. ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಸುಮಾರು ಮೂವತ್ತು ಗ್ರಾಂ ಕರಗುವ ನಾರನ್ನು ಆಹಾರದ ಮೂಲಕ ಸೇವಿಸುವ ವ್ಯಕ್ತಿಗಳಲ್ಲಿ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇತರರಿಗಿಂತ 30% ಕಡಿಮೆ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಪ್ರಯೋಜನ #2
ಪ್ರಯೋಜನ #2
ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣವೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರನೇ ಏರುತ್ತದೆ. ಈ ಪ್ರಮಾಣವನ್ನು ಗೈಸೆಮಿಕ್ ಇಂಡೆಕ್ಸ್ ಎಂಬ ಕೋಷ್ಟಕದಲ್ಲಿ ಗಮನಿಸಬಹುದು. ಈ ಮಾಪಕ ಕಡಿಮೆ ಇದ್ದಷ್ಟೂ ರಕ್ತದಲ್ಲಿ ಸಕ್ಕರೆ ಸೇರುವ ಪ್ರಮಾಣ ನಿಧಾನವಾಗುತ್ತಾ ಹೋಗುತ್ತದೆ. ಬಾಸ್ಮತಿ ಅಕ್ಕಿಯಲ್ಲಿ ಅತಿ ಕಡಿಮೆ ಮಾಪನ ಇರುವ ಕಾರಣ ಈ ಅಕ್ಕಿಯನ್ನು ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದು. ಆದರೆ ಯಾವುದಕ್ಕೂ ನಿಮ್ಮ ವೈದ್ಯರ ಸಲಹೆ ಪಡೆದೇ ಸೇವಿಸುವುದು ಉತ್ತಮ.
ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದು
ಪ್ರಯೋಜನ #3
ಬಾಸ್ಮತಿ ಅಕ್ಕಿಯನ್ನು ಜೀರ್ಣೀಸಿಕೊಳ್ಳಲು ಇತರ ಅಕ್ಕಿಗಿಂತಲೂ ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಹೊತ್ತಿನ ಅಗತ್ಯವಿದೆ. ಇದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಅನ್ನಿಸುತ್ತದೆ ಹಾಗೂ ಹೆಚ್ಚು ಹೊತ್ತಿನ ಕಾಲ ಹಸಿವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಡುನಡವೆ ತಿನ್ನುತ್ತಾ ಇರುವ ಬಯಕೆಯನ್ನು ಹತ್ತಿಕ್ಕಲು ಸಾಮಾನ್ಯ ಅಕ್ಕಿಯ ಬದಲು ಬಾಸ್ಮತಿ ಬಳಸುವುದು ಉತ್ತಮ.
ಪ್ರಯೋಜನ #3
ಪ್ರಯೋಜನ #4
ಇದರಲ್ಲಿ ಹೆಚ್ಚಿನ ಕರಗುವ ನಾರು ಇರುವ ಕಾರಣ ಮಲಬದ್ದತೆಯಾಗುವ ಸಾಧ್ಯತೆ ಅತಿ ಕಡಿಮೆ. ಹಾಗಾಗಿ ಮರುದಿನದ ನಿಸರ್ಗದ ಕರೆಯನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು.
ಪ್ರಯೋಜನ #4
ಪ್ರಯೋಜನ #5
ಈ ಅಕ್ಕಿಯಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೇ ಕೊಬ್ಬು ಸಹಾ ಅತಿ ಕಡಿಮೆ ಇದೆ. ಅಲ್ಲದೇ ಗೋಧಿಯಂತೆ ಇದರಲ್ಲಿ ಗ್ಲುಟೆನ್ ಸಹಾ ಇಲ್ಲ. ಹಾಗಾಗಿ ಗ್ಲುಟೆನ್ ಒಲ್ಲದ ವ್ಯಕ್ತಿಗಳಿಗೂ, ತೂಕ ಕಡಿಮೆಮಾಡಿಕೊಳ್ಳಲು ಬಯಸುವ ವ್ಯಕ್ತಿಗಗಳಿಗೂ ಈ ಅಕ್ಕಿ ಉತ್ತಮವಾಗಿದೆ.
ಪ್ರಯೋಜನ #5
ಪ್ರಯೋಜನ #6
ಇದರಲ್ಲಿರುವ ಥಯಾಮಿನ್ ಮತ್ತು ನಿಯಾಸಿನ್ ಎಂಬ ವಿಟಮಿನ್ನುಗಳು ಜೀರ್ಣಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ ಹಾಗೂ ನರವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಹಾಗೂ ಹೃದಯಕ್ಕೂ ಉತ್ತಮವಾಗಿದೆ. ಇದರಲ್ಲಿರುವ ಕಬ್ಬಿಣದ ಅಂಶ ರಕ್ತ ಹೀನತೆಯನ್ನು ಕಡಿಮೆಗೊಳಿಸುತ್ತದೆ.
ಪ್ರಯೋಜನ #6

ಸೋಮವಾರ, ಡಿಸೆಂಬರ್ 25, 2017

ಹಾಗಲಕಾಯಿಯ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?

ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/xKfuk2

ಕಹಿ ಎಂಬ ಒಂದೇ ಕಾರಣದಿಂದ ನಮ್ಮಲ್ಲಿ ಹೆಚ್ಚಿನವರು ಹಾಗಲಕಾಯಿ ಎಂಬ ಅದ್ಭುತ ಆಹಾರವನ್ನು ಮನೆಗೇ ತರುವುದಿಲ್ಲ. ವಾಸ್ತವವಾಗಿ ನಿಯಮಿತವಾಗಿ ಹಾಗಲಕಾಯಿಯನ್ನು ಸೇವಿಸುತ್ತಾ ಬರುವ ಮೂಲಕ ರಕ್ತ ಪರಿಶುದ್ಧಗೊಳ್ಳುತ್ತದೆ ಹಾಗೂ ಈ ಮೂಲಕ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ವಿಶೇಷವಾಗಿ ಟೈಪ್ ೧ ಮಧುಮೇಹವನ್ನು ಸಮರ್ಥವಾಗಿ ನಿವಾರಿಸುವ ಹಾಗಲಕಾಯಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಮಲಬದ್ದತೆಯಿಂದಲೂ ಪರಿಹಾರ ಒದಗಿಸುತ್ತದೆ.
ಹಾಗಲಕಾಯಿಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?

ಮದ್ಯಪಾನದ ಬಳಿಕ ಎದುರಾಗುವ ತಲೆತಿರುಗುವ ಸ್ಥಿತಿಯನ್ನು ಸರಿಪಡಿಸಲು ಹಾಗಲಕಾಯಿಯ ಜ್ಯೂಸ್ ಕುಡಿದರೆ ಸಾಕು. ಅಲ್ಲದೇ ಹಾಗಲಕಾಯಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ? ಹೌದು! ಇಂದಿಗೂ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬರಲಾಗಿದ್ದು ಈ ಅಭ್ಯಾಸದ ಆಹಾರ ಸೇವಿಸುವವರಲ್ಲಿ ರಕ್ತದ ಒತ್ತಡ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಂತುಲಿತವಾಗಿರುತ್ತದೆ. ಬನ್ನಿ, ಇಂದಿಗೂ ಮಧುಮೇಹಕ್ಕೆ ಔಷಧಿಯಾಗಿ ಹಾಗಲಕಾಯಿಯನ್ನು ಏಕೆ ಬಳಸುತ್ತಾರೆ ಎಂಬ ಕುತೂಹಲಕ್ಕೆ ಹಾಗಲಕಾಯಿಯ ಮಾಹಿತಿಗಳು ಉತ್ತರ ನೀಡಲಿವೆ:


ಹಾಗಲಕಾಯಿಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?
ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಮ್ಮ ರಕ್ತದ ಒತ್ತಡಕ್ಕೆ alpha glucosidase ಎಂಬ ಕಿಣ್ವದ ಚಟುವಟಿಕೆ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.  ವಿಶೇಷವಾಗಿ ಊಟದ ಬಳಿಕ ರಕ್ತದಲ್ಲಿ ಥಟ್ಟನೇ ಏರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಈ ಜ್ಯೂಸ್‌ನಲ್ಲಿ ಏನೇನಿದೆ?
ಇದಕ್ಕೆ ಹಾಗಲಕಾಯಿಯನ್ನು ಹೇಗೆ ಬಳಸಬೇಕು?
ಒಂದು ಹಾಗಲಕಾಯಿಯ ಬೀಜ ನಿವಾರಿಸಿ ತಿರುಗಳನ್ನು ಮಿಕ್ಸಿಯಲ್ಲಿ ಕಡೆದು ಜ್ಯೂಸ್ ತಯಾರಿಸಿ. ಈ ಜ್ಯೂಸ್ ಅನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಇದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.
ಹಾಗಲಕಾಯಿ ಟೀ ಪ್ರಯತ್ನಿಸಿ
ಈ ಜ್ಯೂಸ್ ನಲ್ಲಿ ಏನೇನಿದೆ?
ಹಾಗಲಕಾಯಿಯಲ್ಲಿ ಕೆಲವಾರು ಪೋಷಕಾಂಶಗಳಿವೆ. ಪ್ರಮುಖವಾಗಿ ಕ್ಯಾರಾಟಿನ್ ಮತ್ತು ಮೋಮೋರ್ಸಿಡಿನ್ ಎಂಬ ಪೋಷಕಾಂಶಗಳು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯನ್ನು ನಿಯಂತ್ರಿಸುವ ಗುಣ ಹೊಂದಿವೆ. ವಿಶೇಷವಾಗಿ ಮಧುಮೇಹಿಗಳ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ರಕ್ತದಲ್ಲಿ ಸೂಕ್ತ ಪ್ರಮಾಣದ ಸಕ್ಕರೆ ಇರುವಂತೆ ನೋಡಿಕೊಳ್ಳುತ್ತವೆ.
ಇದಕ್ಕೆ ಹಾಗಲಕಾಯಿಯನ್ನು ಹೇಗೆ ಬಳಸಬೇಕು?

ಹಾಗಲಕಾಯಿ ಟೀ ಪ್ರಯತ್ನಿಸಿ:
ಕೆಲವು ಅಂಗಡಿಗಳಲ್ಲಿ ಒಣಗಿಸಿದ ಹಾಗಲಕಾಯಿ ಸಿಗುತ್ತದೆ. ಸಮಯ ಸಿಕ್ಕಿದರೆ ನೀವೂ ಒಣಗಿಸಿಕೊಳ್ಳಬಹುದು. ಒಣಗಿಸಿದ ಹಾಗಲಕಾಯಿಯ ತುಂಡೊಂದನ್ನು ಕುದಿಸಿ ಸೋಸಿ ತಯಾರಿಸಿದ ಟೀ ಅನ್ನು ದಿನಕ್ಕೆ ಎರಡು ಬಾರಿ ಕುಡಿಯುವ ಮೂಲಕವೂ ಉತ್ತಮ ಪರಿಣಾಮ ಪಡೆಯಬಹುದು.
ಇದರ ಬೀಜಗಳು ಯಾವ ಉಪಯೋಗಕ್ಕೆ ಬರುತ್ತವೆ?

ಇದರ ಬೀಜಗಳು ಯಾವ ಉಪಯೋಗಕ್ಕೆ ಬರುತ್ತವೆ?
ಹಾಗಲಕಾಯಿಯಲ್ಲಿರುವ ಬೀಜಗಳಲ್ಲಿ ಪಾಲಿಪೆಪ್ಟೈಡ್ - ಪಿ ಎಂಬ ಪೋಷಕಾಂಶವಿದ್ದು ಇದು ಮಧುಮೇಹಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುವ ಇನ್ಸುಲಿನ್ ನಂತೆಯೇ ಕೆಲಸ ಮಾಡುತ್ತವೆ. ಇವು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಇಳಿಸಲು ನೆರವಾಗುತ್ತವೆ.

