tag:blogger.com,1999:blog-89107087583094509432024-03-14T16:02:05.429+04:30ವಿಸ್ಮಯ +ನೆಚ್ಚಿನ ಲೇಖಕ ತೇಜಸ್ವಿಯವರ ವಿಸ್ಮಯ ಸರಣಿಯಿಂದ ಪ್ರೇರಿತArshad Hussainhttp://www.blogger.com/profile/13410279590093513740noreply@blogger.comBlogger91125tag:blogger.com,1999:blog-8910708758309450943.post-28466664188376970592019-02-06T20:39:00.002+04:302019-02-06T20:40:19.492+04:30ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ<br />
https://kannada.boldsky.com/health/wellness/2019/consume-this-foods-daily-to-purify-blood-naturally-019223.html<br />
<br />
ನಮ್ಮ ದೇಹದ ರಕ್ತಕ್ಕೆ ಹಲವಾರು ಜವಾಬ್ದಾರಿಗಳಿವೆ. ಎಲ್ಲಕ್ಕಿಂತ ಮುಖ್ಯ ಕಾರ್ಯವೆಂದರೆ ಶ್ವಾಸಕೋಶದಿಂದ ಆಮ್ಲಜನಕವನ್ನು ಪಡೆದು ದೇಹದ ಪ್ರತಿ ಜೀವಕೋಶಕ್ಕೂ ತಲುಪಿಸುವುದು ಹಾಗೂ ಕಲ್ಮಶಗಳನ್ನು ಹೊತ್ತು ತಂದು ದೇಹದಿಂದ ವಿಸರ್ಜಿಸುವುದು. ಜೊತೆಗೇ ವಿವಿಧ ರಸದೂತಗಳು, ಸಕ್ಕರೆ, ಕೊಬ್ಬು ಮೊದಲಾದವುಗಳನ್ನು ಅವುಗಳು ತಲುಪಬೇಕಾದ ಸ್ಥಳಗಳಿಗೆ ಕೊಂಡೊಯ್ದು ತಲುಪಿಸುವುದು, ರಕ್ತ ನಿರೋಧಕ ಶಕ್ತ್ಗಿಗೆ ಅಗತ್ಯವಾದ ಜೀವಕೋಶಗಳು (ವಿಶೇಷವಾಗಿ ಬಿಳಿ ರಕ್ತಕಣಗಳು) ಹಾಗೂ ಇತರ ಅಂಶಗಳನ್ನು ತಲುಪಿಸುವುದು, ಗಾಯವಾದರೆ ತಕ್ಷಣವೇ ಗೋಡೆಯಂತೆ ಒಂದಕ್ಕೊಂದು ಕಣಗಳು ಅಂಟಿಕೊಂಡು ರಕ್ತ ನಷ್ಟವಾಗುವುದನ್ನು ತಪ್ಪಿಸುಸುವು ಮೊದಲಾದ ಹತ್ತು ಹಲವು ಪ್ರಮುಖ ಕಾರ್ಯಗಳಿವೆ. ಜೀವನ ಪರ್ಯಂತ ರಕ್ತ ಸತತವಾಗಿ ನಮ್ಮ ದೇಹದಲ್ಲಿ ಹರಿಯುತ್ತಲೇ ಇರುತ್ತದೆ.<br />
<br />
<br />
ನಮ್ಮ ಆಹಾರ, ಉಸಿರಾಟದ ಮೂಲಕ ನಾವು ಸೇವಿಸುವ ಘನ, ದ್ರವ ಮತ್ತು ವಾಯುಗಳಲ್ಲಿಯೂ ವಿಷಕಾರಿ ಅಂಶಗಳಿದ್ದು ಪ್ರಮುಖ ಅಂಗಗಳು ಇವುಗಳನ್ನು ಶೋಧಿಸಿದ ಬಳಿಕ ಈ ತ್ಯಾಜ್ಯಗಳನ್ನು ಸತತವಾಗಿ ದೇಹದಿಂದ ವಿಸರ್ಜಿಸುತ್ತಲೇ ಇರಬೇಕು. ಅಚ್ಚರಿ ಎಂದರೆ ಮಾನಸಿಕ ಒತ್ತಡದಿಂದಲೂ ನಮ್ಮ ರಕ್ತ ಅಶುದ್ಧಿಗೊಳ್ಳುತ್ತದೆ. ಈ ರಕ್ತವನ್ನು ಶುದ್ದೀಕರಿಸುವ ಮೂಲಕ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ, ತ್ವಚೆ ಕಳಕಳಿಸುತ್ತದೆ ಹಾಗೂ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನೈಸರ್ಗಿಕ ಶುದ್ದೀಕರಣ ಕ್ರಿಯೆಯಲ್ಲಿ ನಮ್ಮ ಮೂತ್ರಪಿಂಡಗಳು, ಯಕೃತ್, ಶ್ವಾಸಕೋಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರ್ಯದಲ್ಲಿ ಕೆಲವು ಆಹಾರಗಳು ತಮ್ಮ ಸಹಕಾರವನ್ನು ಒದಗಿಸಿ ಈ ಅಂಗಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿವೆ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಆದರೆ ಇದಕ್ಕೂ ಮುನ್ನ ನಮ್ಮ ರಕ್ತವನ್ನು ಶುದ್ದೀಕರಿಸುವುದು ಎಷ್ಟು ಅಗತ್ಯ ಎಂದು ನೋಡೋಣ..<br />
<img alt="ರà²à³à²¤ ಮಲಿನವಾà²à²¿à²¦à³à²¦à²°à³" src="https://kannada.boldsky.com/img/2019/01/1m-1547281719.jpg" /><br />
<h2 class="para_head" style="background-color: white; font-family: Tunga, "Lohit Kannada", Arial; font-size: 21px; line-height: 20px; margin: 0px; padding-bottom: 5px; padding-left: 0px; padding-right: 0px; padding-top: 0px !important;">
ರಕ್ತ ಮಲಿನವಾಗಿದ್ದರೆ</h2>
<div style="background-color: white; font-family: Tunga, "Lohit Kannada", Arial; font-size: 17px; padding: 7px 0px;">
ರಕ್ತ ಮಲಿನವಾಗಿದ್ದರೆ ಸೂಕ್ಷ್ಮ ಮತ್ತು ದೇಹದ ಕೇಂದ್ರಕ್ಕೆ ಹೋಲಿಸಿದರೆ ಅಂಚಿನ ಭಾಗದಲ್ಲಿರುವ ತ್ವಚೆಗೆ ಅತಿ ಕಡಿಮೆ ಆರೈಕೆ ದೊರಕುತ್ತದೆ. ಪರಿಣಾಮವಾಗಿ ತ್ವಚೆಯ ಅಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗದೇ ಅಲ್ಲೇ ಉಳಿದು ಸೋಂಕು ಉಂಟಾಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಮೊಡವೆ, ತ್ವಚೆ ಕಳಾರಹಿತವಾಗುವುದು ಹಾಗೂ ಸೂಕ್ಷ್ಮಗೀರುಗಳು ಬೀಳುವುದು ಮೊದಲಾದವು ಎದುರಾಗುತ್ತವೆ. ವಾಸ್ತವವಾಗಿ ರಕ್ತದ ಮಲಿನತೆಯನ್ನು ತ್ವಚೆಯ ಈ ಲಕ್ಷಣಗಳೇ ಪ್ರಥಮವಾಗಿ ಸಾದರಪಡಿಸುತ್ತವೆ ಹಾಗೂ ವೈದ್ಯರೂ ಈ ಲಕ್ಷಣವನ್ನೇ ಪ್ರಥಮವಾಗಿ ಗಮನಿಸುತ್ತಾರೆ.</div>
<div class="listicalSliderContainer element-visible" data-gal-desc="ರಕ್ತ ಶುದ್ದೀಕರಣದ ಮೂಲಕ ದೇಹಕ್ಕೆ ಎದುರಾಗಬಹುದಾದ ಹಲವಾರು ರೋಗಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು ಹಾಗೂ ಮಲಿನ ರಕ್ತದಿಂದ ಎದುರಾಗಬಹುದಾಗಿದ್ದ ಇತರ ತೊಂದರೆಗಳನ್ನೂ ..." data-gal-headline="ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ" data-gal-src="kannada.boldsky.com/img/600x100/2019/01/2m-1547281726.jpg" data-pagetype="0" data-slno="2" data-url="articlecontent-pf96502-019223" id="slider1" style="background-color: white; font-family: Tunga, "Lohit Kannada", Arial; font-size: 17px; margin-bottom: 0px !important; margin-left: 0px; margin-right: 0px; margin-top: 0px; padding: 0px;">
<br />
<section class="listicalSliderContent" style="margin: 0px; overflow: hidden; padding: 0px; position: relative; width: 630px;"><figure style="margin: 0px; padding: 0px;"><img alt="ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ " class="sliderImg image_listical" id="rev_content_2" src="https://kannada.boldsky.com/img/2019/01/2m-1547281726.jpg" style="border: 0px; margin: 0px; max-width: 100%; padding: 0px;" title="" /></figure><span class="listical-photo-share" style="background: rgb(0 , 0 , 0); border-radius: 50%; bottom: 15px; color: white; cursor: pointer; display: block; font-size: 22px; height: 35px; line-height: 35px; margin: 0px; opacity: 0.7; padding: 0px; position: absolute; right: 5px; text-align: center; transition: 0.8s ease-in-out 0s; width: 35px; z-index: 1000;"><span class="fa fa-share-alt" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></span><section class="listical-photo-share-links" style="background: rgb(0, 0, 0); border-radius: 0px; bottom: 10px; margin: 0px; opacity: 0.7; overflow: hidden; padding: 5px 40px 5px 0px; position: absolute; right: -250px; text-align: center; transition: right 0.8s ease-in-out 0s; width: auto; z-index: 10000;"><a class="listical-facebook" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-facebook" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a> <a class="listical-twitter" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-twitter" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a> <a class="listical-google-plus" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-google-plus" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a><span class="listical-photo-share-close" style="color: white; cursor: pointer; font-size: 24px; margin: 0px; padding: 0px; position: absolute; right: 5px;"><span class="fa fa-times" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></span></section></section></div>
<h2 class="para_head" style="background-color: white; font-family: Tunga, "Lohit Kannada", Arial; font-size: 21px; line-height: 20px; margin: 0px; padding-bottom: 5px; padding-left: 0px; padding-right: 0px; padding-top: 0px !important;">
ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ</h2>
<div style="background-color: white; font-family: Tunga, "Lohit Kannada", Arial; font-size: 17px; padding: 7px 0px;">
ರಕ್ತ ಶುದ್ದೀಕರಣದ ಮೂಲಕ ದೇಹಕ್ಕೆ ಎದುರಾಗಬಹುದಾದ ಹಲವಾರು ರೋಗಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು ಹಾಗೂ ಮಲಿನ ರಕ್ತದಿಂದ ಎದುರಾಗಬಹುದಾಗಿದ್ದ ಇತರ ತೊಂದರೆಗಳನ್ನೂ ಇಲ್ಲವಾಗಿಸಬಹುದು. ಇದರಲ್ಲಿ ಹಲವು ಬಗೆಯ ಅಲರ್ಜಿಗಳು, ತಲೆನೋವು, ವಾಕರಿಕೆ ಇತ್ಯಾದಿಗಳು ಪ್ರಮುಖವಾಗಿವೆ. ನಮ್ಮ ದೇಹದ ಕೆಲವು ಅಂಗಗಳಿಗೆ ರಕ್ತಪೂರೈಕೆ ಸತತವಾಗಿ ಆಗುತ್ತಲೇ ಇರಬೇಕು. ಮೆದುಳು, ಮೂತ್ರಪಿಂಡಗಳು, ಯಕೃತ್, ಶ್ವಾಸಕೋಶ, ದುಗ್ಧಗ್ರಂಥಿ ವ್ಯವಸ್ಥೆ ಮೊದಲಾದವುಗಳಿಗೆ ಹೃದಯ ನರವ್ಯವಸ್ಥೆಯ ಮುಲಕ ಸತತವಾಗಿ ರಕ್ತವನ್ನು ಒದಗಿಸುತ್ತಲೇ ಇರುತ್ತದೆ. ಈ ಎಲ್ಲಾ ಅಂಗಗಳ ಕ್ಷಮತೆ ರಕ್ತದ ಶುದ್ದತೆಯನ್ನು ಅವಲಂಬಿಸಿದೆ.</div>
<div class="listicalSliderContainer" data-gal-desc="ರಕ್ತ ಶುದ್ದೀಕರಿಸುವ ಮೂಲಕ ಶ್ವಾಸಕೋಶದಿಂದ ಆಮ್ಲಜನಕ ಕೊಂಡೊಯ್ಯುವ ಮತ್ತು ಜೀವಕೋಶಗಳಿಂದ ಪಡೆದ ಇಂಗಾಲದ ಡೈ ಆಕ್ಸೈಡ್ ಅನ್ನು ವಿಸರ್ಜಿಸಲು ಕೊಂಡು ತರುವ ಸಾಮರ್ಥ್ಯವೂ ಗರ..." data-gal-headline="ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ" data-gal-src="kannada.boldsky.com/img/600x100/2019/01/3m-1547281735.jpeg" data-pagetype="0" data-slno="3" data-url="articlecontent-pf96503-019223" id="slider2" style="background-color: white; font-family: Tunga, "Lohit Kannada", Arial; font-size: 17px; margin-bottom: 0px !important; margin-left: 0px; margin-right: 0px; margin-top: 0px; padding: 0px;">
<br />
<section class="listicalSliderContent" style="margin: 0px; overflow: hidden; padding: 0px; position: relative; width: 630px;"><figure style="margin: 0px; padding: 0px;"><img alt="ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ " class="sliderImg image_listical" id="rev_content_3" src="https://kannada.boldsky.com/img/2019/01/3m-1547281735.jpeg" style="border: 0px; margin: 0px; max-width: 100%; padding: 0px;" title="" /></figure><span class="listical-photo-share" style="background: rgb(0 , 0 , 0); border-radius: 50%; bottom: 15px; color: white; cursor: pointer; display: block; font-size: 22px; height: 35px; line-height: 35px; margin: 0px; opacity: 0.7; padding: 0px; position: absolute; right: 5px; text-align: center; transition: 0.8s ease-in-out 0s; width: 35px; z-index: 1000;"><span class="fa fa-share-alt" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></span><section class="listical-photo-share-links" style="background: rgb(0, 0, 0); border-radius: 0px; bottom: 10px; margin: 0px; opacity: 0.7; overflow: hidden; padding: 5px 40px 5px 0px; position: absolute; right: -250px; text-align: center; transition: right 0.8s ease-in-out 0s; width: auto; z-index: 10000;"><a class="listical-facebook" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-facebook" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a> <a class="listical-twitter" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-twitter" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a> <a class="listical-google-plus" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-google-plus" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a><span class="listical-photo-share-close" style="color: white; cursor: pointer; font-size: 24px; margin: 0px; padding: 0px; position: absolute; right: 5px;"><span class="fa fa-times" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></span></section></section><br />
<div class="cmscontent-article2" style="margin: 0px; padding: 0px;">
<div class="oiad listical-ad-right c1" data-adval="1" data-elementid="5" data-exec="0" data-google-query-id="CI-I8JC_p-ACFZNcFQgdZ18Mow" id="div-gpt-ad-1468557716991-1" style="float: right; height: 250px; margin: 10px; padding: 0px; width: 300px;">
<div id="google_ads_iframe_/1008496/bs-kan-inarticle-300x250-2_0__container__" style="border: 0pt none; margin: 0px; padding: 0px;">
<iframe data-google-container-id="f" data-load-complete="true" frameborder="0" height="250" id="google_ads_iframe_/1008496/bs-kan-inarticle-300x250-2_0" marginheight="0" marginwidth="0" name="google_ads_iframe_/1008496/bs-kan-inarticle-300x250-2_0" scrolling="no" style="border-style: initial; border-width: 0px; margin: 0px; padding: 0px; vertical-align: bottom;" title="3rd party ad content" width="300"></iframe></div>
</div>
</div>
</div>
<h2 class="para_head" style="background-color: white; font-family: Tunga, "Lohit Kannada", Arial; font-size: 21px; line-height: 20px; margin: 0px; padding-bottom: 5px; padding-left: 0px; padding-right: 0px; padding-top: 0px !important;">
ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ</h2>
<div style="background-color: white; font-family: Tunga, "Lohit Kannada", Arial; font-size: 17px; padding: 7px 0px;">
ರಕ್ತ ಶುದ್ದೀಕರಿಸುವ ಮೂಲಕ ಶ್ವಾಸಕೋಶದಿಂದ ಆಮ್ಲಜನಕ ಕೊಂಡೊಯ್ಯುವ ಮತ್ತು ಜೀವಕೋಶಗಳಿಂದ ಪಡೆದ ಇಂಗಾಲದ ಡೈ ಆಕ್ಸೈಡ್ ಅನ್ನು ವಿಸರ್ಜಿಸಲು ಕೊಂಡು ತರುವ ಸಾಮರ್ಥ್ಯವೂ ಗರಿಷ್ಟವಾಗಿರುತ್ತದೆ. ರಕ್ತ ಶುದ್ದೀಕರಣದಿಂದ ನಮ್ಮ ದೇಹದ ದ್ರವದಲ್ಲಿ (ನಮ್ಮ ದೇಹದ ಶೇಖಡಾ ಎಪ್ಪತ್ತು ಭಾಗ ನೀರು) ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ ಮಟ್ಟ) ಹಾಗೂ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಶುದ್ದೀಕರಣಗೊಂಡ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿ ರಕ್ತಕಣಗಳಿರುತ್ತವೆ ಹಾಗೂ ಗಾಯವಾದಾದ ಇವು ರಕ್ತ ನಷ್ಟಗೊಳ್ಳುವುದನ್ನು ತಡೆಯಲು ನೆರವಾಗುತ್ತವೆ ಹಾಗೂ ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೊಂದಲು ನೆರವಾಗುತ್ತವೆ. ರಕ್ತ ಶುದ್ದೀಕರಣ ವ್ಯವಸ್ಥೆಗೆ ನೆರವು ನೀಡುವ ಕೆಲವು ಪ್ರಮುಖ ಆಹಾರಗಳಿವೆ ಹಾಗೂ ಇವನ್ನು ನಿಯಮಿತವಾಗಿ ಸೇವಿಸುವುದೂ ಅಗತ್ಯವಾಗಿದೆ.</div>
<div class="listicalSliderContainer" data-gal-desc="ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿ ಅತ್ಯುತ್ತಮ ರಕ್ತ ಶುದ್ದೀಕಾರಕ ಆಹಾರವಾಗಿದ್ದು ದೇಹದಿಂದ ರಕ್ತವನ್ನು ಹೊರಹಾಕಲು ನೆರವಾಗುತ್ತದೆ. ಈ ತರಕಾರಿಯಲ್ಲಿ ಕ್ಯಾಲ್ಸಿಯಂ,..." data-gal-headline="ಬ್ರೋಕೋಲಿ" data-gal-src="kannada.boldsky.com/img/600x100/2019/01/4m-1547281742.jpg" data-pagetype="0" data-slno="4" data-url="articlecontent-pf96504-019223" id="slider3" style="background-color: white; font-family: Tunga, "Lohit Kannada", Arial; font-size: 17px; margin-bottom: 0px !important; margin-left: 0px; margin-right: 0px; margin-top: 0px; padding: 0px;">
<br />
<section class="listicalSliderContent" style="margin: 0px; overflow: hidden; padding: 0px; position: relative; width: 630px;"><figure style="margin: 0px; padding: 0px;"><img alt="ಬ್ರೋಕೋಲಿ" class="sliderImg image_listical" id="rev_content_4" src="https://kannada.boldsky.com/img/2019/01/4m-1547281742.jpg" style="border: 0px; margin: 0px; max-width: 100%; padding: 0px;" title="" /></figure><span class="listical-photo-share" style="background: rgb(0 , 0 , 0); border-radius: 50%; bottom: 15px; color: white; cursor: pointer; display: block; font-size: 22px; height: 35px; line-height: 35px; margin: 0px; opacity: 0.7; padding: 0px; position: absolute; right: 5px; text-align: center; transition: 0.8s ease-in-out 0s; width: 35px; z-index: 1000;"><span class="fa fa-share-alt" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></span><section class="listical-photo-share-links" style="background: rgb(0, 0, 0); border-radius: 0px; bottom: 10px; margin: 0px; opacity: 0.7; overflow: hidden; padding: 5px 40px 5px 0px; position: absolute; right: -250px; text-align: center; transition: right 0.8s ease-in-out 0s; width: auto; z-index: 10000;"><a class="listical-facebook" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-facebook" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a> <a class="listical-twitter" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-twitter" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a> <a class="listical-google-plus" href="https://www.blogger.com/null" style="color: rgb(255, 255, 255) !important; font-size: 24px; margin: 0px 8px; outline: none; padding: 0px;"><span class="fa fa-google-plus" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></a><span class="listical-photo-share-close" style="color: white; cursor: pointer; font-size: 24px; margin: 0px; padding: 0px; position: absolute; right: 5px;"><span class="fa fa-times" style="display: inline-block; font-family: "fontawesome"; font-size: inherit; font-stretch: normal; line-height: 1; margin: 0px; padding: 0px;"></span></span></section></section></div>
<h2 class="para_head" style="background-color: white; font-family: Tunga, "Lohit Kannada", Arial; font-size: 21px; line-height: 20px; margin: 0px; padding-bottom: 5px; padding-left: 0px; padding-right: 0px; padding-top: 0px !important;">
ಬ್ರೋಕೋಲಿ</h2>
<div style="background-color: white; font-family: Tunga, "Lohit Kannada", Arial; font-size: 17px; padding: 7px 0px;">
ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿ ಅತ್ಯುತ್ತಮ ರಕ್ತ ಶುದ್ದೀಕಾರಕ ಆಹಾರವಾಗಿದ್ದು ದೇಹದಿಂದ ರಕ್ತವನ್ನು ಹೊರಹಾಕಲು ನೆರವಾಗುತ್ತದೆ. ಈ ತರಕಾರಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ೩ ಕೊಬ್ಬಿನ ಆಮ್ಲಗಳು, ಕರಗುವ ನಾರು, ಪೊಟ್ಯಾಶಿಯಂ, ಮ್ಯಾಂಗನೀಸ್, ಗಂಧಕ ಮತ್ತು ಗ್ಲುಕೋಸೈನೋಲೇಟ್ಸ್ ಮೊದಲಾದ ಪೋಷಕಾಂಶಗಳಿವೆ. ಬ್ರೋಕೋಲಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟ್ ಗಳನ್ನು ಒದಗಿಸಬಹುದು ಹಾಗೂ ಇದು ರಕ್ತಶುದ್ದೀಕರಣ ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸಲು ನೆರವಾಗುತ್ತದೆ. ಬೇಯಿಸಿ ತಿನ್ನುವ ಆಹಾರದ ಜೊತೆಗೇ ಕೊಂಚ ಪ್ರಮಾಣವನ್ನು ಹಸಿಯಾಗಿ ಸಾಲಾಡ್ ಜೊತೆಗೇ ಸೇರಿಸಿ ತಿನ್ನುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬಹುದು.</div>