ಹಾಗಲಕಾಯಿಯ ಹೊಸರುಚಿಗಳನ್ನು ಪ್ರಯತ್ನಿಸಿ
ಭಾರತೀಯ ಅಡುಗೆಗಳಲ್ಲಿ ನೂರಾರು ಬಗೆಯ ಖಾದ್ಯಗಳಿದ್ದು ಹೆಚ್ಚಿನವುಗಳಲ್ಲಿ ಕಹಿಯನ್ನು ಕಡಿಮೆ ಮಾಡಲು ಕೆಲವು ವಿಧಾನಗಳನ್ನು ಅನುಸರಿಸಲಾಗಿರುತ್ತದೆ. ಖಾರವನ್ನು ಹೆಚ್ಚಿಸಿ ಅಥವಾ ಉಪ್ಪುನೀರಿನಲ್ಲಿ ಮೊದಲು ಹಾಗಲಕಾಯಿಯನ್ನು ಬೇಯಿಸಿ ಹಿಂಡಿ ತೆಗೆದ ಬಳಿಕ ಅಡುಗೆ ಮಾಡಿ ಬಡಿಸಿದರೆ ಕಹಿ ಇರುವುದಿಲ್ಲ. ಯಾವುದೇ ಖಾದ್ಯವಾಗಲಿ, ವಾರಕ್ಕೆರಡು ಅಥವಾ ನಾಲ್ಕು ಬಾರಿ ಸೇವಿಸಿದರೆ ಸಾಕು.
ಹಾಗಲಕಾಯಿಯ ಹೊಸರುಚಿಗಳನ್ನು ಪ್ರಯತ್ನಿಸಿ
ಇದರ ಕಹಿ ಇಷ್ಟವಾಗದಿದ್ದರೆ ಏನು ಮಾಡುವಿರಿ?
ಹೆಚ್ಚಿನವರಿಗೆ ಇದರ ಕಹಿ ರುಚಿ ಇಷ್ಟವಾಗುವುದೇ ಇಲ್ಲ. ಇದು ನಿಮಗೆ ಔಷಧಿ, ಸೇವಿಸಲೇಬೇಕು ಎಂದು ಕಟ್ಟಪ್ಪಣೆ ಮಾಡಿದರೂ ಸೇವಿಸಲು ಮನಸ್ಸೇ ಬಾರದೇ ಇದ್ದರೆ ವೈದ್ಯರನ್ನು ಭೇಟಿಯಾಗಿ ಹಾಗಲಕಾಯಿಯ ಅಂಶ ಹೆಚ್ಚಿರುವ ಔಷಧಿಗಳನ್ನು ಸೇವಿಸಲು ಸಲಹೆ ಪಡೆದುಕೊಳ್ಳಿ. ನಿಮ್ಮ ದೇಹ ದಾರ್ಢ್ಯತೆ ಹಾಗೂ ಇತರ ಆರೋಗ್ಯ ಮಾಹಿತಿಯನ್ನು ಪರಿಶೀಲಿಸಿ ಸೂಕ್ತ ಪ್ರಮಾಣದಲ್ಲಿ ಹಾಗಲಕಾಯಿಯ ಅಂಶವಿರುವ ಮಾತ್ರೆಗಳನ್ನು ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಇದನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ.
ಇದರ ಕಹಿ ಇಷ್ಟವಾಗದಿದ್ದರೆ ಏನು ಮಾಡುವಿರಿ?



ಶುಕ್ರವಾರ, ಡಿಸೆಂಬರ್ 22, 2017

ಎಡಮಗ್ಗುಲಲ್ಲಿ ಮಲಗುವ ಆರೋಗ್ಯಕರ ಮಹತ್ವಗಳು


ನಿಮ್ಮ ಆರೋಗ್ಯ ನಿಮ್ಮ ಮಲಗುವ ಭಂಗಿಯನ್ನೂ ಅನುಸರಿಸಿದೆ ಎಂದರೆ ಆಶ್ಚರ್ಯವಾಗಬಹುದು. ನಿಮ್ಮ ಮಲಗುವ ಭಂಗಿ ನಿಮ್ಮ ಆರೋಗ್ಯವನ್ನು ವೃದ್ದಿಸಬಹುದು ಅಥವಾ ಕೆಡಿಸಬಹುದು. ನಿಮಗೆ ಯಾವ ಭಂಗಿಯಲ್ಲಿ ಮಲಗಿದರೆ ಸುಖಕರ ಎನ್ನಿಸುತ್ತದೆಯೋ ಆ ಭಂಗಿಯಲ್ಲಿಯೇ ಮಲಗಲು ಮನಸ್ಸು ತುಡಿಯುವುದು ಸಹಜ. ಆದರೆ ಎಡಮಗ್ಗುಲಲ್ಲಿ ಮಲಗುವ ಮೂಲಕ ಅತಿ ಹೆಚ್ಚಿನ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಹಲವರು ಕಾಯಿಲೆಗಳು ಬರುವುದರಿಂದ ತಡೆಯಬಹುದು ಹಾಗೂ ಹೃದಯ, ಜೀರ್ಣಕ್ರಿಯೆ ಮೊದಲಾದವುಗಳ ಕ್ಷಮತೆ ಹೆಚ್ಚುತ್ತದೆ. ಬೇಗನೇ ಸುಸ್ತಾಗುವುದರಿಂದ ತಡೆಯುತ್ತದೆ, ಕರುಳುಗಳಲ್ಲಿ ಆಹಾರದ ಚಲನೆ ಸುಗಮವಾಗುತ್ತದೆ ಹಾಗೂ ಇನ್ನೂ ಕೆಲವಾರು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಪಡೆಯಲು ನಮಗೆ ಇದುವರೆಗೆ ಅಪರಿಚಿತವಾಗಿದ್ದ ಈ ಭಂಗಿಯಲ್ಲಿ ಮಲಗುವುದನ್ನು ರೂಢಿಸಿಕೊಳ್ಳಬೇಕು. ಪ್ರಾರಂಭದ ಕೆಲದಿನ ಕೊಂಚ ತ್ರಾಸ ಎನಿಸಬಹುದು, ಆದರೆ ದಿನಗಳೆದಂತೆ ಇದು ಅಭ್ಯಾಸವಾಗಿ ಆರೋಗ್ಯ ವೃದ್ದಿಸುತ್ತದೆ.
ಪ್ರಾಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತದೆ
ಈ ಲೇಖನವನ್ನು ಓದಿದ ಬಳಿಕ ಎಡಮಗ್ಗುಲಲ್ಲಿ ಮಲಗಿಕೊಳ್ಳುವ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಇಂದಿನಿಂದಲೇ ಈ ಬಗ್ಗೆ ಮನಸ್ಸು ಮಾಡುವುದು ಖಂಡಿತಾ. ತದ್ವಿರುದ್ದವಾಗಿ ಬಲಮಗ್ಗುಲಲ್ಲಿ ಮಲಗಿಕೊಂಡರೆ ಇದು ವ್ಯತಿರಿಕ್ತವಾದ ಪರಿಣಾಮವನ್ನೇ ನೀಡುತ್ತದೆ. ಮುಖ್ಯವಾದ ತೊಂದರೆ ಎಂದರೆ  ಪ್ರಾತಃವಿಧಿಯ ಮೂಲಕ ಹೊರಹೋಗಬೇಕಾಗಿದ್ದ ಕಲ್ಮಶ ಹೊರಹೋಗದೇ ದೇಹದಲ್ಲಿಯೇ ಉಳಿದುಕೊಳ್ಳುತ್ತದೆ ಅಥವಾ ಪೂರ್ಣಪ್ರಮಾಣದಲ್ಲಿ ವಿಸರ್ಜನೆಯಾಗುವುದಿಲ್ಲ. ಹೃದಯದ ಮೇಲಿನ ಒತ್ತಡವೂ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆಯನ್ನೂ ಕಷ್ಟವಾಗಿಸುತ್ತದೆ. ಬೆನ್ನಿನ ಮೇಲೆ ಮಲಗುವ ಮೂಲಕ ಉಸಿರಾಟ ಕಷ್ಟಕರವಾಗುತ್ತದೆ ಹಾಗೂ ವಿಶೇಷವಾಗಿ ತಡೆತಡೆದು ನಿದ್ದೆ ಆವರಿಸುವ ತೊಂದರೆ ಇರುವವರಿಗೆ ಹಾಗೂ ಅಸ್ತಮಾ ರೋಗಿಗಳಿಗೆ ಇದು ಹೆಚ್ಚು ಕಷ್ಟಕರವಾಗುತ್ತದೆ. ಆದ್ದರಿಂದ ಆರೋಗ್ಯ ವೃದ್ದಿಸಬೇಕೆಂದರೆ ಎಡಮಗ್ಗುಲಲ್ಲಿಯೇ ಮಲಗುವುದು ಉತ್ತಮ ಹಾಗೂ ಇದುವರೆಗೆ ಈ ಅಭ್ಯಾಸವಿಲ್ಲದಿದ್ದರೆ ಈಗಲಾದರೂ ರೂಢಿಸಿಕೊಳ್ಳಲು ಪ್ರಾರಂಭಿಸುವುದು ಸೂಕ್ತ.  ಬನ್ನಿ ಹೀಗೆ ಮಲಗುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಅರಿಯೋಣ:

ಪ್ರಾಣಾಂತಿಕ ಖಾಯಿಲೆಗಳಿಂದ ರಕ್ಷಿಸುತ್ತದೆ:
ಯಕೃತ್ ಹಾಗೂ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ದುಗ್ಧರಸಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಿ ದೇಹದಿಂದ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲು ನೆರವಾಗುತ್ತವೆ. ಕಲ್ಮಶಗಳು ಒಳಗೇ ಉಳಿದುಕೊಂಡರೆ ಇದರ ವಿಷಕಾರಿ ಅಂಶಗಳು ಹಲವಾರು ಬಗೆಯಲ್ಲಿ ಆರೋಗ್ಯವನ್ನು ಕೆಡಿಸಬಹುದು ಹಾಗೂ ಸತತವಾದ ಅಭ್ಯಾಸದಿಂದ ಕಾಯಿಲೆ ಉಲ್ಬಣಗೊಂಡು ಪ್ರಾಣಾಂತಿಕ ಮಟ್ಟಕ್ಕೇರಬಹುದು. ಎಡಮಗ್ಗುಲಲ್ಲಿ ಮಲಗುವ ಮೂಲಕ ದುಗ್ಧರಸಗಳು ಪೂರ್ಣಪ್ರಮಾಣದಲ್ಲಿ ಸ್ರವಿಸುತ್ತವೆ ಹಾಗೂ ಇಡಿಯ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದಕ್ಕೆ ಕಾರಣ ನಮ್ಮ ದುಗ್ದರಸ ಪ್ರಸಾರಣಾ ವ್ಯವಸ್ಥೆ ಎಡಭಾಗದಲ್ಲಿ ಹೆಚ್ಚು ಪ್ರಬಲವಾಗಿರುವುದು. ಬಲಭಾಗದ ವ್ಯವಸ್ಥೆ ಕೊಂಚ ನಿಧಾನ ಹಾಗೂ ಬಲಮಗ್ಗುಲಲ್ಲಿ ಮಲಗುವ ಮೂಲಕ ಈ ವ್ಯವಸ್ಥೆ ಹೆಚ್ಚು ಒತ್ತಡಕ್ಕೆ ಒಳಗಾಗುವ ಮೂಲಕ ನಿದ್ದೆಯ ಸಮಯದಲ್ಲಿ ನಡೆಯಬೇಕಾಗಿದ್ದ ಕಲ್ಮಶ ನಿವಾರಣೆ ಪರಿಪೂರ್ಣವಾಗದೇ ಹೋಗುತ್ತದೆ.