<div style="background-color: white; font-family: Tunga, "Lohit Kannada", Arial; font-size: 17px; padding: 7px 0px;">
<br /></div>
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-49503841297744570322018-06-29T12:05:00.000+04:302018-06-29T12:05:13.305+04:30ಬಕ್ಕತಲೆ: ಇದಕ್ಕೆ ಚಿಕಿತ್ಸೆ ಇದೆಯೇ?<div dir="ltr" style="text-align: left;" trbidi="on">
https://kannada.boldsky.com/health/wellness/2018/is-there-cure-baldness-017422.html<br />
ಬೋಲ್ಡ್ ಸ್ಕೈ.ಒನ್ ಇಂಡಿಯಾ ತಾಣದಲ್ಲಿ ಪ್ರಕಟವಾದ ಲೇಖನ<br />
<br />
ವಿಶ್ವದಾದ್ಯಂತ 80% ರಷ್ಟು ಪುರುಷರು ಕೊಂಚ ಮಟ್ಟಿಗಾದರೂ ಬಕ್ಕತಲೆಯ ಹಾಗೂ ಕೂದಲುದುರುವಿಕೆಯ ತೊಂದರೆಗೆ ಒಳಗಾಗಿಯೇ ಇದ್ದಾರೆ. ಒಂದು ಹಂತದ ವಯಸ್ಸು ದಾಟಿದ ಬಳಿಕ ಹೆಚ್ಚಿನ ಪುರುಷರಲ್ಲಿ ಬಕ್ಕತನ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆದರೆ ಈಗ ಬಕ್ಕತನ ಕೇವಲ ಒಂದು ವಯಸ್ಸಿಗೆ ಮಾತ್ರವೇ ಸೀಮಿತವಾಗಿಲ್ಲ, ಇನ್ನೂ ಚಿಕ್ಕ ವಯಸ್ಸಿನಲ್ಲಿರುವವರಲ್ಲಿಯೂ ಬಕ್ಕತನ ಆವರಿಸುತ್ತಿರುವುದನ್ನು ಗಮನಿಸಬಹುದು. ಅನಾರೋಗ್ಯಕರ ಆಹಾರಕ್ರಮ, ಒತ್ತಡದಲ್ಲಿರುವ ಜೀವನ, ಹತ್ತು ಹಲವು ಸೌಂದರ್ಯಪ್ರಸಾದನಗಳು ಹಾಗೂ ಕೂದಲುದುರುವುದನ್ನು ತಡೆಗಟ್ಟಲು ವಿಭಿನ್ನ ಪ್ರಸಾದನಗಳ ಪ್ರಯೋಗ ಮೊದಲಾದವುಗಳು ಇಂದು ಹದಿಹರೆಯದವರಲ್ಲಿಯೂ ಬಕ್ಕತನವನ್ನು ಆವರಿಸುವಂತೆ ಮಾಡುತ್ತಿವೆ. ಬಕ್ಕತನಕ್ಕೆ ವೈದ್ಯವಿಜ್ಞಾನದಲ್ಲಿ alopecia ಎಂಬ ಹೆಸರಿದೆ ಹಾಗೂ ಹೆಚ್ಚು ಹೆಚ್ಚು ಕೂದಲು ಉದುರಿ ಆ ಭಾಗದಲ್ಲಿ ಹೊಸ ಕೂದಲು ಬೆಳೆಯದಿರಲು (ವಾಸ್ತವವಾಗಿ ಈ ಸ್ಥಳದಲ್ಲಿ ಅತಿ ಸೂಕ್ಷ್ಮ ಹಾಗೂ ಪಾರದರ್ಶಕ ಚಿಕ್ಕ ಕೂದಲು ಬೆಳೆಯುತ್ತದೆ, ಇದು ಮೇಲ್ನೋಟಕ್ಕೆ ಕಾಣದೇ ಇರುವ ಕಾರಣದಿಂದ ಕೂದಲು ಇಲ್ಲದಂತೆ ಭಾಸವಾಗುತ್ತದೆ) ಕಾರಣವಾಗಿ ಬಕ್ಕತಲೆ ಆವರಿಸಿ ಒಂದು ವಿನ್ಯಾಸದಲ್ಲಿ ವಿಸ್ತರಿಸುತ್ತಾ ಹೋಗುತ್ತದೆ.<br />
<img alt="Baldness in men " src="https://kannada.boldsky.com/img/2018/05/x21-1440132450-06imageuntitled-11-1460351345-1527681053-jpg-pagespeed-ic-33b5v8y4-q-1527752771.jpg" /><br />
ಕೂದಲ ಬಗ್ಗೆ ಒಂದಿಷ್ಟು:<br />
ಸಸ್ತನಿಗಳ ಶರೀರದದ ಚರ್ಮದ ಬಹುತೇಕ ಭಾಗದಲ್ಲಿ ಕೂದಲು ಆವರಿಸುವುದು ನೈಸರ್ಗಿಕವಾಗಿದೆ. ಮಾನವರ ದೇಹವೂ ಅಷ್ಟೇ, ತುಟಿ, ಹಸ್ತ, ಪಾದ ಮೊದಲಾದ ಕೆಲವೇ ಭಾಗಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಕೂದಲುಗಳಿವೆ. ಆದರೆ ಕೂದಲ ದಟ್ಟತೆ ಮತ್ತು ನೀಳತೆ ಕೆಲವು ಭಾಗದಲ್ಲಿ ಮಾತ್ರವೇ ಅತಿ ಹೆಚ್ಚಾಗಿರುತ್ತದೆ. ಇದರಲ್ಲಿ ತಲೆಯ ಚರ್ಮದಲ್ಲಿ ಅತಿ ಹೆಚ್ಚು ಸಾಂದ್ರತೆಯಲ್ಲಿ ಕೂದಲ ಬುಡಗಳಿರುತ್ತವೆ ಹಾಗೂ ಇದು ತಲೆಬುರುಡೆಯ ರಕ್ಷಣೆ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಉಳಿದೆಲ್ಲಾ ಭಾಗದ ಚರ್ಮದಲ್ಲಿಯೂ ಕೂದಲುಗಳಿದ್ದೇ ಇರುತ್ತವೆ ಆದರೆ ಇವು ಕಣ್ಣಿಗೆ ಗೋಚರವಾಗದಷ್ಟು ಸೂಕ್ಷ್ಮ ಹಾಗೂ ಪಾರದರ್ಶಕವಾಗಿರುತ್ತವೆ. ಕೂದಲು ಕೆರಾಟಿನ್ ಎಂಬ ಬಗೆಯ ಪ್ರೋಟೀನ್ ನಿಂದ ನಿರ್ಮಿಸಲ್ಪಟ್ಟಿದೆ ಹಾಗೂ ವಿಶೇಷವಾದ ಜೀವಕೋಶಗಳಿಂದ ಕೂಡಿದ ಕೂದಲ ಬುಡ (hair follicle) ಕೂದಲನ್ನು ಸೃಷ್ಟಿಸಿ ಹೆಚ್ಚು ಹೆಚ್ಚು ಕೆರಾಟಿನ್ ತುಂಬಿಸಿ ದೂಡುವ ಮೂಲಕ ಕೂದಲು ಉದ್ದವಾಗಲು ಕಾರಣವಾಗುತ್ತದೆ. ಕೂದಲಿಗೆ ಅಗತ್ಯವಾದ ಆರ್ದ್ರತೆ, ಹೊಳಪು, ಆಮ್ಲಜನಕ, ಪೋಷಕಾಂಶ ಎಲ್ಲವನ್ನೂ ಕೂದಲ ಬುಡದಲ್ಲಿರುವ ಚಿಕ್ಕ ಗಡ್ಡೆಯಂತಹ ಅಂಗ (bulb)ವೇ ಪೂರೈಸುತ್ತದೆ.<br />
<br />
ಕೂದಲು ಇರುವುದು ಅನಿವಾರ್ಯವಾದರೆ ಬಕ್ಕತನವೇಕೆ?<br />
ನಮ್ಮ ದೇಹದ ಇತರ ಭಾಗದ ಕೂದಲು ಕಾಣೆಯಾದರೆ ನಾವಾರೂ ದೊಡ್ಡ ಕೊರತೆಯೆಂದು ಪರಿಗಣಿಸುವುದಿಲ್ಲ. ಆದರೆ ತಲೆಯ ಕೂದಲು ಇಲ್ಲವಾದಾಗ ಮಾತ್ರವೇ ಚಿಂತೆ ಆವರಿಸುತ್ತದೆ. ಪ್ರತಿಯೊಬ್ಬರ ತಲೆಯಿಂದಲೂ ನಿತ್ಯವು ನೂರರಷ್ಟು ಕೂದಲುಗಳು ಉದುರುತ್ತವೆ ಹಾಗೂ ಹೆಚ್ಚೂ ಕಡಿಮೆ ಅಷ್ಟೇ ಪ್ರಮಾಣದ ಕೂದಲು ಹೊಸದಾಗಿ ಹುಟ್ಟುತ್ತವೆ, ಹುಟ್ಟಬೇಕು. ವೈದ್ಯವಿಜ್ಞಾನಕ್ಕೂ ಸವಾಲಾಗಿರುವ ಯಾವುದೋ ಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಈ ದಪ್ಪನೆಯ ನೀಳ ಕೂದಲು ಉದುರಿದ ಬಳಿಕ ಆ ಸ್ಥಳದಲ್ಲಿ ದಟ್ಟವಾದ ಕಪ್ಪು ಕೂದಲು ಹುಟ್ಟುವ ಬದಲು ಅತಿ ಸೂಕ್ಷ್ಮವಾದ ನವಿರಾದ, ಪಾರದರ್ಶಕ (ಸರಿಸುಮಾರು ನಸುಗಂದು ಬಣ್ಣದ) ಅತಿ ಚಿಕ್ಕ ಕೂದಲು ಹುಟ್ಟುತ್ತದೆ. ಹೊರನೋಟಕ್ಕೆ ಈ ಕೂದಲು ಕಾಣದೇ ಹೋಗುವ ಮೂಲಕ ಕೂದಲು ಇಲ್ಲದೇ ಇರುವ ಭಾವನೆ ಮೂಡಿಸುತ್ತದೆ. ಈ ಪರಿ ಒಂದು ವಿನ್ಯಾಸದಲ್ಲಿ ಪ್ರಾರಂಭವಾಗಿ ಹರಡುತ್ತಾ ಹೋಗುತ್ತದೆ. ಇದನ್ನೇ ಬಕ್ಕತನ ಎಂದು ಕರೆಯುತ್ತಾರೆ.<br />
<br />
ಬಕ್ಕತನ ಒಂದು ಹಂತದಲ್ಲಿ ಪ್ರಾರಂಭವಾಗಿ ಸರಿಸುಮಾರು ವೃದ್ದಾಪ್ಯದವರೆಗೂ ವಿಸ್ತರಿಸುತ್ತಾ ಹೋಗುವ ಕಾರಣ 90%ರಷ್ಟು ಬಕ್ಕತನದ ಪುರುಷರಲ್ಲಿ ವಿಸ್ತರಣಾ ಹಂತದಲ್ಲಿಯೇ ಇರುತ್ತಾರೆ ಹಾಗೂ 10% ರಶ್ಟು ಬಕ್ಕತಲೆಯ ಪುರುಷರದಲ್ಲಿ ಗರಿಷ್ಟ ಹಾಗೂ ಇನ್ನೂ ವಿಸ್ತರಿಸದ ಹಂತ ತಲುಪಿರುತ್ತಾರೆ. ಒಂದು ಕೂದಲು ಹುಟ್ಟಿದ ಬಳಿಕ ಸುಮಾರು ಮೂರು ತಿಂಗಳವರೆಗೆ ಇದರ ಆಯಸ್ಸು ಇರುತ್ತದೆ ಹಾಗೂ ಬಳಿಕ ಇದು ಉದುರುವುದು ನೈಸರ್ಗಿಕವಾಗಿದೆ. ಈ ಸ್ಥಳದಲ್ಲಿ ಮೊದಲಿನಂತಹ ಹೊಸ ಕೂದಲು ಹುಟ್ಟುತ್ತದೆಯೋ ಅಥವಾ ಪಾರದರ್ಶಕ ಚಿಕ್ಕ ಕೂದಲು ಹುಟ್ಟುತ್ತದೆಯೋ ಎಂಬ ನಿರ್ಧಾರವನ್ನು ನಮ್ಮ ವಂಶವಾಹಿನಿಗಳೇ ನಿರ್ಧರಿಸುವ ಕಾರಣ ಬಕ್ಕತನ ವಂಶವಾಹಿನಿಯಲ್ಲಿದ್ದರೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.<br />
<br />
ಬಕ್ಕತನಕ್ಕೆ ಏನು ಕಾರಣಗಳಿವೆ?<br />
ಬಕ್ಕತನ ಕೂದಲ ಬದಲಾವಣೆಯ ನೈಸರ್ಗಿಕ ಪರಿಣಾಮವಾಗಿದ್ದು ಇದಕ್ಕೆ ವಂಶವಾಹಿನಿಯೇ ಪ್ರಮುಖ ಕಾರಣವಾಗಿದೆ. ಜೊತೆಗೇ ಕೆಳಗಿನ ಅಂಶಗಳೂ ಬಕ್ಕತನವನ್ನು ನಿರ್ಧರಿಸುತ್ತವೆ:್<br />
<br />
• ಅನುವಂಶಿಕ ಕಾರಣಗಳು:<br />
ಕೆಲವು ಕುಟುಂಬಗಳಲ್ಲಿ ಅನುವಂಶಿಕವಾಗಿ ಬಕ್ಕತನ ಆವರಿಸಿರುತ್ತದೆ ಹಾಗೂ ಈ ಕುಟುಂಬದ ಸದಸ್ಯರು ಒಂದು ವಯಸ್ಸಿಗೆ ಆಗಮಿಸುತ್ತಿದ್ದಂತೆಯೇ ನಿಸರ್ಗದ ಒಂದು ನಿಯಮಕ್ಕೆ ಒಳಪಟ್ಟಂತೆ ಬಕ್ಕತನವನ್ನು ಪ್ರಕಟಿಸತೊಡಗುತ್ತಾರೆ.<br />
<br />
• ಕೇಶವಿನ್ಯಾಸ ಹಾಗೂ ಕೇಶ ಚಿಕಿತ್ಸೆಗಳು:<br />
ಇಂದು ಬಾಹ್ಯಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ದೊರಕುತ್ತಿದ್ದಂತೆಯೇ ಸೌಂದರ್ಯ ಪ್ರಸಾದನಗಳೂ ಹೆಚ್ಚಿನ ಬೇಡಿಕೆ ಪಡೆದಿವೆ. ವಿಶೇಷವಾಗಿ ಯುವಜನಾಂಗವನ್ನು ಸೆಳೆಯಲು ಈ ಉತ್ಪನ್ನಗಳನ್ನು ಅತ್ಯುತ್ತಮ ಗುಣಮಟ್ಟದ ಜಾಹೀರಾತುಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಜಾಹೀರಾತುಗಳಿಗೆ ಸುರಿಯುವ ವೆಚ್ಚ ಆ ಉತ್ಪನ್ನದ ಶೇಖಡಾ 60 ರಷ್ಟಿರುತ್ತದೆ ಎಂದರೆ ಈ ಉದ್ಯಮ ಯಾವ ಮಟ್ಟಿಗೆ ಜನರ ಮನಸ್ಸನ್ನು ಆವರಿಸಿರಬಹುದು ಎಂಬುದನ್ನು ಗಮನಿಸಬಹುದು. ಕೇಶವಿನ್ಯಾಸ ಸುಂದರವಾಗಿರಬೇಕೆಂದು ಬಿಗಿಯಾಗಿ ಕಟ್ಟುವುದು, ರಬ್ಬರ್ ಬ್ಯಾಂಡ್ ಮೂಲಕ ಬಂಧಿಸುವುದು ಮೊದಲಾದವು ಕೂದಲ ಬುಡದ ಮೇಲೆ ಹೆಚ್ಚಿನ ಸೆಳೆತ ಹೇರಿ ಸುಲಭವಾಗಿ ಉದುರಲು ಕಾರಣವಾಗುತ್ತದೆ. ಕೂದಲಿಗೆ ನೀಡುವ ಚಿಕಿತ್ಸೆಗಳಾದ ಬ್ಲೀಚಿಂಗ್, ಬಣ್ಣ ಹಚ್ಚುವುದು, ಗುಂಗುರನ್ನು ನೇರಗೊಳಿಸಲು ಬಿಸಿಯಾಗಿಸುವುದು, ಕೃತಕ ರಾಸಾಯನಿಕಗಳನ್ನು ಬಳಸುವುದು ಮೊದಲಾದವು ತಲೆಯ ಚರ್ಮ ಹಾಗೂ ಕೂದಲ ಬುಡಗಳನ್ನು ಶಿಥಿಲವಾಗಿಸುತ್ತವೆ. ಈ ಅಭ್ಯಾಸಗಳು ತಲೆಯ ಚರ್ಮವನ್ನು ಶಿಥಿಲವಾಗಿಸಿ ಮುಂದೆಂದೋ ಎದುರಾಗಬಹುದಾಗಿದ್ದ ಬಕ್ಕತಲೆಯನ್ನು ಶೀಘ್ರವೇ ಆವರಿಸುವಂತೆ ಮಾಡುತ್ತವೆ.<br />
<br />
• ರಸದೂತಗಳ ಏರುಪೇರು:<br />
ಕೂದಲ ಉದುರುವಿಕೆಗೆ ರಸದೂತಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಪುರುಷರೇ ಹೆಚ್ಚು ಬಕ್ಕತಲೆ ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆ ಅಥವಾ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಸಮಯದಲ್ಲಿ ತಾತ್ಕಾಲಿಕವಾದ ಬಕ್ಕತನ ಆವರಿಸಬಹುದು. ಆದರೆ ಈ ಸ್ಥಿತಿಗಳನ್ನು ದಾಟಿದ ಬಳಿಕ ಮಹಿಳೆಯರಲ್ಲಿ ಮತ್ತೊಮ್ಮೆ ಕೂದಲು ಮೂಡುತ್ತದೆ. ಅತಿ ಅಪರೂಪದ ಸಂದರ್ಭಗಳಲ್ಲಿ ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಗೆ ನೀಡುವ ಖೀಮೋಥೆರಪಿ ಮೊದಲಾದ ಚಿಕಿತ್ಸೆಗಳ ಅಡ್ಡಪರಿಣಾಮವಾಗಿಯೂ ಬಕ್ಕತನ ಆವರಿಸಬಹುದು.<br />
<br />
• ಮಾನಸಿಕ ಒತ್ತಡ:<br />
ಕೆಲಸದ ಒತ್ತಡ ಹೆಚ್ಚುತ್ತಿದ್ದಂತೆಯೇ ಬಕ್ಕತನ ಆವರಿಸುವ ಸಾಧ್ಯತೆಯೂ ಹೆಚ್ಚುವುದನ್ನು ಗಮನಿಸಲಾಗಿದೆ. ಕೌಟುಂಬಿಕ ಕಲಹ, ಆತ್ಮೀಯರೊಡನೆ ಮೂಡುವ ವೈಮನಸ್ಸು, ಪ್ರೀತಿಯ ವೈಫಲ್ಯ ಮೊದಲಾದವು ಬಕ್ಕತನವನ್ನು ಶೀಘ್ರವಾಗಿ ಅವರಿಸುವಂತೆ ಮಾಡುತ್ತವೆ.<br />
<br />
• ಅನಾರೋಗ್ಯ<br />
ಕೆಲವು ಕಾಯಿಲೆಗಳು ಹಾಗೂ ಇವುಗಳಿಗೆ ನೀಡುವ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳೂ ಅಡ್ಡಪರಿಣಾಮದ ರೂಪದಲ್ಲಿ ಬಕ್ಕತನವನ್ನು ಮೂಡಿಸಬಹುದು.<br />
<br />
ಬಕ್ಕತನದ ಸೂಚನೆಗಳು:<br />
ನಿತ್ಯವೂ ಕೊಂಚ ಪ್ರಮಾಣದ ಕೂದಲು ಉದುರುವುದು ಸಾಮಾನ್ಯವಾದರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಹಾಗೂ ಈ ಪ್ರಮಾಣ ಹೆಚ್ಚಾಗಿ ಆ ಸ್ಥಳದಲ್ಲಿ ಹೊಸ ಕೂದಲು ಮೂಡದೇ ಇದ್ದರೆ ಬಕ್ಕತನ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳಬಹುದು.<br />
• ಪುರುಷರದಲ್ಲಿ ಬಕ್ಕತನ ಎಡ ಮತ್ತು ಬಲ ಹುಬ್ಬಿನ ಮೇಲ್ಭಾಗದಿಂದ ಹಣೆ ವಿಸ್ತಾರಗೊಳ್ಳಲು ಆರಂಭಿಸಿ ಇಂಗ್ಲಿಷ್ ನ ಎಂ ಅಕ್ಷರದ ರೂಪದಲ್ಲಿ ಮುಂದುವರೆಯುತ್ತದೆ. ಮಹಿಳೆಯರಲ್ಲಿ ಈ ಬಗೆಯ ವಿನ್ಯಾಸ ಕಂಡುಬರದೇ ಹೋದರೂ ಎರಡು ಕೂದಲುಗಳ ನಡುವೆ ಅಲ್ಲಲ್ಲಿ ಒಂದೊಂದು ಕೂದಲು ಉದುರಿ ಒಟ್ಟಾರೆಯಾಗಿ ಅಲ್ಲದಿದ್ದರೂ ಮೊದಲಿನಷ್ಟು ಘನವಾಗಿಲ್ಲದಿರುವುದು ಕಂಡುಬರುತ್ತದೆ.<br />
• ಪುರುಷರಲ್ಲಿ ತಲೆಯ ಮೇಲ್ಭಾಗದಲ್ಲಿ ಪುಟ್ಟ ವೃತ್ತಾಕಾರದ ಬಕ್ಕತನ ಆವರಿಸಲು ಪ್ರಾರಂಭಿಸಿ ನಿಧಾನವಾಗಿ ವಿಸ್ತರಿಸತೊಡಗುತ್ತದೆ. ಕೊಂಚ ತುರಿಕೆ ಹಾಗೂ ನೋವು ಇರುವ ಈ ವೃತ್ತಾಕಾರ ಯಾವಾಗ ಪ್ರಾರಂಭವಾಯಿತೋ ಆಗಲೇ ಬಕ್ಕತನವೂ ಪ್ರಾರಂಭವಾಯಿತೆಂದು ಹೇಳಬಹುದು. ಸುಮಾರು ನಾಣ್ಯದ ಗಾತ್ರದಲ್ಲಿ ಪ್ರಾರಂಭವಾಗುವ ಈ ವಿನ್ಯಾಸ ದಿನೇ ದಿನೇ ವಿಸ್ತರಿಸುತ್ತಾ ಕೆಲವು ವರ್ಷಗಳ ಬಳಿಕ ಹಣೆಯಿಂದ ಪ್ರಾರಂಭವಾಗಿದ್ದ ಎಂ ವಿನ್ಯಾಸವನ್ನು ಕೂಡಿ ಹೆಚ್ಚೂ ಕಡಿಮೆ ಇಡಿಯ ತಲೆಯ ನೆತ್ತಿಯನ್ನು ಬರಿದಾಗಿಸುತ್ತವೆ.<br />
• ತಲೆ ತೊಳೆದುಕೊಳ್ಳುವಾಗ, ಹೆಚ್ಚಿನ ಒತ್ತಡವಿಲ್ಲದೇ ಕೂದಲನ್ನು ಬಾಚಿಕೊಳ್ಳುವಾಗ ಸುಲಭವಾಗಿ ಕೂದಲು ಕಿತ್ತುಬಂದರೂ ಇದು ಬಕ್ಕತನ ಆರಂಭವಾಗಿರುವ ಸೂಚನೆಯಾಗಿದೆ.<br />
<br />
ಬಕ್ಕತನಕ್ಕೇನು ಚಿಕಿತ್ಸೆ?<br />
ಬಕ್ಕತನ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಆವರಿಸಿರುವ ತೊಂದರೆಯಾಗಿದ್ದು ಪ್ರತಿಯೊಬ್ಬರೂ ಭಿನ್ನವಾದ ಸ್ಥಿತಿಯನ್ನು ಎದುರಿಸುತ್ತಾರೆ. ಬಕ್ಕತನ ನೈಸರ್ಗಿಕವಾಗಿದ್ದು ಸೌಂದರ್ಯದ ಕಾರಣದ ಹೊರತು ಇತರ ಯಾವುದೇ ಆರೋಗ್ಯದ ತೊಂದರೆಯನ್ನು ಉಂಟುಮಾಡುವುದಿಲ್ಲ. ಸಾವಿನ ಭಯವಂತೂ ಇಲ್ಲವೇ ಇಲ್ಲ. ಆದರೆ ಇತರರು ಮಾಡುವ ಅವಹೇಳನವೇ ಮಾನಸಿಕವಾಗಿ ಕುಗ್ಗಿಸಲು ಇದು ಸಾಕಾಗುತ್ತದೆ ಹಾಗೂ ಹೆಚ್ಚಿನವರು ಕೀಳರಿಮೆಯಿಂದ ಬಳಲುತ್ತಾರೆ.<br />
<br />
ಬಕ್ಕತನವನ್ನು ನಿವಾರಿಸಲು ಸಧ್ಯಕ್ಕೆ ಈ ಜಗತ್ತಿನಲ್ಲಿ ಯಾವುದೇ ಸಿದ್ದೌಷಧವಿಲ್ಲ. ಆದರೆ ಬಕ್ಕತನವನ್ನು ಕೃತಕವಾಗಿ ನಿವಾರಿಸಲು ಕೆಲವಾರು ಚಿಕಿತ್ಸೆಗಳು ಲಭ್ಯವಿವೆ. ಇದರಲ್ಲಿ ಪ್ರಮುಖವಾದುದು ಕೂದಲ ಬುಡಗಳ ನೆಡುವಿಕೆ (hair transplant) ಅಂದರೆ ಕೂದಲು ಇರುವ ಚರ್ಮದಿಂದ ಆರೋಗ್ಯವಂತ ಕೂದಲ ಬುಡಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಕೂದಲು ಇಲ್ಲದ ಭಾಗದಲ್ಲಿ ನೆಡುವುದು. ಈ ಚಿಕಿತ್ಸೆಯನ್ನು ನೀಡುವ ಸೆಲೂನ್ ಗಳು ಇಂದು ವಿಶ್ವಮಟ್ಟದಲ್ಲಿ ಭಾರೀ ಯಶಸ್ಸು ಸಾಧಿಸುತ್ತಿವೆ. ಇನ್ನೊಂದು ವಿಧಾನವೆಂದರೆ ಕೃತಕ ಕೂದಲನ್ನು ಶಾಶ್ವತವಾಗಿ ನೆಡುವುದು, ಆದರೆ ಇದು ಹೆಚ್ಚಿನವರಿಗೆ ತುರಿಕೆ ಹಾಗೂ ಅಸಹನೀಯವಾದ ಅನುಭವವನ್ನು ನೀಡಿದ್ದ ಕಾರಣ ಇಂದು ಇದರ ಜನಪ್ರಿಯತೆ ಕಡಿಮೆಯಾಗಿದೆ. ಕೂದಲ ಬುಡಗಳ ನೆಡುವಿಕೆ ತೀರಾ ದುಬಾರಿ ಹಾಗೂ ಹೆಚ್ಚಿನ ಸಮಯವನ್ನು ಕಬಳಿಸುವ ಚಿಕಿತ್ಸೆಯಾಗಿರುವ ಕಾರಣ ಹೆಚ್ಚಿನವರು ಸೇವಿಸಬಹುದಾದ ಗುಳಿಗೆಗಳ ಅಥವಾ ತಲೆಗೆ ಹಚ್ಚಿಕೊಳ್ಳಬಹುದಾದ ಎಣ್ಣೆ-ಔಷಧಿಗಳನ್ನೇ ಪ್ರಯೋಗಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.<br />
<br />
ಆದರೆ ಇಂದು ಈ ನಿಟ್ಟಿನಲ್ಲಿ ಆಶಾವಾದದ ಕಿರಣವೊಂದು ಗೋಚರಿಸಿದೆ. ಬಕ್ಕತಲೆಯಲ್ಲಿ ಕೂದಲ ಬುಡಗಳನ್ನು ಮತ್ತೊಮ್ಮೆ ಪ್ರಚೋದಿಸಿ ಮೊದಲಿನಂತಹ ಕಪ್ಪು ಕೂದಲುಗಳನ್ನೇ ಬೆಳೆಯುವಂತೆ ಮಾಡುವ ಔಷಧಿಯನ್ನು ಕಂಡುಹಿಡಿಯಲಾಗಿದೆ ಎಂಬ ಸುದ್ದಿ ಬಂದಿದೆ. ಆದರೆ ಇದು ಜನಸಾಮಾನ್ಯರ ಬಳಿ ತಲುಪುವಂತಾಗಲು ಎಷ್ಟು ವರ್ಷ ಕಾಯಬೇಕು ಎಂದು ಗೊತ್ತಿಲ್ಲ.<br />
<br />
ವಾಸ್ತವವಾಗಿ ಈ ಔಷಧಿಯನ್ನು ಮೂಳೆಗಳ ಟೊಳ್ಳಾಗುವ ಓಸ್ಟಿಯೋಪೋರೋಸಿಸ್ ಗಾಗಿ ಬಳಸಲಾಗುತ್ತಿತ್ತು ಹಾಗೂ ಈಗ ಬಕ್ಕತನಕ್ಕೂ ಇದನ್ನು ಬಳಸುವ ಬಗ್ಗೆ ವೈದ್ಯಕೀಯ ತಜ್ಞರು ಆಶಾಭಾವ ಹೊಂದಿದ್ದಾರೆ. ಇಂದು ಈ ಔಷಧಿ minoxidil ಮತ್ತು finasteride ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. Minoxidil ಪುರುಷರು ಮತ್ತು ಮಹಿಳೆಯರು ಸೇವಿಸಬಹುದಾದರೆ finasteride ಕೇವಲ ಪುರುಷರಿಗೆ ಮೀಸಲಾಗಿದೆ.<br />
<br />
ಆದರೆ ಈ ಔಷಧಿಗಳ ಪ್ರಭಾವ ಮತ್ತು ಪರಿಣಾಮ ಯಾವ ಬಗೆಯಲ್ಲಿ ಆಗುತ್ತದೆ, ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ, ಅಡ್ಡ ಪರಿಣಾಮಗಳೇನು ಎಂಬುದನ್ನೆಲ್ಲಾ ಪ್ರಯೋಗಗಳ ಮೂಲಕ ಇನ್ನಷ್ಟೇ ಕಂಡುಕೊಳ್ಳಬೇಕಾಗಿದ್ದು ವೈದ್ಯರ ಅನುಮತಿಯಿಲ್ಲದೇ ಈ ಔಷಧಿಗಳನ್ನು ಈಗ ಪ್ರಯೋಗಿಸಬಾರದು. ಅಲ್ಲದೇ ಕೂದಲ ಬುಡದ ನೆಡುವ ಚಿಕಿತ್ಸೆಗೆ ಒಡ್ಡಿಕೊಳ್ಳುವ ಮುನ್ನವೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಪಡೆಯುವಂತೆ ಚರ್ಮವೈದ್ಯರು ಸಲಹೆ ಮಾಡುತ್ತಾರೆ.</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-12416916104083563252018-02-21T19:30:00.000+04:302018-02-21T19:30:17.759+04:30ತಪ್ಪದೇ ಓದಿ: ಈ ಹತ್ತು ಕೆಟ್ಟ ಅಭ್ಯಾಸಗಳೇ ಆರೋಗ್ಯಕ್ಕೆ ಮಾರಕ<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/RFYbWv<br />
<br />
ನಮ್ಮೆಲ್ಲರಲ್ಲಿಯೂ ಕೆಲವು ಕೆಟ್ಟ ಅಭ್ಯಾಸಗಳಿವೆ. ನಮಗೆ ಇದು ಕೆಟ್ಟದ್ದು ಎಂದು ಗೊತ್ತಿದ್ದರೂ ಉಪೇಕ್ಷಿಸಿ ಮುಂದುವರೆಸುತ್ತೇವೆ. ಕೆಲವು ಅಭ್ಯಾಸಗಳು ನಮಗೆ ಅರಿವಿಲ್ಲದೇ ಜರುಗುತ್ತಿರುತ್ತವೆ. ಕಾರಣವೇನೇ ಇರಲಿ, ಈ ಅಭ್ಯಾಸಗಳು ಅಪಾಯಕಾರಿಯಾಗಿದ್ದು ನಿಧಾನವಾಗಿ ನಮ್ಮನ್ನು ಸಾವಿನತ್ತ ದೂಡುತ್ತಿವೆ.<br />
<br />
ಈ ಅಪಾಯವನ್ನು ಮುಂಗಂಡ ಹಿರಿಯರು, ಆಪ್ತರು ಈ ಬಗ್ಗೆ ನಿಮಗೆ ಹಿತವಚನವನ್ನು ನೀಡಿ ಈ ಅಭ್ಯಾಸ ಮುಂದುವರೆಸದೇ ಇರಲು ಸಲಹೆ ನೀಡುತ್ತಾರೆ. ಅದರಲ್ಲೂ ಈ ಅಭ್ಯಾಸವಿರಿಸಿಕೊಂಡಿದ್ದವರು ಇದರಿಂದಾಗಿ ಬಳಿಕ ತಮಗೆ ಎದುರಾದ ತೊಂದರೆಯನ್ನು ಉದಾಹರಿಸಿ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂತಹ ಹತ್ತು ಪ್ರಮುಖವಾದ, ಆರೋಗ್ಯಕ್ಕೆ ಮಾರಕವಾದ ಹತ್ತು ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ:<br />
<br />
<br />
<b>#1 ಬ್ಲಾಕ್ ಹೆಡ್ ಗಳನ್ನು ಚಿವುಟುವುದು</b><br />
<img alt="ಬ್ಲಾಕ್ ಹೆಡ್ಗಳನ್ನು ಚಿವುಟುವುದು" src="https://kannada.boldsky.com/img/2018/01/09-1515473282-blackheads-27-1495856454.jpg" /><br />
ನಾವೆಲ್ಲರೂ ನಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಬ್ಲಾಕ್ ಹೆಡ್ ಎಂಬ ಕಪ್ಪುಚುಕ್ಕೆಯನ್ನು ಚಿವುಟಿ ಹೊರಹಾಕಲು ಯತ್ನಿಸಿಯೇ ಇರುತ್ತೇವೆ. ಕೆಲವೊಮ್ಮೆ ನಮ್ಮ ತಾಯಿ, ಪತ್ನಿ ಅಥವಾ ಸಹೋದರಿ ಈ ಕೆಲಸವನ್ನು ಮಾಡಿರಲೂಬಹುದು. ಆದರೆ ಕಪ್ಪುತಲೆಗಳ ತುದಿಯನ್ನು ಚಿವುಟಿ ತೆಗೆಯುವುದು ನಿಮ್ಮ ಮುಖದ ಚರ್ಮಕ್ಕೆ ನೀವು ಮಾಡಬಹುದಾದ ಗರಿಷ್ಟ ಹಾನಿಯಾಗಿದೆ. ಏಕೆ? ಏಕೆಂದರೆ ವಾಸ್ತವವಾಗಿ ಈ ಕಪ್ಪುತಲೆಗಳು ಒಂದು ನೀಳವಾದ ಹಿಟ್ಟಿನ ಕಡ್ಡಿಯಂತಿದ್ದು ತುದಿಯ ಭಾಗ ಮಾತ್ರ ಗೋಚರಿಸುತ್ತದೆ ಹಾಗೂ ಇದರ ಬುಡ ಚರ್ಮದಾಳದಲ್ಲಿರುತ್ತದೆ. ಈ ತುದಿಯನ್ನು ಚಿವುಟಿದರೆ ಹಿಟ್ಟಿನ ಕಡ್ಡಿಯ ತುದಿಯನ್ನು ಕೊಂಚವೇ ಮುರಿದಂತಾಗುತ್ತದೆ ಅಷ್ಟೇ ಹೊರತು ಇಡಿಯ ಕಡ್ಡಿ ಹಾಗೇ ಇರುತ್ತದೆ. ಆದರೆ ತುದಿಯನ್ನು ಮುರಿದಾಗ ಇದರ ಬುಡದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಚರ್ಮದ ಹೊರಭಾಗಕ್ಕೆ ತಲುಪಲು ಸುಲಭವಗುತ್ತದೆ ಹಾಗೂ ಈ ಮೂಲಕ ಸೋಂಕು ಹಾಗೂ ಉರಿಯೂತಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಕೀವುಭರಿತ ಗುಳ್ಳೆ, ಮೊಡವೆ ಮೊದಲಾದವು ಎದುರಾಗುತ್ತವೆ ಹಾಗೂ ಈ ಸೋಂಕು ಕೆಲದಿನಗಳ ಬಳಿಕ ನಿರ್ಗಮಿಸಿದರೂ ಈ ಭಾಗದಲ್ಲಿ ಕಪ್ಪು ಕಲೆಯೊಂದು ಶಾಶ್ವತವಾಗಿ ಉಳಿದುಬಿಡುತ್ತದೆ. ಆದ್ದರಿಂದ ಕಪ್ಪುತಲೆಯಾದರೆ ಸರ್ವಥಾ ಚಿವುಟಕೂಡದು.<br />
<br />
<br />
<b>#2 ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು:</b><br />
<img alt="ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು" src="https://kannada.boldsky.com/img/2018/01/09-1515472872-1m.jpg" /><br />
ನಮ್ಮ ಮೂಗಿನ ಮೇಲ್ಭಾಗ, ಅಂದರೆ ಕಣ್ಣೀರು ಹನಿಯುವ ಭಾಗದಿಂದ ತುಟಿಗಳ ಅಂಚುಗಳವರೆಗೆ ಒಂದು ಗೆರೆ ಎಳೆದರೆ ಕಂಡುಬರುವ ಒಂದು ತ್ರಿಕೋಣ ನಮ್ಮ ಮುಖದ "ಅತ್ಯಂತ ಅಪಾಯಕಾರಿಯಾದ ಭಾಗ" ಎಂದು ವೈದ್ಯವಿಜ್ಞಾನ ತಿಳಿಸುತ್ತದೆ. ಏಕೆಂದರೆ ಈ ಭಾಗದಲ್ಲಿ ಅತಿ ಸೂಕ್ಷ್ಮವಾದ ನರತಂತುಗಳಿದ್ದು ಇವು ತಲೆಬುರುಡೆ ಹಾಗೂ ಮೆದುಳಿನೊಂದಿಗೆ ಸಂಪರ್ಕ ಪಡೆದಿವೆ. ಈ ನರಗಳಲ್ಲಿ ರಕ್ತವನ್ನು ಹಿಮ್ಮೆಟ್ಟಿಸುವುದನ್ನು ತಡೆಯಲು ಯಾವುದೇ ಕವಾಟದ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಭಾಗದಲ್ಲಿರುವ ಪುಟ್ಟ ಮೊಡವೆಗಳನ್ನು ಚಿವುಟಿ ಒಳಗಿನ ಬಿಳಿಭಾಗವನ್ನು ಒಸರುವಂತೆ ಮಾಡಿದಾಗ ಚರ್ಮದ ಈ ಸೂಕ್ಷ್ಮಭಾಗವನ್ನು ನೀವೇ ತೆರೆದು meningitis ಅಥವಾ ಒಂದು ಬಗೆಯ ಮೆದುಳಿಗೆ ಸಂಬಂಧಿಸಿದ ತೊಂದರೆಯನ್ನು ಆಹ್ವಾನಿಸುತ್ತಿದ್ದೀರಿ. ಇದರಿಂದ ಮೆದುಳಿಗೂ ಸೋಂಕು ಉಂಟಾಗಬಹುದು. ಏಕೆಂದರೆ ಮೊಡವೆಗಳಲ್ಲಿನ ಬ್ಯಾಕ್ಟೀರಿಯಾಗಳು ಸೂಕ್ಷ್ಮ ನರತಂತುಗಳಿಂದ ಹಿಮ್ಮೆಟ್ಟಿದ ರಕ್ತದ ಮೂಲಕ ಮೆದುಳನ್ನು ತಲುಪಬಹುದು!<br />
<br />
<b>#3 ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು</b><br />
<img alt="ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು" src="https://kannada.boldsky.com/img/2018/01/09-1515472881-2m.jpg" /><br />
ನಮ್ಮ ಕಿವಿಯ ಕೊಳವೆಯ ಒಳಭಾಗದಲ್ಲಿ ಅತಿ ಸೂಕ್ಷ್ಮ ಹಾಗೂ ನವಿರಾದ ರೋಮಗಳಿದ್ದು ಇದರ ಬುಡದಿಂದ ಕಿವಿಯ ಮೇಣ ಉತ್ಪತ್ತಿಯಾಗುತ್ತದೆ. ಈ ಮೇಣ ನಾವಂದುಕೊಂಡಂತೆ ಅನಗತ್ಯವಾದುದಲ್ಲ. ಬದಲಿಗೆ ಈ ಮೇಣ ಅಂಟು ಅಂಟಾಗಿದ್ದು ಸೂಕ್ಷ್ಮವಾದ ತಮಟೆಯನ್ನು ಧೂಳು, ಪರಕೀಯ ಕಣ ಹಾಗೂ ತೆವಳುತ್ತಾ ಕಿವಿಯೊಳಗೆ ಬರುವ ಅತಿ ಚಿಕ್ಕ ಕ್ರಿಮಿಗಳಿಂದ ರಕ್ಷಣೆ ಒದಗಿಸಲೆಂದೇ ಸ್ರವಿಸುವ ದ್ರವವಾಗಿದೆ. ಆದ್ದರಿಂದ ತೆಳುವಾಗಿ ನಿಮ್ಮ ಕಿವಿಯೊಳಗೆ ಮೇಣವಿದ್ದಷ್ಟೂ ಆರೋಗ್ಯಕರ. ಆದರೆ ಈ ಮೇಣ ಇದೆ ಎಂದ ಮಾತ್ರಕ್ಕೇ ನೀವು ಹತ್ತಿಸುತ್ತಿದ ಕಡ್ಡಿಯನ್ನು ಬಳಸಿ ಇದನ್ನು ಒರೆಸಿ ತೆಗೆಯಬೇಕಾಗಿಲ್ಲ. ಅಲ್ಲದೇ ಮೇಣವನ್ನು ತೆಗೆಯುವ ಭರದಲ್ಲಿ ಮೇಣವನ್ನು ಗುಡಿಸಿದಂತೆ ಒಟ್ಟುಗೂಡಿಸಿ ಇನ್ನಷ್ಟು ಒಳಭಾಗಕ್ಕೆ ತಳ್ಳಬಹುದು. ಇದು ತಮಟೆಗೆ ಹಾನಿ ಎಸಗಬಹುದು ಹಾಗೂ ಕಿವಿ ಕೇಳಿಸುವುದು ಕೊಂಚ ಕಡಿಮೆಯಾಗಬಹುದು. ಆದ್ದರಿಂದ ಮೇಣ ಹೆಚ್ಚಾಗಿದ್ದರೆ ನೀವೇ ತೆಗೆಯುವ ಬದಲು ಕಿವಿ ಮೂಗು ಗಂಟಲು ತಜ್ಞರ ಬಳಿಗೆ ಹೋದರೆ ಅವರು ಸುರಕ್ಷಿತವಾಗಿ ತಮ್ಮಲ್ಲಿರುವ ವೈಜ್ಞಾನಿಕ ಉಪಕರಣಗಳನ್ನು ಬಳಸಿ ತೆಗೆಯುತ್ತಾರೆ.<br />
<br />
<br />
<b>#4 ಸಿಗರೇಟ್ ಸೇವನೆ</b><br />
<img alt="ಸಿಗರೇಟ್ ಸೇವನೆ" src="https://kannada.boldsky.com/img/2018/01/09-1515472889-3m.jpg" /><br />
ಸಿಗರೇಟು ಸೇದುವುದು ಆರೋಗ್ಯಕ್ಕೆ ಮಾರಕ ಎಂದು ಇತರರಿಗಿಂತಲೂ ಸಿಗರೇಟು ಸೇದುವವರಿಗೇ ಚೆನ್ನಾಗಿ ಗೊತ್ತಿರುತ್ತದೆ. ಆದರೂ ಇವರ ಮನಃಸ್ಥಿತಿ ’ಅಪಾಯ ಬಂದಾಗ ನೋಡಿಕೊಂಡರಾಯ್ತು’ ಎಂಬ ಸ್ಥಿತಿಗೆ ತಲುಪಿರುವ ಕಾರಣ ಯಾರ ಹಿತವಚನವನ್ನೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಸಿಗರೇಟಿನಲ್ಲಿರುವ ತಂಬಾಕಿನ ಹೊಗೆಯಲ್ಲಿ, ನಿಟೋಟಿನ್, ಬ್ಯೂಟೇನ್, ಪೈಂಟ್, ಆರ್ಸೆನಿಕ್ ಸಹಿತ ಸುಮಾರು ಎಪ್ಪತ್ತರಷ್ಟು ಅಪಾಯಕರ ರಾಸಾಯನಿಕಗಳಿವೆ. ಇವು ಧೂಮಪಾನಿಯ ಶ್ವಾಸಕೋಶದೊಳಗಿನ ಸೂಕ್ಷ್ಮ ನಳಿಕೆಗಳ ಕ್ಷಮತೆ ಕುಂದಿಸಿ ಉಸಿರಾಟದ ಕ್ಷಮತೆಯನ್ನೂ ಕಡಿಮೆ ಮಾಡುತ್ತವೆ ಹಾಗೂ ಕ್ಯಾನ್ಸರ್ ಉಂಟಾಗಲು ಈ ಜೀವಕೋಶಗಳು ಬೀಜದಂತೆ ಕಾರ್ಯನಿರ್ವಹಿಸುತ್ತವೆ. ಧೂಮಪಾನಿ ಬಿಟ್ಟ ಹೊಗೆ ಇತರರಿಗೂ ಮಾರಕವಾಗಿದ್ದು ಇದನ್ನು ಧೂಮಪಾನಿಗಳಲ್ಲದವರು ಪ್ರತಿಯೊಬ್ಬರೂ ವಿರೋಧಿಸುವ ಅಗತ್ಯವಿದೆ.<br />
<br />
<br />
<b>#5 ಹಸಿವಿಲ್ಲದಿದ್ದಾಗ ಊಟ ಮಾಡುವುದು</b><br />
<img alt="ಹಸಿವಿಲ್ಲದಿದ್ದಾಗ ಊಟ ಮಾಡುವುದು" src="https://kannada.boldsky.com/img/2018/01/09-1515472897-4m.jpg" /><br />
ನಮ್ಮ ದೇಹಕ್ಕೆ ಊಟ ಬೇಕು ಎಂದು ಮೆದುಳಿಗೆ ಹೊಟ್ಟೆ ನೀಡುವ ಸೂಚನೆಯೇ ಹಸಿವು. ಅಂದರೆ ಈಗ ಹೊಟ್ಟೆ ಖಾಲಿಯಾಗಿದೆ, ಆಹಾರ ಒದಗಿಸಲು ಸೂಕ್ತ ಸಮಯ ಎಂದು ಹೇಳುತ್ತಿದೆ. ಆದರೆ ಇದಕ್ಕೆ ಬದಲಾಗಿ ನೈಸರ್ಗಿಕ ಸಮಯವನ್ನು ಧಿಕ್ಕರಿಸಿ ಹಸಿವಿಲ್ಲದಿರುವ ಇತರ ಸಮಯದಲ್ಲಿ ಆಹಾರ ಸೇವಿಸಿದರೆ, ಆ ಸಮಯದಲ್ಲಿ ಹೊಟ್ಟೆಯಲ್ಲಿ ಇನ್ನೂ ಆಹಾರವಿದ್ದು ಜೀರ್ಣಕ್ರಿಯೆಯ ನಡುವೆ ಇರುತ್ತದೆ. ಈ ಹೆಚ್ಚುವರಿ ಆಹಾರ ಅನಗತ್ಯವಾಗಿದ್ದು ಈಗಾಗಲೇ ಹೊಟ್ಟೆಯಲ್ಲಿರುವ ಜೀರ್ಣಗೊಂಡ ಆಹಾರದೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ಮೇಲೆ ಕೆಳಗೆ ಮಾಡುವುದಲ್ಲದೇ ಅನಗತ್ಯವಾದ ಕ್ಯಾಲೋಗಿಗಳಿಂದ ದೇಹದ ತೂಕ ಹೆಚ್ಚಲೂ ಕಾರಣವಾಗುತ್ತದೆ.<br />
<b><br /></b>
<b>#6 ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು</b><br />
<img alt="ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು" src="https://kannada.boldsky.com/img/2018/01/09-1515472906-5m.jpg" /><br />
ನೀವು ನಡೆಯುತ್ತಿದ್ದಾಗ ಥಟ್ಟನೇ ನಿಮ್ಮ ಮೊಬೈಲಿನಲ್ಲಿ ಯಾವುದೋ ಸಂದೇಶ ಬಂದಿರುವುದು ತಿಳಿದಾಗ ಏನು ಮಾಡುತ್ತೀರಿ? ಎಲ್ಲರಿಗೂ ಇದು ಯಾವ ಸಂದೇಶ ಎಂಬ ಕುತೂಹಲ ಮೂಡಿಯೇ ಮೂಡುತ್ತದೆ. ಪರಿಣಾಮವಾಗಿ ನಾವೆಲ್ಲರೂ ಸಂದೇಶವನ್ನು ತಕ್ಷಣ ಓದಲು ತವಕಿಸುತ್ತೇವೆ ಹಾಗೂ ಒಂದು ವೇಳೆ ಇದು ಪ್ರೀತಿಪಾತ್ರರ ಅಥವಾ ಇನ್ನಾವುದೋ ಅತಿ ಅಗತ್ಯದ ಸಂದೇಶವಾಗಿದ್ದರೆ ಇದಕ್ಕೆ ಆ ಕ್ಷಣವೇ ಪ್ರತಿಕ್ರಿಯಿಸಲೂ ಮುಂದಾಗುತ್ತೇವೆ. ಆಗೇನಾಗುತ್ತದೆ ಗೊತ್ತೇ? ನಿಮ್ಮ ಮೆದುಳಿಗೆ ಸೆರೋಟೋನಿನ್ ಭರದಲ್ಲಿ ನುಗ್ಗುತ್ತದೆ ಹಾಗೂ ಸಂದೇಶದ ಮೂಲಕ ನಿಮ್ಮ ಮನ ಪ್ರಫುಲ್ಲವಾಗಿರುವುದನ್ನು ನಿಮ್ಮ ವದನದ ನಗು ತಿಳಿಸುತ್ತದೆ. ನೆನಪಿಡಿ, ಈ ಸಮಯದಲ್ಲಿ ನೀವು ನಡೆಯುತ್ತಿದ್ದೀರಿ. ಆಗ ಆಗಬಾರದ ಅನಾಹುತ ಆಗಿ ಹೋಗುತ್ತದೆ. ನಡೆಯುವ ದಾರಿಯಲ್ಲಿ ತೆರೆದಿದ್ದ ಮ್ಯಾನ್ ಹೋಲ್ ಅಥವಾ ಚರಂಡಿಯಲ್ಲಿ ನೀವು ಬಿದ್ದ ಬಳಿಕವೇ ನಿಮಗೆ ಏನಾಯಿತೆಂದು ತಿಳಿದಿರುತ್ತದೆ. ಮುಂದಿನ ಕ್ಷಣಗಳಲ್ಲಿ ನೀವು ಎದುರಿಸಬೇಕಾದ ಮುಜುಗರ, ವ್ಯರ್ಥವಾಗುವ ಅಮೂಲ್ಯ ಸಮಯ, ಮೊಬೈಲು ಬಿದ್ದು ಆಗುವ ನಷ್ಟ ಅಥವಾ ಬೇರಾವುದೋ ವಿವರಿಸಲಾಗದ ಅನಾಹುತವೂ ಸಂಭವಿಸಬಹುದು. ಕೆಲವೊಮ್ಮೆ ನಿಮ್ಮ ಮಾರ್ಗ ನೇರವಾಗಿ ಮುಂದಿನ ಮುಖ್ಯ ರಸ್ತೆಗೆ ತೆರೆದುಕೊಂಡಿದ್ದು ಸಂದೇಶ ಓದುವ ಭರದಲ್ಲಿ ನೇರವಾಗಿ ರಸ್ತೆಗೆ ಕಾಲಿಟ್ಟ ತಕ್ಷಣ ಅತ್ತ ಬದಿಯಿಂದ ಬರುವ ವಾಹನಕ್ಕೆ ಢಿಕ್ಕಿ ಹೊಡೆದು ಪ್ರಾಣಾಪಾಯವೂ ಎದುರಾಗಬಹುದು. ಇವೆಲ್ಲಾ ಏಕಾಯಿತು ಎಂದರೆ ಸಂದೇಶ ಬಂದ ಸಮಯದವರೆಗೂ ನಿಮ್ಮ ಮೆದುಳು ನಿಮ್ಮ ನಡಿಗೆಯನ್ನು ನಿಯಂತ್ರಿಸುತ್ತಿತ್ತು. ಸಂದೇಶ ಬಂದ ತಕ್ಷಣ ನಿಮ್ಮ ಗಮನ ಮಾಹಿತಿಯತ್ತ ಕೇಂದ್ರೀಕೃತಗೊಂಡು ನಡಿಗೆಯ ಕೆಲಸವನ್ನು ಮೆದುಳುಬಳ್ಳಿ ವಹಿಸಿಕೊಂಡಿತು. ಹಾಗಾಗಿ ನಡಿಗೆ ಮುಂದುವರೆಯಿತು. ಆದರೆ ಎದುರಿಗೆ ಬರುವ ಇತರ ಅಪಾಯಗಳನ್ನು ಗ್ರಹಿಸಿ ಆ ಪ್ರಕಾರ ಸೂಚನೆಗಳನ್ನು ನೀಡಲು ನಿಮ್ಮ ಮೆದುಳುಬಳ್ಳಿ ಸಮರ್ಥವಾಗಿಲ್ಲದಿರುವ ಕಾರಣ ಅನಾಹುತ ಸಂಭವಿಸಿದೆ. ಆದ್ದರಿಂದ ನಡೆಯುವ ವೇಳೆ ನಿಮ್ಮ ಮೆದುಳನ್ನು ಪೂರ್ಣವಾಗಿ ಮುಂದಿನ ಚಟುವಟಿಕೆಗಳ ಮೇಲೆ ಇರಿಸಬೇಕು. ಆ ಸಮಯದಲ್ಲಿ ಸಂದೇಶ ಬಂದರೆ ಪೂರ್ಣವಾಗಿ ನಡಿಗೆಯನ್ನು ನಿಲ್ಲಿಸಿ, ಪಕ್ಕದಲ್ಲಿ ನಿಂತು ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಮೊಬೈಲು ಮತ್ತೆ ಜೇಬಿನಲ್ಲಿರಿಸಿಯೇ ಮುಂದುವರೆಯಬೇಕು.<br />
<br />
<br />
<b>#7 ಕುತ್ತಿಗೆಯ ನೆಟಿಕೆ ತೆಗೆಯುವುದು</b><br />
<img alt="ಕುತ್ತಿಗೆಯ ನೆಟಿಕೆ ತೆಗೆಯುವುದು" src="https://kannada.boldsky.com/img/2018/01/09-1515472914-6m.jpg" /><br />
ಕುತ್ತಿಗೆಯ ನೆಟಿಕೆ ತೆಗೆಯುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಕೆಲವು ಮಸಾಜ್ ಮಾಡುವವರೂ ನೆಟಿಕೆ ತೆಗೆಯುತ್ತಾರೆ. ಆದರೆ ಈ ಅಭ್ಯಾಸ ಮುಂದೊಂದು ದಿನ ಕುತ್ತಿಗೆಯ ನೋವು ಹಾಗೂ ಹೃದಯಾಘಾತದಿಂದ ಸಾವಿಗೂ ಕಾರಣವಾಗಬಹುದು.<br />
<br />
<b>#8 ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು</b><br />
<img alt=" ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು" src="https://kannada.boldsky.com/img/2018/01/09-1515472927-7m.jpg" /><br />
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಸದಾ ಜಗಳವಾಡುತ್ತಿರುವ ಪತಿ ಪತ್ನಿಯರಿಗೆ ಹೃದಯ ಸ್ತಂಭನ ಹಾಗೂ ಇತರ ಹೃದಯ ಸಂಬಂಧಿತ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಒಂದು ವೇಳೆ ನಿಮ್ಮ ವಿವಾಹ ಜೀವನದಲ್ಲಿ ಸಂತೋಷ ಕಂಡುಕೊಳ್ಳಲಾಗದಿದ್ದರೆ ಮೊದಲಿಗೆ ಇದಕ್ಕೆ ಕಾರಣವೇನೆಂದು ಅರಿತು ಇದನ್ನು ಸರಿಪಡಿಸಿಕೊಂಡು ಇಬ್ಬರೂ ಪರಸ್ಪರ ಬದಲಾವಣೆಗಳನ್ನು ಹೊಂದುವ ಮೂಲಕ ಮತ್ತೆ ಸಂಸಾರದ ಬಂಡಿಯನ್ನು ಸರಿದೂಗಿಸಿಕೊಳ್ಳಬೇಕು. ಇದು ಸಾಧ್ಯವಾಗದೇ ಹೋದರೆ ಸಂಬಂಧದಿಂದ ಹೊರಬೀಳುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ. ಒಂದು ವೇಳೆ ಮಕ್ಕಳಾಗಿದ್ದರೆ ಹಿರಿಯರ/ನ್ಯಾಯಾಲಯದ ಸಲಹೆಯಂತೆ ಮಕ್ಕಳ ಸುಪರ್ದಿಯನ್ನು ಪಡೆದುಕೊಳ್ಳಬೇಕು.<br />
<br />
<b><br /></b>
<b>#9 ಬೆಳಗ್ಗಿನ ಉಪಾಹಾರ ಮಾಡದೇ ಇರುವುದು</b><br />
<img alt="ಬೆಳಗ್ಗಿನ ಉಪಾಹಾರ ಮಾಡದೇ ಇರುವುದು" src="https://kannada.boldsky.com/img/2018/01/09-1515472937-8m.jpg" /><br />
ನಂಬಲೇಬೇಕಾದ ಸತ್ಯ ಎಂದರೆ ಬೆಳಗ್ಗಿನ ಉಪಾಹಾರ ಮಾಡದೇ ಇರುವುದು ಅಥವಾ ಉಪಾಹಾರ ಸೇವನೆಯನ್ನು ತಡವಾಗಿಸುವುದು ಎರಡೂ ಆರೋಗ್ಯದ ದೃಷ್ಟಿಯಿಂದ ನೀವು ಮಾಡುತ್ತಿರುವ ಅತಿ ಕೆಟ್ಟ ಅಭ್ಯಾಸವಾಗಿದೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಪಾಠಕ್ಕೆ ಇನ್ನೂ ಐದೇ ನಿಮಿಷ ಇರುವಾಗ ಎದ್ದು ತಡಬಡಿಸಿ ಉಪಾಹಾರ ಸೇವಿಸದೇ ಓಡಿ ಹೋಗುತ್ತಾರೆ. ವಾಸ್ತವವಾಗಿ ಇಂಗ್ಲಿಷ್ಟಿನ ಬ್ರೇಕ್ ಫಾಸ್ಟ್ ಎಂಬ ಪದವೇ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹ ಪಡೆದಿದ್ದ ಉಪವಾಸ (ಫಾಸ್ಟ್) ಅನ್ನು ಕೊನೆಗೊಳಿಸುವುದು (ಬ್ರೇಕ್) ಆಗಿದೆ. ರಾತ್ರಿಯ ಅನೈಚ್ಛಿಕ ಕ್ರಿಯೆಗಳಿಂದ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಗಳು ಉತ್ಪತ್ತಿಯಾಗಿರುತ್ತವೆ. ಇದು ದೇಹದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯವೂ ಆಗಿದೆ. ಆದ್ದರಿಂದ ಬೆಳಗ್ಗಿನ ಉಪಾಹಾರದ ಮೂಲಕ ಈ ಆಮ್ಲಗಳನ್ನು ಬಳಸಿಕೊಂಡು ಇದರ ಪ್ರಕೋಪವನ್ನು ತಣ್ಣಗಾಗಿಸಬಹುದು. ಇದೇ ಕಾರಣಕ್ಕೆ ಉಪಾಹಾರ ಅಲ್ಪ ಪ್ರಮಾಣದಲ್ಲಿರಬೇಕು. ಸಮಯವಿಲ್ಲದಿದ್ದರೆ ಕೇವಲ ಒಂದು ಸೇಬು, ಒಂದು ಬಾಳೆಹಣ್ಣು ಅಥವಾ ಒಂದು ಮುಷ್ಟಿಯಷ್ಟು ಒಣಫಲ ಅಥವಾ ಸಿದ್ದ ರೂಪದ ಗ್ರನೋಲಾ ಬಾರ್ ಮೊದಲಾದ ಆಹಾರಗಳನ್ನು ಸೇವಿಸಿದರೂ ಸರಿ, ಯಾವುದಕ್ಕೂ ಹೊಟ್ಟೆಯನ್ನು ಖಾಲಿ ಬಿಡಬಾರದು.<br />
<br />
<br />
<b>#10 ಉಗುರು ಕಚ್ಚುವುದು</b><br />
<img alt="ಉಗುರು ಕಚ್ಚುವುದು" src="https://kannada.boldsky.com/img/2018/01/09-1515472946-9m.jpg" /><br />
ನಿಮ್ಮ ದೇಹಕ್ಕೆ ಮಾಡಬಹುದಾದ ಅಪಾಯಕರ ಕ್ರಿಯೆ ಎಂದರೆ ಉಗುರು ಕಚ್ಚುವುದು. ಇಡಿಯ ದಿನ ಗಾಳಿಯಲ್ಲಿಯೇ ಇರುವ ಉಗುರುಗಳಲ್ಲಿ ಧೂಳು, ಕ್ರಿಮಿಗಳು ಹಾಗೂ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಈ ಧೂಳಿನ ವಿಶ್ಲೇಷಣೆ ನಡೆಸಿದ ಕೆಲವು ಅಧ್ಯಯನಗಳಲ್ಲಿ ಇದರಲ್ಲಿ ಸಾಲ್ಮೋನೆಲ್ಲಾ, ಈ ಕೊಲೈ ಎಂಬ ಭಯಾನಕ ಬ್ಯಾಕ್ಟೀರಿಯಾಗಳಿರುವುದನ್ನು ಕಂಡುಬಂದಿದೆ. ಈ ಬ್ಯಾಕ್ಟೀರಿಯಾಗಳು ಆಹಾರವನ್ನು ವಿಷವಾಗಿಸುವ ಹಾಗೂ ಅತಿಸಾರ, ಭೇದಿ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿವೆ. ಹೀಗಿದ್ದಾಗ ಈ ಬ್ಯಾಕ್ಟೀರಿಯಾಗಳನ್ನು ನಾವೇ ಕೈಯಾರೆ ಬಾಯಿಗೆ ಕೊಂಡೊಯ್ಯುವುದು ಎಷ್ಟು ಮಟ್ಟಿಗೆ ಸರಿ?<br />
<div>
<br /></div>
</div>
Arshad Hussainhttp://www.blogger.com/profile/13410279590093513740noreply@blogger.com2tag:blogger.com,1999:blog-8910708758309450943.post-79351342365251420382018-02-18T22:05:00.000+04:302018-02-18T22:05:59.366+04:30ಹಸಿರು ಟೀ - ಜಾಸ್ತಿ ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ!<div dir="ltr" style="text-align: left;" trbidi="on">
<br />
ಬೋಲ್ಡ್ ಸ್ಕೈ. ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/z9qXQb<br />
<br />
ಹಸಿರು ಟೀ ಚೀನಾದಲ್ಲಿ ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದರೂ ಭಾರತ ಸಹಿತ ಇತರ ವರ್ಷಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿದೆ ಹಾಗೂ ವಿಶೇಷವಾಗಿ ತೂಕ ಇಳಿಸಿಕೊಳ್ಳುವವರು ತಮ್ಮ ಪೇಯವನ್ನು ಹಸಿರು ಟೀ ಗೆ ಬದಲಿಸಿಕೊಳ್ಳುತ್ತಿದ್ದಾರೆ. ಹಸಿರು ಟೀ ಎಲೆ, ದಂಟು ಹಾಗೂ ಕಾಂಡ ಎಲ್ಲವೂ ಔಷಧೀಯ ಗುಣಗಳಿಗೆ ಬಳಸಲ್ಪಡುತ್ತಿದ್ದು ಈ ಗುಣಗಳಿಂದಾಗಿಯೇ ವಿಶ್ವದ ಅತಿ ಹೆಚ್ಚಿನ ಆರೋಗ್ಯಕರ ಪೇಯ ಎಂದು ಪರಿಗಣಿಸಲ್ಪಟ್ಟಿದೆ.<br />
<img alt="ಜಠರದ ತೊಂದರೆಗಳು" src="https://kannada.boldsky.com/img/2018/02/10m-1518843615.jpg" /><br />
ಆರೋಗ್ಯದ ಮೇಲೆ ಹಸಿರು ಟೀ ಬೀರುವ ಪರಿಣಾಮಗಳು ಅಪಾರವಾಗಿವೆ. ಕ್ಯಾನ್ಸರ್ ನಿಂದ ರಕ್ಷಣೆ, ಮೆದುಳಿನ ಕ್ಷಮತೆ ಹೆಚ್ಚಿಸುವುದು, ಖಿನ್ನತೆಯಿಂದ ರಕ್ಷಿಸುವುದು, ತಲೆನೋವು, ಅತಿಸಾರ, ಮೂಳೆಗಳು ಶಿಥಿಲಗೊಳ್ಳುವುದು, ಹೊಟ್ಟೆಯ ತೊಂದರೆಗಳು ಮೊದಲಾದವುಗಳ ವಿರುದ್ದ ರಕ್ಷಣೆ ಒದಗಿಸುವುದು, ಹೃದಯ ಸಂಬಂಧಿ ತೊಂದರೆ, ಮಧುಮೇಹ, ಕಡಿಮೆ ರಕ್ತದೊತ್ತಡ, ಅತಿಯಾದ ದಂತ ಆಯಾಸ, ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದು ಮೊದಲಾದ ತೊಂದರೆಗಳು ಎದುರಾಗದಂತೆ ರಕ್ಷಣೆ ಒದಗಿಸುವುದು ಮೊದಲಾದ ಪ್ರಯೋಜನಗಳಿವೆ.<br />
<br />
ಆದರೆ ಈ ಜಗತ್ತಿನ ಯಾವುದೇ ವಸ್ತುವಿನಲ್ಲಿರುವಂತೆ ಹಸಿರು ಟೀ ಸಹಾ ತನ್ನದೇ ಆದ ಕೆಲವು ಅಡ್ಡ ಅಥವಾ ದುಷ್ಟರಿಣಾಮದಿಂದ ಹೊರತಾಗಿಲ್ಲ. ಏಕೆಂದರೆ ಹಸಿರು ಟೀ ಯಲ್ಲಿಯೂ ಇತರ ಟೀಯಲ್ಲಿರುವಂತೆ ಕೆಫೀನ್ ಇದೆ. ಕೆಫೀನ್ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ನಡುಕ, ಉದ್ವೇಗ ಹಾಗೂ ನರೋದ್ರೇಕವನ್ನು ಹೆಚ್ಚಿಸುತ್ತದೆ.<br />
<br />
ಪ್ರತಿ ಲೋಟ ಹಸಿರು ಟೀಯಲ್ಲಿ 2-4 ದಷ್ಟು ಕೆಫೀನ್ ಇದೆ. ಇದರ ಸೇವನೆಯಿಂದ ಏಕಾಗ್ರತೆ ಹಾಗೂ ಚಿಂತನಾಶಕ್ತಿಯ ಮೇಲೆ ಪ್ರಭಾವವುಂಟಾಗುತ್ತದೆ. ಬನ್ನಿ, ಹಸಿರು ಟೀ ಸೇವನೆ ಅಧಿಕವಾದರೆ ಇದರಿಂದ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಅರಿಯೋಣ.<br />
<img alt="ತಲೆನೋವು" src="https://kannada.boldsky.com/img/2018/02/24-1427185880-green-tea-toner-1518843649.jpg" /><br />
<b>1. ಜಠರದ ತೊಂದರೆಗಳು</b><br />
ಹಸಿರು ಟೀಯಲ್ಲಿರುವ ಕೆಫೀನ್ ಪ್ರಮಾಣ ಚಿಕ್ಕದೇ ಆಗಿದ್ದರೂ, ಈ ಚಿಕ್ಕ ಪ್ರಮಾಣವೇ ಹೊಟ್ಟೆಯನ್ನು ಕೆಡಿಸಲು ಸಾಕಾಗುತ್ತದೆ. ಏಕೆಂದರೆ ಕೆಫೀನ್ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣರಸದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಜಠರದ ತೊಂದರೆಗೆ ನಾಂದಿ ಹಾಡುತ್ತದೆ. ಇದರ ಅಡ್ಡಪರಿಣಾಮವಾಗಿ ನೋವು ಅಥವಾ ವಾಕರಿಕೆಯೂ ಎದುರಾಗಬಹುದು.<br />
<img alt="ನಿದ್ದೆಯ ತೊಂದರೆಗಳು" src="https://kannada.boldsky.com/img/2018/02/3m-1518843550.jpg" /><br />
<b>2. ತಲೆನೋವು:</b><br />
ಹಸಿರು ಟೀ ಸೇವನೆಯಿಂದ ಲಘುವಿನಿಂದ ಹಿಡಿದು ಭಾರೀ ಎನ್ನುವಷ್ಟು ತಲೆನೋವು ಆವರಿಸಬಹುದು. ಇದಕ್ಕೆಲ್ಲಾ ಇದರಲ್ಲಿರುವ ಕೆಫೀನ್ ಕಾರಣ. ಒಂದು ವೇಳೆ ಅತಿಯಾದ ತಲೆನೋವಿನಿಂದ ಬಳಲುತ್ತಿರುವ ವ್ಯಕ್ತಿಗಳು ಹಸಿರು ಟೀ ಸೇವಿಸಿದರೆ ತಲೆತಿರುಗುವಿಕೆ ಎದುರಾಗಬಹುದು. ಅದರಲ್ಲೂ ಮೈಗ್ರೇನ್ ತಲೆನೋವಿನ ರೋಗಿಗಳು ಹಸಿರು ಟೀ ಸೇವಿಸಿದರೆ ತಲೆನೋವು ಇನ್ನಷ್ಟು ಉಲ್ಬಣಗೊಳಿಸುವುದರಿಂದ ಈ ರೋಗಿಗಳಿಗೆ ಹಸಿರು ಟೀ ಸಲ್ಲದು. ಆದರೆ ಮೈಗ್ರೇನ್ ಲಘುವಾಗಿದ್ದರೆ ಹಾಗೂ ಹಸಿರು ಟೀ ಇಲ್ಲದೇ ಆಗುವುದಿಲ್ಲ ಎನ್ನುವಂತಿದ್ದರೆ ಮಾತ್ರ ಕೊಂಚ ಪ್ರಮಾಣದಲ್ಲಿ ಸೇವಿಸಬಹುದು.<br />
<img alt="ಕಬ್ಬಿಣದ ಕೊರತೆ" src="https://kannada.boldsky.com/img/2018/02/tea-bgreen-bag-08-1475906597-1518843662.jpg" /><br />
<b>3. ನಿದ್ದೆಯ ತೊಂದರೆಗಳು</b><br />
ಹಸಿರು ಟೀ ಯನ್ನು ಸಂಜೆಯ ಬಳಿಕ ಸರ್ವಥಾ ಸೇವಿಸಬಾರದು. ಏಕೆಂದರೆ ಇದರ ಸೇವನೆಯಿಂದ ನರವ್ಯವಸ್ಥೆಯ ಮೇಲೆ ಪ್ರಚೋದನೆಯುಂಟಾಗಿ ನಿದ್ದೆ ಆವರಿಸಲು ತೊಂದರೆಯಾಗಬಹುದು ಹಾಗೂ ರಾತ್ರಿ ಬಲುಹೊತ್ತಿನವರೆಗೆ ನಿದ್ದೆ ಬಾರದೇ ಹೋಗಬಹುದು. ಇದರಲ್ಲಿರುವ ಕೆಫೇನ್ ನಿದ್ದೆ ಆವರಿಸಲು ಅಗತ್ಯವಾದ ರಾಸಾಯನಿಕಗಳು ಮೆದುಳನ್ನು ತಲುಪದಂತೆ ತಡೆಗಟ್ಟುತ್ತದೆ ಹಾಗೂ ಉದ್ವೇಗಕ್ಕೆ ಕಾರಣವಾಗುವ ಅಡ್ರಿನಲಿನ್ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.<br />
<br />
<b>4. ಕಬ್ಬಿಣದ ಕೊರತೆ:</b><br />
ಒಂದು ನಂಬಲರ್ಹ ಅಧ್ಯಯನದ ಪ್ರಕಾರ ಹಸಿರು ಟೀ ಸೇವನೆ ಹೆಚ್ಚಾದರೆ ರಕ್ತಹೀನತೆಯೂ ಹೆಚ್ಚಾಗಬಹುದು. ಅಲ್ಲದೇ ಅಹಾರದ ಮೂಲಕ ಲಭಿಸುವ ಕಬ್ಬಿಣವನ್ನು ದೇಹ ಬಳಸಿಕೊಳ್ಳಲು ವಿಫಲವಾಗಿಸಬಹುದು. ಈ ಟೀಯಲ್ಲಿರುವ ಟ್ಯಾನಿನ್ ಹಾಗೂ ಪಾಲಿಫಿನಾಲ್ ಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತವೆ. ಈ ಕಣಗಳು ಕಬ್ಬಿಣದ ಕಣಗಳೊಂದಿಗೆ ಮಿಳಿತಗೊಂಡು ದೇಹ ಹೀರಿಕೊಳ್ಳುವುದಕ್ಕಿಂತಲೂ ದೊಡ್ಡ ಕಣಗಳಾಗುವ ಮೂಲಕ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಪಡಿಸುತ್ತದೆ.<br />
<img alt="ಹೃದಯ ಬಡಿತದಲ್ಲಿ ಏರುಪೇರು" src="https://kannada.boldsky.com/img/2018/02/5m-1518843566.jpg" /><br />
<b>5. ಹೃದಯ ಬಡಿತದಲ್ಲಿ ಏರುಪೇರು:</b><br />
ಹಸಿರು ಟೀಯಲ್ಲಿರುವ ಕೆಫೀನ್ ಹೃದಯದ ಬಡಿತವನ್ನು ಏರಿಸುತ್ತದೆ ಹಾಗೂ ಗತಿಯಲ್ಲಿ ಏರುಪೇರಾಗಿಸುತ್ತದೆ. ಇದರ ಪರಿಣಾಮವಾಗಿ ಹೃದಯದ ಉಬ್ಬರವಿಳಿತ (palpitations) ಎದುರಾಗಬಹುದು. ತನ್ಮೂಲಕ ಎದೆನೋವು ಹಾಗೂ ಹೃದಯದ ಬಡಿತ ಆತಂಕಕ್ಕೆ ಕಾರಣವಾಗುವಷ್ಟು ಹೆಚ್ಚಬಹುದು ಹಾಗೂ ಇದು ಹೃದಯದ ಆರೋಗ್ಯವನ್ನು ಅಪಾಯಕ್ಕೆ ಒಡ್ಡಬಹುದು.<br />
<img alt="ಸ್ನಾಯುಗಳ ಸೆಡೆತ" src="https://kannada.boldsky.com/img/2018/02/6m-1518843573.jpg" /><br />
<b>6. ಸ್ನಾಯುಗಳ ಸೆಡೆತ</b><br />
ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಬಹುದು ಹಾಗೂ ಕೆಲವು ಅಂಗಗಳು ತಿರುಚಬಹುದು. ಏಕೆಂದು ಗೊತ್ತೇ? ಟೀ ಯಲ್ಲಿರುವ ಕೆಫೀನ್ restless leg syndrome ಅಥವಾ ಸ್ನಾಯುಗಳನ್ನು ಸತತವಾಗಿ ಬಳಸಿಕೊಳ್ಳುವ ಮೂಲಕ ಎದುರಾಗುವ ಸ್ನಾಯುಗಳ ಕುಸಿತಕ್ಕೆ ಕಾರಣವಾಗುತ್ತದೆ. ಈ ಮೂಲಕ ಕೆಲವು ಮೂಳೆಗಳು ಹಿಮ್ಮರಳದಂತೆ ಸ್ನಾಯುಗಳು ಸೆಡೆತಗೊಳುತ್ತವೆ. ವಿಶೇಷವಾಗಿ ಮೊಣಕಾಲಿನ ಮೀನಖಂಡ ಸೆಡೆತಕ್ಕೊಳಗಾಗಿ ಪಾದ ಮತ್ತು ಮೊಣಕಾಲು ಮಡಚಿ ನೇರವಾಗಿಸಲು ಆಗುವುದೇ ಇಲ್ಲ.<br />
<img alt="ಅತಿಸಾರ" src="https://kannada.boldsky.com/img/2018/02/7m-1518843581.jpg" /><br />
<b>7. ಅತಿಸಾರ</b><br />
ಕೆಫೇನ್ ಒಂದು ವಿರೇಚಕ ಔಷಧಿಯಾಗಿದೆ. ಇದರ ಪ್ರಮಾಣ ಹೆಚ್ಚಾದರೆ ಅತಿಸಾರ ಎದುರಾಗುತ್ತದೆ ಹಾಗೂ ಸತವಾಗಿ ಶೌಚಾಲಯಕ್ಕೆ ಓಡಬೇಕಾಗುತ್ತದೆ ಹಾಗೂ ಮಲದ ಮೂಲಕ ಅತಿ ಹೆಚ್ಚೇ ಎನಿಸುವಷ್ಟು ನೀರು ವ್ಯರ್ಥವಾಗುತ್ತದೆ. ಆದ್ದರಿಂದ ಹಸಿರು ಟೀ ಕಡಿಮೆ ಪ್ರಮಾಣದಲ್ಲಿರಬೇಕು ಹಾಗೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.<br />
<img alt="ವಾಂತಿ" src="https://kannada.boldsky.com/img/2018/02/8m-1518843589.jpg" /><br />
<b>8. ವಾಂತಿ</b><br />
ಒಂದು ಭಾರತೀಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಹಸಿರು ಟೀಯಲ್ಲಿರುವ ಪಾಲಿಫೆನಾಲ್ ಗಳು ಉತ್ಕರ್ಷಶೀಲ ಒತ್ತಡ ಎದುರಿಸುತ್ತವೆ. ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ವಾಂತಿ, ವಾಕರಿಕೆಗೂ ಕಾರಣವಾಗಬಹುದು. ಪ್ರತಿದಿನ ಹಸಿರು ಟೀ ಮೂಲಕ ಸೇವಿಸಬಹುದಾದ ಕೆಫೀನ್ 300 ರಿಂದ 400 ಮಿಲಿಗ್ರಾಂ ಒಳಗೇ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಒಂದು ಕಪ್ ನಲ್ಲಿ ಸುಮಾರು ಐವತ್ತು ಮಿಲಿಗ್ರಾಂ ಕೆಫೀನ್ ಲಭಿಸುತ್ತದೆ. ಆ ಪ್ರಕಾರ ದಿನಕ್ಕೆ ಸೇವಿಸಬಹುದಾದ ಗರಿಷ್ಟ ಪ್ರಮಾಣವೆಂದರೆ ಎಂಟು ಕಪ್.<br />
<img alt="ಎದೆಯುರಿತ" src="https://kannada.boldsky.com/img/2018/02/9m-1518843597.jpg" /><br />
<b>9. ಎದೆಯುರಿತ</b><br />
ಹಸಿರು ಟೀ ಆಮ್ಲೀಯವಾಗಿದ್ದು ಇದು ಅನ್ನಾನಾಳಕ್ಕೆ ಉರಿಯುಂಟುಮಾಡಬಹುದು. ಪರಿಣಾಮವಾಗಿ ಎದೆಯುರಿತ ಎದುರಾಗಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ರೂಪದ ಹಸಿರು ಟೀ ಸೇವನೆಗೆ ನಿಮ್ಮ ಮನ ತುಡಿದರೆ ನಾವು ಮೊದಲೇ ಎಚ್ಚರಿಸುತ್ತಿದ್ದೇವೆ, ಈ ಪೇಯಕ್ಕೆ ಸಂರಕ್ಷಕರೂಪದಲ್ಲಿ ಸೇರಿಸಿರುವ ಅಸ್ಕಾರ್ಬಿಕ್ ಆಮ್ಲ ಅನ್ನನಾಳದಿಂದ ಆಹಾರ ಹಿಮ್ಮರಳು ಪ್ರಚೋದಿಸಬಹುದು ಹಾಗೂ ಹುಳಿತೇಗು, ಎದೆಯುರಿ ಮೊದಲಾದವು ಎದುರಾಗಬಹುದು.<br />
<img alt="ಮಧುಮೇಹ" src="https://kannada.boldsky.com/img/2018/02/10m-1518843605.jpg" /><br />
<b>10. ಮಧುಮೇಹ:</b><br />
ಮಧುಮೇಹಿಗಳು ಹಸಿರು ಟೀ ಸೇವನೆಯಿಂದ ದೂರವಿವುರುದೇ ಒಳ್ಳೆಯದು. ಏಕೆಂದರೆ ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಏರುಪೇರಾಗಬಹುದು. ಅದರಲ್ಲೂ ಟೈಪ್ ೨ ಮಧುಮೇಹ ಇರುವ ವ್ಯಕ್ತಿಗಳು ಹಸಿರು ಟೀ ಸರ್ವಥಾ ಸೇವಿಸಬಾರದು. ಏಕೆಂದರೆ ಇದು ದೇಹದ ಇನ್ಸುಲಿನ್ ಮಟ್ಟವನ್ನೇ ಏರುಪೇರುಗೊಳಿಸುತ್ತದೆ.<br />
<img alt="ಮೂಳೆಗಳು ಟೊಳ್ಳಾಗುವ Osteoporosis" src="https://kannada.boldsky.com/img/2018/02/11m-1518843629.jpg" /><br />
<b>11. ಮೂಳೆಗಳು ಟೊಳ್ಳಾಗುವ Osteoporosis</b><br />
ಕೆಫೀನ್ ಸೇವನೆಯಿಂದ ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಸಿರು ಟೀ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಕ್ಯಾಲ್ಸಿಯಂ ವಿಸರ್ಜನೆಯ ಗತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಯಾವಾಗ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗುತ್ತದೆಯೋ ಆಗ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಂಡು ಟೊಳ್ಳಾಗಿ ಶಿಥಿಲಗೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ.<br />
<br />
ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.</div>
Arshad Hussainhttp://www.blogger.com/profile/13410279590093513740noreply@blogger.com1tag:blogger.com,1999:blog-8910708758309450943.post-12612964908422126652018-02-04T00:15:00.001+04:302018-02-04T00:15:53.620+04:30ಸಕ್ಕರೆ-ಒಂದು ಸುಂದರ ವಿಷ: ಇಲ್ಲಿವೆ ಹತ್ತು ಪುರಾವೆಗಳು<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
http://tinyurl.com/z6r69mf<br />
<img alt="ಆಯಸ್ಸು ಕಡಿಮೆಯಾಗುತ್ತದೆ" src="https://kannada.boldsky.com/img/2015/07/30-1438245545-10m.jpg" /><br />
<br />
ನಾವು ಸೇವಿಸುವ ಆಹಾರಗಳಲ್ಲಿ ಹಲವು ನೋಡಲು ಸುಂದರವಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಿವೆ. ಉದಾಹರಣೆಗೆ ಮೈದಾಹಿಟ್ಟು. ಗೋಧಿಯ ನಾರಿನಂಶವನ್ನು ನಿವಾರಿಸಿ ಕೇವಲ ಬಿಳಿಯ ಭಾಗವನ್ನು ಹೊಂದಿರುವ ಮೈದಾ ಮಲಬದ್ದತೆಗೆ ಮೂಲ. ಆದರೆ ನೋಡಲು? ಅಪ್ಪಟ ಬಿಳಿಯ ಬಣ್ಣದ ಅಪ್ಸರೆ, ಇದಕ್ಕೆ ಅಥವಾ ಇದರಿಂದ ತಯಾರಾದ ಖಾದ್ಯಗಳಿಗೆ ಮರುಳಾಗದವರೇ ಇಲ್ಲ. ಅಂತೆಯೇ ಸಕ್ಕರೆ, ಅಜಿನೋಮೋಟೋ, ಅಡುಗೆ ಸೋಡಾ, ಡಬ್ಬಿಯಲ್ಲಿ ಸಿಗುವ ಸಂಸ್ಕರಿತ ಆಹಾರಗಳು, ಮಾರ್ಜಾರಿನ್ ಎಂಬ ಬೆಣ್ಣೆ ಮೊದಲಾದವು ಸಹಾ ನೋಡಲು ಸುಂದರವಾದ ವಿಷಗಳಾಗಿವೆ.<br />
<br />
ಇಂದು ಬಿಳಿಯ ಈ ಸಕ್ಕರೆ ಎಂಬ ವಿಷದ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ. ಇದು ಏಕೆ ವಿಷವಾಗಿದೆ ಎಂದರೆ ಇದರಲ್ಲಿರುವ ಸಕ್ಕರೆಯ ಅಂಶ ಹೆಚ್ಚು. ಅರೆ, ಸಕ್ಕರೆಯಲ್ಲಿ ಸಕ್ಕರೆ ಅಂಶ ಇಲ್ಲದೇ ಇನ್ನೇನು ಉಪ್ಪಿನಂಶ ಇರುತ್ತೆಯೇ? ಇಲ್ಲಿ ಸಕ್ಕರೆ ಎಂದರೆ ಇದನ್ನು ಸೇವಿಸಿದ ಬಳಿಕ ನಮ್ಮ ರಕ್ತಕ್ಕೆ ಸೇರುವ ಗ್ಲುಕೋಸ್ ಪ್ರಮಾಣ. ಇದು ನಮಗೆ ಅಗತ್ಯವಿರುವುದಕ್ಕಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದೇ ನಿಜವಾದ ತೊಂದರೆ. ಇದು ಅನಗತ್ಯವಾದ ಕ್ಯಾಲೋರಿಗಳನ್ನು ತುಂಬಿಸುವ ಮೂಲಕ ನಮ್ಮ ದೇಹದ ವಿವಿಧ ವ್ಯವಸ್ಥೆಗಳನ್ನು ಏರುಪೇರುಗೊಳಿಸುತ್ತದೆ. ಪ್ರಮುಖವಾಗಿ ಮಧುಮೇಹ ಇದ್ದವರಿಗೆ ತಾಳಲು ಸಾಧ್ಯವೇ ಇಲ್ಲದಷ್ಟು ಹೆಚ್ಚಿನ ಗ್ಲುಕೋಸ್ ಸೇರಿಸುವುದರಿಂದ ಮಧುಮೇಹಿಗಳು ಸಕ್ಕರೆಯನ್ನೇ ತಿನ್ನಬಾರದು ಎಂದು ವೈದ್ಯರು ಕಟ್ಟಪ್ಪಣೆ ಮಾಡುತ್ತಾರೆ. ಆದರೆ ಮಧುಮೇಹಿಗಳು ತಿನ್ನಬಹುದಾದ ಅಂದರೆ ರಕ್ತದಲ್ಲಿ ನಿಧಾನವಾಗಿ ಮಿಳಿತವಾಗುವ ಇತರ ಸಿಹಿಗಳನ್ನು ತಿನ್ನಬಹುದು. ಸಕ್ಕರೆಯಲ್ಲಿನ ಗ್ಲೂಕೋಸ್ ಅಪಾರವಾಗಿದ್ದರೆ ಅದು ಹೆಚ್ಚಾಗಿ ಬಾಧಿಸುವುದು ನಮ್ಮ ಯಕೃತ್ ಅನ್ನು. ಇದರಿಂದ ಕ್ಯಾನ್ಸರ್, ಹೃದಯದ ತೊಂದರೆ, ಸ್ಥೂಲಕಾಯ ಮೊದಲಾದ ತೊಂದರೆಗಳು ನಿಧಾನವಾಗಿ ಎದುರಾಗುತ್ತವೆ.<br />
<br />