ಯಕೃತ್ ಹಾಗೂ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಈ ಅಂಗಗಳು ನಮ್ಮ ದೇಹದ ಶೋಧನಾ ಕಾರ್ಯವನ್ನು ನಡೆಸುವ ಪ್ರಮುಖ ಅಂಗಗಳಾಗಿದ್ದು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಅನೈಚ್ಛಿಕವಾಗಿ ಹೆಚ್ಚಿನ ಕಾರ್ಯವನ್ನು ನಡೆಸುತ್ತವೆ. ಎಡಮಗ್ಗುಲಲ್ಲಿ ಮಲಗುಅವ್ ಮೂಲಕ ಈ ಅಂಗಗಳು ತಮ್ಮ ಶೋಧನಾ ಕಾರ್ಯವನ್ನು ಪೂರ್ಣಕ್ಷಮತೆಯಿಂದ ನಡೆಸಲು ಸಾಧ್ಯವಾಗುತ್ತದೆ ಹಾಗೂ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲು ಸಾಧ್ಯವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಗೊಂಡ ಆಹಾರದ ಚಲನೆ ಸುಲಭವಾಗುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಜಠರ ಹಾಗೂ ಮೇದೋಜೀರಕ ಗ್ರಂಥಿಗಳು ಯಾವುದೇ ಭಾರವಿಲ್ಲದೇ ನೈಸರ್ಗಿಕವಾಗಿ ತಮ್ಮ ಸ್ವಸ್ಥಾನದಲ್ಲಿ ಜೋತುಬೀಳಲು ನೆರವಾಗುತ್ತದೆ. ಇದರಿಂದ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೇದೋಜೀರಕ ಗ್ರಂಥಿಯಿಂದ ಸ್ರವಿಸಿದ ಜೀರ್ಣರಸಗಳು ಅಗತ್ಯವಿದ್ದಾಗ ಪೂರ್ಣಪ್ರಮಾಣದಲ್ಲಿ ಸ್ರವಿಸಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಪರಿಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ಜೀರ್ಣಗೊಂಡ ಆಹಾರ ಜಠರದಿಂದ ಗುರುತ್ವದ ನೆರವಿನಿಂದ ಸುಲಭವಾಗಿ ಸಣ್ಣಕರುಳಿಗೆ ವರ್ಗಾವಣೆಯಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳದೇ ಜೀರ್ಣಕ್ರಿಯೆ ಸುಲಭಗೊಳ್ಳಲು ಸಾಧ್ಯವಾಗುತ್ತದೆ.

ಜೀರ್ಣಗೊಂಡ ಆಹಾರದ ಚಲನೆ ಸುಲಭವಾಗುತ್ತದೆ.

ಎಡಮಗ್ಗುಲಲ್ಲಿ ಮಲಗಿದ್ದಾಗ ನಮ್ಮ ಜಠರ ಹಾಗೂ ಕರುಳುಗಳು ಕೆಳಮುಖವಾಗಿರುವ ಕಾರಣ ಜೀರ್ಣಗೊಂಡ ಆಹಾರ ಈ ಅಂಗಗಳ ಮೂಲಕ ಹಾದುಹೋಗಲು ಗುರುತ್ವದ ನೆರವು ಪಡೆದು ಸುಲಭವಾಗಿ ಸಾಗುತ್ತವೆ. ಅಲ್ಲದೇ ಜೀರ್ಣಕ್ರಿಯೆ ಸುಲಭವಾದ ಕಾರಣ ದೊಡ್ಡಕರುಳಿನಿಂದ ರಾತ್ರಿ ಹೊತ್ತು ನೀರನ್ನು ಸೆಳೆದು ಕಲ್ಮಶವನ್ನು ಮರುದಿನ ಬೆಳಿಗ್ಗೆ ಮಲವಿಸರ್ಜನೆ ಸುಲಭವಾಗಿ ಹಾಗೂ ಪೂರ್ಣಪ್ರಮಾಣದ ಕಲ್ಮಶ ಹೊರಹೋಗಲು ಸಾಧ್ಯವಾಗುತ್ತದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ
ಹೃದಯದ ಕ್ಷಮತೆ ಹೆಚ್ಚುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹೇಗೆಂದರೆ ಹೀಗೆ ಮಲಗುವ ಮೂಲಕ ರಕ್ತನಾಳಗಳಲ್ಲಿ ಗುರುತ್ವದ ಸಹಾಯದಿಂದ ರಕ್ತವನ್ನು ದೂಡಿಕೊಡಲು ಹೃದಯಕ್ಕೆ ಕೊಂಚವೇ ಒತ್ತಡದಿಂದ ದೂಡಿಕೊಟ್ಟರೆ ಸಾಕಾಗುತ್ತದೆ. ಅಲ್ಲದೇ ಹೃದಯಕ್ಕೆ ಆಗಮಿಸುವ ರಕ್ತವನ್ನು ಸಾಗಿಸುವ ನರ (inferior vena cava) ದ ಮೂಲಕ ಕಡಿಮೆ ರಕ್ತ ಆಗಮಿಸುವ ಮೂಲಕವೂ ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗದೇ ಇದರ ಕ್ಷಮತೆಯೂ ಹೆಚ್ಚುತ್ತದೆ. 

ಆಮ್ಲೀಯತೆ  ಹಾಗೂ ಎದೆಯುರಿಯಿಂದ ರಕ್ಷಿಸುತ್ತದೆ
ಆಮ್ಲೀಯತೆ ಹಾಗೂ ಎದೆಯುರಿಯಿಂದ ರಕ್ಷಿಸುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಜೀರ್ಣರಸಗಳಿಗೆ ಹಿಮ್ಮುಖವಾಗಿ ಸಾಗಲು ಅವಕಾಶವೇ ದೊರಕದಂತಾಗುತ್ತದೆ. ಇದರಿಂದ ಅನ್ನನಾಳದ ಒಳಗಿನಿಂದ ಜೀರ್ಣಗೊಂಡ ಆಹಾರ ಹಿಂದೆ ಬಂದು ಎದುರಾಗುವ ಹುಳಿತೇಗು, ಆಮ್ಲೀಯತೆ, ಎದೆಯುರಿ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

ಮುಂಜಾನೆಯ ಸುಸ್ತಿನಿಂದ ರಕ್ಷಿಸುತ್ತದೆ
ಕೊಬ್ಬಿನ ಬಳಕೆ ಹಾಗೂ ಯಕೃತ್ ನ ಕೊಬ್ಬಿನಿಂದ ರಕ್ಷಣೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಯಕೃತ್ ಹಾಗೂ ಪಿತ್ತಕೋಶಗಳು ತಮ್ಮ ಸ್ಥಾನದಲ್ಲಿ ಯಾವುದೇ ಭಾರವಿಲ್ಲದೇ ಜೋತುಬೀಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಪಿತ್ತರಸ ಸ್ರವಿಸುತ್ತದೆ ಹಾಗೂ ಯಾವುದೇ ಬಗೆಯಲ್ಲಿ ಈ ರಸ ವ್ಯರ್ಥವಾಗುವುದಿಲ್ಲ. ಇದರಿಂದ ಆಹಾರ ಸುಲಭವಾಗಿ ಹಾಗೂ ಪೂರ್ಣಪಮಾಣದಲ್ಲಿ ಜೀರ್ಣಗೊಳ್ಳುತ್ತದೆ. ಪರಿಣಾಮವಾಗಿ ಮುಂಜಾನೆ ಎದುರಾಗುವ ಸುಸ್ತಿನಿಂದ ಕಾಪಾಡುತ್ತದೆ.

ಕೊಬ್ಬಿನ ಬಳಕೆ ಹಾಗೂ ಯಕೃತ್ ನ ಕೊಬ್ಬಿನಿಂದ ರಕ್ಷಣೆ

ಅಹಾರದ ಮೂಲಕ ಲಭಿಸುವ ಕೊಬ್ಬನ್ನು ಕರಗಿಸಲು ಪಿತ್ತಕೋಶ ಹಾಗೂ ಯಕೃತ್ ನಿಂದ ಸ್ರವಿಸಿದ ರಸಗಳು ಅವಶ್ಯವಾಗಿದೆ. ಈ ಕ್ರಿಯೆಗೆ emulsification ಎಂದು ಕರೆಯುತ್ತಾರೆ. ಎಡಮಗ್ಗುವಲ್ಲಿ ಮಲಗುವ ಮೂಲಕ ಪಿತ್ತಕೋಶದ ರಸ ಗರಿಷ್ಟ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಸ್ರವಿಸುವುದರಿಂದ ಕೊಬ್ಬಿನ ಕಣಗಳು ಸಹಾ ಗರಿಷ್ಟ ಪ್ರಮಾಣದಲ್ಲಿ ಚಿಕ್ಕ ಚಿಕ್ಕ ಕಣಗಳಾಗಿ ಒಡೆಯುತ್ತವೆ. ಪರಿಣಾಮವಾಗಿ ಒಡೆಯದೇ ಹೋದ ಕೊಬ್ಬು ಯಕೃತ್ ನಲ್ಲಿ ಸಂಗ್ರಹವಾಗುವುದರಿಂದ ರಕ್ಷಣೆ ಒದಗುತ್ತದೆ.

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ
ಎಡಮಗ್ಗಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೇ ಸಣ್ಣಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ. ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ, ಕಡಿಮೆ ಒತ್ತಡದಲ್ಲಿ ವಿಸರ್ಜನೆಗೊಳ್ಳಲು ಸಹಕಾರಿಯಾಗಿದೆ.

ಬುಧವಾರ, ಡಿಸೆಂಬರ್ 20, 2017

ಪ್ರೋಟೀನು ಬೇಕೆಂದಿದ್ದರೆ ಮೊಟ್ಟೆಯೇ ಆಗಬೇಕೆಂದೇನಿಲ್ಲ-ಈ ಹನ್ನೊಂದು ಆಹಾರಗಳಲ್ಲಿ ಇನ್ನೂ ಹೆಚ್ಚಿದೆ

-ಅರ್ಶದ್ ಹುಸೇನ್ ಎಂ.ಹೆಚ್, ದುಬೈ
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/MUwC4C


ಸಾಮಾನ್ಯವಾಗಿ ದೃಢಕಾಯರು ತಮ್ಮ ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆ ಹಾಗೂ ಮಾಂಸಾಹಾರವನ್ನು ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಮೊಟ್ಟೆಯಲ್ಲಿರುವ ಪ್ರೋಟೀನು ಇದಕ್ಕೆ ಪ್ರಮುಖ ಕಾರಣ. ಒಂದು ಮೊಟ್ಟೆಯಲ್ಲಿ ಸುಮಾರು ಆರು ಗ್ರಾಂ ಪ್ರೋಟೀನು ಇರುತ್ತದೆ ಹಾಗೂ ಉತ್ತಮ ಪ್ರಮಾಣದ ವಿವಿಧ ವಿಟಮಿನ್ನುಗಳು, ಖನಿಜಗಳು ಹಾಗೂ ಅವಶ್ಯಕ ಸಂಯುಕ್ತಗಳೂ ಇವೆ. ಈ ಎಲ್ಲಾ ಗುಣಗಳಿಂದಾಗಿಯೇ ಮೊಟ್ಟೆ ಒಂದು ಪರಿಪೂರ್ಣ ಆಹಾರವಾಗಿದೆ. ಒಂದು ವೇಳೆ ಸಸ್ಯಾಹಾರಿಗಳು ಸ್ನಾಯುಗಳನ್ನು ಹುರಿಗಟ್ಟಿಸಬೇಕೆಂದು ಇಚ್ಛಿಸಿದರೆ? ಮೊಟ್ಟೆ ಹಾಗೂ ಮಾಂಸಾಹಾರದ ಸೇವನೆಯ ಹೊರತಾಗಿ ಇದು ಸಾಧ್ಯವಾಗಬಲ್ಲುದೇ ಎಂಬ ಸಂಶಯ ಮೂಡುವುದು ಸಹಜ. ಆದರೆ ನಿಸರ್ಗ ಇವರಿಗೂ ಕೆಲವು ಆಹಾರಗಳ ಮೂಲಕ ಮೊಟ್ಟೆಯಿಂತಲೂ ಹೆಚ್ಚಿನ ಪ್ರೋಟೀನುಗಳನ್ನು ಒದಗಿಸುವ ಮೂಲಕ ಸ್ನಾಯುಗಳನ್ನು ಹುರಿಗಟ್ಟಿಸಲು ಸಮಾನವಾದ ಅವಕಾಶ ನೀಡಿದೆ. ಬನ್ನಿ, ಇವು ಯಾವುವು ಎಂದು ನೋಡೋಣ:

#1 ಹೆಸರು ಕಾಳು:
ಹೆಸರು ಕಾಳು
ಹಚ್ಚ ಹಸುರಿನ, ಪುಟ್ಟ ಹೆಸರು ಕಾಳಿನ ಕವಚವನ್ನು ತೆಗೆದಾಗ ಇದು ಹೆಸರು ಬೇಳೆಯಾಗುತ್ತದೆ. ಆದರೆ ಈ ಹೆಸರು ಕಾಳನ್ನು ನೆನೆಸಿಟ್ಟು ಪುಟ್ಟ ಮೊಳಕೆಯೊಡೆದ ಬಳಿಕ ಇದರ ಪೋಷಕಾಂಶಗಳು ಅದ್ಭುತವಾಗಿ ವೃದ್ದಿಸುತ್ತವೆ. ಈ ಕಾಳುಗಳನ್ನು ಬೇಯಿಸಿದ ಖಾದ್ಯಗಳು ಎಲ್ಲವೂ ಇಷ್ಟಪಡುವ ಪರಿಮಳ ಹಾಗೂ ರುಚಿಯನ್ನು ಹೊಂದಿರುತ್ತವೆ. ಹೆಸರು ಕಾಳಿನಲ್ಲಿ ಪೊಟ್ಯಾಶಿಯಂ, ಕಬ್ಬಿಣ, ವಿಟಮಿನ್ ಸಿ, ಕರಗುವ ಮೊದಲಾದ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ನೂರು ಗ್ರಾಂ ಒಣಗಿಸಿದ ಹೆಸರು ಕಾಳನ್ನು ಬೇಯಿಸಿ ಅಡುಗೆ ಮಾಡಿದಾಗ ಮೂರು ಗ್ರಾಂ ಪ್ರೋಟೀನ್ ಲಭ್ಯವಾದರೆ, ಇದೇ ಪ್ರಮಾಣದ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದಾಗ ಏಳು ಗ್ರಾಂ ಪ್ರೋಟೀನು ಸಿಗುತ್ತದೆ. ಆ ಪ್ರಕಾರ ಕೇವಲ ನೂರು ಗ್ರಾಂ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ಮೊಟ್ಟೆಗಿಂತಲೂ ಹೆಚ್ಚಿನ ಪ್ರೋಟೀನನ್ನು ಪಡೆಯಬಹುದು.


#2 ಕಡಲೆ ಕಾಳು
ಕಡಲೆ ಕಾಳು
ಕಡಲೆ ಕಾಳಿನಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನು ಇದ್ದು ರುಚಿಕರವೂ ಆಗಿದೆ. ಅಲ್ಲದೇ ಇದರಲ್ಲಿರುವ ಕೆಲವು ಪೋಷಕಾಂಶಗಳಿಗೆ  ಹಸಿವನ್ನು ನಿಗ್ರಹಿಸುವ cholecystokinin (ಖೊಲೆಸಿಸ್ಟೋಕೈನಿನ್) ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ಪ್ರಚೋದಿಸುವ ಗುಣವಿದೆ. ಅಲ್ಲದೇ ಸಕ್ಕರೆಯ ಸೇವನೆಯಿಂದ ಜಠರ ಹಾಗೂ ಕರುಳುಗಳ ಒಳಭಾಗದಲ್ಲಿ ಉಂಟಾಗುವ ಉರಿಯೂತವನ್ನೂ ಕಡಿಮೆ ಮಾಡುತ್ತದೆ.

#3ಅಗಸೆ ಬೀಜ (Hemp Seeds):
ಅಗಸೆ ಬೀಜ (Hemp Seeds)
ಇವುಗಳ ಹೃದಯಾಕಾರದಿಂದಾಗಿ ಹೆಂಪ್ ಹಾರ್ಟ್ಸ್ ಎಂಬ ಅನ್ವರ್ಥನಾಮವನ್ನೂ ಪಡೆದಿರುವ ಈ ಕಾಳುಗಳಲ್ಲಿ ಅದ್ಭುತ ಪ್ರಮಾಣದ ಪ್ರೋಟೀನ್ ಇದೆ. ಕೇವಲ ಎರಡು ದೊಡ್ಡ ಚಮಚದಲ್ಲಿ  6.3 ಗ್ರಾಂ ಪ್ರೋಟೀನ್ ಇದೆ. ಅಲ್ಲದೇ ಹೃದಯದ ಆರೋಗ್ಯ ಹೆಚ್ಚಿಸುವ ಆಲ್ಫಾ ಲಿನೋಲಿಕ್ ಆಮ್ಲ ಹಾಗೂ ಒಮೆಗಾ ೩ ಕೊಬ್ಬಿನ ಆಮ್ಲಗಳೂ ಇವೆ.

#4 ಹಸಿ ಸೋಯಾ ಅವರೆ ಕಾಳು (Edamame Beans)
ಹಸಿ ಸೋಯಾ ಅವರೆ ಕಾಳು (Edamame Beans)
ಸೋಬಾ ಅವರೆ ಇನ್ನೂ ಎಳೆಯದಾಗಿದ್ದಾಗ ಇವುಗಳ ಕವಚದಿಂದ ಬೇರ್ಪಡಿಸಿದ ಕಾಳುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. Edamame ಎಂಬುದು ಜಾಪಾನೀಯರ ಸಾಂಪ್ರಾದಾಯಿಕವಾದ ಸೋಯಾ ಅವರೆಯನ್ನು ಉಪ್ಪಿನೊಂದಿಗೆ ಕುದಿಸಿದ ಖಾದ್ಯದ ಹೆಸರೂ ಆಗಿದೆ. ಈ ಕಾಳುಗಳಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅಮೈನೋ ಆಮ್ಲಗಳು ಹಾಗೂ ವಿಶೇಷವಾಗಿ ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾದ ಸಂಕುಲ ಅಮೈನೋ ಆಮ್ಲಗಳೂ ಹೆಚ್ಚಿನ ಪ್ರಮಾಣದಲ್ಲಿವೆ.

#5 ಚೆಡ್ಡಾರ್ ಗಿಣ್ಣು (Cheddar Cheese)
ಚೆಡ್ಡಾರ್ ಗಿಣ್ಣು (Cheddar Cheese)
ಈ ಗಿಣ್ಣಿನ ರುಚಿಯನ್ನು ಯಾರಿಗೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅದರಲ್ಲೂ ಮಕ್ಕಳ ತಿನಿಸುಗಳಾದ ಚೀಟೋಸ್ ಮೊದಲಾದವುಗಳಲ್ಲಿ ಈ ಗಿಣ್ಣಿನ ಅಂಶವನ್ನು ರುಚಿಗಾಗಿ ಬೆರೆಸಿರುತ್ತಾರೆ. ನೀವು ಅರಿತಿರುವಂತೆ ಎಲ್ಲಾ ಗಿಣ್ಣುಗಳಲ್ಲಿ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಆದರೆ ಈ ಗಿಣ್ಣಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರೋಟೀನುಗಳಿವೆ. ಜೊತೆಗೇ ಅವಶ್ಯಕ ಕೊಬ್ಬು, ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಸಹಾ ಇವೆ.


#6 ಕಪ್ಪು ಹುರಳಿ (Black beans)
ಕಪ್ಪು ಹುರಳಿ (Black beans)
ಮೆಕ್ಸಿಕನ್ ಆಹಾರವನ್ನು ಇಷ್ಟಪಡುವವರಿಗೆ ಕಪ್ಪು ಹುರುಳಿ ಅಪರಿಚಿತವಲ್ಲ. ಈ ಆಹಾರಗಳಲ್ಲಿ ಕೊಂಚ ಕುರುಕು ಇರುವಂತೆ ಕಪ್ಪು ಹುರುಳಿಯನ್ನು ಬೇಯಿಸಲಾಗಿರುತ್ತದೆ. ವಿಶೇಷವಾಗಿ ಟಾಕೋ ಹಾಗೂ ಬುರಿಟೋ ಬೌಲ್ ಗಳಲ್ಲಿ ಈ ಹುರುಳಿ ಯಥೇಚ್ಛವಾಗಿರುತ್ತದೆ.  ಈ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ (ಅರ್ಧ ಕಪ್ ಹುರುಳಿಯಲ್ಲಿ 7.3ಗ್ರಾಂ!) ಜೊತೆಗೇ ಇದರಲ್ಲಿ ಹೃದಯಕ್ಕೆ ನೆರವಾಗುವ ಕೊಬ್ಬು ಹಾಗೂ ಮೆದುಳಿಗೆ ನೆರವಾಗುವ ಆಂಥೋಸೈಯಾನಿನ್ ಸಹಾ ಇದೆ. ಇದರ ಸೇವನೆಯಿಂದ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ.

#7 ರಾಜ್ಮಾ (Red Kidney Beans)
ರಾಜ್ಮಾ (Red Kidney Beans)
ಕೆಂಪು ಹುರುಳಿ ಅಥವಾ ರಾಜ್ಮಾ ಎಂದು ಭಾರತದಲ್ಲಿ ಜನಪ್ರಿಯವಾದ ಈ ಅವರೆ ಕಾಳು ಸಹಾ ಪ್ರೋಟೀನ್ ಭರಿತವಾಗಿದ್ದು ಹೆಚ್ಚಿನ ಪ್ರಮಾಣದ ಕರಗುವ ನಾರು ಸಹಾ ಇದೆ. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಮಧುಮೇಹಿಗಳಿಗೂ ಸೂಕ್ತವಾದ ಆಹಾರವಾಗಿದೆ.

#8 ಪೀನಟ್ ಬಟರ್
ಪೀನಟ್ ಬಟರ್
ಇದರಲ್ಲಿ ಮೆದುಳಿಗೆ ಅಗತ್ಯವಾದ ಕೊಬ್ಬುಗಳು ಹೇರಳವಾಗಿದೆ ಹಾಗೂ ಶೇಂಗಾಬೀಜಗಳಲ್ಲಿರುವ ಪ್ರೋಟೀನ್  ಸಹಾ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣದಿಂದ ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ. ಎರಡು ದೊಡ್ಡಚಮಚದಷ್ಟು ಪ್ರಮಾಣದಲ್ಲಿ 8ಗ್ರಾಂ ಪ್ರೋಟೀನ್ ಇದೆ.

#9 ಚಿಯಾ ಬೀಜಗಳು:  (Chia Seeds)
ಚಿಯಾ ಬೀಜಗಳು:(Chia Seeds)
ದಕ್ಷಿಣ ಅಮೇರಿಕಾದ ಫಲವತ್ತಾದ ಭೂಮಿಯಲ್ಲಿ ಬೆಳೆದ ಈ ಬೀಜಗಳು ಆರೋಗ್ಯದ ಕಾಳಜಿ ಇರುವ ಯಾರಿಗೂ ಅಗತ್ಯವಾದ ಆಹಾರವಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೋಟೀನ್ ಹಾಗೂ ವಿಶೇಷವಾಗಿ ರಾತ್ರಿ ನೆನೆಸಿಟ್ಟರೆ ಬೆಳಗಾಗುವಷ್ಟರಲ್ಲಿ ಮೂಲಗಾತ್ರಕ್ಕೂ ಹತ್ತು ಪಟ್ಟು ದೊಡ್ಡದಾಗುವ ಮೂಲಕ ಪೋಷಕಾಂಶಗಳನ್ನೂ ಹೆಚ್ಚಿಸಿಕೊಳ್ಳುವುದು ಈ ಕಾಳುಗಳನ್ನು ಆಯ್ದುಕೊಳ್ಳಲು ಸಸ್ಯಾಹಾರಿಗಳಿಗೆ ನೆರವಾಗುತ್ತದೆ.


#10 ಕ್ವಿನೋವಾ (Quinoa)
ಕ್ವಿನೋವಾ (Quinoa)
ಈ ಕಾಳುಗಳಲ್ಲಿ ಗೋಧಿಯಲ್ಲಿರುವ ಗೋಂದಿನಂತಹ ಪದಾರ್ಥವಾದ ಗ್ಲುಟೆನ್ ಇಲ್ಲವೇ ಇಲ್ಲ. ಅಲ್ಲದೇ ಪುರಾತನ ಇಂಕಾಗಳ ನೆಚ್ಚಿನ ಆಹಾರವೂ ಆಗಿತ್ತು. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸಹಾ ಇದೆ. ಜೊತೆಗೇ ಉತ್ತಮ ಪ್ರಮಾಣದ ಎಲ್-ಆರ್ಜಿನೈನ್ ಸಹಿತ ಇತರ ಅವಶ್ಯಕ ಅಮೈನೋ ಆಮ್ಲಗಳೂ ಇದ್ದು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

#11 ಹಾಲು
ಹಾಲು
ಹಾಲಿನಲ್ಲಿ ಪ್ರೋಟೀನು ಉತ್ತಮ ಪ್ರಮಾಣದಲ್ಲಿದ್ದು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. (ಆದರೆ ಲ್ಯಾಕ್ಟೋಸ್ ಅಲರ್ಜಿ ಇರುವ ವ್ಯಕ್ತಿಗಳಿ ಮಾತ್ರ ಸೂಕ್ತವಲ್ಲ) ಅಲ್ಲದೇ  ಹಾಲಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಒಮೆಗಾ ೩ ಕೊಬ್ಬಿನ ಆಮ್ಲಗಳೂ ಮೂಳೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

ಸೋಮವಾರ, ಡಿಸೆಂಬರ್ 18, 2017

ನುಗ್ಗೆ ಎಲೆಗಳ ಹತ್ತು ಅದ್ಭುತ ಆರೋಗ್ಯಕರ ಪ್ರಯೋಜನಗಳು

ಅರ್ಶದ್ ಹುಸೇನ್ ಎಂ.ಹೆಚ್, ದುಬೈ
ಬೋಲ್ಡ್ ಸ್ಕೈ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/YyEQzz

ನುಗ್ಗೆ ಎಲೆಗಳನ್ನು (Moringa leaves) ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ಧಾಲ್, ಸಾಂಬಾರ್ ಅಥವಾ ಕೆಲವು ಸೂಪ್ ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರ ಸೇವನೆಯಿಂದ ಹೆಚ್ಚಿನ ಶಕ್ತಿ ದೊರಕುವುದು ಮಾತ್ರವಲ್ಲ, ಅಮೂಲ್ಯ ಪೋಷಕಾಂಶಗಳೂ ಲಭ್ಯವಾಗುತ್ತವೆ. ನೂರಾರು ವರ್ಷಗಳಿಂದ ನುಗ್ಗೆ ಎಲೆಗಳನ್ನು ಆಹಾರದ ಹೊರತಾಗಿ ಕೆಲವಾರು ರೋಗಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲ್ಪಡುತ್ತಾ ಬರಲಾಗಿದೆ. ಇರರ ಪೋಷಕಾಂಶಗಳ ಪಟ್ಟಿಯಲ್ಲಿ ಪ್ರಮುಖವಾಗಿ ವಿಟಮಿನ್ನು ಹಾಗೂ ಪ್ರೋಟೀನುಗಳಿವೆ. ವಿಟಮಿನ್ ಎ, ಸಿ, ಬಿ6, ಪೊಟ್ಯಾಶಿಯಂ, ಪೋಲೇಟ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದವು ಉತ್ತಮ ಪ್ರಮಾಣದಲ್ಲಿರುವ ಕಾರಣ ಇದೊಂದು ಪರಿಪೂರ್ಣ ಆಹಾರವೆನ್ನಬಹುದು. ಒಂದು ವೇಳೆ ನುಗ್ಗೆ ಎಲೆಗಳ ಬಗ್ಗೆ ಇದುವರೆಗೆ ನಿಮಗೆ ತಿಳಿದೇ ಇಲ್ಲದಿದ್ದರೆ ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನುಗ್ಗೆ ಎಲೆಗಳನ್ನು ಮರೆಯದೇ ತನ್ನಿ. ಈ ಎಲೆಗಳ ನಿಯಮಿತ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:
ತೂಕ ಇಳಿಯಲು ನೆರವಾಗುತ್ತದೆ

1. ತೂಕ ಇಳಿಯಲು ನೆರವಾಗುತ್ತದೆ:
ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಹಾಗೂ ಕ್ಲೋರೋಜೆನಿಕ್ ಆಮ್ಲ ಎಂಬ ಆಂಟಿ ಆಕ್ಸಿಡೆಂಟು ಇದ್ದು ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ದೇಹ ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಕಡಿಮೆಗೊಳಿಸಿ ತೂಕ ಇಳಿಯಲು ನೆರವಾಗುತ್ತದೆ.
ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ
2. ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ:
ಇದರಲ್ಲಿರುವ ಪೋಷಕಾಂಶಗಳು ಚರ್ಮದ ಬುಡದಿಂದ ಪೋಷಣೆ ನೀಡುವ ಕಾರಣ ಚರ್ಮದ ಅಡಿಯಲ್ಲಿ ಕೀವು ತುಂಬಿಕೊಳ್ಳುವುದರಿಂದ ರಕ್ಷಣೆ ದೊರಕಿದಂತಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಕಲ್ಮಶಗಳನ್ನು ನಿವಾರಿಸಿ ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆ ಪಡೆಯಲು  ನೆರವಾಗುತ್ತದೆ.
ತಕ್ಷಣವೇ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ
3. ತಕ್ಷಣವೇ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.
ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿರುವ ಕಾರಣ ಸೇವನೆಯ ಅನತಿಹೊತ್ತಿನಲ್ಲಿಯೇ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಮೆಗ್ನೀಶಿಯಂ ಇದಕ್ಕೆ ಕಾರಣ. ಪರಿಣಾಮವಾಗಿ ಸುಸ್ತು ಮತ್ತು ಬಳಲಿಕೆಯಿಂದ ಶೀಘ್ರವೇ ಹೊರಬರಲು ಸಾಧ್ಯವಾಗುತ್ತದೆ.

4. ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ:
ಈ ಎಲೆಗಳಲ್ಲಿ ಸುಮಾರು ಹದಿನೆಂಟು ಬಗೆಯ ಅಮೈನೋ ಆಮ್ಲಗಳಿದ್ದು ಇವು ದೇಹದ ಜೀವರಾಸಾಯನಿಕ ಕ್ರಿಯೆಯ ಮೂಲಾಧಾರವಾಗಿವೆ. ವಿಶೇಷವಾಗಿ ಟ್ರಿಫ್ಟೋಫ್ಯಾನ್ ಎಂಬ ಅಮೈನೋ ಆಮ್ಲ ನಮ್ಮ ನಿದ್ದೆಯ ಆವರ್ತನವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ನಮ್ಮ ಮೆದುಳಿಗೆ ಮುದನೀಡುವ

ರಸದೂತಗಳನ್ನು ಹೆಚ್ಚು ಸ್ರವಿಸಲು ನೆರವಾಗುವ ಮೂಲಕ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.
ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ
5. ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ.
ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಮ್ಮ ದೇಹದ ಜೀವಕೋಶಗಳನ್ನು ಸುಸ್ಥಿತಿಯಲ್ಲಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆಯಾಗಿ ಸುಮಾರು ಮೂವತ್ತು ಬಗೆಯ ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳು ಕರುಳು ಕ್ಯಾನ್ಸರ್ ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಹಾಗೂ ಆರೋಗ್ಯಕರ ತ್ವಚೆಯ ಮೂಲಕ ವೃದ್ದಾಪ್ಯ ಆವರಿಸುವುದೂ ತಡವಾಗುತ್ತದೆ.
ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ
6. ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ.
ಮಧುಮೇಹದ ಸೇವನೆಯಿಂದ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಇದರಲ್ಲಿರುವ ಆಸ್ಕಾರ್ಬಿಕ್ ಆಮ್ಲ ಕಾರಣವಾಗಿದ್ದು ಇದು ದೇಹದಲ್ಲಿ ಹೆಚ್ಚು ಇನ್ಸುಲಿನ್ ಸ್ರವಿಸಲು ನೆರವಾಗುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಉರಿಯೂತ ನಿವಾರಕ ಗುಣಗಳು
7. ಉರಿಯೂತ ನಿವಾರಕ ಗುಣಗಳು:
ಈ ಎಲೆಗಳಲ್ಲಿ ಉರಿಯೂತ ನಿವಾರಕ ಹಾಗೂ ಗುಣಪಡಿಸುವ ಗುಣಗಳಿದ್ದು ಚಿಕ್ಕ ಪುಟ್ಟ ಗಾಯ, ಸುಟ್ಟ ಗಾಯ, ಜಜ್ಜಿದ ಭಾಗಗಳನ್ನು ಶೀಘ್ರವಾಗಿ ಗುಣಪಡಿಸುವುದರೊಂದಿಗೇ ದೇಹದಲ್ಲಿ ಎದುರಾಗುವ ಸೋಂಕುಗಳಿಂದಲೂ ರಕ್ಷಣೆ ಒದಗಿಸುತ್ತದೆ.
ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ
8. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.
ನಿಮ್ಮ ನಿತ್ಯದ ಆಹಾರದಲ್ಲಿ ನುಗ್ಗೆಸೊಪ್ಪನ್ನು ಅಳವಡಿಸಿಕೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಹೊರಹಾಕಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕಲು ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಿಸುತ್ತದೆ.

9. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಈ ಎಲೆಗಳಲ್ಲಿರುವ ಕರಗದ ನಾರಿನ ಕಾರಣದಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಸುಲಭವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಹಾಗೂ ಮಲಬದ್ದತೆಯಾಗದಂತೆ ತಡೆಯುತ್ತದೆ. ತನ್ಮೂಲಕ ಹೊಟ್ಟೆಯ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.
ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ

10. ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ.
ಈ ಎಲೆಗಳಲ್ಲಿರುವ ವಿಟಮಿನ್ ಸಿ ಮತ್ತು ಇ ಆರೋಗ್ಯವನ್ನು ವೃದ್ದಿಸುತ್ತವೆ. ವಿಟಮಿನ್ ಸಿ ದೇಹದಲ್ಲಿ ನ್ಯೂರೋಟ್ರಾನ್ಸ್ ಮಿಟರ್ ಗಳ ಹೆಚ್ಚು ಹೆಚ್ಚು ಉತ್ಪತ್ತಿಗೆ ನೆರವಾದರೆ ವಿಟಮಿನ್ ಇ ಮೆದುಳಿನ ಜೀವಕೋಶಗಳ ಸವೆತವನ್ನು ತಡೆದು ಇದರಿಂದ ಎದುರಾಗುವ ಮರೆಗುಳಿತನ ಹಾಗೂ ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ.
ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ
ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ ಈ ಎಲೆಗಳಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣಗೊಳ್ಳುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೀರಿಕೊಳ್ಳದಂತೆ ನೆರವಾಗುವ ಮೂಲಕ ರಕ್ತದಲ್ಲಿ ಅಧಿಕವಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ.