ಸಕ್ಕರೆ ಸೇರಿಸಿ ತಯಾರಾದ ಸಿಹಿತಿಂಡಿಗಳಲ್ಲಿ ಅಪಾರವಾದ ಗ್ಲೂಕೋಸ್ ಇರುತ್ತದೆ. ಗಾಬರಿಪಡಿಸುವ ಅಂಶವೆಂದರೆ ಕೋಲಾಗಳಂತಹ ಲಘುಪಾನೀಯಗಳಲ್ಲಿ ಸಾಮಾನ್ಯ ಸಕ್ಕರೆಯ ಏಳು ಪಟ್ಟು ಹೆಚ್ಚು ಸಕ್ಕರೆ ಇರುತ್ತದೆ. ಹೌದು, ಇರಬಹುದು, ಸಕ್ಕರೆ ಸಿಹಿಯೇ, ತಿಂದರೇನೀಗ? ನಾವೆಲ್ಲಾ ಚಿಕ್ಕಂದಿನಿಂದ ತಿನ್ನುತ್ತಾ ಬಂದಿಲ್ಲವೇ? ನಮಗೇನು ರೋಗ ಬಡಿದಿದೆ? ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾದ ಹತ್ತು ಉತ್ತರಗಳು ನಿಮ್ಮ ಇದುವರೆಗಿನ ನಂಬಿಕೆಯನ್ನೇ ಅಲ್ಲಾಡಿಸುತ್ತವೆ. ಕುತೂಹಲ ಮೂಡಿತೇ? ಕೊನೆಯವರೆಗೆ ನೋಡುತ್ತಾ ಹೋಗಿ:<br />
<img alt="ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು" src="https://kannada.boldsky.com/img/2015/07/30-1438245493-1m.jpg" /><br />
<b>೧) ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು.</b><br />
ಸಕ್ಕರೆಯಲ್ಲಿ ಬೀಟಾ ಕ್ಯಾಟೆನಿನ್ (β-catenin) ಎಂಬ ಪೋಷಕಾಂಶವಿದೆ. ಇದು ನೇರವಾಗಿ ಕ್ಯಾನ್ಸರ್ ಅನ್ನು ಉಂಟುಮಾಡದು. ಆದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯಲ್ಲಿರುವ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಶಕ್ತಿಯನ್ನು ಈ ಕಣ ಶಕ್ತಿಹೀನಗೊಳಿಸುತ್ತಾ ಬರುತ್ತದೆ. ಅಂದರೆ ಯಾವುದಾದರೂ ಜೀವಕೋಶ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಸಕ್ಕರೆ ಕಡಿಮೆ ತಿನ್ನುವವರಿಗಿಂತ ಹೆಚ್ಚಿರುತ್ತದೆ. ಒಂದು ವೇಳೆ ಕ್ಯಾನ್ಸರ್ ಈಗಾಗಲೇ ಆವರಿಸಿದ್ದರೆ ಜೀವಂತವಿರುವ ದಿನಗಳನ್ನು ಲೆಕ್ಕ ಹಾಕಿ ಜೀವಿಸುತ್ತಿರುವವರ ಲೆಕ್ಕವನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ.<br />
<img alt="ಸ್ಥೂಲಕಾಯ ಎದುರಾಗುತ್ತದೆ" src="https://kannada.boldsky.com/img/2015/07/30-1438245498-2m.jpg" /><br />
<b>೨) ಸ್ಥೂಲಕಾಯ ಎದುರಾಗುತ್ತದೆ.</b><br />
ಸಕ್ಕರೆಯ ಸಿಹಿ ಯಾರಿಗೆ ಇಷ್ಟವಿಲ್ಲ? ಆದರೆ ಈ ಸಿಹಿಯೇ ಸ್ಥೂಲಕಾಯಕ್ಕೂ ಮೂಲವಾಗಿದೆ. ಮಕ್ಕಳಿಂದ ಹಿರಿಯರವರೆಗೆ ಸಕ್ಕರೆಯನ್ನು ಬೆಳಗ್ಗಿನಿಂದ ರಾತ್ರಿಯವರೆಗಿನ ವಿವಿಧ ಭಕ್ಷ್ಯ, ಪಾನೀಯಗಳ ಮೂಲಕ ಸೇವಿಸಿರುವ ಪರಿಣಾಮದಿಂದ ದೇಹದಲ್ಲಿ ಆಗಾಧ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಿ ಸ್ಥೂಲಕಾಯ ಆವರಿಸಿರುತ್ತದೆ. ಅದರಲ್ಲೂ ಕೊಬ್ಬು ಇಡಿಯ ದೇಹ ತುಂಬಿ ಸೊಂಟದ ಸುತ್ತಳತೆಯನ್ನು ಹೆಚ್ಚಿಸುವಲ್ಲಿ ಸಕ್ಕರೆಯ ದೇಣಿಗೆ ಬಹಳ ಹೆಚ್ಚು.<br />
<img alt="ಮಧುಮೇಹ ಆವರಿಸುತ್ತದೆ" src="https://kannada.boldsky.com/img/2015/07/30-1438245504-3m.jpg" /><br />
<b>೩) ಮಧುಮೇಹ ಆವರಿಸುತ್ತದೆ</b><br />
ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಆದರೆ ಸಕ್ಕರೆ ಹೆಚ್ಚು ತಿನ್ನುವುದರಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಮುಂದೆ ಯಾವುದೋ ವಯಸ್ಸಿನಲ್ಲಿ ಬರಬೇಕಾಗಿದ್ದ ಮಧುಮೇಹ ಚಿಕ್ಕವಯಸ್ಸಿಗೇ ವಕ್ಕರಿಸುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಹೆಚ್ಚಿರುತ್ತದೆ ಎಂದರೆ ಅದನ್ನು ಕೊಳೆಸಿದರೆ ವಿಸ್ಕಿ ಎಂಬ ಮದ್ಯವಾಗಿ ಪರಿವರ್ತಿತವಾಗುತ್ತದೆ.<br />
<img alt="ಸಕ್ಕರೆಗೆ ದಾಸರನ್ನಾಗಿಸುತ್ತದೆ" src="https://kannada.boldsky.com/img/2015/07/30-1438245510-4m.jpg" /><br />
<b>೪) ಸಕ್ಕರೆಗೆ ದಾಸರನ್ನಾಗಿಸುತ್ತದೆ.</b><br />
ಸಕ್ಕರೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಂತೆ ಸಕ್ಕರೆಗೆ ದಾಸರಾಗುವ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚು ಕಡಿಮೆ ನಾವೆಲ್ಲಾ ಈ ಬಿಳಿಯ ಸಕ್ಕರೆಗೆ ಈಗಾಗಲೇ ದಾಸರಾಗಿರಲೂ ಬಹುದು. ಏಕೆಂದರೆ ನಮಗೆ ಸಕ್ಕರೆ ಅಥವಾ ಸಿಹಿ ಇಲ್ಲದ ಊಟ ಸೇರುವುದೇ ಇಲ್ಲ. ಈ ದಾಸ್ಯ ಹೆಚ್ಚಾದರೆ ಕೊಕೇಯ್ನ್, ಗಾಂಜಾ, ಮಾರಿಯುವಾನಾ (marijuana) ಮೊದಲಾದವುಗಳಿಗೆ ದಾಸರಾದಷ್ಟೇ ಮಾರಕವಾಗಿ ಪರಿಣಮಿಸಬಹುದು.<br />
<img alt="ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ" src="https://kannada.boldsky.com/img/2015/07/30-1438245516-5m.jpg" /><br />
<b>೫) ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ.</b><br />
2012ರಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಸಕ್ಕರೆಯನ್ನು ಸೇವಿಸುತ್ತಾ ಬಂದವರಲ್ಲಿ ಸ್ಮರಣಶಕ್ತಿ ಕುಂದುತ್ತಾ ಬಂದಿದೆ. ಅಲ್ಲದೇ ಒಟ್ಟಾರೆ ಆರೋಗ್ಯವೂ ಬಾಧೆಗೊಳಗಾಗಿದೆ.<br />
<img alt="ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ" src="https://kannada.boldsky.com/img/2015/07/30-1438245521-6m.jpg" /><br />
<b>೬) ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ.</b><br />
ದೇಹದಲ್ಲಿರುವ ಸಕ್ಕರೆ ಮಾರಕ ಏಡ್ಸ್ ರೋಗಕ್ಕೆ ಕಾರಣವಾಗುವ ಹೆಚ್ ಐ ವಿ ವೈರಸ್ಸುಗಳ ಪತ್ತೆಗೆ ಅಡ್ಡಿಪಡಿಸುತ್ತದೆ. ಏಕೆಂದರೆ ಈ ವೈರಸ್ಸುಗಳ ಸುತ್ತಾ ಸಕ್ಕರೆಯ ಕಣಗಳು ಸುತ್ತವರೆದಿದ್ದು ಪರೀಕ್ಷೆ ಇದನ್ನು ಸಕ್ಕರೆಯ ಕಣ ಎಂದೇ ಪರಿಗಣಿಸುತ್ತದೆ. ಪರಿಣಾಮವಾಗಿ ಹೆಚ್ ಐ ವಿ ಸೋಂಕು ಹರಡುವುದನ್ನು ತಡೆಯದೇ ಮಾರಕ ರೋಗ ಉಲ್ಬಣಾವಸ್ಥೆ ತಲುಪಲು ಪರೋಕ್ಷವಾಗಿ ನೆರವಾಗುತ್ತದೆ.<br />
<img alt="ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ" src="https://kannada.boldsky.com/img/2015/07/30-1438245527-7m.jpg" /><br />
<b>೭) ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.</b><br />
2013ರಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ದೇಹದಲ್ಲಿ ಸಕ್ಕರೆಯ ಅಂದರೆ ಸಕ್ಕರೆಯ ಮೂಲಕ ಆಗಮನವಾದ ಗ್ಲುಕೋಸ್ ಪ್ರಮಾಣ ಹೆಚ್ಚಿದಷ್ಟೂ ಹೃದಯದ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಆಗಾಧವಾದ ಪ್ರಮಾಣದ ಗ್ಲುಕೋಸ್ ಬಂದರೆ ಅದಕ್ಕೊಂದು ಗತಿಗಾಣಿಸಬೇಕಲ್ಲ, ಈ ಆಗಾಧ ಪ್ರಮಾಣವನ್ನು ಎಲ್ಲೆಡೆ ಸಾಗಿಸಲು ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಒತ್ತಡದಲ್ಲಿ ದೇಹದ ತುದಿತುದಿಗಳಿಗೆ ರಕ್ತದ ಮೂಲಕ ಕಳುಹಿಸಬೇಕಾಗುತ್ತದೆ. ಹೀಗೆ ಅತಿ ಭಾರ ಅಥವಾ ಓವರ್ ಲೋಡ್ ಆದ ಹೃದಯ ಆಯಸ್ಸಿಗೂ ಮುನ್ನವೇ ಶಿಥಿಲಗೊಳ್ಳುತ್ತದೆ.<br />
<img alt="ಯಕೃತ್ ಹಾನಿಗೊಳಗಾಗುತ್ತದೆ" src="https://kannada.boldsky.com/img/2015/07/30-1438245533-8m.jpg" /><br />
<b>೮) ಯಕೃತ್ ಹಾನಿಗೊಳಗಾಗುತ್ತದೆ.</b><br />
ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ. ಮದ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಮದ್ಯದ ಪ್ರಹಾರಗಳಿಂದ ಕೊಂಚ ಜೀವದಲ್ಲಿ ಉಳಿದಿದ್ದ ಯಕೃತ್ ಸಕ್ಕರೆಯ ಪ್ರಹಾರದಿಂದ ಸಂಪೂರ್ಣವಾಗಿ ಸೋತು ಹೋಗುತ್ತದೆ. ಪರಿಣಾಮ: ಯಕೃತ್ ವೈಫಲ್ಯ, ಇನ್ನೊಬ್ಬರಿಂದ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ.<br />
<img alt="ಹೆಚ್ಚಿನ ಸಕ್ಕರೆ?" src="https://kannada.boldsky.com/img/2015/07/30-1438245538-9m.jpg" /><br />
<b>೯) ಹೆಚ್ಚಿನ ಸಕ್ಕರೆ?</b><br />
ಕೆಲವೊಮ್ಮೆ ಮಕ್ಕಳನ್ನು ಮತ್ತು ಕೆಲವು ವಯಸ್ಕರನ್ನು ತಪಾಸಣೆಗೊಳಿಸಿದ ವೈದ್ಯರು 'sugar high’ ಎಂಬ ಪದವನ್ನು ಉಪಯೋಗಿಸುವುದನ್ನು ಗಮನಿಸಿರಬಹುದು. ಏಕೆಂದರೆ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ. ಈ ಆತಂಕವನ್ನೇ ವೈದ್ಯರು ಶುಗರ್ ಹೈ ಎಂದು ಕರೆಯುತ್ತಾರೆ. ಈಗ ಕೆಲವು ಔಷಧಿಗಳ ಮೂಲಕ ಅಪಾರವಾದ ಈ ಗ್ಲೂಕೋಸ್ ಗೆ ಒಂದು ದಾರಿ ಕಾಣಿಸಲು ಪ್ರಯತ್ನಿಸಬೇಕಾಗುತ್ತದೆ.<br />
<br />
<b>೧೦) ಆಯಸ್ಸು ಕಡಿಮೆಯಾಗುತ್ತದೆ</b>.<br />
ಸಕ್ಕರೆಯ ಅಪಾರ ಪ್ರಮಾಣದ ಸೇವನೆಯಿಂದ ದೇಹದ ವಿವಿಧ ಭಾಗಗಳು ಬಾಧೆಗೊಳಗಾಗಿ ತಮ್ಮ ಕ್ಷಮತೆಯನ್ನು ಕುಗ್ಗಿಸಿಕೊಳ್ಳುವ ಪರಿಣಾಮವಾಗಿ ಒಟ್ಟಾರೆ ಆರೋಗ್ಯ ಮತ್ತು ತನ್ಮೂಲಕ ಆಯಸ್ಸು ಕಡಿಮೆಯಾಗುತ್ತದೆ.<br />
<br />
ಈ ವಿಷದಿಂದ ಪಾರಾಗಲು ಏನು ಮಾಡಬೇಕು:<br />
<b><span style="color: #38761d;">* ಬಿಳಿ ಸಕ್ಕರೆಯ ಬದಲು ಕಂದು ಸಕ್ಕರೆ ಅಥವಾ ಬೆಲ್ಲ ಉಪಯೋಗಿಸಿ. ಬೆಲ್ಲವೂ ಕಪ್ಪು ಅಥವಾ ಕೆಂಪಗಿದ್ದಷ್ಟೂ ಉತ್ತಮ</span></b><br />
<b><span style="color: #38761d;">* ಮಾರುಕಟ್ಟೆಯಲ್ಲಿ ದೊರಕುವ ಸಿಹಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ</span></b><br />
<b><span style="color: #38761d;">* ಶುಭಸಂದರ್ಭಗಳಲ್ಲಿ ನೀಡಲಾಗುವ ಸಿಹಿಗಳು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಂದು ತುಂಡಿನಲ್ಲಿ ಅರ್ಧವನ್ನು ಮಾತ್ರ ತಿನ್ನಿ, ಮತ್ತೆ ಅದರ ಕಡೆಗೆ ನೋಡಲೇಬೇಡಿ.</span></b><br />
<b><span style="color: #38761d;">* ಅಮೇರಿಕ ಹಾರ್ಟ್ ಅಸೋಸಿಯೇಷನ್ ಸಂಸ್ಥೆ ಸೂಚಿಸುವ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಗರಿಷ್ಟ 6 ಚಿಕ್ಕ ಚಮಚ ಅಥವಾ 100 ಕ್ಯಾಲೋರಿಗಳವರೆಗೆ ಸುರಕ್ಷಿತವಾಗಿ ಸೇವಿಸಬಹುದು. ಅದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ. </span></b><br />
<b><span style="color: #38761d;">* ಬೇಕರಿಯ ಮೈದಾ ಆಧಾರಿತ ತಿಂಡಿಗಳನ್ನು ಆದಷ್ಟೂ ದೂರ ಮಾಡಿ. ಏಕೆಂದರೆ ಇದರಲ್ಲಿ ನಾರು ಇಲ್ಲದೇ ಇರುವುದು ಮತ್ತು ರುಚಿಗಾಗಿ ಸಕ್ಕರೆ ಹಾಕಿರುವುದು ಅರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತದೆ. </span></b><br />
<b><span style="color: #38761d;">* ಸಾಂಪ್ರಾದಾಯಿಕ ವಿಧಾನದ ಜೋನಿ ಬೆಲ್ಲ, ತಟ್ಟೆ ಬೆಲ್ಲ, ಜೇನು ಮೊದಲಾದವು ಬಿಳಿ ಸಕ್ಕರೆಯ ಬದಲಿಗೆ ಉಪಯೋಗಿಸಬಹುದಾದ ಸಿಹಿಗಳು.</span></b><br />
<b><span style="color: #38761d;">* ಲೋ ಕ್ಯಾಲೋರಿ ಸ್ವೀಟ್ನರ್ ಎಂದು ಮಧುಮೇಹಿಗಳಿಗೆ ಸಿಗುವ ಸಕ್ಕರೆಯಲ್ಲಿ aspertame ಎಂಬ ಹೆಸರಿದೆಯೇ ಗಮನಿಸಿ. ಇದ್ದರೆ ಖಂಡಿತಾ ಕೊಳ್ಳಬೇಡಿ, ಏಕೆಂದರೆ ಇದು ಸಕ್ಕರೆಗಿಂತಲೂ ದೊಡ್ಡ ವಿಷವಾಗಿದೆ. </span></b><br />
<b><span style="color: #38761d;">* artificial sweetner ಎಂಬ ಹೆಸರು ಹೊತ್ತ ಪೊಟ್ಟಣದ ಸಕ್ಕರೆ ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಅಪಾಯಕಾರಿ.</span></b><br />
<b><span style="color: #38761d;">* ಕೋಲಾ ಮೊದಲಾದ ಲಘುಪಾನೀಯಗಳ ಬದಲು ಲಿಂಬೆರಸ, ಮಜ್ಜಿಗೆ ಸೇವಿಸಿ</span></b><br />
<b><span style="color: #38761d;">* ಪೊಟ್ಟಣಗಳಲ್ಲಿ ಸಿಗುತ್ತಿರುವ ಹಣ್ಣಿನ ರಸಗಳ ಬದಲಿಗೆ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. (ಇವುಗಳನ್ನು ಗುರುತಿಸುವುದು ಸುಲಭ, ಕೃತಕ ಸವಿ ಇರುವ ಪೇಯ ಡ್ರಿಂಕ್ ಎಂಬ ಹೆಸರಿನಲ್ಲಿ ಸಿಗುತ್ತದೆ. ಉದಾಹರಣೆಗೆ ಮ್ಯಾಂಗೋ ಡ್ರಿಂಕ್. ಅದೇ ಮಾನಿನ ರಸ ಮ್ಯಾಂಗೋ ಜ್ಯೂಸ್ ಎಂಬ ಹೆಸರಿನಲ್ಲಿ ಸಿಗುತ್ತದೆ ಹಾಗೂ ಕೊಂಚ ದುಬಾರಿಯಾಗಿರುತ್ತದೆ. ಆರೋಗ್ಯ ಉಳಿಸಿಕೊಳ್ಳಬೇಕು ಎನಿಸಿದರೆ ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ತಾಜಾ ಹಣ್ಣಿನ ರಸವನ್ನೇ ಕೊಳ್ಳಿ. </span></b><br />
<b><span style="color: #38761d;">* ಬೆಳಗ್ಗಿನ ಉಪಾಹಾರದಲ್ಲಿ ಸಕ್ಕರೆ ಚಿಮುಕಿಸಿ ತಿನ್ನುವ ಅಭ್ಯಾಸ ಕೊನೆಗೊಳಿಸಿ. (ಕೆಲವರಿಗೆ ದೋಸೆ, ಉಪ್ಪಿಟ್ಟು ಮೊದಲಾದವುಗಳನ್ನು ಸಕ್ಕರೆಯ ಜೊತೆ ಸೇವಿಸುವ ಅಭ್ಯಾಸವಿರುತ್ತದೆ)</span></b><br />
<b><span style="color: #38761d;">* ಟೀ ಕಾಫಿ ಮೊದಲಾದ ನಿಮ್ಮ ನೆಚ್ಚಿನ ಪೇಯಗಳಲ್ಲಿ ಸಕ್ಕರೆ ಬದಲಿಗೆ ಕೊಂಚವೇ ಜೇನು ಸೇರಿಸಿ ಕುಡಿಯಬಹುದು. </span></b></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-53682397371450412812018-01-27T19:35:00.002+04:302018-01-28T23:34:25.376+04:30ಕೊಲೆಸ್ಟ್ರಾಲ್ ಬಗ್ಗೆ ನಿಮಗೆ ತಿಳಿದಿರದಿದ್ದ ಅಚ್ಚರಿಯ ಮಾಹಿತಿಗಳು<div dir="ltr" style="text-align: left;" trbidi="on">
ಕನ್ನಡ.ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/vVuSSh<br />
<br />
ಕೊಲೆಸ್ಟ್ರಾಲ್ ಬಗ್ಗೆ ನಾವೆಲ್ಲಾ ಕೆಟ್ಟ ಅಭಿಪ್ರಾಯವನ್ನೇ ಹೊಂದಿದ್ದೇವೆ. ಏಕೆಂದರೆ ಅಕ್ಕಪಕ್ಕದವರ ವೈದ್ಯಕೀಯ ತಪಾಸಣಾ ವಿವರಗಳನ್ನು ನೋಡಿದಾದ ಕೊಲೆಸ್ಟ್ರಾಲ್ ಉಂಟಂತೆ, ಮಾತ್ರೆ ಕೊಟ್ಟಿದ್ದಾರೆ ಎಂಬ ಮಾತುಗಳನ್ನೇ ಕೇಳುತ್ತೇವೆ. ಆದರೆ ವರದಿಯಲ್ಲಿ ಕೊಲೆಸ್ಟಾಲ್ ಮಟ್ಟ ಇಷ್ಟಿರಬೇಕಿದ್ದುದು ಇದಕ್ಕಿಂತ ಹೆಚ್ಚಾಗಿದೆ ಎಂದೇ ಇರುತ್ತದೆ. ಇದನ್ನು ಸರಿಯಾಗಿ ನೋಡದೇ ನಾವು ಕೊಲೆಸ್ಟ್ರಾಲ್ ಇರುವುದೇ ಕೆಟ್ಟದು ಎಂದು ತಿಳಿದುಕೊಂಡುಬಿಟ್ಟಿದ್ದೇವೆ.<br />
<img alt="Surprising Facts About Cholesterol" src="https://kannada.boldsky.com/img/2015/06/28-1435472578-cholesterol-c.jpg" /><br />
<br />
<br />
ವಾಸ್ತವವಾಗಿ ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ಜಿಡ್ಡು. ಕಾರಿಗೆ ಇಂಜಿನ್ ಆಯಿಲ್ ಇದ್ದಾ ಹಾಗೆ ನಮ್ಮ ರಕ್ತದ ಹರಿವಿಗೂ ಕೊಲೆಸ್ಟಾಲ್ ಅಗತ್ಯವಿದೆ. ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸಿ ಎಲ್ಲೆಡೆ ಪಸರಿಸಲೂ ಕೊಲೆಸ್ಟ್ರಾಲ್ ಅಗತ್ಯವಿದೆ. ಆದರೆ ಇದು ಎಷ್ಟು ಅಗತ್ಯವಿದೆ ಎಂಬುವುದರ ಮೇಲೆ ಆರೋಗ್ಯಕರವೋ ಅನಾರೋಗ್ಯಕರವೋ ಎಂದು ತಿಳಿದುಬರುತ್ತದೆ.<br />
<br />
ಸರಿಸುಮಾರು ಎಲ್ಲಾ ಆಹಾರಗಳಲ್ಲಿ ಕೊಲೆಸ್ಟಾಲ್ ಇದೆ. ಎಣ್ಣೆಯಲ್ಲಿ ಇದು ಹೆಚ್ಚಿರುತ್ತದೆ ಅಷ್ಟೇ. ಆದ್ದರಿಂದ ನಮಗೆ ಲಭ್ಯವಾದ ಕೊಲೆಸ್ಟಾಲ್ ನಲ್ಲಿ ಸಿಂಹಪಾಲು ಎಣ್ಣೆ, ಕೊಬ್ಬು ಪ್ರೋಟೀನುಗಳಿಂದ ದೊರಕುತ್ತದೆ. ಇದರಲ್ಲೂ ಕೆಟ್ಟ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇದೆ. HDL-(High density lipoproteins) ಎಂಬುದು ಉತ್ತಮ ಕೊಲೆಸ್ಟ್ರಾಲ್ ಎಂದೂ LDL-(Low density lipoproteins) ಕೆಟ್ಟ ಕೊಲೆಸ್ಟಾಲ್ ಎಂದೂ ಪರಿಗಣಿಸಲ್ಪಟ್ಟಿದೆ. ಹೆಸರೇ ಸೂಚಿಸುವಂತೆ ಮೊದಲಿನದು ಹೆಚ್ಚಿನ ಸಾಂದ್ರತೆಯುಳ್ಳದ್ದಾಗಿದ್ದು ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಆದರೆ ಎರಡನೆಯದು ಅಂಟಿಕೊಳ್ಳುತ್ತದೆ. ಇದೇ ಇದಕ್ಕೆ ಕೆಟ್ಟದೆಂಬ ಹೆಸರು ಬರಲಿಕ್ಕೆ ಕಾರಣ. ಮಿತಿ ಹೆಚ್ಚಾದರೆ ಈ ಕೊಲೆಸ್ಟಾಲ್ ನಮ್ಮ ನರನರಗಳ ಒಳಭಾಗದಲ್ಲೆಲ್ಲಾ, ಕವಲೊಡೆದಿರುವಲ್ಲಿ, ತಿರುವುಗಳಿರುವಲ್ಲೆಲ್ಲಾ ಅಂಟಿಕೊಂಡು ರಕ್ತದ ಪರಿಚಲನೆಗೆ ಅಡ್ಡಿಯುಂಟುಮಾಡುತ್ತವೆ. ಇದು ಹೃದಯದೊತ್ತಡಕ್ಕೆ ಮತ್ತು ಸ್ತಂಭನದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.<br />
<br />
ಆದ್ದರಿಂದ ಕೊಲೆಸ್ಟಾಲ್ ಹೆಚ್ಚು ಇರುವ ಆಹಾರಗಳನ್ನು ತ್ಯಜಿಸಿ ಆರೋಗ್ಯಕರ ಆಹಾರಗಳನ್ನು ಸೇವಿಸಲು ಪರಿಣಿತರು ಸಲಹೆ ಮಾಡುತ್ತಾರೆ. ನಾರಿನ ಪ್ರಮಾಣ ಹೆಚ್ಚಿರುವಮ್ ಆಹಾರಗಳು ಇರುವ ಕೊಲೆಸ್ಟಾಲ್ ಕಡಿಮೆಗೊಳಿಸಲು ಸಹಕಾರಿ. ಕೊಲೆಸ್ಟ್ರಾಲ್ ಬಗ್ಗೆ ಇನ್ನೂ ಹಲವು ಅಚ್ಚರಿಯ ಮಾಹಿತಿಗಳನ್ನುಇಲ್ಲಿ ನೀಡಲಾಗಿದೆ.<br />
<br />
<b>ಕೊಲೆಸ್ಟಾಲ್ ಆಹಾರದಿಂದ ಬರಬೇಕಾಗಿಲ್ಲ, ದೇಹವೇ ಉತ್ಪಾದಿಸಿಕೊಳ್ಳುತ್ತದೆ.</b><br />
ದೇಹಕ್ಕೆ ಅಗತ್ಯವಾದ ಕೊಲೆಸ್ಟಾಲ್ ಅನ್ನು ಆಹಾರದ ಮೂಲಕ ನಾವು ಬಲವಂತವಾಗಿ ದೇಹಕ್ಕೆ ಉಣಿಸುತ್ತಿದ್ದೇವೆಯೇ ವಿನಃ ದೇಹ ಅಗತ್ಯವಿರುವ ಕೊಲೆಸ್ಟ್ರಾಲ್ ಅನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಫಲಾಹಾರಿಗಳು ಕೆಲವೇ ದಿನಗಳಲ್ಲಿ ಭಾರೀ ತೊಂದರೆ ಅನುಭವಿಸಬೇಕಾಗಿತ್ತು. ಆದ್ದರಿಂದ ನಿಮ್ಮ ಆಹಾರ ಸಾಧ್ಯವಾದಷ್ಟು ಕೊಲೆಸ್ಟಾಲ್ ರಹಿತವಾಗಿರಲಿ.<br />
<img alt="Surprising Facts About Cholesterol" src="https://kannada.boldsky.com/img/2015/06/28-1435472583-cholesterol-c1.jpg" /><br />
<b>ನಿಮ್ಮ ಕೊಲೆಸ್ಟ್ರಾಲ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿಮ್ಮ ವಂಶವಾಹಿನಿ ನಿರ್ಧರಿಸುತ್ತದೆ</b><br />
ಕೊಲೆಸ್ಟಾಲ್ ಬಳಕೆಯಲ್ಲಿ ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಇದನ್ನು ಅವರ ವಂಶವಾಹಿಸಿ ನಿರ್ಧರಿಸುತ್ತದೆ. ಅಂದರೆ ನಿಮ್ಮ ವಂಶವಾಹಿನಿಯಲ್ಲಿ ಕೊಲೆಸ್ಟ್ರಾಲ್ ತೊಂದರೆ ಇದ್ದರೆ ನಿಮಗೂ ಇರುವ ಸಾಧ್ಯತೆ ಹೆಚ್ಚು.<br />
<br />
<b>ಕೊಲೆಸ್ಟ್ರಾಲ್ ತೊಂದರೆ ಯಾವುದೇ ವಯಸ್ಸಿನಲ್ಲಿ ಬರಬಹುದು</b><br />
ಕೊಲೆಸ್ಟ್ರಾಲ್ ತೊಂದರೆಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ, ಇದು ಯಾವುದೇ ವಯಸ್ಸಿನಲ್ಲಿ ಬರಬಹುದು. ಎಷ್ಟೋ ಸಂದರ್ಭದಲ್ಲಿ ಮಕ್ಕಳ ರಕ್ತದಲ್ಲಿಯೂ ಅಘಾತಕಾರಿ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇರುವುದು ಕಂಡುಬಂದಿದೆ. ಇನ್ನೂ ಕೆಲವು ನರಪೇತಲರು ದಪ್ಪನಾಗಬೇಕೆಂದು ಕೇಜಿಗಟ್ಟಲೆ ತಿಂದರೂ ಅವರ ರಕ್ತದಲ್ಲಿ ಕೊಲೆಸ್ಟಾಲ್ ಶೇಖರವಾಗದೇ ಇರುವುದು ಇನ್ನಷ್ಟು ಅಚ್ಚರಿ ತರಿಸುತ್ತದೆ.<br />
<img alt="Surprising Facts About Cholesterol" src="https://kannada.boldsky.com/img/2015/06/28-1435472600-holesterol-c3.jpg" /><br />
<b>ತೂಕ ಇಳಿಸಿದರೆ ಕೊಲೆಸ್ಟಾಲ್ ಕಡಿಮೆಗೊಳಿಸಲು ಸಾಧ್ಯ</b><br />
ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗಿದ್ದು ಕಡಿಮೆಗೊಳಿಸಲು ತೂಕ ಕಳೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಸ್ಥೂಲಕಾಯಕ್ಕೂ ಕೊಲೆಸ್ಟಾಲ್ ಪ್ರಮಾಣಕ್ಕೂ ನಿಕಟ ಸಂಬಂಧವಿರುವುದನ್ನು ವೈದ್ಯಕೀಯ ವರದಿಗಳು ಸಾಬೀತುಪಡಿಸುತ್ತವೆ. ಆದ್ದರಿಂದ ಕೊಲೆಸ್ಟಾಲ್ ಇದೆ ಎಂದು ನಿಮ್ಮ ವೈದ್ಯಕೀಯ ವರದಿ ತಿಳಿಸಿದರೆ ನಿಮ್ಮ ಜಿಹ್ವೆಗೆ ಸಲಾಂ ಹೇಳಿ ತೂಕ ಕಳೆದುಕೊಳ್ಳಲು ಮನಸ್ಸು ಮಾಡಿ.<br />
<br />
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-68873432891389430802018-01-17T21:37:00.001+04:302018-01-17T21:37:18.301+04:30ಯು.ಎ.ಇ. ಕಾರು ಮಾಲಿಕರಿಗೆ ಶುಭಸುದ್ದಿ-ಹೊಸ ಟೈರುಗಳನ್ನು ಐದು ವರ್ಷ ಬಳಸಬಹುದು<div dir="ltr" style="text-align: left;" trbidi="on">
-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.<br />
<br />
ಯು.ಎ.ಇ.ಯಲ್ಲಿರುವ ಕಾರುಗಳನ್ನು ವರ್ಷಕ್ಕೊಂದು ಬಾರಿ ಪಾಸಿಂಗ್ ಮಾಡಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಸರ್ಕಾರದ ಅಧಿಕೃತ ಟೆಸ್ಟಿಂಗ್ ಸೆಂಟರ್ ನಲ್ಲಿ ಮಾತ್ರವೇ ವಾಹನಗಳನ್ನು ಪಾಸಿಂಗ್ ಮಾಡಿಸಬಹುದು. ಕಳೆದ ವರ್ಷ ಆರ್.ಟಿ.ಏ (ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಆಥಾರಿಟಿ) ಸಂಸ್ಥೆ ಹೊರಡಿಸಿದ ಕಟ್ಟಳೆಯ ಪ್ರಕಾರ ಕಾರಿಗೆ ಅಳವಡಿಸಿರುವ ಟೈರು ಮೂರು ವರ್ಷ ಮಾತ್ರವೇ ಹಳೆಯದಾಗಿರಬಹುದು. ಆರ್ ಟಿ. ಎ. ದೂರವಾಣಿ ಸಂಖ್ಯೆ 8009090 ಗೆ ಕರೆ ಮಾಡಿ ಈ ವಿಷಯ ವಿಚಾರಿಸಿದರೂ (ವಿಚಾರಿಸಲು ಅತ್ತ ಕಡೆ ಯಾರಾದರೂ ಉತ್ತರಿಸಬೇಕಾದರೆ ಸುಮಾರು ಇಪ್ಪತ್ತರಿಂದ ನಲವತ್ತು ನಿಮಿಷವಾದರೂ ತಾಳ್ಮೆಯಿಂದ ಕಾಯಬೇಕಾಗುತ್ತದೆ) ಟೈರು ಮೂರು ವರ್ಷ ಎಂದೇ ಉತ್ತರ ಸಿಗುತ್ತದೆ.<br />
<br />
ನನ್ನ ಕಾರಿನ ಟೈರು 2015ರಲ್ಲಿ ತಯಾರಾಗಿದ್ದು 2018ರಲ್ಲಿ ಪಾಸ್ ಮಾಡಲಾರರು ಎಂಬ ಎಂದು ಟೈರು ಮಾರುವ ಅಂಗಡಿಗಳಲ್ಲಿ ಮಾಹಿತಿ ಸಿಕ್ಕಿದ್ದರಿಂದ ಹೊಸ ಟೈರುಗಳನ್ನು ಅನಿವಾರ್ಯವಾಗಿ ಹಾಕಿಸಬೇಕಾಗಿತ್ತು. ಹಾಗಾಗಿ ಕೊಂಚ ಹುಡುಕಾಟ ನಡೆಸಿದಾಗ ಟೈರ್ ಪ್ಲಸ್ ಎಂಬ ಸಂಸ್ಥೆ ಎರಡು ಹೊಸ ಟೈರುಗಳನ್ನು ಕೊಂಡರೆ ಎರಡು ಉಚಿತ ಎಂಬ ಪ್ರಲೋಭನೆ ಒಡ್ಡಿತ್ತು. ಅದೂ ಮಿಶೆಲಿನ್ ಸಂಸ್ಥೆಯ ಟಿಗಾರ್ ಎಂಬ ಸರ್ಬಿಯಾ ದೇಶದ ನಿರ್ಮಿತ ಉತ್ತಮ ಟೈರು. ನಾಲ್ಕು ಟೈರುಗಳನ್ನು ಒಟ್ಟಿಗೇ ಕೊಂಡರೆ ಚೀನಾದ ಟೈರಿನ ಬೆಲೆಯಲ್ಲಿಯೇ ಸಿಗುವುದಾದರೆ ಏಕೆ ಆಗಬಾರದು ಎಂಬ ಲೆಕ್ಕಾಚಾರದೊಂದಿಗೆ ಟೈರ್ ಪ್ಲಸ್ ಅಂಗಡಿಗೆ ನಾನು ಮತ್ತು ಸ್ನೇಹಿತರಾದ ಬಸವರಾಜು ಲಗ್ಗೆಯಿಟ್ಟೆವು.<br />
<br />
ಆದರೆ ಇವರು ಮಾರುವ ಟೈರುಗಳು ಏಪ್ರಿಲ್ 21016 ರಲ್ಲಿ ತಯಾರಾದವು. ಇವುಗಳನ್ನು ಹಾಕಿಸಿದರೆ ಈಗಾಗಲೇ ಒಂದೂವರೆ ವರ್ಷ ಕಳೆದಿದ್ದು ಇನ್ನೂ ಒಂದೂವರೆ ವರ್ಷ ಮಾತ್ರವೇ ಸಿಗುತ್ತದಲ್ಲಾ ಎಂದು ಟೈರ್ ಪ್ಲಸ್ ವ್ಯಕ್ತಿಯಲ್ಲಿ ವಿಚಾರಿಸಿದರೆ ಅವರು ’ನಮ್ಮ ಟೈರುಗಳನ್ನು ಆರ್ ಟಿ. ಎ ಐದು ವರ್ಷಗಳ ಕಾಲ ಬಳಸಲು ಅನುಮೋದಿಸಿದೆ’ ಎಂದು ಕೆಳಗಿನ ಬ್ರೋಷರ್ ನೀಡಿದರು.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjr8nU_VypJdthT55L0qOXYbLvbx583rtNqGvEPZIPHs0IA7B2YpGUOn2hed3FIzFpcXyEBv047Bi4BBc74I1qybnAyhsHDxc725nPf4FOSETSfGRMaNj2r-wrCyuNYwFt8x3p3fHK-DDTg/s1600/brochure1.jpg" imageanchor="1" style="margin-left: 1em; margin-right: 1em;"><img border="0" data-original-height="629" data-original-width="453" height="640" src="https://blogger.googleusercontent.com/img/b/R29vZ2xl/AVvXsEjr8nU_VypJdthT55L0qOXYbLvbx583rtNqGvEPZIPHs0IA7B2YpGUOn2hed3FIzFpcXyEBv047Bi4BBc74I1qybnAyhsHDxc725nPf4FOSETSfGRMaNj2r-wrCyuNYwFt8x3p3fHK-DDTg/s640/brochure1.jpg" width="460" /></a></div>
<br />
<br />
ಅನುಮಾನದಿಂದ ನಾವು ಆರ್ ಟಿ. ಎ ಗೆ ಕರೆ ಮಾಡಿ ವಿಚಾರಿಸಿದರೂ ’ಮೂರು ವರ್ಷವೇ’ ಎಂಬ ಉತ್ತರ ಸಿಕ್ಕಿತು. ಒಂದೂವರೆ ವರ್ಷಕ್ಕೇ ಆದರೂ ಚಿಂತೆಯಿಲ್ಲ ಟೈರು ಅತ್ಯುತ್ತಮ ಗುಣಮಟ್ಟ ಹೊಂದಿದ್ದರಿಂದ ಇರಲಿ ಎಂದು ಹೊಸ ಟೈರುಗಳನ್ನು ಹಾಕಿಸಿಕೊಂಡು ಬಂದೆವು. ಆದರೆ ಬಸವರಾಜು ಮಾತ್ರ ಸುಲಭಕ್ಕೆ ಒಪ್ಪದೇ ಆರ್ ಟಿ.ಎ ಗೆ ಮತ್ತೊಮ್ಮೆ ಕರೆ ಮಾಡಿ ತಮ್ಮ ಐವತ್ತು ನಿಮಿಷಗಳನ್ನು ವ್ಯಯಿಸಿ ನಾಲ್ಕಾರು ಪ್ರತಿನಿಧಿಗಳೊಂದಿಗೆ ಮಾತನಾಡಿ ’ಮೂರು ವರ್ಷದ’ ಹಳೆರಾಗವನ್ನು ಮತ್ತೊಮ್ಮೆ ಹಾಡಿಸಿಕೊಂಡರು. ಹೆಚ್ಚಿನ ಮಾಹಿತಿ ಬೇಕಿದ್ದರೆ ಸಲಹಾ ತಾಣಕ್ಕೆ ಈಮೇಲ್ ಮಾಡಿ ಎಂದು ಆ ಪ್ರತಿನಿಧಿ ಹೇಳಿ ತಮ್ಮ ಮೇಲೆ ಎರಗಿದ್ದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು.<br />