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ 
ನೂರಾರು ವರ್ಷಗಳಿಂದ ಭಾರತದಲ್ಲಿ ನುಗ್ಗೆಸೊಪ್ಪನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತಿದೆ. ಈ ಸೊಪ್ಪಿನ ಸೇವನೆಯ ಬಳಿಕ ರಕ್ತಸಂಚಾರದಲ್ಲಿ ಹೆಚ್ಚಳವಾಗುವ ಮೂಲಕ ನಿಮಿರು ದೌರ್ಬಲ್ಯದ ತೊಂದರೆ ಕಡಿಮೆಯಾಗುತ್ತದೆ. 
ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ
ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ 
ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಫ್ಲೇವನಾಯ್ಡುಗಳು ಕೆಳಹೊಟ್ಟೆ ಹಾಗೂ ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆಯ ನೋವನ್ನು ಕಡಿಮೆಗೊಳಿಸಲು ಸಾಧ್ಯ.



ಬುಧವಾರ, ಡಿಸೆಂಬರ್ 6, 2017

ನಿಮ್ಮ ಪತ್ನಿಯಲ್ಲಿ ಈ ವಿಷಯಗಳನ್ನೆಂದೂ ಪ್ರಸ್ತಾಪಿಸದಿರಿ. (ನಿಮಗೇ ಒಳ್ಳೆಯದು)


ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/YKD4sb


ಪತಿ ಪತ್ನಿಯರ ನಡುವೆ ಎಷ್ಟೇ ಅನ್ಯೋನ್ಯತೆ ಇದ್ದರೂ ಕೆಲವು ವಿಷಯಗಳು ಮಾತ್ರ ಪತ್ನಿ ತನ್ನ ಪತಿಯಿಂದಲೂ ಕೇಳಲು ಬಯಸುವುದಿಲ್ಲ. ಈ ಗುಟ್ಟನ್ನು ಅರಿತ ಸಂಸಾರ ಸುಖಮಯವಾಗಿರುತ್ತದೆ. ದಂಪತಿಗಳ ನಡುವೆ ವೈಮನಸ್ಯ ಮೂಡದೇ ಇರಲು ಹಾಗೂ ಶಾಂತಿಯುತ ಜೀವನಕ್ಕಾಗಿ ಹಲವು ಬಾರಿ ಪತಿ ಮೌನವಹಿಸುವುದೇ ಮೇಲು. (ಇದನ್ನೇ ಕುಹಕ ರೂಪದಲ್ಲಿ ದಂ ಕಳೆದುಕೊಂಡ ಪತಿ ಎಂದೂ ಹೇಳುತ್ತಾರೆ). ಸಾಮಾನ್ಯವಾಗಿ ಪತಿಯರು ತಮ್ಮ ಮನಸ್ಸಿಗೆ ಬಂದ ಪದಗಳನ್ನು ಅರಿವಿಲ್ಲದೇ ಉಪಯೋಗಿಸಿದ ಬಳಿಕ ಪ್ರಾರಂಭವಾದ ಕೋಳಿ ಜಗಳ ಯಾವಾಗ ಗೂಳಿ ಜಗಳಕ್ಕೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಪತಿಯೂ ಈ ಕೆಳಗೆ ವಿವರಿಸಿದ ವಿಷಯಗಳನ್ನು ಅರಿತು ಎಂದಿಗೂ ಈ ಪ್ರಶ್ನೆಗಳನ್ನು ಅಥವಾ ವಿಷಯಗಳನ್ನು ಪ್ರಸ್ತಾಪ ಮಾಡಬಾರದು.
ಇಷ್ಟೊಂದು ಮೇಕಪ್ ಅಗತ್ಯವೇ?
ಇಷ್ಟೊಂದು ಮೇಕಪ್ ಅಗತ್ಯವೇ?
ಈ ಪ್ರಶ್ನೆ ಕೇಳಿದ ಬಳಿಕ ಪತಿಗೆ ಮೌನವೇ ಉತ್ತರವಾಗಿ ದೊರಕುತ್ತದೆ. (೧೦೦% ಖಚಿತ) ಒಂದು ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಶೇಖಡಾ ಎಂಭತ್ತಕ್ಕೂ ಹೆಚ್ಚು ಜಗಳಗಳು ಪತಿ ಪತ್ನಿಯರು ಜೊತೆಯಾಗಿ ಹೊರಹೊರಟಾಗ ಆಗುವ ಪುಟ್ಟ ವಾಗ್ವಾದದಿಂದ ಪ್ರಾರಂಭವಾಗುತ್ತವೆ. ಏಕೆಂದರೆ ಸಿಂಗರಿಸಿಕೊಳ್ಳುವುದು ಪ್ರತಿಯೊಬ್ಬ ಹೆಣ್ಣಿನ ಜನ್ಮಸಿದ್ಧ ಹಕ್ಕು ಆಗಿದ್ದು ಇದಕ್ಕಾಗಿ ಸಮಯ ವ್ಯಯಿಸುವುದು ತನ್ನ ಮೂಲಭೂತ ಕರ್ತವ್ಯ ಎಂದು ದೃಢವಾಗಿ ನಂಬುತ್ತಾರೆ. ಏಕೆಂದರೆ ನಾಲ್ಕು ಜನರ ನಡುವೆ ಹೋಗುವಾಗ ತಾವು ಅತ್ಯುತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದು ಇವರ ಪ್ರಯತ್ನವಾಗಿದ್ದು ಈ ಪ್ರಯತ್ನಕ್ಕೆ ಅಡ್ಡಿಬರುವುದನ್ನು ಈ ಜಗತ್ತಿನಲ್ಲಿರುವ ಯಾವುದೇ ಹೆಣ್ಣು ಸಹಿಸುವುದಿಲ್ಲ, ಸ್ವತಃ ತನ್ನ ಪತಿ ಅಥವಾ ತಂದೆಯೇ ಆಗಿರಲಿ! ಉತ್ತಮವಾಗಿ ಕಾಣಿಸಿಕೊಳ್ಳುವ ಮೂಲಕ ಮನವೂ ಪ್ರಫುಲ್ಲಿತವೇ ಆಗಿರುತ್ತದೆ. ಒಂದು ವೇಳೆ ಮೇಕಪ್ ಮಾಡಿಕೊಳ್ಳುವ ಮೂಲಕ ನಿಮ್ಮ ಪತ್ನಿಗೆ ನೆಮ್ಮದಿ ಸಿಗುವುದಾದರೆ ನೀವು ಇದರಿಂದ ತಡೆಯಲಾರಿರಿ, ತಡೆಯಲು ಯತ್ನಿಸುವುದೂ ಸಲ್ಲದು. ಆದ್ದರಿಂದ ಕೊಂಚ ತಾಳ್ಮೆಯಿಂದ ಆಕೆಯ ಮೇಕಪ್ ಮುಗಿಸುವುದನ್ನು ಕಾದು ಬಳಿಕವೇ ಹೊರಡುವುದರಿಂದ ಜಗಳವನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಈ ಕಾಯುವ ಸಮಯ ಅಸಹನೀಯವಾಗಿರುವ ಕಾರಣ ಈ ಸಮಯದಲ್ಲಿ ನಿಮ್ಮ ಮೆಚ್ಚಿನ ಯಾವುದಾದರೊಂದು ಚಟುವಟಿಕೆಯನ್ನು, ಉದಾಹರಣೆಗೆ ಓದುವುದು, ವೀಡೀಯೋ ಗೇಮ್ ಒಂದನ್ನು ಆಡುವುದು ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೇಸರ ದೂರವಾಗಿಸಬಹುದು. ಬೀಚಿಯವರು ಒಂದು ಕಡೆ ಹೇಳುತ್ತಾರೆ. ಪತ್ನಿ ಮೇಕಪ್ ಮಾಡಿದ ಬಳಿಕ ಕೇಳುತ್ತಾಳಂತೆ, ನೀವಿನ್ನೂ ದಾಡಿ ಮಾಡಿಕೊಂಡೇ ಇಲ್ಲವಲ್ಲ, ಪತಿ ಹೇಳಿದನಂತೆ-ನೀನು ಮೇಕಪ್ ಶುರು ಮಾಡುವ ಮೊದಲೊಮ್ಮೆ ಮಾಡಿಕೊಂಡಿದ್ದೆ ಕಣೇ!

ಶಾಪಿಂಗ್ ನಲ್ಲಿ ಎಷ್ಟು ಖರ್ಚು ಮಾಡಿದೆ?
ಹಲವಾರು ಅಧ್ಯಯನಗಳಲ್ಲಿ ಈ ಪ್ರಶ್ನೆಯಿಂದ ಬಹಳಷ್ಟು ಜಗಳಗಳು ಪ್ರಾರಂಭವಾಗಿರುದನ್ನು ಸಾಬೀತು ಪಡಿಸಲಾಗಿದೆ. ಈ ಪ್ರಶ್ನೆಗಳು ಆಕೆಯ ಮನೋಭಾವವನ್ನು ಕೆಡಿಸಬಹುದು. ಇದಕ್ಕೂ ಮುನ್ನ ಮಾಡಿದ ಖರೀದಿಯಿಂದ ಆಕೆಗೆ ಆಗಿದ್ದ ಸಂತೋಷ, ಸಂಭ್ರಮಗಳೆಲ್ಲಾ ಒಂದೇ ಪ್ರಶ್ನೆಗೆ ನೀರಾಗಿ ಕರಗಿ ಹೋಗುತ್ತವೆ. ಇದಕ್ಕಾಗಿ ಆಕೆ ನಿಮ್ಮ ಹಣವನ್ನೇ ಉಪಯೋಗಿಸಿರಬಹುದು ಅಥವಾ ತನ್ನದೇ ಹಣವನ್ನು ಉಪಯೋಗಿಸಿರಬಹುದು. ಆದ್ದರಿಂದ ಶಾಪಿಂಗ್ ಮುಗಿಸಿ ಬಂದ ಬಳಿಕ ನೀವು ಈ ಪ್ರಶ್ನೆಯನ್ನು ಕೇಳದೇ ಇದ್ದಷ್ಟೂ ನಿಮಗೇ ಒಳ್ಳೆಯದು.
ಇಷ್ಟೊಂದು ಮೇಕಪ್ ಅಗತ್ಯವೇ?
ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?
ನಿಮ್ಮ ಪತ್ನಿ ಮಾತ್ರವಲ್ಲ, ನಿಮ್ಮ ಆತ್ಮೀಯರಲ್ಲಿಯೇ ಹಲವರಿಗೆ ಈ (ಕೆಟ್ಟ) ಅಭ್ಯಾಸವಿರುತ್ತದೆ. ಪ್ರತಿ ಪತ್ನಿಯೂ ತನ್ನ ಪತಿಯ ಫೋನ್ ನ ಇತಿಹಾಸವನ್ನು ಅರಿಯುವುದು ತನ್ನ ಹಕ್ಕು ಎಂದೇ ಭಾವಿಸುತ್ತಾಳೆ. ತನ್ನ ಪತಿ ಎಲ್ಲೂ ದಾರಿ ತಪ್ಪಿ  ಹೋಗುತ್ತಿಲ್ಲವಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾ ಇರುವುದು ಪ್ರತಿ ಪತ್ನಿಗೂ ಸಮಾಧಾನಪಟ್ಟುಕೊಳ್ಳುವ ವಿಷಯವೇ ಆಗಿದೆ. ಆದ್ದರಿಂದ ಈ ಪ್ರಶ್ನೆಯನ್ನು ಕೇಳುವ ಬದಲು ನಿಮ್ಮ ಫೋನ್ ಅನ್ನು ಹೇಗಿದ್ದರೂ ಮಡದಿ ಪರೀಕ್ಷಿಸಿಯೇ ಪರೀಕ್ಷಿಸುತ್ತಾಳೆ, ಪರೀಕ್ಷಿಸಿ ಸಮಾಧಾನಪಟ್ಟುಕೊಳ್ಳಲಿ ಎಂದು ಆಕೆಗೆ ಅವಕಾಶ ಮಾಡಿ ಕೊಡಿ. ಅದಕ್ಕೂ ಮುನ್ನ ನಿಮ್ಮ ವೈಯಕ್ತಿಕ ಹಾಗೂ ಅನಗತ್ಯವಾದ ಮೆಸೇಜ್, ಚಿತ್ರ, ವೀಡಿಯೋಗಳನ್ನು ಅಳಿಸಿಬಿಡಿ. ಇದರಿಂದ ಸುಖಸಂಸಾರದ ಸಾರ ಉಳಿದುಕೊಳ್ಳುತ್ತದೆ. ಅಲ್ಲದೇ ನೀವು ಆಕೆಗೆ ಮೋಸ ಮಾಡುತ್ತಲೇ ಇಲ್ಲದಿದ್ದರೆ ನಿಮ್ಮ ಫೋನ್ ತೋರಿಸಲು ನಿಮಗೇನು ಭಯ, ನೋಡಿಕೊಳ್ಳಲಿ ಬಿಡಿ!
ಶಾಪಿಂಗ್ ನಲ್ಲಿ ಎಷ್ಟು ಖರ್ಚು ಮಾಡಿದೆ?
ನೀನು ಗರ್ಭಿಣಿಯಾಗಿದ್ದಾಗಲೂ ನಾವು ಕೂಡಬಹುದೇ?
ಈ ಪ್ರಶ್ನೆ ಕೇಳಿದ ಬಳಿಕ ಆಕೆಗೆ ನಿಮ್ಮ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಗುತ್ತದೆ. ನಿಮಗೆ ಕೇವಲ ದೈಹಿಕ ಸಂಪರ್ಕವೇ ಹೆಚ್ಚಿನ ಆದ್ಯತೆಯಾಯ್ತೇ? ಎಂದು ಆಕೆಯ ಮನದಲ್ಲಿ ತಕ್ಷಣ ಮೂಡುತ್ತದೆ. ದಿಟ್ಟ ಹೆಣ್ಣಾದರೆ ಆ ಕ್ಷಣವೇ ಪತಿಯ ಕೆನ್ನೆಗೊಂದು ಬಾರಿಸಲಿಕ್ಕೂ ಸಾಕು. ಗರ್ಭಾವಸ್ಥೆ ಪ್ರತಿ ಹೆಣ್ಣಿಗೂ ಅತಿ ಸೂಕ್ಷ್ಮವಾದ ಅವಧಿಯಾಗಿದ್ದು ಪ್ರತಿದಿನವೂ ದೈಹಿಕ ಹಾಗೂ ಮಾನಸಿಕವಾದ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತಾಳೆ. ಈ ಸಮಯದಲ್ಲಿ ಆತ್ಮೀಯರ ಸಾಮೀಪ್ಯ ಹಾಗೂ ಆದರವೇ ಮುಖ್ಯವಾಗುತ್ತದೆಯೇ ಹೊರತು ದೈಹಿಕ ಸಂಪರ್ಕವಲ್ಲ! ಆದ್ದರಿಂದ ಯಾವಾಗ ಆಕೆಯೇ ತಾನಾಗಿ ಈ ಬಗ್ಗೆ ಮಾತನಾಡಬಯಸುತ್ತಾಳೋ ಆಗ ಮಾತ್ರವೇ ಈ ಬಗ್ಗೆ ಚರ್ಚಿಸಬೇಕೇ ವಿನಃ ನಿಮಗೆ ಬೇಕಿನಿಸಿದಾಗ ಅಲ್ಲ!
ನಾನೊಬ್ಬ ಕೆಟ್ಟ ಪತಿಯೇ?
ನೀನು ಪ್ರತಿವಾರವೂ ತವರು ಮನೆಗೆ ಹೋಗುವುದೇಕೆ?
ಒಂದು ವೇಳೆ ಆಕೆಯ ತವರು ಮನೆಯ ಸದಸ್ಯರನ್ನು ನೀವು ಇಷ್ಟಪಡದೇ ಇದ್ದರೂ ಈ ಪ್ರಶ್ನೆಯನ್ನು ಮಾತ್ರ ಸರ್ವಥಾ ಕೇಳಬೇಡಿ. ಒಂದು ವೇಳೆ ಕೇಳಿದರೆ ಆ ಕ್ಷಣದಿಂದ ಆಕೆ ನಿಮ್ಮನ್ನು ದ್ವೇಶಿಸಲು ಪ್ರಾರಂಭಿಸಬಹುದು. ಇಂತಹ ಪ್ರಶ್ನೆಗಳು ದಂಪತಿಗಳ ನಡುವೆ ಹುಳಿ ಹಿಂಡುತ್ತವೆ.

ನೀನು ಶೇವ್ ಮಾಡಿಕೊಂಡೆಯಾ?
ಅನಗತ್ಯ ರೋಮಗಳ ನಿವಾರಣೆ ಪ್ರತಿಹೆಣ್ಣಿನ ಅತ್ಯಂತ ಖಾಸಗಿ ವಿಷಯ! ಇದು ಮುಖದ ರೋಮವೇ ಆಗಿರಬಹುದು ಅಥವಾ ಕಾಲಿನದ್ದು, ಈ ಬಗ್ಗೆ ಎಂದಿಗೂ ಪತಿಯರು ಪ್ರಸ್ತಾಪವನ್ನೇ ಎತ್ತಬಾರದು. ಏಕೆಂದರೆ ಈ ಬಗ್ಗೆ ಏನೇ ಮಾತನಾಡಿದರೂ ಅವರಿಗೆ ನೀವು ಅವರ ಖಾಸಗಿತನಕ್ಕೆ ಲಗ್ಗೆ ಇಡುವ ಪ್ರಯತ್ನವಾಗಿಯೇ ತೋರುತ್ತದೆ. ನೀವು ಕೇವಲ ಸೌಂದರ್ಯವನ್ನು ಆಸ್ವಾದಿಸಿದರೆ ಸಾಕು.
ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?
ನಾನೊಬ್ಬ ಕೆಟ್ಟ ಪತಿಯೇ?
ಈ ತರಹದ ಪ್ರಶ್ನೆಯನ್ನು ಕೇಳಿಯೇ ನೀವು ತಿಳಿಗೇಡಿಯಾಗುತ್ತೀರಿ. ಯಾವುದೇ ಪತ್ನಿ ತನ್ನ ಪತಿ ಕೆಟ್ಟವನಾಗಬೇಕೆಂದು ಬಯಸುವುದಿಲ್ಲ. ನೀವೇ ಹೀಗೆ ಕೇಳಿಬಿಟ್ಟರೆ ಯಾವುದೋ ಹಿಂದಿನ ಕ್ಷುಲ್ಲುಕ ಕಾರಣವನ್ನೇ ನೆಪವಾಗಿಸಿ ಆಕೆ ’ಹೌದು’ ಎಂದು ಬಿಟ್ಟರೆ? ಆಗ ನಿಮ್ಮ ಮುಂದಿನ ದಿನಗಳ ನಿದ್ದೆಗಳೆಲ್ಲಾ ಹಾರಿಹೋಗುವ ಸಂಭವವಿದೆ.

ಈ ಬಗೆಯ ಪ್ರಶ್ನೆಗಳನ್ನು ಪತಿಯರು ಖಂಡಿತಾ ತಮ್ಮ ಪತ್ನಿಯರಲ್ಲಿ ಪ್ರಶ್ನಿಸಲೇಬಾರದು.
****

ಗೃಹ ವಿಮೆ: ಏಕೆ ಬೇಕು ಎನ್ನಲು ನಾಲ್ಕು ಸಕಾರಣಗಳು

ಗುಡ್ ರಿಟರ್ನ್ಸ್ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/3VUz8V

ಸ್ವಂತ ಮನೆಯೊಂದನ್ನು ಹೊಂದುವುದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಹಲವು ವರ್ಷಗಳ ಕಠಿಣ ದುಡಿಮೆಯ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಜೀವಮಾನದ ದುಡಿಮೆಯನ್ನೇ ಮುಡಿಪಾಡಿಟ್ಟು ಪಡೆದ ಈ ಮನೆಯ ರಕ್ಷಣೆಯ ಕಾಳಜಿಯನ್ನು ವಹಿಸದಿದ್ದರೆ ಈ ಶ್ರಮ ವ್ಯರ್ಥವಾಗುತ್ತದೆ. ಈ ಅಗತ್ಯತೆಯನ್ನು ಕಂಡುಕೊಂಡ ಕಟ್ಟಡ ನಿರ್ಮಾತೃದಾರರು ಈಗ ಬಗೆಬಗೆಯ ವಿನ್ಯಾಸದ ಮನೆಗಳನ್ನು ಸಿದ್ಧರೂಪದಲ್ಲಿ ನೀಡುತ್ತಿದ್ದು ಇದರ ಮೊಬಲಗನ್ನು ಬ್ಯಾಂಕ್ ಸಾಲದ ಮೂಲಕ ಕಂತುಗಳಲ್ಲಿ ತೀರಿಸಬಹುದು. ಈ ವ್ಯವಸ್ಥೆಯಿಂದ ಇಂದು ಲಕ್ಷಾಂತರ ಜನರು ಮನೆಗಳನ್ನು ಹೊಂದುವ ಕನಸನ್ನು ನನಸಾಗಿಸಿದ್ದಾರೆ. ಆದರೆ ಇದನ್ನು ರಕ್ಷಿಸಲು ಅಗತ್ಯವಾದ ವಿಮೆಯ ಬಗ್ಗೆ ಅನಾದರ ತೋರುತ್ತಿದ್ದಾರೆ. ಹೆಚ್ಚಿನ ಜನರಿಗೆ ಹೀಗೊಂದು ವಿಮೆ ಇದೆ ಎಂದೇ ಗೊತ್ತಿಲ್ಲ!