<br />
ಆದರೂ, ಈ ಟೈರ್ ಪ್ಲಸ್ ಸಂಸ್ಥೆ ಯು.ಎ.ಇ.ಯ ಹೆಸರಾಂತ ಸಂಸ್ಥೆಯಾಗಿದ್ದು ಸುಮ್ಮಸುಮ್ಮನೇ ಸುಳ್ಳು ಹೇಳಲಾರದು ಎನ್ನಿಸಿತು. ಅಲ್ಲದೇ ಇಲ್ಲದ ಅನುಮೋದನೆಯನ್ನು ಇದೆ ಎಂದು ತಿಳಿಸಿದರೆ ಇವರನ್ನು ಇಲ್ಲಿನ ಕಾನೂನು ಬಿಡುತ್ತದೆಯೇ ಅಂಬ ಅನುಮಾನವೂ ಬರತೊಡಗಿತು. ಯಾವುದಕ್ಕೂ ಇರಲಿ, ಎಂದು ಆ ಪ್ರತಿನಿಧಿ ತಿಳಿಸಿದಂತೆ ಆರ್ ಟಿ ಎ ಸಲಹಾ ಈಮೇಲ್ ವಿಳಾಸಕ್ಕೆ ಎಲ್ಲಾ ವಿಷಯವನ್ನು ತಿಳಿಸಿ ಈಮೇಲ್ ಬರೆದೆ. ಇದರ ಸಾರಾಂಶವೆಂದರೆ ಕಾರಿಗೆ ಹೊಸ ಟೈರು ಹಾಕಿಸಿದರೆ ಆರ್.ಟಿ.ಎ. ಪ್ರಕಾರ ಮೂರು ವರ್ಷ, ಆದರೆ ಟೈರ್ ಪ್ಲಸ್ ಪ್ರಕಾರ ಐದು ವರ್ಷ ಮಾತ್ರ ಬಳಸಬಹುದು, ಯಾರು ಸರಿ? ನಾವು ಯಾರನ್ನು ನಂಬಬಹುದು? ಒಂದು ವೇಳೆ ಮೂರು ವರ್ಷ ಸರಿಯಾದ ಮಾಹಿತಿಯಾದರೆ ಐದು ವರ್ಷ ಎಂದು ಟೈರ್ ಪ್ಲಸ್ ಜಾಹೀರಾತು ನೀಡಿ ಟೈರುಗಳನ್ನು ಮಾರುವುದು ವಂಚನೆಯಲ್ಲವೇ?<br />
<br />
ಮೊದಲ ಉತ್ತರ ಮಾಮೂಲಿಯಂತೆ "ಮೂರು ವರ್ಷ" ದ ಅದೇ ರಾಗ ಅದೇ ಹಾಡೇ ಆಗಿತ್ತು. ಮತ್ತೊಮ್ಮೆ ಈ ವಿವರಗಳನ್ನು ನಿಮ್ಮ ತಾಂತ್ರಿಕ ವಿಭಾಗಕ್ಕೆ ಕಳುಹಿಸಿ ಅವರಿಂದ ಸ್ಪಷ್ಟನೆ ಬರಲಿ ಎಂದು ಮರುತ್ತರ ಬರೆದೆ. ಮರುದಿನವೇ ತಾಂತ್ರಿಕ ವಿಭಾಗದಿಂದ ಸ್ಪಷ್ಟವಾದ ಉತ್ತರ ಬಂದಿದೆ. ಈಮೇಲ್ ನ ಯಥಾವತ್ ಪ್ರತಿ ಇಲ್ಲಿದೆ:<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjPRoMMeyYgLa5bgiUoBMjlW9a0aM5yg6SwwFsUnS5sFRfr5aOF32eKtIl4CJ1ek4fWq3nsOKHCl9s6oeRwXRBE4x4EUJscw2yb_V0-mjTHdVKVO9tLJVY9C3u7pHmcNkowfsRyzFT-WPOx/s1600/tyre4.jpg" imageanchor="1" style="margin-left: 1em; margin-right: 1em;"><img border="0" data-original-height="556" data-original-width="550" height="640" src="https://blogger.googleusercontent.com/img/b/R29vZ2xl/AVvXsEjPRoMMeyYgLa5bgiUoBMjlW9a0aM5yg6SwwFsUnS5sFRfr5aOF32eKtIl4CJ1ek4fWq3nsOKHCl9s6oeRwXRBE4x4EUJscw2yb_V0-mjTHdVKVO9tLJVY9C3u7pHmcNkowfsRyzFT-WPOx/s640/tyre4.jpg" width="632" /></a></div>
<br />
<br />
ಈ ಈಮೇಲ್ ಪ್ರಕಾರ ಪಾಸಿಂಗ್ ಪರೀಕ್ಷೆಯಲ್ಲಿ ಕಾರು ತೇರ್ಗಡೆಯಾಗಲು ಟೈರುಗಳು ನಿರ್ಮಾಣ ದಿನಾಂಕದಿಂದ ಐದು ವರ್ಷಗಳು ಹಾಗೂ ಟೈರುಗಳ ಸವೆತದ ಬಳಿಕವೂ ಕನಿಷ್ಟ 1.6 ಮಿಮಿ ನಷ್ಟು ರಬ್ಬರ್ ಉಳಿದುಕೊಂಡಿರಬೇಕು ಹಾಗೂ ಇವುಗಳು ಯಾವುದೇ ನ್ಯೂನ್ಯತೆಯನ್ನು ಹೊಂದಿರಬಾರದು. ಒಂದು ವೇಳೆ ಪರೀಕ್ಷಿಸುವ ಇನ್ಸ್ ಪೆಕ್ಟರುಗಳಿಗೆ ಯಾವುದೋ ನ್ಯೂನ್ಯತೆ ಕಂಡುಬಂದರೂ ಅವರು ಈ ಅರ್ಹತೆಗಳಿದ್ದರೂ ಟೈರುಗಳನ್ನು ಸುರಕ್ಷಿತವಲ್ಲ ಎಂಬ ಕಾರಣದಿಂದ ನಾಪಾಸು ಮಾಡಬಹುದು.<br />
<br />
ಟೈರು ಯಾವ ದಿನಾಂಕದಂದು ನಿರ್ಮಾಣವಾಗಿದೆ ಎಂದು ಕಂಡುಕೊಳ್ಳುವ ವಿಧಾನ ಹೀಗಿದೆ:<br />
<a href="https://blogger.googleusercontent.com/img/b/R29vZ2xl/AVvXsEhE4ijv3Y1OpCOdPbBgH0bf-N5f_fnDk1yuLCdt9Coyqc3977lrrhkdXEUvEZxektWW70E7lzGLJTJHyhwjE0YEsQWVl3_tb9o-ih31XDcbYsWD9zsq4tpT0yeZiKlaWNCuk6W5BuC0czTg/s1600/tyre+marking1.jpg" imageanchor="1" style="margin-left: 1em; margin-right: 1em; text-align: center;"><img border="0" data-original-height="331" data-original-width="550" height="384" src="https://blogger.googleusercontent.com/img/b/R29vZ2xl/AVvXsEhE4ijv3Y1OpCOdPbBgH0bf-N5f_fnDk1yuLCdt9Coyqc3977lrrhkdXEUvEZxektWW70E7lzGLJTJHyhwjE0YEsQWVl3_tb9o-ih31XDcbYsWD9zsq4tpT0yeZiKlaWNCuk6W5BuC0czTg/s640/tyre+marking1.jpg" width="640" /></a><br />
<div class="separator" style="clear: both; text-align: center;">
<br /></div>
<br />
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
</div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<br />
ಟೈರಿನ ಒಂದು ಭಾಗದಲ್ಲಿ ಈ ದಿನಾಂಕವನ್ನು ನಾಲ್ಕು ಅಂಕೆಗಳಲ್ಲಿ ಮುದ್ರಿಸಿರುತ್ತಾರೆ. ಮೊದಲ ಎರಡು ಅಂಕೆಗಳು ಆ ವರ್ಷದ ವಾರವನ್ನೂ, ನಂತರದ ಎರಡು ಅಂಕೆಗಳು ಇಸವಿಯನ್ನೂ ತಿಳಿಸುತ್ತದೆ. ಕೆಳಗಿನ ಚಿತ್ರದಲ್ಲಿ ವಿವರಿಸುವಂತೆ ಈ ಟೈರು 4708 ಎಂಬ ನಾಲ್ಕಂಕಿ ಹೊಂದಿದೆ. ಅದರ ಪ್ರಕಾರ 47 ಅಂದರೆ 47ನೇ ವಾರ. ಇದನ್ನು ನಾಲ್ಕರಿಂದ ಭಾಗಿಸಿದರೆ ತಿಂಗಳು ಸಿಗುತ್ತದೆ. 47/4=11.75 ಅಂದರೆ ನವೆಂಬರ್ ತಿಂಗಳ ಮೂರನೆಯ ವಾರ, 2008ನೆಯ ಇಸವಿಯಲ್ಲಿ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರ ನಿಮ್ಮ ಕಾರಿನ ಟೈರು ಯಾವ ವರ್ಷ ತಯಾರಾಗಿದೆ ಎಂದು ಕಂಡುಕೊಳ್ಳಬಹುದು. ಆರ್.ಟಿ. ಎ ಪ್ರಕಾರ ಈ ದಿನಾಂಕದಿಂದ ಐದುವರ್ಷದವರೆಗೆ ಈ ಟೈರುಗಳನ್ನು ಉಪಯೋಗಿಸಬಹುದು. ಒಂದು ವೇಳೆ ಪಾಸಿಂಗ್ ಆದ ಬಳಿಕ ಈ ಟೈರು ಮುಂದಿನ ಪಾಸಿಂಗಿಗೂ ಮೊದಲೇ ಅಂತಿಮ ದಿನಾಂಕ ದಾಟವುದಿದ್ದರೆ ಹಾಗೂ ಆ ದಿನಾಂಕ ದಾಟಿದರೂ ಟೈರು ಬದಲಿಸದೇ ಇದ್ದರೆ ಹಾಗೂ ಒಂದು ವೇಳೆ ಅಪಘಾತ ಅಥವಾ ಇನ್ನಾವುದೋ ಕಾರಣಕ್ಕೆ ಕಾರಿನ ತಪಾಸಣೆ ನಡೆದು ಟೈರಿನ ಅವಧಿ ಮುಗಿದಿರುವುದು ತಿಳಿದುಬಂದರೆ ಕಾರಿನ ಮಾಲಿಕ ತಪ್ಪಿತಸ್ಥನಾಗಬೇಕಾಗುತ್ತದೆ. ಬಳಿಕ ಏನಾಗುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ.<br />
<div class="separator" style="clear: both; text-align: center;">
</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgdz5Sq8Yo8jHSlIpjI4M0vcKhVfQUz8eI-bAar8mTjqROBDMu139x2Xzh5iEFbu323q7teIVeT_b8uVcTipnVxYDCF9ljTIC3U22Ntc0XC0GgFjFKV3NrQTCgCwL0JQUTen4IhxZiTllSi/s1600/tyre+2.jpg" imageanchor="1" style="margin-left: 1em; margin-right: 1em;"><img border="0" data-original-height="234" data-original-width="550" height="272" src="https://blogger.googleusercontent.com/img/b/R29vZ2xl/AVvXsEgdz5Sq8Yo8jHSlIpjI4M0vcKhVfQUz8eI-bAar8mTjqROBDMu139x2Xzh5iEFbu323q7teIVeT_b8uVcTipnVxYDCF9ljTIC3U22Ntc0XC0GgFjFKV3NrQTCgCwL0JQUTen4IhxZiTllSi/s640/tyre+2.jpg" width="640" /></a></div>
<br />
ಟೈರಿನಲ್ಲಿ ಸವೆತದ ಬಳಿಕವೂ 1.6mm ನಷ್ಟು ರಬ್ಬರ್ ಉಳಿದಿರಬೇಕು ಎಂಬ ಇನ್ನೊಂದು ಕಟ್ಟಳೆ ಇದೆ. 1.6mm ಕಂಡುಕೊಳ್ಳುವುದು ಹೇಗೆ? ಟೈರಿನ ಚಪ್ಪಟೆ ಭಾಗದ ನಡುವೆ ಇರುವ ಜಾಗದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಉಬ್ಬುಗಳಿರುತ್ತವೆ. ಇವಕ್ಕೆ ಟೈರ್ ವೇರ್ ಇಂಡಿಕೇಟರ್ಸ್ ಎಂದು ಕರೆಯುತ್ತಾರೆ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgiy3Dk0jW6YJDNY2TE3vR1OiAVMw3eldEd6hVD3fJI3nKnUaSw1EUnhDqmHk0KMaw5GejIr1U3v6Bakwln7gJEBYJx2mSF16IGxzhn93pMJuKtFrJywYDk3JVZ0_gWCzBfRHQUaDUZHPub/s1600/tyre+3.jpg" imageanchor="1" style="margin-left: 1em; margin-right: 1em;"><img border="0" data-original-height="310" data-original-width="550" height="360" src="https://blogger.googleusercontent.com/img/b/R29vZ2xl/AVvXsEgiy3Dk0jW6YJDNY2TE3vR1OiAVMw3eldEd6hVD3fJI3nKnUaSw1EUnhDqmHk0KMaw5GejIr1U3v6Bakwln7gJEBYJx2mSF16IGxzhn93pMJuKtFrJywYDk3JVZ0_gWCzBfRHQUaDUZHPub/s640/tyre+3.jpg" width="640" /></a></div>
<br />
ಈ ಭಾಗವನ್ನು ತಳವೆಂದು ಪರಿಗಣಿಸಿ ಅಲ್ಲಿಂದ ಎಷ್ಟು ದಪ್ಪಕ್ಕೆ ಟೈರಿನ ರಬ್ಬರ್ ಉಳಿದಿದೆ ಎಂದು ಅಳೆಯಬೇಕು. ಇದನ್ನು ಅಳೆಯಲು ಟೈರ್ ಡೆಪ್ತ್ ಗೇಜ್ ಎಂಬ ಉಪಕರಣವನ್ನು ಎಲ್ಲಾ ಟೈರು ಅಂಗಡಿಯವರು ಕಡ್ಡಾಯವಾಗಿ ಇರಿಸಿರಬೇಕು ಹಾಗೂ ಗ್ರಾಹಕರು ಕೇಳಿದಾಗ ಇಲ್ಲವೆನ್ನದೇ ಕೊಡಬೇಕು. ಇದರ ಮೂಲಕ ಟೈರಿನಲ್ಲಿ ಉಳಿದಿರುವ ರಬ್ಬರ್ 1.6mm ಗಿಂತಲೂ ಹೆಚ್ಚಿದ್ದರೆ ಟೈರು ಪಾಸ್ ಆಗುತ್ತದೆ. ಪಾಸ್ ಮಾಡಬೇಕೆಂದೇ ನಾವು ಅಳೆಯಬೇಕಿಲ್ಲ, ನಮ್ಮ ಸುರಕ್ಷತೆಗಾಗಿ ಆಗಾಗ ನಾವೇ ಒಂದು ಅಳತೆಪಟ್ಟಿ ಉಪಯೋಗಿಸಿ ಅಂದಾಜು ಒಂದೂವರೆ ಮಿಮಿ ಇದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಬೇಕು.<br />
<br />
ಹಾಗಾಗಿ ನಿಮ್ಮ ಕಾರಿಗೆ ಹೊಸ ಟೈರು ಹಾಕಿಸುವುದಾದರೆ ನಿರ್ಮಾಣ ವರ್ಷದಿಂದ ಐದು ವರ್ಷಗಳ ಕಾಲ ಖಂಡಿತವಾಗಿಯೂ ಉಪಯೋಗಿಸಬಹುದು.<br />
<br />
ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ನಿಮ್ಮ ಸ್ನೇಹಿತರು ಹಾಗೂ ಆಪ್ತರಿಗೆ ತಿಳಿಸಿ ಈ ಮಾಹಿತಿಯ ಪ್ರಯೋಜನ ಪಡೆಯುವಂತಾಗಲಿ.<br />
ಇಂತಿ ವಂದನೆಗಳು<br />
'ಸರ್ವೇಜನ ಸುಖಿನೋಭವಂತು'<br />
-ಅರ್ಶದ್ ಹುಸೇನ್ ಎಂ. ಹೆಚ್, ದುಬೈ.</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-16277450487332051842018-01-14T20:06:00.003+04:302018-01-14T20:06:51.864+04:30ಲವಲವಿಕೆಯ ಹೃದಯಕ್ಕಾಗಿ ಆರೋಗ್ಯಕರ ಆಹಾರಕ್ರಮ<div dir="ltr" style="text-align: left;" trbidi="on">
<br />
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://tinyurl.com/ycu6blrs<br />
<br />
ಟೀವಿಯಲ್ಲಿ ಬರುವ ಹಲವು ಜಾಹೀರಾತುಗಲ್ಲಿ ಕೆಲವು ಆಹಾರವಸ್ತುಗಳನ್ನು ಹೃದಯವನ್ನು ರಕ್ಷಿಸುವ ರಾಯಭಾರಿಗಳಂತೆ ಕೆಲವೊಮ್ಮೆ ಬಿಂಬಿಸಲಾಗುತ್ತದೆ. ತಮ್ಮ ಉತ್ಪನ್ನ ಬಳಸಿದರೆ ಮಾತ್ರ ಹೃದಯಕ್ಕೆ ಒಳ್ಳೆಯದೆಂದೂ ಬೇರಾವ ಉತ್ಪನ್ನ ಕೊಂಡರೆ ಕೆಲವು ದಿನಗಳಲ್ಲಿಯೇ ಗೊಟಕ್ ಅನ್ನುತ್ತೀರೆಂದೂ ಉತ್ಪ್ರೇಕ್ಷ್ಸಿಸಲಾಗುತ್ತದೆ. ಅಂದಹಾಗೆ ಜಾಹೀರಾತು ಎಂದರೆ ಉತ್ಪ್ರೇಕ್ಷೆಯೇ ಅಲ್ಲವೇ? ಇದಕ್ಕೆ ಮರುಳಾಗದವರು ಯಾರು!<br />
<br />
ವಾಸ್ತವವಾಗಿ ಈ ಜಾಹೀರಾತುಗಳು ಎದೆ ತಟ್ಟಿ ಹೇಳಿಕೊಳ್ಳುವ ಮತ್ತು ಹೃದಯಕ್ಕೆ ಉತ್ತಮವಾದ ಪೋಷಕಾಂಶಗಳಿದ್ದರೂ ಈ ಉತ್ಪನ್ನಗಳ ಬೆಲೆ ಮಾತ್ರ ಕಡಿಮೆ ಇರುವುದಿಲ್ಲ. ಜಾಹೀರಾತಿಗೆ ಸುರಿದ ಲಕ್ಷಾಂತರ ರೂಪಾಯಿ ಆ ಸಂಸ್ಥೆ ವಸೂಲಿ ಮಾಡಿಕೊಳ್ಳುವುದಾದರೂ ಹೇಗೆ? ಯಾವುದೋ ರೂಪದರ್ಶಿ ದುಡ್ಡು ಪಡೆದ ಮುಲಾಜಿಗೆ ತಾನೆಂದೂ ಬಳಸದೇ ಬೇರೆಯವರಿಗೆ ಬಳಸಲು ಹೇಳಿದ ಉತ್ಪನ್ನವನ್ನು ಕೋಲೆಬಸವನಂತೆ ದುಬಾರಿ ಬೆಲೆ ಕೊಟ್ಟು ಮನೆಗೆ ತರುವ ಬದಲು ಇದಕ್ಕೂ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲ ಮತ್ತ್ತು ಹೃದಯಕ್ಕೆ ಅತ್ಯುತ್ತಮವಾಗ ಆಹಾರಗಳನ್ನು ಮನೆಯಲ್ಲಿಯೇ ಪಡೆಯಬಹುದು. ಅಷ್ಟಕ್ಕೂ ನಮ್ಮ ಹಿರಿಯರು ಇಂತಹ ದುಬಾರಿ ಆಹಾರಗಳನ್ನು ಸೇವಿಸದೇ ಉತ್ತಮ ಆಯಸ್ಸು ಹೊಂದಿರಲಿಲ್ಲವೇ? ಕೆಳಗಿನ ಸ್ಲೈಡ್ ಷೋ ನಿಮಗೆ ಸೂಕ್ತವಾದ ಆಹಾರಗಳ ಆಯ್ಕೆಯನ್ನು ಸುಲಭಗೊಳಿಸಬಲ್ಲದು.<br />
<br />
೧) ತಾಜಾ ಗಿಡಮೂಲಿಕೆಗಳನ್ನು ಉಪ್ಪು ಮತ್ತು ಎಣ್ಣೆಯ ಬದಲಿಗೆ ಉಪಯೋಗಿಸಿ<br />
<img alt="ಗಿಡಮೂಲಿಕೆಗಳನ್ನು ಉಪ್ಪು ಮತ್ತು ಎಣ್ಣೆಯ ಬದಲಿಗೆ ಉಪಯೋಗಿಸಿ" src="https://kannada.boldsky.com/img/2015/07/23-1437650956-heart2.jpg" /><br />
ಉಪ್ಪಿಗಿಂತ ರುಚಿಯಿಲ್ಲ ಸರಿ, ಆದರೆ ಹೃದಯಕ್ಕೆ ಒಳ್ಳೆಯದಲ್ಲವಲ್ಲಾ? ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬು ಹೆಚ್ಚಿದ್ದಷ್ಟೂ ಹೃದಯಕ್ಕೆ ಕೆಟ್ಟದು. ಆದ್ದರಿಂದ ನಿಮ್ಮ ಅಡುಗೆಗೆ ಉಪ್ಪಿನ ಬದಲು ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪುಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು. ನಿಮ್ಮ ಆಹಾರದಲ್ಲಿ ಅಡುಗೆ ಎಣ್ಣೆಯ ಬದಲು ಆಲಿವ್ ಎಣ್ಣೆಯನ್ನು ಬಳಸುವುದು ಹೃದಯಕ್ಕೆ ಅತ್ಯುತ್ತಮವಾಗಿದೆ.<br />
<br />
೨) ಕಪ್ಪು ಬೀನ್ಸ್ ಕಾಳುಗಳು<br />
<img alt="ಕಪ್ಪು ಬೀನ್ಸ್ ಕಾಳುಗಳು" src="https://kannada.boldsky.com/img/2015/07/23-1437650927-blackbeans.jpg" /><br />
ಹೃದಯಕ್ಕೆ ಪೋಷಣೆ ನೀಡುವ ಪೋಷಕಾಂಶಗಳು ಕಪ್ಪು ಬೀನ್ಸ್ ಕಾಳುಗಳಲ್ಲಿ ಹೇರಳವಾಗಿರುತ್ತವೆ. ಫೋಲೇಟ್, ಮೆಗ್ನೀಶಿಯಂ ಮತ್ತು ವಿವಿಧ ಆಂಟಿ ಆಕ್ಸಿಡೆಂಟುಗಳು ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುವುವು. ಇದರಲ್ಲಿನ ಉತ್ತಮ ಪ್ರಮಾಣದ ಕರಗುವ ನಾರು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಸಹಕರಿಸುವುವು. ಕಪ್ಪು ಬೀನ್ಸ್ ಕಾಳುಗಳನ್ನು ನೆನೆಸಿ ಮೊಳಗೆ ಬರಿಸಿ ಸಾಲಾಡ್ ಗಳೊಂದಿಗೆ ಹಸಿಯಾಗಿಯೂ ಬೇಯಿಸಿ ತರಕಾರಿಯಂತೆ ಅಥವಾ ಸೂಪ್ ಮಾಡಿಕೊಂಡು ಸಹಾ ಸೇವಿಸಬಹುದು.<br />
ಅಗತ್ಯ ಸೂಚನೆ: ಒಂದು ವೇಳೆ ಸಿದ್ದ ರೂಪದಲ್ಲಿರುವ ಕ್ಯಾನ್ ನಲ್ಲಿರುವ ಕಾಳನ್ನು ಕೊಂಡರೆ ಇದರಲ್ಲಿ ಉಪ್ಪು ಅಧಿಕ ಪ್ರಮಾಣದಲ್ಲಿರುವುದರಿಂದ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ ಬಳಿಕ ಕೆಲವು ಬಾರಿ ತೊಳೆದುಕೊಳ್ಳುವ ಮೂಲಕ ಉಪ್ಪನ್ನು ನಿವಾರಿಸಬಹುದು.<br />
<br />
೩) ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ<br />
<img alt="ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ " src="https://kannada.boldsky.com/img/2017/05/22-1495461771-23-1437650933-fish.jpg" /><br />
ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಸಾಲ್ಮನ್ ಮೀನು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಒಮೆಗಾ - 3 ಕೊಬ್ಬಿನ ತೈಲವೇ ಇದಕ್ಕೆ ಕಾರಣ. ಈ ತೈಲ ಹೃದಯದೊತ್ತಡವನ್ನು ಕಡಿಮೆಗೊಳಿಸಿ ರಕ್ತಪರಿಚಲನೆಯ ಏರುಪೇರುಗಳನ್ನು ಸರಿಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಮಾರಕವಾಗಿರುವ ಟ್ರೈಗ್ಲಿಸರೈಡ್ ಗಳೆಂಬ ಕಣಗಳನ್ನೂ ನಿವಾರಿಸಿ ಹೃದಯದ ಉರಿಯನ್ನು ಶಮನಗೊಳಿಸುತ್ತದೆ. ವಾರಕ್ಕೆ ಕನಿಷ್ಟ ಎರಡು ತುಂಡು ಸಾಲ್ಮನ್ ಮೀನಿನ್ನು ಸೇವಿಸಲು ಅಮೇರಿಕಾದ ಹೃದಯ ಸಂಸ್ಥೆ ಶಿಫಾರಸ್ಸು ಮಾಡುತ್ತದೆ.<br />
ಅಡುಗೆಗೆ ಸೂಚನೆ: ಸಾಲ್ಮನ್ ಮೀನಿನ ತುಂಡಿಗೆ ವಿವಿಧ ತರಕಾರಿ ಮತ್ತು ಮಸಾಲೆಗಳನ್ನುಸವರಿ ಅಲ್ಯೂಮಿನಿಯಂ ಫಾಯಿಲ್ ನಿಂದ ಆವರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ ತಿನ್ನುವುದರಿಂದ ಅತ್ಯಧಿಕ ಪೋಷಕಾಂಶಗಳನ್ನು ಪಡೆಯಬಹುದು. ಹುರಿಯುವುದರಿಂದ ಹೆಚ್ಚು ಪೋಷಕಾಂಶಗಳು ನಷ್ಟವಾಗುವುವು. ಬೆಂದ ಮೀನನ್ನು ಬಿಡಿಬಿಡಿಯಾಗಿಸಿ ನಿಮ್ಮ ನೆಚ್ಚಿನ ಸಾಲಾಡ್ ನೊಂದಿಗೂ ಸೇವಿಸಬಹುದು. <br />
<br />
೪) ಆಲಿವ್ ಎಣ್ಣೆ<br />
<img alt="ಆಲಿವ್ ಎಣ್ಣೆ " src="https://kannada.boldsky.com/img/2015/07/23-1437650898-aliveoil.jpg" /><br />
ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದನ್ನು ಹಸಿಯಾಗಿ ತಿಂದಷ್ಟೂ ಆರೋಗ್ಯಕ್ಕೆ ಉತ್ತಮವಾಗಿದೆ. ಅಡುಗೆಗೂ ಬಳಸಬಹುದು. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಚಪಾತಿಗಳ ಮೇಲೆ ಸವರಿ ತಿನ್ನುವುದು ಸಹಾ ಉತ್ತಮವಾಗಿದೆ. ರುಚಿಯಲ್ಲಿ ನಮ್ಮ ಸಾಮಾನ್ಯ ಎಣ್ಣೆಗಳಿಗೆ ಸಾಟಿಯಾಗದ ಈ ಎಣ್ಣೆ ಕೊಂಚ ದುಬಾರಿಯೂ ಆಗಿರುವುದರಿಂದ ಇನ್ನೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ರುಚಿ ಮತ್ತು ಬೆಲೆಯಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳುವುದು ಬುದ್ದಿವಂತರ ಲಕ್ಷಣ. ಆದರೆ ಈ ಎಣ್ಣೆಯನ್ನು ಪ್ಯಾಕ್ ಮಾಡಿದ ಆರು ತಿಂಗಳ ಒಳಗೆ ಬಳಸುವುದರಿಂದ ಪೋಷಕಾಂಶಗಳ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಆ ಬಳಿಕವೂ ಉಪಯೋಗಿಸಬಹುದಾದರೂ ಪೋಷಕಾಂಶಗಳ ಪ್ರಮಾಣ ಕೊಂಚ ಕಡಿಮೆಯಾಗುತ್ತಾ ಹೋಗುತ್ತದೆ.<br />
<br />
೫) ಬಾದಾಮಿಗಳು<br />
<img alt="ಬಾದಾಮಿಗಳು" src="https://kannada.boldsky.com/img/2015/07/23-1437650910-badam2.jpg" /><br />
ಹೃದಯಕ್ಕೆ ವಿವಿಧ ಒಣಫಲಗಳು ಉತ್ತಮವಾಗಿವೆ. ಒಣಫಲಗಳಲ್ಲಿ ಬಾದಾಮಿ ಉತ್ತಮವಾಗಿದೆ. ಇದನ್ನು ಹಸಿಯಾಗಿಯೂ, ನಿಮ್ಮ ನಿತ್ಯದ ಆಹಾರಗಳಲ್ಲಿ ಒಂದು ಭಾಗವಾಗಿಯೂ, ಚಿಕ್ಕದಾಗಿ ಕತ್ತರಿಸಿ ಸಿಹಿಪದಾರ್ಥಗಳಲ್ಲಿಯೂ ಬಳಸಬಹುದು. ಬಾದಾಮಿಯಲ್ಲಿ ಸಸ್ಯಜನ್ಯ ಸ್ಟೆರಾಲ್, ಕರಗುವ ನಾರು ಮತ್ತು ಹೃದಯಕ್ಕೆ ಪೂರಕವಾದ ಕೊಬ್ಬುಗಳಿವೆ. ಇವೆಲ್ಲವೂ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತವೆ. ಆದರೆ ಮಾರುಕಟ್ಟೆಯಲ್ಲಿ ಉಪ್ಪು ಸವರಿದ ಬಾದಾಮಿ ಇದ್ದರೆ ಅದನ್ನು ಬಳಸಬೇಡಿ. ಅಂತೆಯೇ ಹುರಿದದ್ದು ಸಿಕ್ಕರೂ ಕೊಳ್ಳಬೇಡಿ. ಏಕೆಂದರೆ ಅವಧಿ ಮುಗಿಯುತ್ತಾ ಬಂದಿರುವ ಬಾದಾಮಿಗಳನ್ನು ಹುರಿದ ರೂಪದಲ್ಲಿ ಮಾರಲಾಗುತ್ತದೆ. ಇವುಗಳಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ. ಉತ್ತಮವೆಂದರೆ ತಾಜಾ ಫಲಗಳನ್ನು ಕೊಂಡು ಕಡಿಮೆ ಉರಿಯಲ್ಲಿ ಕೊಂಚವೇ ಕೊಂಚ ಬಿಸಿಮಾಡುವುದರಿಂದ ಇದರಲ್ಲಿರುವ ಕೊಬ್ಬು ಕರಗಿ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ಸುಲಭವಾಗಿ ರಕ್ತವನ್ನು ಸೇರುತ್ತದೆ.<br />
<br />
೬) ಸಿಹಿಗೆಣಸು<br />
<img alt="ಸಿಹಿಗೆಣಸು " src="https://kannada.boldsky.com/img/2017/05/22-1495461780-23-1437650980-sweet2.jpg" /><br />
ಸಿಹಿಗೆಣಸು ಸಹಾ ಹೃದಯಕ್ಕೆ ಒಂದು ಉತ್ತಮವಾದ ಆಹಾರವಾಗಿದೆ. ರಕ್ತದಲ್ಲಿ ಸಕ್ಕರೆಯನ್ನು ಸೇರಿಸುವ ಕ್ಷಮತೆಯನ್ನು ಮಾಪನ ಮಾಡುವ ಗ್ಲೈಸೆಮಿಕ್ ಕೋಷ್ಟಕದಲ್ಲಿ (glycemic index) ಸಿಹಿಗೆಣಸು ಕೆಳಗಿನ ಸ್ಥಾನದಲ್ಲಿ (ಅಂದರೆ ಕಡಿಮೆ ಸಕ್ಕರೆಯನ್ನು ನೀಡುವ) ಬರುವುದರಿಂದ ನಿಮ್ಮ ಆಹಾರದಲ್ಲಿ ಆಲುಗಡ್ಡೆಗೆ ಬದಲಾಗಿ ಬಳಸಬಹುದಾದ ಎಲ್ಲಾ ಅರ್ಹತೆಯನ್ನು ಪಡೆದಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ಮತ್ತು ಕರಗುವ ನಾರು, ವಿಟಮಿನ್ ಎ, ಲೈಕೋಪೀನ್ ಎಂಬ ಪೋಷಕಾಂಶಗಳು ಹೃದಯಕ್ಕೆ ಉತ್ತಮವಾಗಿದ್ದು ನಿಧಾನವಾಗಿ ಜೀರ್ಣಗೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಧಾನವಾಗಿ ಮತ್ತು ಸೂಕ್ತ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಸಿಹಿಗೆಣಸನ್ನು ಹಸಿಯಾಗಿ ಸೇವಿಸುವುದು ಉತ್ತಮ. ಚಿಕ್ಕದಾಗಿ ತುಂಡು ಮಾಡಿದ ಗೆಣಸನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ಲಿಂಬೆರಸವನ್ನು ಚಿಮುಕಿಸಿ ಸೇವಿಸುವುದರಿಂದ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.<br />
<br />
೭) ಬಾರ್ಲಿ<br />
<img alt="ಬಾರ್ಲಿ" src="https://kannada.boldsky.com/img/2017/05/22-1495461790-23-1471944699-01-1454326500-barley.jpg" /><br />
ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.<br />
<br />
೮) ಕಡಿಮೆ ಕೊಬ್ಬಿನ ಮೊಸರು<br />
<img alt="ಕಡಿಮೆ ಕೊಬ್ಬಿನ ಮೊಸರು" src="https://kannada.boldsky.com/img/2015/07/23-1437650992-yogurt3.jpg" /><br />
ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ. ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು.<br />
<br />
೯) ಚೆರ್ರಿ ಹಣ್ಣುಗಳು<br />
<img alt="ಚೆರ್ರಿ ಹಣ್ಣುಗಳು" src="https://kannada.boldsky.com/img/2015/07/23-1437650921-berryfruits.jpg" /><br />
ಸಿಹಿಹುಳಿ ಸ್ವಾದದ ಚೆರ್ರಿ ಹಣ್ಣುಗಳು ತಾಜಾ ರೂಪದಲ್ಲಿ ಕೆಲವೊಮ್ಮೆ ಲಭ್ಯವಿದ್ದರೂ ಒಣರೂಪದಲ್ಲಿ ವರ್ಷವಿಡೀ ಲಭ್ಯವಾಗುತ್ತದೆ. ಜೊತೆಗೇ ಜ್ಯೂಸ್ ರೂಪದಲ್ಲಿಯೂ ಸಿಗುತ್ತದೆ. ಚೆರ್ರಿಹಣ್ಣುಗಳು ಹೃದಯಕ್ಕೆ ಉತ್ತಮವಾದ ಹಣ್ಣುಗಳಾಗಿವೆ. ಇದರಲ್ಲಿರುವ ಆಂಥೋಸಯಾನಿನ್ (anthocyanin) ಎಂಬ ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳ ದೃಢತೆಯನ್ನು ಹೆಚ್ಚಿಸುವ ಗುಣ ಹೊಂದಿವೆ. ಯಾವುದೇ ರೂಪದಲ್ಲಿ ಲಭ್ಯವಾದ ಚೆರ್ರಿ ಹಣ್ಣುಗಳನ್ನು ನಿಮ್ಮ ಆಹಾರದ ಒಂದು ಭಾಗವಾಗಿಸಿಕೊಂಡರೆ ಹೃದಯಕ್ಕೆ ಉತ್ತಮ ಪೋಷಣೆ ದೊರಕುತ್ತದೆ. ಒಣಫಲವನ್ನು ಪುಡಿಗೊಳಿಸಿ ನಿಮ್ಮ ನೆಚ್ಚಿನ ಸಾಲಾಡ್, ಅನ್ನ ಮತ್ತು ಇತರ ಖಾದ್ಯಗಳೊಡನೆ ಬೆರೆಸಿ ತಿನ್ನುವುದರಿಂದ ರುಚಿ ಹೆಚ್ಚುವುದರ ಜೊತೆಗೇ ಆರೋಗ್ಯವೂ ವೃದ್ದ್ದಿಸುತ್ತದೆ.<br />
<br />
೧೦) ಓಟ್ಸ್<br />
<img alt="ಓಟ್ಸ್" src="https://kannada.boldsky.com/img/2015/07/23-1437650967-oats.jpg" /><br />
ಓಟ್ಸ್ ಅಥವಾ ತೋಕೆಗೋಧಿಯಲ್ಲಿ ವಿವಿಧ ಪೋಷಕಾಂಶಗಳಿದ್ದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಬಹುಕಾಲ ಏಕಪ್ರಮಾಣದಲ್ಲಿಸುವ ಗುಣ ಹೊಂದಿದೆ. ಈ ಗುಣ ಮಧುಮೇಹಿಗಳಿಗೆ ಉತ್ತಮವಾಗಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ. ಪರಿಣಾಮವಾಗಿ ಹೃದಯದ ಆರೋಗ್ಯ ವೃದ್ಧಿಸುತ್ತದೆ. ಓಟ್ಸ್ ಬಳಸಿ ಸೇವಿಸಿದ ಆಹಾರ ಜೀರ್ಣಗೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಸಮಯ ಆಹಾರವಿಲ್ಲದೇ ಇರುವ ಸಂದರ್ಭಕ್ಕೆ ಸೂಕ್ತವೂ ಆರೋಗ್ಯಕರವೂ ಆಗಿದೆ. ಆದರೆ ಪುಡಿರೂಪದ ಓಟ್ಸ್ ಗಿಂತ ಕಾಳು ರೂಪದಲ್ಲಿ (ಕುಚ್ಚಿಗೆಯ ನುಚ್ಚಿನ ರೂಪದಲ್ಲಿ) ಸಿಗುವ ಓಟ್ಸ್ ಉತ್ತಮವಾಗಿದೆ.<br />
<div>
<br /></div>
</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-39497952069295486072018-01-12T20:39:00.003+04:302018-01-12T20:39:37.476+04:30ಆಲುಗಡ್ಡೆಯಿಂದ ಇಷ್ಟೆಲ್ಲಾ ಉಪಯೋಗಗಳಿವೆ ಎಂದು ನಿಮಗೆ ಈ ಮೊದಲು ಗೊತ್ತಿತ್ತೇ?<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ. ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://tinyurl.com/yc3sv8sp<br />