ಗೃಹ ವಿಮೆ ಎಂದರೆ ಹೆಸರೇ ಸೂಚಿಸುವಂತೆ ವಾಸಿಸುವ ಮನೆಗೆ ಅಥವಾ ಮನೆಯ ಪ್ರಮುಖ ವಸ್ತುಗಳಿಗೆ ಏನಾದರೂ ಘಾಸಿ ಅಥವಾ  ನಷ್ಟವಾದರೆ ಇದನ್ನು ತುಂಬಿಕೊಡುವ ವ್ಯವಸ್ಥೆಯೇ ಆಗಿದೆ. ಗೃಹ ವಿಮೆಯನ್ನು ಪಡೆಯುವ ಮೂಲಕ ನೀವು ಪಡೆಯಬಹುದಾದ ನೆಮ್ಮದಿ ಹಾಗೂ ಲಾಭಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:
ನೈಸರ್ಗಿಕ ವಿಕೋಪ, ಮಾನವ ನಿರ್ಮಿತ ಪ್ರಕೋಪಗಳಿಂದ ರಕ್ಷಣೆ ಒದಗಿಸುತ್ತದೆ

ನೈಸರ್ಗಿಕ ವಿಕೋಪ, ಮಾನವ ನಿರ್ಮಿತ ಪ್ರಕೋಪಗಳಿಂದ ರಕ್ಷಣೆ ಒದಗಿಸುತ್ತದೆ.
ಒಂದು ಒಟ್ಟಾರೆ ಅಥವಾ ಸಂಪೂರ್ಣ ಗೃಹವಿಮೆ ನಿಮ್ಮ ಮನೆಯನ್ನು ಕೆಲವಾರು ಆಪತ್ಕಾಲೀನ ಸ್ಥಿತಿಗಳಿಂದ ರಕ್ಷಣೆ ಒದಗಿಸುತ್ತದೆ. ಉದಾಹರಣೆಗೆ ಭಯೋತ್ಪಾದಕಾ ಧಾಳಿ, ಅಕಸ್ಮಿಕ ಬೆಂಕಿ ಅಪಘಾತ, ನೈಸರ್ಗಿಕ ವಿಕೋಪಗಳಾದ ಸಿಡಿಲು, ಮಹಾಪೂರ, ಭೂಕಂಪ, ಚಂಡಮಾರುತ ಇತ್ಯಾದಿಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಈ ವಿಮೆಯನ್ನು ಗ್ರಾಹಕನ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗುತ್ತದೆ. ಉದಾಹರಣೆಗೆ ಗ್ರಾಹಕನ ಮನೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಅತಿ ಹೆಚ್ಚಾಗಿರುವ ಸ್ಥಳದಲ್ಲಿದ್ದರೆ ಈ ಚಂಡಮಾರುತದಿಂದ ಮನೆಗೆ ಆಗುವ ಹಾನಿಯಿಂದಾಗುವ ನಷ್ಟಗಳನ್ನು ತುಂಬಿಕೊಡುವಂತೆ ರೂಪಿಸಿಕೊಳ್ಳಬಹುದು.
ವೈಯಕ್ತಿಯ ವಸ್ತುಗಳ ನಷ್ಟ ಅಥವಾ ಹಾನಿಯ ವಿರುದ್ದ ರಕ್ಷಣೆ

ವೈಯಕ್ತಿಯ ವಸ್ತುಗಳ ನಷ್ಟ ಅಥವಾ ಹಾನಿಯ ವಿರುದ್ದ ರಕ್ಷಣೆ.
ಗೃಹವಿಮೆಯಲ್ಲಿ ಮನೆಯ ಕಟ್ಟಡ ಮಾತ್ರವಲ್ಲ, ನಿತ್ಯಬಳಕೆಯ ವಸ್ತುಗಳ ಮೇಲೂ ವಿಮೆ ಮಾಡಿಸಬಹುದು. ಮನೆಯ ಸದಸ್ಯರಿಗೆ ಸೇರಿದ ಅಮೂಲ್ಯ ಚಿನ್ನ, ವಜ್ರ ಮೊದಲಾದ ಆಭರಣಗಳು, ದುಬಾರಿ ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣ, ವೈಭವದ ವಸ್ತುಗಳು ಹಾಗೂ ಕಲಾಕೃತಿಗಳು ಮೊದಲಾದವು ಸೇರಿವೆ. ಕಳ್ಳತನ ಮೊದಲಾದ ಸಂದರ್ಭಗಳಲ್ಲಿ ಅಥವಾ ಸಿಡಿಲು ಬಡಿದು ಮನೆಯ ಅಷ್ಟೂ ವಿದ್ಯುತ್ ಉಪಕರಣಗಳು ಹಾನಿಗೊಂಡ ಸಮಯದಲ್ಲಿ ಈ ವಿಮೆ ಆ ಉಪಕರಣವನ್ನು ರಿಪೇರಿ ಮಾಡಿಸುವ ಅಥವಾ ಹೊಸದನ್ನು ನೀಡುವ ಮೂಲಕ ಆ ನಷ್ಟವನ್ನು ಭರಿಸುತ್ತದೆ.

ತಾತ್ಕಾಲಿಕ ವಾಸದ ವೆಚ್ಚ
ಕೆಲವೊಮ್ಮೆ ಮನೆಯ ರಿಪೇರಿ ಅಥವಾ ಬದಲಾವಣೆಯ ಸಂದರ್ಭದಲ್ಲಿ ಮನೆಯನ್ನು ತಾತ್ಕಾಲಿಕವಾಗಿ ಕೆಲವು ದಿನಗಳ ಮಟ್ಟಿಗೆ ಖಾಲಿ ಮಾಡಿ ಬೇರೆಡೆ ವಾಸಿಸಬೇಕಾಗಿ ಬರುತ್ತದೆ. ಇದಕ್ಕಾಗಿ ಹೋಟೆಲ್ ಅಥವಾ ಬಾಡಿಗೆ ಮನೆಯೇ ಗತಿ. ಈ ಬಾಡಿಗೆಯ ವೆಚ್ಚವನ್ನು ಗೃಹವಿಮೆಯ ಮೂಲಕ ಸರಿದೂಗಿಸಿಕೊಳ್ಲಬಹುದು. ಇದರಿಂದ ಆರ್ಥಿಕವಾಗಿ ಹೆಚ್ಚಿನ ಹೊಡೆತ ಬೀಳುವುದು ತಪ್ಪುತ್ತದೆ.
ಈ ವಿಮೆಯನ್ನು ಪಡೆಯುವುದು ಹೇಗೆ?
ಈ ವಿಮೆಯನ್ನು ಪಡೆಯುವುದು ಹೇಗೆ?
ಇದನ್ನು ಸುಲಭವಾಗಿ ಪಡೆಯಬಹುದು. ಪ್ರಾರಂಭದಲ್ಲಿ ನಿಮ್ಮ ಮನೆಯ ವಿಮೆ ಏನೇನನ್ನು ಒಳಗೊಂಡಿರಬೇಕು ಎಂಬುದನ್ನು ಗುರುತಿಸಿಕೊಳ್ಳಬೇಕು. ಅನ್ವಯವಾಗದ ಆಯ್ಕೆಗಳನ್ನು ಬಿಟ್ಟುಬಿಡಬೇಕು. ಉದಾಹರಣೆಗೆ ಮಳೆ ಅತಿ ಕಡಿಮೆ ಬೀಳುವ ಪ್ರದೇಶದಲ್ಲಿ ಅತಿವೃಷ್ಟಿಯ ವಿಮೆ ಬೇಡ. ವಿಮೆಯನ್ನು ಒದಗಿಸುವ ವಿವಿಧ ಸಂಸ್ಥೆಗಳ ಉತ್ಪನ್ನಗಳು ಹಾಗೂ ಇವುಗಳು ನೀಡುವ ಸೇವೆಯನ್ನು ಹೋಲಿಸಿ ನೋಡಿ ನಿಮ್ಮ ಮನೆಗೆ ಅತಿ ಹೆಚ್ಚು ಸೂಕ್ತವಾಗುವ ವಿಮೆಯನ್ನು ಆರಿಸಿಕೊಳ್ಳಬೇಕು. ಬಳಿಕವೇ ಅರ್ಜಿಯನ್ನು ಸಲ್ಲಿಸಬೇಕು.
ಕಟ್ಟಳೆಗಳನ್ನು ಓದಲು ಮರೆಯದಿರಿ
ಕಟ್ಟಳೆಗಳನ್ನು ಓದಲು ಮರೆಯದಿರಿ.
ಯಾವುದೇ ವಿಮಾ ಸೌಲಭ್ಯದಲ್ಲಿ ಸಂಸ್ಥೆ ತನ್ನದೇ ಆದ ಕಟ್ಟಳೆಗಳನ್ನು ಒದಗಿಸಿರುತ್ತದೆ. ಟರ್ಮ್ಸ್ ಅಂಡ್ ಕಂಡೀಶನ್ಸ್ ಎಂದು ಚಿಕ್ಕ ಅಕ್ಷರಗಳಲ್ಲಿ ಅಪಾರವಾದ ಪದಗಳ ಮೂಲಕ ಇದನ್ನು ಒದಗಿಸಿರಲಾಗಿರುತ್ತದೆ. ಕೊಂಚ ಹೆಚ್ಚು ಸಮಯ ಮತ್ತು ವ್ಯವಧಾನ ಆಗ್ರಹಿಸಿದರೂ ಪರವಾಗಿಲ್ಲ, ಈ ಮಾಹಿತಿಯನ್ನೊಮ್ಮೆ ಓದಿಕೊಳ್ಳಬೇಕು. ಇದರ ಮೂಲಕ ಈ ವಿಮೆಯಲ್ಲಿ ಯಾವ ವಿಷಯಗಳನ್ನು ಪರಿಗಣಿಸಲಾಗಿರುತ್ತದೆ ಹಾಗೂ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬಹುದು. ಅಲ್ಲದೇ ಇದಕ್ಕೆ ತಗಲುವ ವೆಚ್ಚದ ಬಗ್ಗೆಯೂ ಜಾಗರೂಕರಾಗಿರಬೇಕು. ಏಕೆಂದರೆ ನಿಯಮಿತ ಪ್ರಮಾಣದಲ್ಲಿ ಸಲ್ಲಿಸಬೇಕಾದ ಪ್ರೀಮಿಯಂ ನಿಮ್ಮ ಜೇಬಿಗೆ ಕನ್ನ ಹಾಕುವಷ್ಟಿರಬಾರದು.
ನಿಖರ ಮಾಹಿತಿ, ಪರಿಶೀಲನೆ ಅಗತ್ಯ
ನಿಖರ ಮಾಹಿತಿ, ಪರಿಶೀಲನೆ ಅಗತ್ಯ

ಅಲ್ಲದೇ ವಿಮೆಯಲ್ಲಿ ಒಳಗೊಳ್ಳುವ ವಸ್ತುಗಳ ನಿಖರ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ. ಇದರ ಪುರಾವೆಗಳನ್ನು, ಉದಾಹರಣೆಗೆ ಖರೀದಿ ಮೊತ್ತದ ರಸೀದಿಗಳನ್ನು ಒದಗಿಸುವುದು ತುಂಬಾ ಉತ್ತಮ. ಇದರಿಂದ ಸರಿಯಾದ ಮೊತ್ತಕ್ಕೆ ವಿಮೆ ಇಳಿಸಬಹುದು. ಅಲ್ಲದೇ ಪ್ರತಿ ಮೂರು ಅಥವಾ ಐದು ವರ್ಷಗಳೊಗೊಮ್ಮೆ ಮನೆಯ ವಿಮೆಯ ಮೊತ್ತವನ್ನು ಪರಿಶೀಲಿಸುತ್ತಿರಬೇಕು. ಏಕೆಂದರೆ ಮನೆ ಸ್ಥಿರಾಸ್ತಿಯಾಗಿದ್ದು ಇದರ ನವೀಕರಣದ ವೆಚ್ಚ ಹಣದುಬ್ಬರದಿಂದಾಗಿ ಪ್ರತಿವರ್ಷವೂ ಏರುತ್ತಲೇ ಹೋಗುತ್ತದೆ.
ಕೊನೆ ಮಾತು
ಅಂತಿಮವಾಗಿ, ಗೃಹ ವಿಮೆ ಇದೆ ಎಂಬ ಒಂದೇ ಅಂಶ ನಿಮಗೆ ಅತಿ ಹೆಚ್ಚಿನ ನೆಮ್ಮದಿ ನೀಡಬಹುದು. ಏಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಕಳ್ಳತನ, ಸಿಡಿಲು, ಅತಿವೃಷ್ಟಿ, ಪಕ್ಕದ ಮರ ಬಿದ್ದು ಮನೆಯ ಛಾವಣಿ ಕುಸಿಯುವುದು ಮೊದಲಾದ, ಊಹೆಗೇ ನಿಲುಕದ ಸಂದರ್ಭಗಳಲ್ಲಿ ನೆರಯವರ ಸಾಂತ್ವಾನ, ಪೋಲೀಸರ ಭರವಸೆಗಿಂತಲೂ ವಿಮೆಯೇ ಹೆಚ್ಚಿನ ನೆಮ್ಮದಿ ನೀಡಿರುವುದನ್ನು ವಿಮೆ ಪಡೆದವರು ತಮ್ಮ ಅನುಭವದ ಮೂಲಕ ತಿಳಿಸುತ್ತಾರೆ.