<br />
ಹೆಚ್ಚು ಕಾಲ ಕೆಡದೇ ಇರುವ, ಅಗ್ಗವಾದ, ವರ್ಷದ ಎಲ್ಲಾ ಋತುಗಳಲ್ಲೂ ಲಭ್ಯವಿರುವ ತರಕಾರಿಗಳೆಂದರೆ ಆಲುಗಡ್ಡೆ ಮತ್ತು ನೀರುಳ್ಳಿ. ಬಡವರ ನೆಚ್ಚಿನ ಈ ಆಲುಗಡ್ಡೆಯನ್ನು ಉದ್ದದ ಬೆರಳುಗಳಂತೆ ಚೌಕಾಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹುರಿದು ಚೆಂದದ ಕಾಗದದ ಪೊಟ್ಟಣದಲ್ಲಿ ಕಟ್ಟಿಕೊಟ್ಟರೆ ಶ್ರೀಮಂತರಿಗೆ ಅದು ದುಬಾರಿಬೆಲೆಯ ಸ್ವಾದಿಷ್ಟ ಖಾದ್ಯ. ರೆಸಿಪಿಗಳಲ್ಲಿ ಹುಡುಕಹೊರಟರೆ ಆಲು ಜೊತೆಗಿನ ಇತರ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸಬಹುದಾದ ಖಾದ್ಯಗಳ ಪಟ್ಟಿ ನೂರಕ್ಕೂ ಹೆಚ್ಚಿವೆ. ಇದರಲ್ಲಿರುವ ವಿಟಮಿನ್ ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಕೊಬ್ಬನ್ನು ಕರಗಿಸುವ ಮೂಲಕ ತೂಕ ಇಳಿಯಲೂ ನೆರವಾಗುತ್ತವೆ. ಆಲುಗಡ್ಡೆಯನ್ನು ಚೆನ್ನಾಗಿ ಹುರಿದು ತಿನ್ನುವುದರಿಂದ ಕೊಬ್ಬು ಕಡಿಮೆಯಾಗುತ್ತದೆ.<br />
<img alt="ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ" src="https://kannada.boldsky.com/img/2015/09/29-1443507238-boiledddd.jpg" /><br />
<br />
ಆದರೆ ಆಲುಗಡ್ಡೆಯ ಉಪಯೋಗ ಅಡುಗೆಗೆ ಹೊರತಾಗಿಯೂ ಬಹಳಷ್ಟಿದೆ. ಇದರ ಪರ್ಯಾಯ ಉಪಯೋಗಗಳಲ್ಲಿ ಪ್ರಮುಖವಾದುವನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ:<br />
<br />
<img alt="ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ" src="https://kannada.boldsky.com/img/2015/09/29-1443507356-q5.jpg" /><br />
<b>೧) ಆಲುಗಡ್ಡೆ ಬೇಯಿಸಿದ ನೀರು ಕೂದಲಿಗೆ ಉತ್ತಮ</b><br />
ಆಲುಗಡ್ಡೆಯನ್ನು ಬೇಯಿಸಿದ ಬಳಿಕ ಉಳಿದ ನೀರನ್ನು ಚೆಲ್ಲಬೇಡಿ, ಬದಲಿಗೆ ತಣಿದ ಬಳಿಕ ಇದೇ ನೀರಿಗೆ ಒಂದು ಬೆಂದಿರುವ ಆಲುಗಡ್ಡೆಯನ್ನು ಚೆನ್ನಾಗಿ ಕಿವುಚಿ ನೀರನ್ನು ಗಾಢವಾಗಿಸಿ. ಈ ನೀರಿನಿಂದ ಕೂದಲನ್ನು ತೊಳೆದುಕೊಂಡರೆ ಕೂದಲಿಗೆ ಅಪ್ರತಿಮ ಕಾಂತಿ ದೊರಕುತ್ತದೆ. ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಉದುರುವುದನ್ನು ನಿಯಂತ್ರಿಸುತ್ತದೆ ಅಲ್ಲದೇ ತಲೆಹೊಟ್ಟನ್ನೂ ನಿವಾರಿಸುತ್ತದೆ.<br />
<img alt="ರಕ್ತದೊತ್ತಡ ಕಡಿಮೆಗೊಳಿಸುತ್ತದೆ" src="https://kannada.boldsky.com/img/2015/09/29-1443507232-blooogfff.jpg" /><br />
<b>೨) ರಕ್ತದೊತ್ತಡ ಕಡಿಮೆಗೊಳಿಸುತ್ತದೆ.</b><br />
ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆಯಿದ್ದಲ್ಲಿ, ನಿಮ್ಮ ಆಹಾರದಲ್ಲಿ ಸಾಕಷ್ಟು ಆಲುಗಡ್ಡೆಗಳಿರುವಂತೆ ನೋಡಿಕೊಳ್ಳುವುದರಿಂದ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ.<br />
<img alt="ಮಲಬದ್ಧತೆ ನಿವಾರಿಸುತ್ತದೆ" src="https://kannada.boldsky.com/img/2015/09/29-1443507258-p1.jpg" /><br />
<b>೩) ಮಲಬದ್ದತೆ ನಿವಾರಿಸುತ್ತದೆ.</b><br />
<img alt="ಮಲಬದ್ಧತೆ ನಿವಾರಿಸುತ್ತದೆ" src="https://kannada.boldsky.com/img/2015/09/29-1443507300-ppppp.jpg" /><br />
ಒಂದು ವೇಳೆ ಮಲಬದ್ದತೆಯ ತೊಂದರೆ ಇದ್ದರೆ ಒಂದೆರಡು ಆಲುಗಡ್ಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದು ತಿನ್ನುವ ಮೂಲಕ ಮಲಬದ್ದತೆಯ ತೊಂದರೆ ದೂರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಲವಣ ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುವ ದ್ರವಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಹೊಟ್ಟೆಯುರಿ ಮೊದಲಾದ ತೊಂದರೆಗಳಿಂದ ತಪ್ಪಿಸುತ್ತದೆ.<br />
<br />
<b>೪) ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.</b><br />
<img alt="ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ" src="https://kannada.boldsky.com/img/2015/09/29-1443507312-skincare.jpg" /><br />
ನಿಯಮಿತವಾಗಿ ಮುಖದ ಚರ್ಮವನ್ನು ಆಲುಗಡ್ಡೆಯ ಚಿಕ್ಕದಾಗಿ ತುರಿದ ಪುಡಿಯಿಂದ ಸುಮಾರು ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿಕೊಳ್ಳುವ ಮೂಲಕ ಸಹಜವಾದ ಕಾಂತಿಯನ್ನು ಪಡೆಯಬಹುದು.<br />
<br />
<b>೫) ಮೊಡವೆಗಳನ್ನು ನಿವಾರಿಸುತ್ತದೆ.</b><br />
<img alt="ಮೊಡವೆಗಳನ್ನು ನಿವಾರಿಸುತ್ತದೆ" src="https://kannada.boldsky.com/img/2015/09/29-1443507307-skiiiii.jpg" /><br />
ಮೊಡವೆಗಳ ತೊಂದರೆಯಿದ್ದರೆ ಒಂದು ಚಮಚ ಆಲುಗಡ್ಡೆಯ ರಸಕ್ಕೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಮೊಡವೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲ, ಮತ್ತೆ ಬರದಂತೆಯೂ ತಡೆಯಬಹುದು. <br />
<br />
<br />
<b>೬) ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ.</b><br />
<img alt="ಚರ್ಮದಡಿಯ ಗಂಟುಗಳನ್ನು ನಿವಾರಿಸುತ್ತದೆ" src="https://kannada.boldsky.com/img/2015/09/29-1443507319-skinnn.jpg" /><br />
ಕೆಲವೊಮ್ಮೆ ಚರ್ಮದಡಿಯಲ್ಲಿ ಕೆಲವು ಗ್ರಂಥಿಗಳು ಸ್ರವಿತವಾಗಿ ಗಂಟುಗಳು ಉಂಟಾಗುತ್ತವೆ. ಇದಕ್ಕೆ ಒಂದು ಉದಾಹರಣೆ ಮಣಿಕಟ್ಟಿನಲ್ಲಿ ಉಂಟಾಗುವ ಗ್ಯಾಂಗ್ಲಿಯಾನ್ ಎಂಬ ಗಂಟು. ಇದನ್ನು ನಿವಾರಿಸಲು ಸುಮಾರು ಮೂರು ಅಥವಾ ನಾಲ್ಕು ಆಲುಗಡ್ದೆಗಳನ್ನು ನೇರವಾಗಿ ಬೆಂಕಿಯ ಮೇಲಿಟ್ಟು ಸುಡಬೇಕು. ಬಳಿಕ ಸಿಪ್ಪೆ ಸುಲಿದು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಚಿಮುಕಿಸಿಕೊಂದು ಬಿಸಿಬಿಸಿಯಾಗಿಯೇ ತಿನ್ನಬೇಕು. ಇದರಿಂದ ಗಂಟುಗಳು ಕರಗತೊಡಗುತ್ತವೆ.<br />
<br />
<b>೭) ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ.</b><br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhY-JxD2JGKvxKZdbA631Mj9MSf_50Plhguj9K7qESItksKFBX_KitklmYc6_zvY6Yv0GP1s8RTjIrSXbeN6pKjpcH0F0qDdSaNDhCrEiQ603YG9mIk5D3-E0Fz33AT0vdiMOb7INAccJpO/s1600/stretch+marks2.jpg" imageanchor="1" style="margin-left: 1em; margin-right: 1em;"><img border="0" data-original-height="178" data-original-width="202" src="https://blogger.googleusercontent.com/img/b/R29vZ2xl/AVvXsEhY-JxD2JGKvxKZdbA631Mj9MSf_50Plhguj9K7qESItksKFBX_KitklmYc6_zvY6Yv0GP1s8RTjIrSXbeN6pKjpcH0F0qDdSaNDhCrEiQ603YG9mIk5D3-E0Fz33AT0vdiMOb7INAccJpO/s1600/stretch+marks2.jpg" /></a></div>
<b><br /></b>
ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಅರ್ಧ ಚಮಚದಷ್ಟು ಹಸಿ ಆಲುಗಡ್ಡೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹರಿಗೆಯ ರೇಖೆಗಳ ಮೇಲೆ ಮತ್ತು ಮುಖದ ನೆರಿಗೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಈ ಸ್ಥಳಗಳೂ ಅಕ್ಕಪಕ್ಕದ ಚರ್ಮದ ಬಣ್ಣವನ್ನೇ ಪಡೆದು ರೇಖೆಗಳು ಮಾಯವಾಗುತ್ತವೆ.<br />
<br />
<b>೮) ಬಿಸಿಲಿನ ಝಳಕ್ಕೆ ಒಣಗಿದ ಬಣ್ಣವನ್ನು ನಿವಾರಿಸುತ್ತದೆ.</b><br />
<img alt="ಊತವನ್ನು ನಿವಾರಿಸುತ್ತದೆ" src="https://kannada.boldsky.com/img/2015/09/29-1443507332-.jpg" /><br />
ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗದ ಬಣ್ಣ ಬದಲಾಗಿದ್ದು ಇದನ್ನು ನಿಜವರ್ಣಕ್ಕೆ ತರಲು ಹಸಿ ಆಲುಗಡ್ಡೆಯನ್ನು ಅಡ್ಡಲಾಗಿ ಕತ್ತರಿಸಿ ಅದರಿಂದ ಬಿಸಿಲಿಗೆ ಒಡ್ಡಿ ಬಣ್ಣಬದಲಾದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಧಾನವಾಗಿ ಚರ್ಮ ಸಹಜವರ್ಣದತ್ತ ಬದಲಾಗುತ್ತದೆ.<br />
<br />
<b>೯) ಊತವನ್ನು ನಿವಾರಿಸುತ್ತದೆ.</b><br />
<img alt="ಅಲರ್ಜಿಗಳಿಗೆ ಉತ್ತಮವಾಗಿದೆ" src="https://kannada.boldsky.com/img/2015/09/29-1443507285--potatoes.jpg" /><br />
ಕೆಲವೊಮ್ಮೆ ಪೆಟ್ಟು ಬಿದ್ದು ಅಥವಾ ಬೇರಾವುದೋ ಕಾರಣದಿಂದ ದೇಹದ ಯಾವುದಾದರೂ ಭಾಗಕ್ಕೆ ಬಾವು ಅಥವಾ ಊತ ಬಂದಿದ್ದರೆ ಆ ಸ್ಥಳಕ್ಕೆ ಆಲುಗಡ್ಡೆ ಬೇಯಿಸಿದ್ದ ನೀರಿನಿಂದ ಅದ್ದಿದ ಬಟ್ಟೆಯನ್ನು ಕಟ್ಟುವ ಮೂಲಕ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಅಥವಾ ಎರಡು ಆಲುಗಡ್ಡೆಯನ್ನು ಕತ್ತರಿಸಿ ಚಿಕ್ಕ ತುಂಡುಗಳನ್ನಾಗಿಸಿ ಹಾಕಿ. ಈ ತುಂಡುಗಳ ಒಟ್ಟು ತೂಕದ ಎರಡರಷ್ಟು ತೂಕದ ನೀರನ್ನು ಸೇರಿಸಿ. ಉದಾಹರಣೆಗೆ ಐವತ್ತು ಗ್ರಾಂ ಆಲುಗಡ್ಡೆಯಿದ್ದರೆ ನೀರು ನೂರು ಗ್ರಾಂ ಇರಬೇಕು. ಹೆಚ್ಚು ಕಡಿಮೆ ಆಗಬಾರದು. ಈ ನೀರನ್ನು ಚೆನ್ನಾಗಿ ಕುದಿಸಿ ತಣಿಸಿ. ತಣಿದ ನೀರನ್ನು ಸ್ವಚ್ಛವಾದ ಬಟ್ಟೆಯಲ್ಲಿ ಅದ್ದಿ ಬಾವು ಬಂದ ಸ್ಥಳದ ಮೇಲೆ ಇಡಿಯ ರಾತ್ರಿ ಕಟ್ಟುವುದರಿಂದ ಬಾವು ಕಡಿಮೆಯಾಗುತ್ತದೆ.<br />
<br />
<b>೧೦) ಅಲರ್ಜಿಗಳಿಗೆ ಉತ್ತಮವಾಗಿದೆ</b><br />
<img alt="ಮೂಲವ್ಯಾಧಿಯನ್ನು ಗುಣಪಡಿಸುತ್ತದೆ" src="https://kannada.boldsky.com/img/2015/09/29-1443507278-poooootttttooo.jpg" /><br />
ಹಸಿ ಆಲುಗಡ್ಡೆಯ ರಸವನ್ನು ಸೇವಿಸುವುದರಿಂದ ಹಲವು ವಿಧದ ಅಲರ್ಜಿಗಳು ದೂರವಾಗುತ್ತವೆ.<br />
<br />
<b>೧೧) ಮೂಲವ್ಯಾಧಿಯನ್ನು ಗುಣಪಡಿಸುತ್ತದೆ.</b><br />
<img alt="ನೆರಿಗೆಗಳನ್ನು ನಿವಾರಿಸುತ್ತದೆ" src="https://kannada.boldsky.com/img/2015/09/29-1443507202-aaaa.jpg" /><br />
ಮೂಲವ್ಯಾಧಿಯ ರೋಗಿಗಳು ಆಲುಗಡ್ಡೆಯನ್ನು ಚೆನ್ನಾಗಿ ಬೇಯಿಸಿ ತಯಾರಿಸಿದ ಸೂಪ್ ಕುಡಿಯುವ ಮೂಲಕ ಶಮನ ಪಡೆಯಬಹುದು. <br />
<br />
<b>೧೨) ನೆರಿಗೆಗಳನ್ನು ನಿವಾರಿಸುತ್ತದೆ.</b><br />
<img alt="ಚರ್ಮದ ಕಾಂತಿ ಹೆಚ್ಚಲು" src="https://kannada.boldsky.com/img/2015/09/29-1443507222-bbbbbbbb.jpg" /><br />
ಹಸಿ ಆಲುಗಡ್ಡೆಯ ರಸದಿಂದ ನೆರಿಗೆಗಳಿರುವ ಭಾಗದಲ್ಲಿ ನಯವಾಗಿ ಮಸಾಜ್ ಮಾಡಿದರೆ ನೆರಿಗೆಗಳು ದೂರವಾಗುತ್ತವೆ.<br />
<br />
<b>೧೩) ಚರ್ಮದ ಕಾಂತಿ ಹೆಚ್ಚಲು</b><br />
ಆಲುಗಡ್ಡೆ ಬೇಯಿಸಿದ್ದ ನೀರನ್ನು ಚೆಲ್ಲದೇ ಸ್ನಾನ ಮಾಡಲು ತೆಗೆದಿರಿಸಿದ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ. </div>
Arshad Hussainhttp://www.blogger.com/profile/13410279590093513740noreply@blogger.com1tag:blogger.com,1999:blog-8910708758309450943.post-64405355603101751882018-01-07T10:46:00.002+04:302018-01-07T10:46:24.277+04:30ಮರುಬಿಸಿ ಮಾಡಲೇಬಾರದ, ಮಾಡಿದರೆ ವಿಷವಾಗುವ ಏಳು ಆಹಾರಗಳು<div dir="ltr" style="text-align: left;" trbidi="on">
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ<br />
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/9i7Q3M<br />
<br />
<br />
ಇಂದು ಮನೆಮನೆಯಲ್ಲಿರುವ ಫ್ರಿಜ್ ಗೆ ತಂಗಳುಪೆಟ್ಟಿಗೆ ಎಂಬ ಅನ್ವರ್ಥನಾಮವಿದೆ. ಏಕಾಗಿ ತಂಗಳು ಈ ಫ್ರಿಜ್ಜಿಗೆ ಅಂಟಿಕೊಂಡಿತು? ನಮ್ಮ ಹಿರಿಯರ ಕಾಲದಲ್ಲಿ ಫ್ರಿಜ್ ಇಲ್ಲದಿದ್ದುದರಿಂದ ಇಂದು ಮಾಡಿದ ಅಡುಗೆಯನ್ನು ನಾಳೆಗಾಗಿ ಇಡುವ ಪದ್ದತಿ ಇರಲಿಲ್ಲ. ಮರುದಿನಕ್ಕೆ ಅದು ಕೊಂಚ ಹಾಳಾಗುವ ಹಂತದಲ್ಲಿರುತ್ತಿತ್ತು. ಇದನ್ನು ತಿಂದರೆ ಆರೋಗ್ಯ ಕೆಡುವ ಸಂಭವಿದ್ದುದರಿಂದ ಎಸೆದುಬಿಡುತ್ತಿದ್ದರು. ಆದರೆ ಒಪ್ಪೊತ್ತು ಊಟಕ್ಕೂ ಗತಿಯಿಲ್ಲದ ಬಡವರು ಈ ಊಟವನ್ನು ಸೇವಿಸಲು ಸಿದ್ಧರಿಸುತ್ತಿದ್ದರು. ಇದಕ್ಕಾಗಿಯೇ ಇದಕ್ಕೆ ತಂಗಳು ಎಂಬ ಹೆಸರು ಬಂದಿದೆ. ಇಂದು ಫ್ರಿಜ್ ನಲ್ಲಿಟ್ಟ ಆಹಾರವನ್ನು ಮರುದಿನವೂ ಬಳಸಬಹುದಾದುದರಿಂದ ಇದಕ್ಕೆ ತಂಗಳುಪೆಟ್ಟಿಗೆ ಎನ್ನುತ್ತಾರೆ.<br />
<br />
ಆದರೆ ಎಲ್ಲಾ ಆಹಾರಗಳೂ ಫ್ರಿಜ್ಜಿನಲ್ಲಿಟ್ಟರೂ ಮರುದಿನದ ಬಳಕೆಗೆ ಯೋಗ್ಯವಲ್ಲ. ಆಹಾರತಜ್ಞರು ಈ ಬಗ್ಗೆ ನಡೆಸಿದ ಸಂಶೋಧನೆಗಳಿಂದ ಕೆಲವು ಆಹಾರಗಳು ಫ್ರಿಜ್ಜಿನಲ್ಲಿಟ್ಟರೂ ಒಳಗೇ ಕೆಲವು ರಾಸಾಯನಿಕಗಳ ಉತ್ಪತ್ತಿಯಿಂದ ವಿಷಕರವಾಗುವುದನ್ನು ಪ್ರಕಟಿಸಿದ್ದಾರೆ. ಈ ಆಹಾರಗಳನ್ನು ಮತ್ತೊಮ್ಮೆ ಬಿಸಿ ಮಾಡಿದರೆ ಈ ರಾಸಾಯನಿಕಗಳು ಆಹಾರದಲ್ಲಿದ್ದ ಪೋಷಕಾಂಶಗಳ ಗುಣವನ್ನು ಕೆಡಿಸಿ ಆರೋಗ್ಯಕ್ಕೆ ಮಾರಕವಾದ ವಿಷವನ್ನಾಗಿ ಪರಿವರ್ತಿಸಿಬಿಡುತ್ತವೆ. ಈ ಬಗ್ಗೆ ಅರಿವಿರದೇ ತಂಗಳನ್ನು ಬಿಸಿಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಮುನ್ನ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಅರಿವು ಅಗತ್ಯವಾಗಿದೆ. ಇದರಲ್ಲಿ ಪ್ರಮುಖವಾದ ಏಳು ಆಹಾರಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ.<br />
<br />
<b>೧) ಆಲುಗಡ್ಡೆ</b><br />
<img alt="ಆಲುಗಡ್ಡೆ" src="https://kannada.boldsky.com/img/2015/06/25-1435231838-1im.jpg" /><br />
ಐರ್ಲೆಂಡ್, ಈಜಿಪ್ಟ್, ಕೀನ್ಯಾ, ಸೋಮಾಲಿಯಾ ಮೊದಲಾದ ಆಫ್ರಿಕದ ದೇಶಗಳಿಗೆ ಆಲುಗಡ್ಡೆಯೇ ಪ್ರಮುಖ ಆಹಾರ. ಆದರೆ ಇವರಾರೂ ಇಂದು ಬೇಯಿಸಿದ ಆಲುಗಡ್ಡೆಯನ್ನು ನಾಳೆ ತಿನ್ನುವುದಿಲ್ಲ. ಏಕೆಂದು ಕೇಳಿದರೆ ಇಂದಿನ ಆಲುಗಡ್ಡೆ ನಾಳೆಯ ವಿಷ ಎಂಬ ಉತ್ತರ ದೊರಕುತ್ತದೆ. ಆಲುಗಡ್ಡೆ ಬೇಯಿಸುವ ಮುನ್ನ ಹಲವು ದಿನಗಳವರೆಗೆ ಕಾಪಾಡಿ ಇಡಬಹುದಾದರೂ ಒಮ್ಮೆ ಬೇಯಿಸಿ ತಣಿಸಿದ ಬಳಿಕ ಮತ್ತೊಮ್ಮೆ ಬೇಯಿಸಿದರೆ ವಿಷವಾಗಿ ಪರಿಣಮಿಸುತ್ತದೆ. ಹಾಗಾಗಿ ಆಲುಗಡ್ಡೆ ಉಪಯೋಗಿಸಿ ತಯಾರಿಸಿದ ಖಾದ್ಯಗಳನ್ನು ಅಂದೇ ಬಳಸಿ, ಮರುದಿನಕ್ಕೆ ಇಟ್ಟುಕೊಳ್ಳಬೇಡಿ. <br />
<br />
<b>೨) ಕೋಳಿಮಾಂಸ</b><br />
<img alt="ಕೋಳಿಮಾಂಸ" src="https://kannada.boldsky.com/img/2015/06/25-1435231844-2im.jpg" /><br />
ಕೋಳಿಮಾಂಸದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಇದೆ. ಇದು ಆರೋಗ್ಯಕರ ಆಹಾರವಾಗಿದ್ದರೂ ಮರುದಿನಕ್ಕೆ ಉಳಿಸಿ ಮತ್ತೊಮ್ಮೆ ಬಿಸಿಮಾಡಿದರೆ ಈ ಪ್ರೋಟೀನ್ ನ ಕೆಲವು ಅಂಶಗಳು ವಿಷವಾಗಿ ಪರಿವರ್ತಿತವಾಗುತ್ತವೆ. ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಗಳ ಮೂಲಕ Campylobacter ಮತ್ತು<br />
Salmonella ಎಂಬ ಹೆಸರಿನ ಎರಡು ಬ್ಯಾಕ್ಟೀರಿಯಾಗಳು ಮರುಬಿಸಿ ಮಾಡಿದ ಈ ಪ್ರೋಟೀನ್ ನಲ್ಲಿ ಕಂಡುಬಂದಿವೆ. (ಹಸಿ ಹಾಲು, ಬೇಯಿಸದ ಮಾಂಸದಲ್ಲಿಯೂ ಈ ಬ್ಯಾಕ್ಟೀರಿಯಾಗಳಿರುತ್ತವೆ). ಈ ಜೋಡಿ ಜಠರದಲ್ಲಿ ಅಜೀರ್ಣತೆ, ಆಮ್ಲೀಯತೆ ಹೆಚ್ಚಿಸುವುದು ಮೊದಲಾದ ತೊಂದರೆಗಳನ್ನು ಒಡ್ಡುತ್ತವೆ. ಅಚ್ಚರಿ ಎಂದರೆ ಇಂದಿನ ಕೋಳಿಮಾಂಸದ ಖಾದ್ಯವನ್ನು ಮರುದಿನ ಬಿಸಿಮಾಡದೇ ತಣ್ಣಗೇ ಇದ್ದಾಗ ಇರದ ಈ ಬ್ಯಾಕ್ಟೀರಿಯಾಗಳು ಬಿಸಿಮಾಡಿದಾಕ್ಷಣ ಪ್ರತ್ಯಕ್ಷವಾಗುತ್ತವೆ. ವಾತಾಪಿ ಜೀರ್ಣೋಭವ ಕಥೆ ನೆನಪಾಯಿತೇ? ಆದ್ದರಿಂದ ಅನಿವಾರ್ಯವಾದರೆ ಬಿಸಿಮಾಡದೇ ಕೋಳಿಮಾಂಸವನ್ನು ಸೇವಿಸಬಹುದು, ಆದರೆ ಬಳಸದಿರುವುದೇ ಒಳಿತು ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ.<br />
<br />
<b>೩) ಅಣಬೆ</b><br />
<img alt="ಅಣಬೆ" src="https://kannada.boldsky.com/img/2015/06/25-1435231850-3im.jpg" /><br />
ಅಣಬೆಗಳಲ್ಲೂ ತಿನ್ನಬಾರದ ಪ್ರಬೇಧಗಳಿವೆ. ಆದರೆ ತಿನ್ನಬಹುದಾದ ಅಣಬೆಯ ಖಾದ್ಯವನ್ನು ಸಿದ್ಧಪಡಿಸಿ ಕೂಡಲೇ ತಿಂದರೆ ಮಾತ್ರ ಕ್ಷೇಮ. ಒಮ್ಮೆ ತಣಿದರೆ ಇದರ ರಾಸಾಯನಿಕ ಸಂಯೋಜನೆಗಳೆಲ್ಲಾ ಕಲಸುಮೇಲೋಗರವಾಗಿ ವಿಷವಾಗಿ ಪರಿವರ್ತಿತವಾಗಿಬಿಡುತ್ತದೆ.<br />
<br />
<b>೪) ಬೀಟ್ ರೂಟ್</b><br />
<img alt="ಬೀಟ್ರೂಟ್" src="https://kannada.boldsky.com/img/2015/06/25-1435231856-4im.jpg" /><br />
ಬೀಟ್ ರೂಟ್ ಪೋಷಕಾಂಶಗಳ ಆಗರವಾಗಿದ್ದರೂ ನೈಟ್ರೇಟ್ ಅಂಶವೂ ಹೆಚ್ಚಾಗಿಯೇ ಇದೆ. ಮರುಬಿಸಿ ಮಾಡಿದರೆ ಈ ನೈಟ್ರೇಟುಗಳೂ ವಿಷವಾಗಿ ಪರಿಣಮಿಸುವುದರಿಂದ ತಾಜಾ ಖಾದ್ಯವನ್ನು ಮಾತ್ರ ಸೇವಿಸುವುದು ಆರೋಗ್ಯಕರವಾಗಿದೆ.<br />
<br />
<b>೫) ಪಾಲಕ್ ಸೊಪ್ಪು</b><br />
<img alt="ಪಾಲಕ್ ಸೊಪ್ಪು" src="https://kannada.boldsky.com/img/2015/06/25-1435231863-5im.jpg" /><br />
ಕಬ್ಬಿಣದ ಅಂಶ ಹೇರಳವಾಗಿರುವ ಪಾಲಕ್ ಮತ್ತು ಬಸಲೆ ಸೊಪ್ಪುಗಳ ಸಾರು ಮತ್ತು ಖಾದ್ಯಗಳನ್ನೂ ಮರುಬಿಸಿಮಾಡುವುದು ಒಳಿತಲ್ಲ. ಏಕೆಂದರೆ ಇದರಲ್ಲೂ ನೈಟ್ರೇಟುಗಳ ಅಂಶ ಹೆಚ್ಚಿದ್ದು ಬಿಸಿಮಾಡಿದಾಕ್ಷಣ ರಾಸಾಯನಿಕ ಬದಲಾವಣೆಗೆ ಒಳಗಾಗಿ ವಿಷಕಾರಿಯಾಗುತ್ತದೆ.<br />
<br />
<b>೬) ಮೊಟ್ಟೆಗಳು</b><br />
<img alt="ಮೊಟ್ಟೆಗಳು" src="https://kannada.boldsky.com/img/2015/06/25-1435231868-6im.jpg" /><br />
ಮೊಟ್ಟೆಗಳನ್ನು ಬೇಯಿಸುವಾಗ ಒಳಗಣ ಹಳದಿ ಅಂಚಿನಲ್ಲಿ ಕಪ್ಪಾದಷ್ಟೂ ಹೆಚ್ಚು ವಿಷಕಾರಿಯಾಗಿದೆ ಎಂದರ್ಥ. ಹಾಗಾಗಿ ಆಹಾರತಜ್ಞರು ಮೊಟ್ಟೆಯನ್ನು ಕೇವಲ ಒಂದು ನಿಮಿಷದ ಅವಧಿಗೆ ಮಾತ್ರ ಬೇಯಿಸಲು ಸಲಹೆ ನೀಡುತ್ತಾರೆ. ಅಲ್ಲದೇ ಮೊಟ್ಟೆಯನ್ನು ಇನ್ನಾವ ರೂಪದಲ್ಲಿ ಅಡುಗೆ ಮಾಡಿದರೂ, ಅಂದರೆ ಆಮ್ಲೆಟ್, ಎಗ್ ಬುರ್ಜಿ, ಎಗ್ ಮಸಾಲಾ ಮೊದಲಾದವುಗಳನ್ನು ಬಿಸಿಯಿದ್ದಂತೆಯೇ ಸೇವಿಸಬೇಕು. ಒಮ್ಮೆ ತಣಿದ ಬಳಿಕ ಮರುಬಿಸಿ ಮಾಡಲೇಬಾರದು. ಏಕೆಂದರೆ ಮರುಬಿಸಿ ಮಾಡಿದಾಗ ಇದರಲ್ಲಿ ಹಲವು ವಿಷಕಾರಿ ವಸ್ತುಗಳು ಉತ್ಪನ್ನವಾಗಿ ಹೊಟ್ಟೆಯನ್ನು ಕೆಡಿಸುತ್ತವೆ.<br />
<br />
<b>೭) ಸೆಲೆರಿ ಸೊಪ್ಪು</b><br />
<img alt="ಸೆಲೆರಿ ಸೊಪ್ಪು" src="https://kannada.boldsky.com/img/2015/06/25-1435231874-7im.jpg" /><br />
ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುವ ಸೆಲೆರಿ ಸೊಪ್ಪು ಸಹಾ ನೈಟ್ರೇಟುಗಳನ್ನು ಹೊಂದಿದೆ. ಸಾಮಾನ್ಯವಾಗಿ ಸೂಪ್ ಮಾಡಲು ಈ ಸೊಪ್ಪನ್ನು ಉಪಯೋಗಿಸಲಾಗುತ್ತದೆ. ಹೆಚ್ಚುವರಿ ಸೂಪ್ ಫ್ರಿಜ್ಜಿನೊಳಗಿರಿಸಿ ನಾಳೆಗಾಗಿ ಇಡುತ್ತಾರೆ. ಆದರೆ ಮರುಬಿಸಿ ಮಾಡಿದ ಸೂಪ್ ವಿಷಯುಕ್ತವಾಗಿರುವುದರಿಂದ ಇದನ್ನು ಸೇವಿಸದಿರುವುದು ಉತ್ತಮ. </div>
Arshad Hussainhttp://www.blogger.com/profile/13410279590093513740noreply@blogger.com1tag:blogger.com,1999:blog-8910708758309450943.post-386993739059479672017-12-30T20:36:00.000+04:302017-12-30T20:38:57.485+04:30ಬಾಸ್ಮತಿ ಅಕ್ಕಿ: ನೋಡಲಿಕ್ಕೇನೋ ಮಲ್ಲಿಗೆ ಹೂವು, ಆದರೆ ಆರೋಗ್ಯಕ್ಕೆ?<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://kannada.boldsky.com/health/wellness/2017/is-basmati-rice-healthy-013785.html<br />
<br />
<br />
<br />
ಕೆಲವೇ ವರ್ಷಗಳ ಹಿಂದೆ ಬಾಸ್ಮತಿ ಅಕ್ಕಿ ಎಂದರೆ ಮಧ್ಯಮವರ್ಗದವರ ಕೈಗೆ ಎಟುಕದ ಹಾಗೂ ಅತಿ ಕಡಿಮೆ ಪ್ರಮಾಣದಲ್ಲಿ, ಅತಿ ದುಬಾರಿ ಬೆಲೆಗೆ ಲಭ್ಯವಾಗುತ್ತಿದ್ದ ಅಕ್ಕಿಯಾಗಿತ್ತು. ಶ್ರೀಮಂತರು ಮಾತ್ರ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲೇ ಈ ಅಕ್ಕಿಯಿಂದ ಮದುವೆ ಮೊದಲಾದ ಪ್ರಮುಖ ಸಮಾರಂಭಗಳಲ್ಲಿ ಅಡುಗೆ ಮಾಡಿಸಿ ಮೀಸೆ ತಿರುವಿಕೊಳ್ಳುತ್ತಿದ್ದರು. ಈ ಅಕ್ಕಿಯ ಗುಣವೇ ಹಾಗೆ. ಬೆಂದ ಬಳಿಕ ಉದ್ದುದ್ದನೆ, ಮಲ್ಲಿಗೆಯಂತೆ ಬೆಳ್ಳಗೆ ಹರಡಿ, ನಸು ಪರಿಮಳದಿಂದ ಊಟಮಾಡುವವರ ಹೊಟ್ಟೆಗಿಂತಲೂ ಮನವನ್ನು ತಣಿಸುತ್ತದೆ. ಬರೆಯ ಅನ್ನಕ್ಕಿಂತಲೂ ಇದರ ಪಲಾವ್ ಹಾಗೂ ವಿಶೇಷವಾಗಿ ಬಿರಿಯಾನಿ ಹಾಗೂ ಇತರ ಮಸಾಲೆಭರಿತ ಮಾಂಸಾಹಾರ ಹಾಗೂ ಸಸ್ಯಾಹಾರ ಅಡುಗೆಗಳಿಗೆ ಅತ್ಯುತ್ತಮವಾಗಿದೆ.<br />
<br />
ಆದರೆ ಈ ಅಕ್ಕಿ ನೋಡುವುದಕ್ಕೆ ಮಾತ್ರವೇ ಉತ್ತಮವೇ ಅಥವಾ ಆರೋಗ್ಯಕರವೂ ಹೌದೇ? ಈ ಅಕ್ಕಿಯನ್ನು ಕಡಿಮೆ ಪಾಲಿಶ್ ಮಾಡಿದ್ದರೆ ಇದರ ಬಣ್ಣ ಕಂದು ಬಣ್ಣಕ್ಕಿದ್ದು ಇದು ನಿಜವಾಗಿಯೂ ಆರೋಗ್ಯಕರ ಹೌದು. ಆದರೆ ಬಿಳಿ ಅಕ್ಕಿ? ಈ ಬಗ್ಗೆ ತಜ್ಞರನ್ನು ವಿಚಾರಿಸಿದರೆ, ಹೌದು, ಕಂದು ಅಕ್ಕಿಯಷ್ಟು ಪರಿಪೂರ್ಣವಲ್ಲದಿದ್ದರೂ ಕೊಂಚವೇ ಕಡಿಮೆಯಾಗಿ ಇದು ಆರೋಗ್ಯಕರವೇ ಹೌದು ಎಂದು ತಿಳಿಸುತ್ತಾರೆ. ಈ ಅಕ್ಕಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳೂ, ಕಡಿಮೆ ಪ್ರಮಾಣದ ಪ್ರೋಟೀನ್, ಅತಿ ಕಡಿಮೆ ಕೊಬ್ಬು , ಉತ್ತಮ ಪ್ರಮಾಣದ ವಿಟಮಿನ್, ಖನಿಜಗಳು ಮತ್ತು ಅಗತ್ಯ ಪ್ರಮಾಣದ ಕರಗುವ ನಾರು ಇದ್ದು ಆರೋಗ್ಯಕ್ಕೆ ಪೂರಕವಾಗಿದೆ. ಬನ್ನಿ ಈ ಅಕ್ಕಿಯ ಸೇವನೆಯಿಂದ ಲಭ್ಯವಾಗುವ ಪ್ರಯೋಜನಗಳನ್ನು ನೋಡೋಣ:<br />
<img alt="ಪ್ರಯೋಜನ #1" src="https://kannada.boldsky.com/img/2017/02/17-1487306711-1m.jpg" /><br />
<br />
<b>ಪ್ರಯೋಜನ #1</b><br />
ನಮ್ಮ ಆಹಾರದಲ್ಲಿ ಸಾಕಷ್ಟು ನಾರು ಇದ್ದರೆ ಕರುಳುಗಳ ಮೇಲೆ ಭಾರ ಬೀಳುವುದು ತಪ್ಪುತ್ತದೆ ಹಾಗೂ ತನ್ಮೂಲಕ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಬಾಸ್ಮತಿ ಅಕ್ಕಿಯಲ್ಲಿ ಇತರ ಅಕ್ಕಿಯಲ್ಲಿರುವುದಕ್ಕಿಂತ ಕೊಂಚ ಹೆಚ್ಚೇ ಕರಗುವ ನಾರು ಇರುತ್ತದೆ. ಕಂದು ಬಾಸ್ಮತಿಯಲ್ಲಿ ಇನ್ನೂ ಹೆಚ್ಚಿರುತ್ತದೆ. ಆದ್ದರಿಂದ ಲಭ್ಯವಿದ್ದರೆ ಕಂದು ಅಕ್ಕಿಯನ್ನೇ ಕೊಳ್ಳುವುದು ಉತ್ತಮ. ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಸುಮಾರು ಮೂವತ್ತು ಗ್ರಾಂ ಕರಗುವ ನಾರನ್ನು ಆಹಾರದ ಮೂಲಕ ಸೇವಿಸುವ ವ್ಯಕ್ತಿಗಳಲ್ಲಿ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇತರರಿಗಿಂತ 30% ಕಡಿಮೆ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.<br />
<img alt="ಪ್ರಯೋಜನ #2" src="https://kannada.boldsky.com/img/2017/02/17-1487306725-2m.jpg" /><br />
<b>ಪ್ರಯೋಜನ #2</b><br />
ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣವೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರನೇ ಏರುತ್ತದೆ. ಈ ಪ್ರಮಾಣವನ್ನು ಗೈಸೆಮಿಕ್ ಇಂಡೆಕ್ಸ್ ಎಂಬ ಕೋಷ್ಟಕದಲ್ಲಿ ಗಮನಿಸಬಹುದು. ಈ ಮಾಪಕ ಕಡಿಮೆ ಇದ್ದಷ್ಟೂ ರಕ್ತದಲ್ಲಿ ಸಕ್ಕರೆ ಸೇರುವ ಪ್ರಮಾಣ ನಿಧಾನವಾಗುತ್ತಾ ಹೋಗುತ್ತದೆ. ಬಾಸ್ಮತಿ ಅಕ್ಕಿಯಲ್ಲಿ ಅತಿ ಕಡಿಮೆ ಮಾಪನ ಇರುವ ಕಾರಣ ಈ ಅಕ್ಕಿಯನ್ನು ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದು. ಆದರೆ ಯಾವುದಕ್ಕೂ ನಿಮ್ಮ ವೈದ್ಯರ ಸಲಹೆ ಪಡೆದೇ ಸೇವಿಸುವುದು ಉತ್ತಮ.<br />
<img alt="ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದು" src="https://kannada.boldsky.com/img/2017/02/17-1487306914-shutterstock-352742672-600x450.jpg" /><br />
<b>ಪ್ರಯೋಜನ #3</b><br />
ಬಾಸ್ಮತಿ ಅಕ್ಕಿಯನ್ನು ಜೀರ್ಣೀಸಿಕೊಳ್ಳಲು ಇತರ ಅಕ್ಕಿಗಿಂತಲೂ ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಹೊತ್ತಿನ ಅಗತ್ಯವಿದೆ. ಇದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಅನ್ನಿಸುತ್ತದೆ ಹಾಗೂ ಹೆಚ್ಚು ಹೊತ್ತಿನ ಕಾಲ ಹಸಿವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಡುನಡವೆ ತಿನ್ನುತ್ತಾ ಇರುವ ಬಯಕೆಯನ್ನು ಹತ್ತಿಕ್ಕಲು ಸಾಮಾನ್ಯ ಅಕ್ಕಿಯ ಬದಲು ಬಾಸ್ಮತಿ ಬಳಸುವುದು ಉತ್ತಮ.<br />
<img alt="ಪ್ರಯೋಜನ #3" src="https://kannada.boldsky.com/img/2017/02/17-1487306738-3m.jpg" /><br />
<b>ಪ್ರಯೋಜನ #4</b><br />
ಇದರಲ್ಲಿ ಹೆಚ್ಚಿನ ಕರಗುವ ನಾರು ಇರುವ ಕಾರಣ ಮಲಬದ್ದತೆಯಾಗುವ ಸಾಧ್ಯತೆ ಅತಿ ಕಡಿಮೆ. ಹಾಗಾಗಿ ಮರುದಿನದ ನಿಸರ್ಗದ ಕರೆಯನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು.<br />
<img alt="ಪ್ರಯೋಜನ #4" src="https://kannada.boldsky.com/img/2017/02/17-1487306750-4m.jpg" /><br />
<b>ಪ್ರಯೋಜನ #5</b><br />
ಈ ಅಕ್ಕಿಯಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೇ ಕೊಬ್ಬು ಸಹಾ ಅತಿ ಕಡಿಮೆ ಇದೆ. ಅಲ್ಲದೇ ಗೋಧಿಯಂತೆ ಇದರಲ್ಲಿ ಗ್ಲುಟೆನ್ ಸಹಾ ಇಲ್ಲ. ಹಾಗಾಗಿ ಗ್ಲುಟೆನ್ ಒಲ್ಲದ ವ್ಯಕ್ತಿಗಳಿಗೂ, ತೂಕ ಕಡಿಮೆಮಾಡಿಕೊಳ್ಳಲು ಬಯಸುವ ವ್ಯಕ್ತಿಗಗಳಿಗೂ ಈ ಅಕ್ಕಿ ಉತ್ತಮವಾಗಿದೆ.<br />
<img alt="ಪ್ರಯೋಜನ #5" src="https://kannada.boldsky.com/img/2017/02/17-1487306763-5m.jpg" /><br />
<b>ಪ್ರಯೋಜನ #6</b><br />
ಇದರಲ್ಲಿರುವ ಥಯಾಮಿನ್ ಮತ್ತು ನಿಯಾಸಿನ್ ಎಂಬ ವಿಟಮಿನ್ನುಗಳು ಜೀರ್ಣಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ ಹಾಗೂ ನರವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಹಾಗೂ ಹೃದಯಕ್ಕೂ ಉತ್ತಮವಾಗಿದೆ. ಇದರಲ್ಲಿರುವ ಕಬ್ಬಿಣದ ಅಂಶ ರಕ್ತ ಹೀನತೆಯನ್ನು ಕಡಿಮೆಗೊಳಿಸುತ್ತದೆ.<br />
<img alt="ಪ್ರಯೋಜನ #6" src="https://kannada.boldsky.com/img/2017/02/17-1487306930-shutterstock-356947622-600x450.jpg" /><br />
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-44952373683931695512017-12-25T23:26:00.001+04:302017-12-25T23:28:33.730+04:30ಹಾಗಲಕಾಯಿಯ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/xKfuk2<br />
<br />
ಕಹಿ ಎಂಬ ಒಂದೇ ಕಾರಣದಿಂದ ನಮ್ಮಲ್ಲಿ ಹೆಚ್ಚಿನವರು ಹಾಗಲಕಾಯಿ ಎಂಬ ಅದ್ಭುತ ಆಹಾರವನ್ನು ಮನೆಗೇ ತರುವುದಿಲ್ಲ. ವಾಸ್ತವವಾಗಿ ನಿಯಮಿತವಾಗಿ ಹಾಗಲಕಾಯಿಯನ್ನು ಸೇವಿಸುತ್ತಾ ಬರುವ ಮೂಲಕ ರಕ್ತ ಪರಿಶುದ್ಧಗೊಳ್ಳುತ್ತದೆ ಹಾಗೂ ಈ ಮೂಲಕ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ವಿಶೇಷವಾಗಿ ಟೈಪ್ ೧ ಮಧುಮೇಹವನ್ನು ಸಮರ್ಥವಾಗಿ ನಿವಾರಿಸುವ ಹಾಗಲಕಾಯಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಮಲಬದ್ದತೆಯಿಂದಲೂ ಪರಿಹಾರ ಒದಗಿಸುತ್ತದೆ.<br />
<img alt="ಹಾಗಲಕಾಯಿಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?" src="https://kannada.boldsky.com/img/2017/08/22-1503376861-1m.jpg" /><br />
<br />
ಮದ್ಯಪಾನದ ಬಳಿಕ ಎದುರಾಗುವ ತಲೆತಿರುಗುವ ಸ್ಥಿತಿಯನ್ನು ಸರಿಪಡಿಸಲು ಹಾಗಲಕಾಯಿಯ ಜ್ಯೂಸ್ ಕುಡಿದರೆ ಸಾಕು. ಅಲ್ಲದೇ ಹಾಗಲಕಾಯಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ? ಹೌದು! ಇಂದಿಗೂ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬರಲಾಗಿದ್ದು ಈ ಅಭ್ಯಾಸದ ಆಹಾರ ಸೇವಿಸುವವರಲ್ಲಿ ರಕ್ತದ ಒತ್ತಡ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಂತುಲಿತವಾಗಿರುತ್ತದೆ. ಬನ್ನಿ, ಇಂದಿಗೂ ಮಧುಮೇಹಕ್ಕೆ ಔಷಧಿಯಾಗಿ ಹಾಗಲಕಾಯಿಯನ್ನು ಏಕೆ ಬಳಸುತ್ತಾರೆ ಎಂಬ ಕುತೂಹಲಕ್ಕೆ ಹಾಗಲಕಾಯಿಯ ಮಾಹಿತಿಗಳು ಉತ್ತರ ನೀಡಲಿವೆ:<br />
<br />
<br />
<b>ಹಾಗಲಕಾಯಿಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?</b><br />
ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಮ್ಮ ರಕ್ತದ ಒತ್ತಡಕ್ಕೆ alpha glucosidase ಎಂಬ ಕಿಣ್ವದ ಚಟುವಟಿಕೆ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ವಿಶೇಷವಾಗಿ ಊಟದ ಬಳಿಕ ರಕ್ತದಲ್ಲಿ ಥಟ್ಟನೇ ಏರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.<br />
<img alt="ಈ ಜ್ಯೂಸ್ನಲ್ಲಿ ಏನೇನಿದೆ?" src="https://kannada.boldsky.com/img/2017/08/22-1503376895-3m.jpg" /><br />
<b>ಇದಕ್ಕೆ ಹಾಗಲಕಾಯಿಯನ್ನು ಹೇಗೆ ಬಳಸಬೇಕು?</b><br />
ಒಂದು ಹಾಗಲಕಾಯಿಯ ಬೀಜ ನಿವಾರಿಸಿ ತಿರುಗಳನ್ನು ಮಿಕ್ಸಿಯಲ್ಲಿ ಕಡೆದು ಜ್ಯೂಸ್ ತಯಾರಿಸಿ. ಈ ಜ್ಯೂಸ್ ಅನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಇದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.<br />
<img alt="ಹಾಗಲಕಾಯಿ ಟೀ ಪ್ರಯತ್ನಿಸಿ" src="https://kannada.boldsky.com/img/2017/08/22-1503376938-6m.jpg" /><br />
<b>ಈ ಜ್ಯೂಸ್ ನಲ್ಲಿ ಏನೇನಿದೆ?</b><br />
ಹಾಗಲಕಾಯಿಯಲ್ಲಿ ಕೆಲವಾರು ಪೋಷಕಾಂಶಗಳಿವೆ. ಪ್ರಮುಖವಾಗಿ ಕ್ಯಾರಾಟಿನ್ ಮತ್ತು ಮೋಮೋರ್ಸಿಡಿನ್ ಎಂಬ ಪೋಷಕಾಂಶಗಳು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯನ್ನು ನಿಯಂತ್ರಿಸುವ ಗುಣ ಹೊಂದಿವೆ. ವಿಶೇಷವಾಗಿ ಮಧುಮೇಹಿಗಳ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ರಕ್ತದಲ್ಲಿ ಸೂಕ್ತ ಪ್ರಮಾಣದ ಸಕ್ಕರೆ ಇರುವಂತೆ ನೋಡಿಕೊಳ್ಳುತ್ತವೆ.<br />
<img alt="ಇದಕ್ಕೆ ಹಾಗಲಕಾಯಿಯನ್ನು ಹೇಗೆ ಬಳಸಬೇಕು?" src="https://kannada.boldsky.com/img/2017/08/22-1503376877-2m.jpg" /><br />
<br />
<b>ಹಾಗಲಕಾಯಿ ಟೀ ಪ್ರಯತ್ನಿಸಿ:</b><br />
ಕೆಲವು ಅಂಗಡಿಗಳಲ್ಲಿ ಒಣಗಿಸಿದ ಹಾಗಲಕಾಯಿ ಸಿಗುತ್ತದೆ. ಸಮಯ ಸಿಕ್ಕಿದರೆ ನೀವೂ ಒಣಗಿಸಿಕೊಳ್ಳಬಹುದು. ಒಣಗಿಸಿದ ಹಾಗಲಕಾಯಿಯ ತುಂಡೊಂದನ್ನು ಕುದಿಸಿ ಸೋಸಿ ತಯಾರಿಸಿದ ಟೀ ಅನ್ನು ದಿನಕ್ಕೆ ಎರಡು ಬಾರಿ ಕುಡಿಯುವ ಮೂಲಕವೂ ಉತ್ತಮ ಪರಿಣಾಮ ಪಡೆಯಬಹುದು.<br />
<img alt="ಇದರ ಬೀಜಗಳು ಯಾವ ಉಪಯೋಗಕ್ಕೆ ಬರುತ್ತವೆ?" src="https://kannada.boldsky.com/img/2017/08/22-1503376928-5m.jpg" /><br />
<br />
<b>ಇದರ ಬೀಜಗಳು ಯಾವ ಉಪಯೋಗಕ್ಕೆ ಬರುತ್ತವೆ?</b><br />
ಹಾಗಲಕಾಯಿಯಲ್ಲಿರುವ ಬೀಜಗಳಲ್ಲಿ ಪಾಲಿಪೆಪ್ಟೈಡ್ - ಪಿ ಎಂಬ ಪೋಷಕಾಂಶವಿದ್ದು ಇದು ಮಧುಮೇಹಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುವ ಇನ್ಸುಲಿನ್ ನಂತೆಯೇ ಕೆಲಸ ಮಾಡುತ್ತವೆ. ಇವು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಇಳಿಸಲು ನೆರವಾಗುತ್ತವೆ.<br />
<br />
<b>ಹಾಗಲಕಾಯಿಯ ಹೊಸರುಚಿಗಳನ್ನು ಪ್ರಯತ್ನಿಸಿ</b><br />
ಭಾರತೀಯ ಅಡುಗೆಗಳಲ್ಲಿ ನೂರಾರು ಬಗೆಯ ಖಾದ್ಯಗಳಿದ್ದು ಹೆಚ್ಚಿನವುಗಳಲ್ಲಿ ಕಹಿಯನ್ನು ಕಡಿಮೆ ಮಾಡಲು ಕೆಲವು ವಿಧಾನಗಳನ್ನು ಅನುಸರಿಸಲಾಗಿರುತ್ತದೆ. ಖಾರವನ್ನು ಹೆಚ್ಚಿಸಿ ಅಥವಾ ಉಪ್ಪುನೀರಿನಲ್ಲಿ ಮೊದಲು ಹಾಗಲಕಾಯಿಯನ್ನು ಬೇಯಿಸಿ ಹಿಂಡಿ ತೆಗೆದ ಬಳಿಕ ಅಡುಗೆ ಮಾಡಿ ಬಡಿಸಿದರೆ ಕಹಿ ಇರುವುದಿಲ್ಲ. ಯಾವುದೇ ಖಾದ್ಯವಾಗಲಿ, ವಾರಕ್ಕೆರಡು ಅಥವಾ ನಾಲ್ಕು ಬಾರಿ ಸೇವಿಸಿದರೆ ಸಾಕು.<br />
<img alt="ಹಾಗಲಕಾಯಿಯ ಹೊಸರುಚಿಗಳನ್ನು ಪ್ರಯತ್ನಿಸಿ" src="https://kannada.boldsky.com/img/2017/08/22-1503377070-20-1495261283-02-1420175232-shutterstock-103965653-600x450.jpg" /><br />
<b>ಇದರ ಕಹಿ ಇಷ್ಟವಾಗದಿದ್ದರೆ ಏನು ಮಾಡುವಿರಿ?</b><br />
ಹೆಚ್ಚಿನವರಿಗೆ ಇದರ ಕಹಿ ರುಚಿ ಇಷ್ಟವಾಗುವುದೇ ಇಲ್ಲ. ಇದು ನಿಮಗೆ ಔಷಧಿ, ಸೇವಿಸಲೇಬೇಕು ಎಂದು ಕಟ್ಟಪ್ಪಣೆ ಮಾಡಿದರೂ ಸೇವಿಸಲು ಮನಸ್ಸೇ ಬಾರದೇ ಇದ್ದರೆ ವೈದ್ಯರನ್ನು ಭೇಟಿಯಾಗಿ ಹಾಗಲಕಾಯಿಯ ಅಂಶ ಹೆಚ್ಚಿರುವ ಔಷಧಿಗಳನ್ನು ಸೇವಿಸಲು ಸಲಹೆ ಪಡೆದುಕೊಳ್ಳಿ. ನಿಮ್ಮ ದೇಹ ದಾರ್ಢ್ಯತೆ ಹಾಗೂ ಇತರ ಆರೋಗ್ಯ ಮಾಹಿತಿಯನ್ನು ಪರಿಶೀಲಿಸಿ ಸೂಕ್ತ ಪ್ರಮಾಣದಲ್ಲಿ ಹಾಗಲಕಾಯಿಯ ಅಂಶವಿರುವ ಮಾತ್ರೆಗಳನ್ನು ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಇದನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ.<br />
<img alt="ಇದರ ಕಹಿ ಇಷ್ಟವಾಗದಿದ್ದರೆ ಏನು ಮಾಡುವಿರಿ?" src="https://kannada.boldsky.com/img/2017/08/22-1503377089-20-1495261293-06-1441519058-b1.jpg" /><br />
<br />
<br />
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-7528033980618342852017-12-22T10:57:00.001+04:302017-12-22T10:57:14.942+04:30ಎಡಮಗ್ಗುಲಲ್ಲಿ ಮಲಗುವ ಆರೋಗ್ಯಕರ ಮಹತ್ವಗಳು<div dir="ltr" style="text-align: left;" trbidi="on">
<br />
ನಿಮ್ಮ ಆರೋಗ್ಯ ನಿಮ್ಮ ಮಲಗುವ ಭಂಗಿಯನ್ನೂ ಅನುಸರಿಸಿದೆ ಎಂದರೆ ಆಶ್ಚರ್ಯವಾಗಬಹುದು. ನಿಮ್ಮ ಮಲಗುವ ಭಂಗಿ ನಿಮ್ಮ ಆರೋಗ್ಯವನ್ನು ವೃದ್ದಿಸಬಹುದು ಅಥವಾ ಕೆಡಿಸಬಹುದು. ನಿಮಗೆ ಯಾವ ಭಂಗಿಯಲ್ಲಿ ಮಲಗಿದರೆ ಸುಖಕರ ಎನ್ನಿಸುತ್ತದೆಯೋ ಆ ಭಂಗಿಯಲ್ಲಿಯೇ ಮಲಗಲು ಮನಸ್ಸು ತುಡಿಯುವುದು ಸಹಜ. ಆದರೆ ಎಡಮಗ್ಗುಲಲ್ಲಿ ಮಲಗುವ ಮೂಲಕ ಅತಿ ಹೆಚ್ಚಿನ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಹಲವರು ಕಾಯಿಲೆಗಳು ಬರುವುದರಿಂದ ತಡೆಯಬಹುದು ಹಾಗೂ ಹೃದಯ, ಜೀರ್ಣಕ್ರಿಯೆ ಮೊದಲಾದವುಗಳ ಕ್ಷಮತೆ ಹೆಚ್ಚುತ್ತದೆ. ಬೇಗನೇ ಸುಸ್ತಾಗುವುದರಿಂದ ತಡೆಯುತ್ತದೆ, ಕರುಳುಗಳಲ್ಲಿ ಆಹಾರದ ಚಲನೆ ಸುಗಮವಾಗುತ್ತದೆ ಹಾಗೂ ಇನ್ನೂ ಕೆಲವಾರು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಪಡೆಯಲು ನಮಗೆ ಇದುವರೆಗೆ ಅಪರಿಚಿತವಾಗಿದ್ದ ಈ ಭಂಗಿಯಲ್ಲಿ ಮಲಗುವುದನ್ನು ರೂಢಿಸಿಕೊಳ್ಳಬೇಕು. ಪ್ರಾರಂಭದ ಕೆಲದಿನ ಕೊಂಚ ತ್ರಾಸ ಎನಿಸಬಹುದು, ಆದರೆ ದಿನಗಳೆದಂತೆ ಇದು ಅಭ್ಯಾಸವಾಗಿ ಆರೋಗ್ಯ ವೃದ್ದಿಸುತ್ತದೆ.<br />
<img alt="ಪ್ರಾಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತದೆ" src="https://kannada.boldsky.com/img/2017/12/21-1513831739-10-1439186746-shutterstock-295103618.jpg" /><br />
ಈ ಲೇಖನವನ್ನು ಓದಿದ ಬಳಿಕ ಎಡಮಗ್ಗುಲಲ್ಲಿ ಮಲಗಿಕೊಳ್ಳುವ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಇಂದಿನಿಂದಲೇ ಈ ಬಗ್ಗೆ ಮನಸ್ಸು ಮಾಡುವುದು ಖಂಡಿತಾ. ತದ್ವಿರುದ್ದವಾಗಿ ಬಲಮಗ್ಗುಲಲ್ಲಿ ಮಲಗಿಕೊಂಡರೆ ಇದು ವ್ಯತಿರಿಕ್ತವಾದ ಪರಿಣಾಮವನ್ನೇ ನೀಡುತ್ತದೆ. ಮುಖ್ಯವಾದ ತೊಂದರೆ ಎಂದರೆ ಪ್ರಾತಃವಿಧಿಯ ಮೂಲಕ ಹೊರಹೋಗಬೇಕಾಗಿದ್ದ ಕಲ್ಮಶ ಹೊರಹೋಗದೇ ದೇಹದಲ್ಲಿಯೇ ಉಳಿದುಕೊಳ್ಳುತ್ತದೆ ಅಥವಾ ಪೂರ್ಣಪ್ರಮಾಣದಲ್ಲಿ ವಿಸರ್ಜನೆಯಾಗುವುದಿಲ್ಲ. ಹೃದಯದ ಮೇಲಿನ ಒತ್ತಡವೂ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆಯನ್ನೂ ಕಷ್ಟವಾಗಿಸುತ್ತದೆ. ಬೆನ್ನಿನ ಮೇಲೆ ಮಲಗುವ ಮೂಲಕ ಉಸಿರಾಟ ಕಷ್ಟಕರವಾಗುತ್ತದೆ ಹಾಗೂ ವಿಶೇಷವಾಗಿ ತಡೆತಡೆದು ನಿದ್ದೆ ಆವರಿಸುವ ತೊಂದರೆ ಇರುವವರಿಗೆ ಹಾಗೂ ಅಸ್ತಮಾ ರೋಗಿಗಳಿಗೆ ಇದು ಹೆಚ್ಚು ಕಷ್ಟಕರವಾಗುತ್ತದೆ. ಆದ್ದರಿಂದ ಆರೋಗ್ಯ ವೃದ್ದಿಸಬೇಕೆಂದರೆ ಎಡಮಗ್ಗುಲಲ್ಲಿಯೇ ಮಲಗುವುದು ಉತ್ತಮ ಹಾಗೂ ಇದುವರೆಗೆ ಈ ಅಭ್ಯಾಸವಿಲ್ಲದಿದ್ದರೆ ಈಗಲಾದರೂ ರೂಢಿಸಿಕೊಳ್ಳಲು ಪ್ರಾರಂಭಿಸುವುದು ಸೂಕ್ತ. ಬನ್ನಿ ಹೀಗೆ ಮಲಗುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಅರಿಯೋಣ:<br />
<br />
<b>ಪ್ರಾಣಾಂತಿಕ ಖಾಯಿಲೆಗಳಿಂದ ರಕ್ಷಿಸುತ್ತದೆ:</b><br />
<img alt="ಯಕೃತ್ ಹಾಗೂ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ" src="https://kannada.boldsky.com/img/2017/12/21-1513831614-2m.jpg" /><br />
ಎಡಮಗ್ಗುಲಲ್ಲಿ ಮಲಗುವ ಮೂಲಕ ದುಗ್ಧರಸಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಿ ದೇಹದಿಂದ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲು ನೆರವಾಗುತ್ತವೆ. ಕಲ್ಮಶಗಳು ಒಳಗೇ ಉಳಿದುಕೊಂಡರೆ ಇದರ ವಿಷಕಾರಿ ಅಂಶಗಳು ಹಲವಾರು ಬಗೆಯಲ್ಲಿ ಆರೋಗ್ಯವನ್ನು ಕೆಡಿಸಬಹುದು ಹಾಗೂ ಸತತವಾದ ಅಭ್ಯಾಸದಿಂದ ಕಾಯಿಲೆ ಉಲ್ಬಣಗೊಂಡು ಪ್ರಾಣಾಂತಿಕ ಮಟ್ಟಕ್ಕೇರಬಹುದು. ಎಡಮಗ್ಗುಲಲ್ಲಿ ಮಲಗುವ ಮೂಲಕ ದುಗ್ಧರಸಗಳು ಪೂರ್ಣಪ್ರಮಾಣದಲ್ಲಿ ಸ್ರವಿಸುತ್ತವೆ ಹಾಗೂ ಇಡಿಯ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದಕ್ಕೆ ಕಾರಣ ನಮ್ಮ ದುಗ್ದರಸ ಪ್ರಸಾರಣಾ ವ್ಯವಸ್ಥೆ ಎಡಭಾಗದಲ್ಲಿ ಹೆಚ್ಚು ಪ್ರಬಲವಾಗಿರುವುದು. ಬಲಭಾಗದ ವ್ಯವಸ್ಥೆ ಕೊಂಚ ನಿಧಾನ ಹಾಗೂ ಬಲಮಗ್ಗುಲಲ್ಲಿ ಮಲಗುವ ಮೂಲಕ ಈ ವ್ಯವಸ್ಥೆ ಹೆಚ್ಚು ಒತ್ತಡಕ್ಕೆ ಒಳಗಾಗುವ ಮೂಲಕ ನಿದ್ದೆಯ ಸಮಯದಲ್ಲಿ ನಡೆಯಬೇಕಾಗಿದ್ದ ಕಲ್ಮಶ ನಿವಾರಣೆ ಪರಿಪೂರ್ಣವಾಗದೇ ಹೋಗುತ್ತದೆ.<br />
<br />
<b>ಯಕೃತ್ ಹಾಗೂ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.</b><br />
<img alt="ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ" src="https://kannada.boldsky.com/img/2017/12/21-1513831624-3m.jpg" /><br />
ಈ ಅಂಗಗಳು ನಮ್ಮ ದೇಹದ ಶೋಧನಾ ಕಾರ್ಯವನ್ನು ನಡೆಸುವ ಪ್ರಮುಖ ಅಂಗಗಳಾಗಿದ್ದು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಅನೈಚ್ಛಿಕವಾಗಿ ಹೆಚ್ಚಿನ ಕಾರ್ಯವನ್ನು ನಡೆಸುತ್ತವೆ. ಎಡಮಗ್ಗುಲಲ್ಲಿ ಮಲಗುಅವ್ ಮೂಲಕ ಈ ಅಂಗಗಳು ತಮ್ಮ ಶೋಧನಾ ಕಾರ್ಯವನ್ನು ಪೂರ್ಣಕ್ಷಮತೆಯಿಂದ ನಡೆಸಲು ಸಾಧ್ಯವಾಗುತ್ತದೆ ಹಾಗೂ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲು ಸಾಧ್ಯವಾಗುತ್ತದೆ.<br />
<br />
<b>ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ</b><br />
<img alt="ಜೀರ್ಣಗೊಂಡ ಆಹಾರದ ಚಲನೆ ಸುಲಭವಾಗುತ್ತದೆ" src="https://kannada.boldsky.com/img/2017/12/21-1513831633-4m.jpg" /><br />
ಎಡಮಗ್ಗುಲಲ್ಲಿ ಮಲಗುವ ಮೂಲಕ ಜಠರ ಹಾಗೂ ಮೇದೋಜೀರಕ ಗ್ರಂಥಿಗಳು ಯಾವುದೇ ಭಾರವಿಲ್ಲದೇ ನೈಸರ್ಗಿಕವಾಗಿ ತಮ್ಮ ಸ್ವಸ್ಥಾನದಲ್ಲಿ ಜೋತುಬೀಳಲು ನೆರವಾಗುತ್ತದೆ. ಇದರಿಂದ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೇದೋಜೀರಕ ಗ್ರಂಥಿಯಿಂದ ಸ್ರವಿಸಿದ ಜೀರ್ಣರಸಗಳು ಅಗತ್ಯವಿದ್ದಾಗ ಪೂರ್ಣಪ್ರಮಾಣದಲ್ಲಿ ಸ್ರವಿಸಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಪರಿಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ಜೀರ್ಣಗೊಂಡ ಆಹಾರ ಜಠರದಿಂದ ಗುರುತ್ವದ ನೆರವಿನಿಂದ ಸುಲಭವಾಗಿ ಸಣ್ಣಕರುಳಿಗೆ ವರ್ಗಾವಣೆಯಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳದೇ ಜೀರ್ಣಕ್ರಿಯೆ ಸುಲಭಗೊಳ್ಳಲು ಸಾಧ್ಯವಾಗುತ್ತದೆ.<br />
<br />
<b>ಜೀರ್ಣಗೊಂಡ ಆಹಾರದ ಚಲನೆ ಸುಲಭವಾಗುತ್ತದೆ.</b><br />
<br />
ಎಡಮಗ್ಗುಲಲ್ಲಿ ಮಲಗಿದ್ದಾಗ ನಮ್ಮ ಜಠರ ಹಾಗೂ ಕರುಳುಗಳು ಕೆಳಮುಖವಾಗಿರುವ ಕಾರಣ ಜೀರ್ಣಗೊಂಡ ಆಹಾರ ಈ ಅಂಗಗಳ ಮೂಲಕ ಹಾದುಹೋಗಲು ಗುರುತ್ವದ ನೆರವು ಪಡೆದು ಸುಲಭವಾಗಿ ಸಾಗುತ್ತವೆ. ಅಲ್ಲದೇ ಜೀರ್ಣಕ್ರಿಯೆ ಸುಲಭವಾದ ಕಾರಣ ದೊಡ್ಡಕರುಳಿನಿಂದ ರಾತ್ರಿ ಹೊತ್ತು ನೀರನ್ನು ಸೆಳೆದು ಕಲ್ಮಶವನ್ನು ಮರುದಿನ ಬೆಳಿಗ್ಗೆ ಮಲವಿಸರ್ಜನೆ ಸುಲಭವಾಗಿ ಹಾಗೂ ಪೂರ್ಣಪ್ರಮಾಣದ ಕಲ್ಮಶ ಹೊರಹೋಗಲು ಸಾಧ್ಯವಾಗುತ್ತದೆ.<br />
<br />
<b>ಹೃದಯದ ಕ್ಷಮತೆ ಹೆಚ್ಚುತ್ತದೆ</b><br />
<img alt="ಹೃದಯದ ಕ್ಷಮತೆ ಹೆಚ್ಚುತ್ತದೆ" src="https://kannada.boldsky.com/img/2017/12/21-1513831661-7m.jpg" /><br />
ಎಡಮಗ್ಗುಲಲ್ಲಿ ಮಲಗುವ ಮೂಲಕ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹೇಗೆಂದರೆ ಹೀಗೆ ಮಲಗುವ ಮೂಲಕ ರಕ್ತನಾಳಗಳಲ್ಲಿ ಗುರುತ್ವದ ಸಹಾಯದಿಂದ ರಕ್ತವನ್ನು ದೂಡಿಕೊಡಲು ಹೃದಯಕ್ಕೆ ಕೊಂಚವೇ ಒತ್ತಡದಿಂದ ದೂಡಿಕೊಟ್ಟರೆ ಸಾಕಾಗುತ್ತದೆ. ಅಲ್ಲದೇ ಹೃದಯಕ್ಕೆ ಆಗಮಿಸುವ ರಕ್ತವನ್ನು ಸಾಗಿಸುವ ನರ (inferior vena cava) ದ ಮೂಲಕ ಕಡಿಮೆ ರಕ್ತ ಆಗಮಿಸುವ ಮೂಲಕವೂ ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗದೇ ಇದರ ಕ್ಷಮತೆಯೂ ಹೆಚ್ಚುತ್ತದೆ. <br />
<br />
<b>ಆಮ್ಲೀಯತೆ ಹಾಗೂ ಎದೆಯುರಿಯಿಂದ ರಕ್ಷಿಸುತ್ತದೆ</b><br />
<img alt="ಆಮ್ಲೀಯತೆ ಹಾಗೂ ಎದೆಯುರಿಯಿಂದ ರಕ್ಷಿಸುತ್ತದೆ" src="https://kannada.boldsky.com/img/2017/12/21-1513831687-10m.jpg" /><br />
ಎಡಮಗ್ಗುಲಲ್ಲಿ ಮಲಗುವ ಮೂಲಕ ಜೀರ್ಣರಸಗಳಿಗೆ ಹಿಮ್ಮುಖವಾಗಿ ಸಾಗಲು ಅವಕಾಶವೇ ದೊರಕದಂತಾಗುತ್ತದೆ. ಇದರಿಂದ ಅನ್ನನಾಳದ ಒಳಗಿನಿಂದ ಜೀರ್ಣಗೊಂಡ ಆಹಾರ ಹಿಂದೆ ಬಂದು ಎದುರಾಗುವ ಹುಳಿತೇಗು, ಆಮ್ಲೀಯತೆ, ಎದೆಯುರಿ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.<br />
<br />
<b>ಮುಂಜಾನೆಯ ಸುಸ್ತಿನಿಂದ ರಕ್ಷಿಸುತ್ತದೆ</b><br />
<img alt="ಕೊಬ್ಬಿನ ಬಳಕೆ ಹಾಗೂ ಯಕೃತ್ ನ ಕೊಬ್ಬಿನಿಂದ ರಕ್ಷಣೆ" src="https://kannada.boldsky.com/img/2017/12/21-1513831716-13m.jpg" /><br />
ಎಡಮಗ್ಗುಲಲ್ಲಿ ಮಲಗುವ ಮೂಲಕ ಯಕೃತ್ ಹಾಗೂ ಪಿತ್ತಕೋಶಗಳು ತಮ್ಮ ಸ್ಥಾನದಲ್ಲಿ ಯಾವುದೇ ಭಾರವಿಲ್ಲದೇ ಜೋತುಬೀಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಪಿತ್ತರಸ ಸ್ರವಿಸುತ್ತದೆ ಹಾಗೂ ಯಾವುದೇ ಬಗೆಯಲ್ಲಿ ಈ ರಸ ವ್ಯರ್ಥವಾಗುವುದಿಲ್ಲ. ಇದರಿಂದ ಆಹಾರ ಸುಲಭವಾಗಿ ಹಾಗೂ ಪೂರ್ಣಪಮಾಣದಲ್ಲಿ ಜೀರ್ಣಗೊಳ್ಳುತ್ತದೆ. ಪರಿಣಾಮವಾಗಿ ಮುಂಜಾನೆ ಎದುರಾಗುವ ಸುಸ್ತಿನಿಂದ ಕಾಪಾಡುತ್ತದೆ.<br />
<br />
<b>ಕೊಬ್ಬಿನ ಬಳಕೆ ಹಾಗೂ ಯಕೃತ್ ನ ಕೊಬ್ಬಿನಿಂದ ರಕ್ಷಣೆ</b><br />
<b><br /></b>
ಅಹಾರದ ಮೂಲಕ ಲಭಿಸುವ ಕೊಬ್ಬನ್ನು ಕರಗಿಸಲು ಪಿತ್ತಕೋಶ ಹಾಗೂ ಯಕೃತ್ ನಿಂದ ಸ್ರವಿಸಿದ ರಸಗಳು ಅವಶ್ಯವಾಗಿದೆ. ಈ ಕ್ರಿಯೆಗೆ emulsification ಎಂದು ಕರೆಯುತ್ತಾರೆ. ಎಡಮಗ್ಗುವಲ್ಲಿ ಮಲಗುವ ಮೂಲಕ ಪಿತ್ತಕೋಶದ ರಸ ಗರಿಷ್ಟ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಸ್ರವಿಸುವುದರಿಂದ ಕೊಬ್ಬಿನ ಕಣಗಳು ಸಹಾ ಗರಿಷ್ಟ ಪ್ರಮಾಣದಲ್ಲಿ ಚಿಕ್ಕ ಚಿಕ್ಕ ಕಣಗಳಾಗಿ ಒಡೆಯುತ್ತವೆ. ಪರಿಣಾಮವಾಗಿ ಒಡೆಯದೇ ಹೋದ ಕೊಬ್ಬು ಯಕೃತ್ ನಲ್ಲಿ ಸಂಗ್ರಹವಾಗುವುದರಿಂದ ರಕ್ಷಣೆ ಒದಗುತ್ತದೆ.<br />
<div class="para_head" style="background-color: white; font-family: "Lohit Kannada", Tunga, Arial; font-size: 16px; margin: 0px; padding: 0px; text-align: justify;">
<h2 style="color: #333333; font-family: "Trebuchet MS"; font-size: 21px; line-height: 20px; margin: 0px; padding: 5px 0px 0px;">
ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ</h2>
<div>
<img alt="ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ " src="https://kannada.boldsky.com/img/2017/12/21-1513831642-5m.jpg" /></div>
</div>
<div style="background-color: white; font-family: "Lohit Kannada", Tunga, Arial; font-size: 16px; padding: 16px 0px 0px; text-align: justify;">
ಎಡಮಗ್ಗಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೇ ಸಣ್ಣಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ. ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ, ಕಡಿಮೆ ಒತ್ತಡದಲ್ಲಿ ವಿಸರ್ಜನೆಗೊಳ್ಳಲು ಸಹಕಾರಿಯಾಗಿದೆ.</div>
<div>
<br /></div>
</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-450321684800048172017-12-20T20:11:00.004+04:302017-12-20T20:11:33.728+04:30ಪ್ರೋಟೀನು ಬೇಕೆಂದಿದ್ದರೆ ಮೊಟ್ಟೆಯೇ ಆಗಬೇಕೆಂದೇನಿಲ್ಲ-ಈ ಹನ್ನೊಂದು ಆಹಾರಗಳಲ್ಲಿ ಇನ್ನೂ ಹೆಚ್ಚಿದೆ<div dir="ltr" style="text-align: left;" trbidi="on">
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ<br />
ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/MUwC4C<br />
<br />
<br />
ಸಾಮಾನ್ಯವಾಗಿ ದೃಢಕಾಯರು ತಮ್ಮ ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆ ಹಾಗೂ ಮಾಂಸಾಹಾರವನ್ನು ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಮೊಟ್ಟೆಯಲ್ಲಿರುವ ಪ್ರೋಟೀನು ಇದಕ್ಕೆ ಪ್ರಮುಖ ಕಾರಣ. ಒಂದು ಮೊಟ್ಟೆಯಲ್ಲಿ ಸುಮಾರು ಆರು ಗ್ರಾಂ ಪ್ರೋಟೀನು ಇರುತ್ತದೆ ಹಾಗೂ ಉತ್ತಮ ಪ್ರಮಾಣದ ವಿವಿಧ ವಿಟಮಿನ್ನುಗಳು, ಖನಿಜಗಳು ಹಾಗೂ ಅವಶ್ಯಕ ಸಂಯುಕ್ತಗಳೂ ಇವೆ. ಈ ಎಲ್ಲಾ ಗುಣಗಳಿಂದಾಗಿಯೇ ಮೊಟ್ಟೆ ಒಂದು ಪರಿಪೂರ್ಣ ಆಹಾರವಾಗಿದೆ. ಒಂದು ವೇಳೆ ಸಸ್ಯಾಹಾರಿಗಳು ಸ್ನಾಯುಗಳನ್ನು ಹುರಿಗಟ್ಟಿಸಬೇಕೆಂದು ಇಚ್ಛಿಸಿದರೆ? ಮೊಟ್ಟೆ ಹಾಗೂ ಮಾಂಸಾಹಾರದ ಸೇವನೆಯ ಹೊರತಾಗಿ ಇದು ಸಾಧ್ಯವಾಗಬಲ್ಲುದೇ ಎಂಬ ಸಂಶಯ ಮೂಡುವುದು ಸಹಜ. ಆದರೆ ನಿಸರ್ಗ ಇವರಿಗೂ ಕೆಲವು ಆಹಾರಗಳ ಮೂಲಕ ಮೊಟ್ಟೆಯಿಂತಲೂ ಹೆಚ್ಚಿನ ಪ್ರೋಟೀನುಗಳನ್ನು ಒದಗಿಸುವ ಮೂಲಕ ಸ್ನಾಯುಗಳನ್ನು ಹುರಿಗಟ್ಟಿಸಲು ಸಮಾನವಾದ ಅವಕಾಶ ನೀಡಿದೆ. ಬನ್ನಿ, ಇವು ಯಾವುವು ಎಂದು ನೋಡೋಣ:<br />
<br />
#1 ಹೆಸರು ಕಾಳು:<br />
<img alt="ಹೆಸರು ಕಾಳು" src="https://kannada.boldsky.com/img/2017/12/20-1513764360-1m.jpg" /><br />
ಹಚ್ಚ ಹಸುರಿನ, ಪುಟ್ಟ ಹೆಸರು ಕಾಳಿನ ಕವಚವನ್ನು ತೆಗೆದಾಗ ಇದು ಹೆಸರು ಬೇಳೆಯಾಗುತ್ತದೆ. ಆದರೆ ಈ ಹೆಸರು ಕಾಳನ್ನು ನೆನೆಸಿಟ್ಟು ಪುಟ್ಟ ಮೊಳಕೆಯೊಡೆದ ಬಳಿಕ ಇದರ ಪೋಷಕಾಂಶಗಳು ಅದ್ಭುತವಾಗಿ ವೃದ್ದಿಸುತ್ತವೆ. ಈ ಕಾಳುಗಳನ್ನು ಬೇಯಿಸಿದ ಖಾದ್ಯಗಳು ಎಲ್ಲವೂ ಇಷ್ಟಪಡುವ ಪರಿಮಳ ಹಾಗೂ ರುಚಿಯನ್ನು ಹೊಂದಿರುತ್ತವೆ. ಹೆಸರು ಕಾಳಿನಲ್ಲಿ ಪೊಟ್ಯಾಶಿಯಂ, ಕಬ್ಬಿಣ, ವಿಟಮಿನ್ ಸಿ, ಕರಗುವ ಮೊದಲಾದ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ನೂರು ಗ್ರಾಂ ಒಣಗಿಸಿದ ಹೆಸರು ಕಾಳನ್ನು ಬೇಯಿಸಿ ಅಡುಗೆ ಮಾಡಿದಾಗ ಮೂರು ಗ್ರಾಂ ಪ್ರೋಟೀನ್ ಲಭ್ಯವಾದರೆ, ಇದೇ ಪ್ರಮಾಣದ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದಾಗ ಏಳು ಗ್ರಾಂ ಪ್ರೋಟೀನು ಸಿಗುತ್ತದೆ. ಆ ಪ್ರಕಾರ ಕೇವಲ ನೂರು ಗ್ರಾಂ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ಮೊಟ್ಟೆಗಿಂತಲೂ ಹೆಚ್ಚಿನ ಪ್ರೋಟೀನನ್ನು ಪಡೆಯಬಹುದು.<br />
<br />
<br />
#2 ಕಡಲೆ ಕಾಳು<br />
<img alt="ಕಡಲೆ ಕಾಳು" src="https://kannada.boldsky.com/img/2017/12/20-1513764369-2m.jpg" /><br />
ಕಡಲೆ ಕಾಳಿನಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನು ಇದ್ದು ರುಚಿಕರವೂ ಆಗಿದೆ. ಅಲ್ಲದೇ ಇದರಲ್ಲಿರುವ ಕೆಲವು ಪೋಷಕಾಂಶಗಳಿಗೆ ಹಸಿವನ್ನು ನಿಗ್ರಹಿಸುವ cholecystokinin (ಖೊಲೆಸಿಸ್ಟೋಕೈನಿನ್) ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ಪ್ರಚೋದಿಸುವ ಗುಣವಿದೆ. ಅಲ್ಲದೇ ಸಕ್ಕರೆಯ ಸೇವನೆಯಿಂದ ಜಠರ ಹಾಗೂ ಕರುಳುಗಳ ಒಳಭಾಗದಲ್ಲಿ ಉಂಟಾಗುವ ಉರಿಯೂತವನ್ನೂ ಕಡಿಮೆ ಮಾಡುತ್ತದೆ.<br />
<br />
#3ಅಗಸೆ ಬೀಜ (Hemp Seeds):<br />
<img alt="ಅಗಸೆ ಬೀಜ (Hemp Seeds)" src="https://kannada.boldsky.com/img/2017/12/20-1513764378-3m.jpg" /><br />
ಇವುಗಳ ಹೃದಯಾಕಾರದಿಂದಾಗಿ ಹೆಂಪ್ ಹಾರ್ಟ್ಸ್ ಎಂಬ ಅನ್ವರ್ಥನಾಮವನ್ನೂ ಪಡೆದಿರುವ ಈ ಕಾಳುಗಳಲ್ಲಿ ಅದ್ಭುತ ಪ್ರಮಾಣದ ಪ್ರೋಟೀನ್ ಇದೆ. ಕೇವಲ ಎರಡು ದೊಡ್ಡ ಚಮಚದಲ್ಲಿ 6.3 ಗ್ರಾಂ ಪ್ರೋಟೀನ್ ಇದೆ. ಅಲ್ಲದೇ ಹೃದಯದ ಆರೋಗ್ಯ ಹೆಚ್ಚಿಸುವ ಆಲ್ಫಾ ಲಿನೋಲಿಕ್ ಆಮ್ಲ ಹಾಗೂ ಒಮೆಗಾ ೩ ಕೊಬ್ಬಿನ ಆಮ್ಲಗಳೂ ಇವೆ.<br />
<br />
#4 ಹಸಿ ಸೋಯಾ ಅವರೆ ಕಾಳು (Edamame Beans)<br />
<img alt="ಹಸಿ ಸೋಯಾ ಅವರೆ ಕಾಳು (Edamame Beans)" src="https://kannada.boldsky.com/img/2017/12/20-1513764388-4m.jpg" /><br />
ಸೋಬಾ ಅವರೆ ಇನ್ನೂ ಎಳೆಯದಾಗಿದ್ದಾಗ ಇವುಗಳ ಕವಚದಿಂದ ಬೇರ್ಪಡಿಸಿದ ಕಾಳುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. Edamame ಎಂಬುದು ಜಾಪಾನೀಯರ ಸಾಂಪ್ರಾದಾಯಿಕವಾದ ಸೋಯಾ ಅವರೆಯನ್ನು ಉಪ್ಪಿನೊಂದಿಗೆ ಕುದಿಸಿದ ಖಾದ್ಯದ ಹೆಸರೂ ಆಗಿದೆ. ಈ ಕಾಳುಗಳಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅಮೈನೋ ಆಮ್ಲಗಳು ಹಾಗೂ ವಿಶೇಷವಾಗಿ ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾದ ಸಂಕುಲ ಅಮೈನೋ ಆಮ್ಲಗಳೂ ಹೆಚ್ಚಿನ ಪ್ರಮಾಣದಲ್ಲಿವೆ.<br />
<br />
#5 ಚೆಡ್ಡಾರ್ ಗಿಣ್ಣು (Cheddar Cheese)<br />
<img alt="ಚೆಡ್ಡಾರ್ ಗಿಣ್ಣು (Cheddar Cheese)" src="https://kannada.boldsky.com/img/2017/12/20-1513764397-5m.jpg" /><br />
ಈ ಗಿಣ್ಣಿನ ರುಚಿಯನ್ನು ಯಾರಿಗೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅದರಲ್ಲೂ ಮಕ್ಕಳ ತಿನಿಸುಗಳಾದ ಚೀಟೋಸ್ ಮೊದಲಾದವುಗಳಲ್ಲಿ ಈ ಗಿಣ್ಣಿನ ಅಂಶವನ್ನು ರುಚಿಗಾಗಿ ಬೆರೆಸಿರುತ್ತಾರೆ. ನೀವು ಅರಿತಿರುವಂತೆ ಎಲ್ಲಾ ಗಿಣ್ಣುಗಳಲ್ಲಿ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಆದರೆ ಈ ಗಿಣ್ಣಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರೋಟೀನುಗಳಿವೆ. ಜೊತೆಗೇ ಅವಶ್ಯಕ ಕೊಬ್ಬು, ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಸಹಾ ಇವೆ.<br />
<br />
<br />
#6 ಕಪ್ಪು ಹುರಳಿ (Black beans)<br />
<img alt="ಕಪ್ಪು ಹುರಳಿ (Black beans)" src="https://kannada.boldsky.com/img/2017/12/20-1513764407-6m.jpg" /><br />
ಮೆಕ್ಸಿಕನ್ ಆಹಾರವನ್ನು ಇಷ್ಟಪಡುವವರಿಗೆ ಕಪ್ಪು ಹುರುಳಿ ಅಪರಿಚಿತವಲ್ಲ. ಈ ಆಹಾರಗಳಲ್ಲಿ ಕೊಂಚ ಕುರುಕು ಇರುವಂತೆ ಕಪ್ಪು ಹುರುಳಿಯನ್ನು ಬೇಯಿಸಲಾಗಿರುತ್ತದೆ. ವಿಶೇಷವಾಗಿ ಟಾಕೋ ಹಾಗೂ ಬುರಿಟೋ ಬೌಲ್ ಗಳಲ್ಲಿ ಈ ಹುರುಳಿ ಯಥೇಚ್ಛವಾಗಿರುತ್ತದೆ. ಈ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ (ಅರ್ಧ ಕಪ್ ಹುರುಳಿಯಲ್ಲಿ 7.3ಗ್ರಾಂ!) ಜೊತೆಗೇ ಇದರಲ್ಲಿ ಹೃದಯಕ್ಕೆ ನೆರವಾಗುವ ಕೊಬ್ಬು ಹಾಗೂ ಮೆದುಳಿಗೆ ನೆರವಾಗುವ ಆಂಥೋಸೈಯಾನಿನ್ ಸಹಾ ಇದೆ. ಇದರ ಸೇವನೆಯಿಂದ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ.<br />
<br />
#7 ರಾಜ್ಮಾ (Red Kidney Beans)<br />
<img alt="ರಾಜ್ಮಾ (Red Kidney Beans)" src="https://kannada.boldsky.com/img/2017/12/20-1513764416-7m.jpg" /><br />
ಕೆಂಪು ಹುರುಳಿ ಅಥವಾ ರಾಜ್ಮಾ ಎಂದು ಭಾರತದಲ್ಲಿ ಜನಪ್ರಿಯವಾದ ಈ ಅವರೆ ಕಾಳು ಸಹಾ ಪ್ರೋಟೀನ್ ಭರಿತವಾಗಿದ್ದು ಹೆಚ್ಚಿನ ಪ್ರಮಾಣದ ಕರಗುವ ನಾರು ಸಹಾ ಇದೆ. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಮಧುಮೇಹಿಗಳಿಗೂ ಸೂಕ್ತವಾದ ಆಹಾರವಾಗಿದೆ.<br />
<br />
#8 ಪೀನಟ್ ಬಟರ್<br />
<img alt="ಪೀನಟ್ ಬಟರ್" src="https://kannada.boldsky.com/img/2017/12/20-1513764425-8m.jpg" /><br />
ಇದರಲ್ಲಿ ಮೆದುಳಿಗೆ ಅಗತ್ಯವಾದ ಕೊಬ್ಬುಗಳು ಹೇರಳವಾಗಿದೆ ಹಾಗೂ ಶೇಂಗಾಬೀಜಗಳಲ್ಲಿರುವ ಪ್ರೋಟೀನ್ ಸಹಾ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣದಿಂದ ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ. ಎರಡು ದೊಡ್ಡಚಮಚದಷ್ಟು ಪ್ರಮಾಣದಲ್ಲಿ 8ಗ್ರಾಂ ಪ್ರೋಟೀನ್ ಇದೆ.<br />
<br />
#9 ಚಿಯಾ ಬೀಜಗಳು: (Chia Seeds)<br />
<img alt="ಚಿಯಾ ಬೀಜಗಳು:(Chia Seeds)" src="https://kannada.boldsky.com/img/2017/12/20-1513764434-9m.jpg" /><br />
ದಕ್ಷಿಣ ಅಮೇರಿಕಾದ ಫಲವತ್ತಾದ ಭೂಮಿಯಲ್ಲಿ ಬೆಳೆದ ಈ ಬೀಜಗಳು ಆರೋಗ್ಯದ ಕಾಳಜಿ ಇರುವ ಯಾರಿಗೂ ಅಗತ್ಯವಾದ ಆಹಾರವಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೋಟೀನ್ ಹಾಗೂ ವಿಶೇಷವಾಗಿ ರಾತ್ರಿ ನೆನೆಸಿಟ್ಟರೆ ಬೆಳಗಾಗುವಷ್ಟರಲ್ಲಿ ಮೂಲಗಾತ್ರಕ್ಕೂ ಹತ್ತು ಪಟ್ಟು ದೊಡ್ಡದಾಗುವ ಮೂಲಕ ಪೋಷಕಾಂಶಗಳನ್ನೂ ಹೆಚ್ಚಿಸಿಕೊಳ್ಳುವುದು ಈ ಕಾಳುಗಳನ್ನು ಆಯ್ದುಕೊಳ್ಳಲು ಸಸ್ಯಾಹಾರಿಗಳಿಗೆ ನೆರವಾಗುತ್ತದೆ.<br />
<br />
<br />
#10 ಕ್ವಿನೋವಾ (Quinoa)<br />
<img alt="ಕ್ವಿನೋವಾ (Quinoa)" src="https://kannada.boldsky.com/img/2017/12/20-1513764443-10m.jpg" /><br />
ಈ ಕಾಳುಗಳಲ್ಲಿ ಗೋಧಿಯಲ್ಲಿರುವ ಗೋಂದಿನಂತಹ ಪದಾರ್ಥವಾದ ಗ್ಲುಟೆನ್ ಇಲ್ಲವೇ ಇಲ್ಲ. ಅಲ್ಲದೇ ಪುರಾತನ ಇಂಕಾಗಳ ನೆಚ್ಚಿನ ಆಹಾರವೂ ಆಗಿತ್ತು. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸಹಾ ಇದೆ. ಜೊತೆಗೇ ಉತ್ತಮ ಪ್ರಮಾಣದ ಎಲ್-ಆರ್ಜಿನೈನ್ ಸಹಿತ ಇತರ ಅವಶ್ಯಕ ಅಮೈನೋ ಆಮ್ಲಗಳೂ ಇದ್ದು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.<br />
<br />
#11 ಹಾಲು<br />
<img alt="ಹಾಲು" src="https://kannada.boldsky.com/img/2017/12/20-1513764452-11m.jpg" /><br />
ಹಾಲಿನಲ್ಲಿ ಪ್ರೋಟೀನು ಉತ್ತಮ ಪ್ರಮಾಣದಲ್ಲಿದ್ದು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. (ಆದರೆ ಲ್ಯಾಕ್ಟೋಸ್ ಅಲರ್ಜಿ ಇರುವ ವ್ಯಕ್ತಿಗಳಿ ಮಾತ್ರ ಸೂಕ್ತವಲ್ಲ) ಅಲ್ಲದೇ ಹಾಲಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಒಮೆಗಾ ೩ ಕೊಬ್ಬಿನ ಆಮ್ಲಗಳೂ ಮೂಳೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.<br />
<div>
<br /></div>
</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-69566215426021924492017-12-18T23:15:00.002+04:302017-12-18T23:15:38.914+04:30ನುಗ್ಗೆ ಎಲೆಗಳ ಹತ್ತು ಅದ್ಭುತ ಆರೋಗ್ಯಕರ ಪ್ರಯೋಜನಗಳು<div dir="ltr" style="text-align: left;" trbidi="on">
ಅರ್ಶದ್ ಹುಸೇನ್ ಎಂ.ಹೆಚ್, ದುಬೈ<br />
ಬೋಲ್ಡ್ ಸ್ಕೈ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/YyEQzz<br />
<br />
ನುಗ್ಗೆ ಎಲೆಗಳನ್ನು (Moringa leaves) ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ಧಾಲ್, ಸಾಂಬಾರ್ ಅಥವಾ ಕೆಲವು ಸೂಪ್ ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರ ಸೇವನೆಯಿಂದ ಹೆಚ್ಚಿನ ಶಕ್ತಿ ದೊರಕುವುದು ಮಾತ್ರವಲ್ಲ, ಅಮೂಲ್ಯ ಪೋಷಕಾಂಶಗಳೂ ಲಭ್ಯವಾಗುತ್ತವೆ. ನೂರಾರು ವರ್ಷಗಳಿಂದ ನುಗ್ಗೆ ಎಲೆಗಳನ್ನು ಆಹಾರದ ಹೊರತಾಗಿ ಕೆಲವಾರು ರೋಗಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲ್ಪಡುತ್ತಾ ಬರಲಾಗಿದೆ. ಇರರ ಪೋಷಕಾಂಶಗಳ ಪಟ್ಟಿಯಲ್ಲಿ ಪ್ರಮುಖವಾಗಿ ವಿಟಮಿನ್ನು ಹಾಗೂ ಪ್ರೋಟೀನುಗಳಿವೆ. ವಿಟಮಿನ್ ಎ, ಸಿ, ಬಿ6, ಪೊಟ್ಯಾಶಿಯಂ, ಪೋಲೇಟ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದವು ಉತ್ತಮ ಪ್ರಮಾಣದಲ್ಲಿರುವ ಕಾರಣ ಇದೊಂದು ಪರಿಪೂರ್ಣ ಆಹಾರವೆನ್ನಬಹುದು. ಒಂದು ವೇಳೆ ನುಗ್ಗೆ ಎಲೆಗಳ ಬಗ್ಗೆ ಇದುವರೆಗೆ ನಿಮಗೆ ತಿಳಿದೇ ಇಲ್ಲದಿದ್ದರೆ ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನುಗ್ಗೆ ಎಲೆಗಳನ್ನು ಮರೆಯದೇ ತನ್ನಿ. ಈ ಎಲೆಗಳ ನಿಯಮಿತ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:<br />
<img alt="ತೂಕ ಇಳಿಯಲು ನೆರವಾಗುತ್ತದೆ" src="https://kannada.boldsky.com/img/2017/12/12-1513056215-drumstick-leaves-.jpg" /><br />
<br />
1. ತೂಕ ಇಳಿಯಲು ನೆರವಾಗುತ್ತದೆ:<br />
ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಹಾಗೂ ಕ್ಲೋರೋಜೆನಿಕ್ ಆಮ್ಲ ಎಂಬ ಆಂಟಿ ಆಕ್ಸಿಡೆಂಟು ಇದ್ದು ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ದೇಹ ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಕಡಿಮೆಗೊಳಿಸಿ ತೂಕ ಇಳಿಯಲು ನೆರವಾಗುತ್ತದೆ.<br />
<img alt="ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ" src="https://kannada.boldsky.com/img/2017/12/12-1513056113-2m.jpg" /><br />
2. ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ:<br />
ಇದರಲ್ಲಿರುವ ಪೋಷಕಾಂಶಗಳು ಚರ್ಮದ ಬುಡದಿಂದ ಪೋಷಣೆ ನೀಡುವ ಕಾರಣ ಚರ್ಮದ ಅಡಿಯಲ್ಲಿ ಕೀವು ತುಂಬಿಕೊಳ್ಳುವುದರಿಂದ ರಕ್ಷಣೆ ದೊರಕಿದಂತಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಕಲ್ಮಶಗಳನ್ನು ನಿವಾರಿಸಿ ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆ ಪಡೆಯಲು ನೆರವಾಗುತ್ತದೆ.<br />
<img alt="ತಕ್ಷಣವೇ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ" src="https://kannada.boldsky.com/img/2017/12/12-1513056198-25-1485320163-drumstickleaves7-18-1476784671.jpg" /><br />
3. ತಕ್ಷಣವೇ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.<br />
ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿರುವ ಕಾರಣ ಸೇವನೆಯ ಅನತಿಹೊತ್ತಿನಲ್ಲಿಯೇ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಮೆಗ್ನೀಶಿಯಂ ಇದಕ್ಕೆ ಕಾರಣ. ಪರಿಣಾಮವಾಗಿ ಸುಸ್ತು ಮತ್ತು ಬಳಲಿಕೆಯಿಂದ ಶೀಘ್ರವೇ ಹೊರಬರಲು ಸಾಧ್ಯವಾಗುತ್ತದೆ.<br />
<br />
4. ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ:<br />
ಈ ಎಲೆಗಳಲ್ಲಿ ಸುಮಾರು ಹದಿನೆಂಟು ಬಗೆಯ ಅಮೈನೋ ಆಮ್ಲಗಳಿದ್ದು ಇವು ದೇಹದ ಜೀವರಾಸಾಯನಿಕ ಕ್ರಿಯೆಯ ಮೂಲಾಧಾರವಾಗಿವೆ. ವಿಶೇಷವಾಗಿ ಟ್ರಿಫ್ಟೋಫ್ಯಾನ್ ಎಂಬ ಅಮೈನೋ ಆಮ್ಲ ನಮ್ಮ ನಿದ್ದೆಯ ಆವರ್ತನವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ನಮ್ಮ ಮೆದುಳಿಗೆ ಮುದನೀಡುವ<br />
<br />
ರಸದೂತಗಳನ್ನು ಹೆಚ್ಚು ಸ್ರವಿಸಲು ನೆರವಾಗುವ ಮೂಲಕ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.<br />
<img alt="ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ" src="https://kannada.boldsky.com/img/2017/12/12-1513056189-25-1485320154-drumstickleaves6-18-1476784664.jpg" /><br />
5. ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ.<br />
ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಮ್ಮ ದೇಹದ ಜೀವಕೋಶಗಳನ್ನು ಸುಸ್ಥಿತಿಯಲ್ಲಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆಯಾಗಿ ಸುಮಾರು ಮೂವತ್ತು ಬಗೆಯ ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳು ಕರುಳು ಕ್ಯಾನ್ಸರ್ ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ<br />
<br />
ಹಾಗೂ ಆರೋಗ್ಯಕರ ತ್ವಚೆಯ ಮೂಲಕ ವೃದ್ದಾಪ್ಯ ಆವರಿಸುವುದೂ ತಡವಾಗುತ್ತದೆ.<br />
<img alt="ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ" src="https://kannada.boldsky.com/img/2017/12/12-1513056147-6m.jpg" /><br />
6. ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ.<br />
ಮಧುಮೇಹದ ಸೇವನೆಯಿಂದ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಇದರಲ್ಲಿರುವ ಆಸ್ಕಾರ್ಬಿಕ್ ಆಮ್ಲ ಕಾರಣವಾಗಿದ್ದು ಇದು ದೇಹದಲ್ಲಿ ಹೆಚ್ಚು ಇನ್ಸುಲಿನ್ ಸ್ರವಿಸಲು ನೆರವಾಗುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.<br />
<img alt="ಉರಿಯೂತ ನಿವಾರಕ ಗುಣಗಳು" src="https://kannada.boldsky.com/img/2017/12/12-1513056155-7m.jpg" /><br />
7. ಉರಿಯೂತ ನಿವಾರಕ ಗುಣಗಳು:<br />
ಈ ಎಲೆಗಳಲ್ಲಿ ಉರಿಯೂತ ನಿವಾರಕ ಹಾಗೂ ಗುಣಪಡಿಸುವ ಗುಣಗಳಿದ್ದು ಚಿಕ್ಕ ಪುಟ್ಟ ಗಾಯ, ಸುಟ್ಟ ಗಾಯ, ಜಜ್ಜಿದ ಭಾಗಗಳನ್ನು ಶೀಘ್ರವಾಗಿ ಗುಣಪಡಿಸುವುದರೊಂದಿಗೇ ದೇಹದಲ್ಲಿ ಎದುರಾಗುವ ಸೋಂಕುಗಳಿಂದಲೂ ರಕ್ಷಣೆ ಒದಗಿಸುತ್ತದೆ.<br />
<img alt="ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ" src="https://kannada.boldsky.com/img/2017/12/12-1513056173-9m.jpg" /><br />
8. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.<br />
ನಿಮ್ಮ ನಿತ್ಯದ ಆಹಾರದಲ್ಲಿ ನುಗ್ಗೆಸೊಪ್ಪನ್ನು ಅಳವಡಿಸಿಕೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಹೊರಹಾಕಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕಲು ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಿಸುತ್ತದೆ.<br />
<br />
9. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.<br />
ಈ ಎಲೆಗಳಲ್ಲಿರುವ ಕರಗದ ನಾರಿನ ಕಾರಣದಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಸುಲಭವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಹಾಗೂ ಮಲಬದ್ದತೆಯಾಗದಂತೆ ತಡೆಯುತ್ತದೆ. ತನ್ಮೂಲಕ ಹೊಟ್ಟೆಯ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.<br />
<img alt="ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ" src="https://kannada.boldsky.com/img/2017/12/12-1513056181-10mn.jpg" /><br />
<br />
10. ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ.<br />
ಈ ಎಲೆಗಳಲ್ಲಿರುವ ವಿಟಮಿನ್ ಸಿ ಮತ್ತು ಇ ಆರೋಗ್ಯವನ್ನು ವೃದ್ದಿಸುತ್ತವೆ. ವಿಟಮಿನ್ ಸಿ ದೇಹದಲ್ಲಿ ನ್ಯೂರೋಟ್ರಾನ್ಸ್ ಮಿಟರ್ ಗಳ ಹೆಚ್ಚು ಹೆಚ್ಚು ಉತ್ಪತ್ತಿಗೆ ನೆರವಾದರೆ ವಿಟಮಿನ್ ಇ ಮೆದುಳಿನ ಜೀವಕೋಶಗಳ ಸವೆತವನ್ನು ತಡೆದು ಇದರಿಂದ ಎದುರಾಗುವ ಮರೆಗುಳಿತನ ಹಾಗೂ ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ.<br />
<img alt="ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ" src="https://kannada.boldsky.com/img/2017/12/12-1513056508-13-1510547526-01-1456811975-shutterstock-130479380-600x450.jpg" /><br />
<span style="background-color: white; font-family: Tunga, "Lohit Kannada", Arial;">ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ ಈ ಎಲೆಗಳಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣಗೊಳ್ಳುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೀರಿಕೊಳ್ಳದಂತೆ ನೆರವಾಗುವ ಮೂಲಕ ರಕ್ತದಲ್ಲಿ ಅಧಿಕವಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ.</span><br />
<span style="background-color: white; font-family: Tunga, "Lohit Kannada", Arial;"><br /></span>
<span style="background-color: white; font-family: Tunga, "Lohit Kannada", Arial;"><b>ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ </b></span><br />
<span style="background-color: white; font-family: Tunga, "Lohit Kannada", Arial;">ನೂರಾರು ವರ್ಷಗಳಿಂದ ಭಾರತದಲ್ಲಿ ನುಗ್ಗೆಸೊಪ್ಪನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತಿದೆ. ಈ ಸೊಪ್ಪಿನ ಸೇವನೆಯ ಬಳಿಕ ರಕ್ತಸಂಚಾರದಲ್ಲಿ ಹೆಚ್ಚಳವಾಗುವ ಮೂಲಕ ನಿಮಿರು ದೌರ್ಬಲ್ಯದ ತೊಂದರೆ ಕಡಿಮೆಯಾಗುತ್ತದೆ. </span><br />
<img alt="ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ " src="https://kannada.boldsky.com/img/2017/12/12-1513056528-13-1510547580-shutterstock-130766642-600x450-03-1459664906.jpg" /><br />
<span style="background-color: white; font-family: Tunga, "Lohit Kannada", Arial;"><b>ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ </b></span><br />
<span style="background-color: white; font-family: Tunga, "Lohit Kannada", Arial;">ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಫ್ಲೇವನಾಯ್ಡುಗಳು ಕೆಳಹೊಟ್ಟೆ ಹಾಗೂ ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆಯ ನೋವನ್ನು ಕಡಿಮೆಗೊಳಿಸಲು ಸಾಧ್ಯ.</span><br style="background-color: white; font-family: Tunga, "Lohit Kannada", Arial; margin: 0px; padding: 0px;" /><br style="background-color: white; font-family: Tunga, "Lohit Kannada", Arial; margin: 0px; padding: 0px;" /><br />
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-6260593775300080102017-12-06T23:51:00.001+04:302017-12-06T23:51:24.909+04:30ನಿಮ್ಮ ಪತ್ನಿಯಲ್ಲಿ ಈ ವಿಷಯಗಳನ್ನೆಂದೂ ಪ್ರಸ್ತಾಪಿಸದಿರಿ. (ನಿಮಗೇ ಒಳ್ಳೆಯದು)<div dir="ltr" style="text-align: left;" trbidi="on">
<br />
ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/YKD4sb<br />
<br />
<br />
ಪತಿ ಪತ್ನಿಯರ ನಡುವೆ ಎಷ್ಟೇ ಅನ್ಯೋನ್ಯತೆ ಇದ್ದರೂ ಕೆಲವು ವಿಷಯಗಳು ಮಾತ್ರ ಪತ್ನಿ ತನ್ನ ಪತಿಯಿಂದಲೂ ಕೇಳಲು ಬಯಸುವುದಿಲ್ಲ. ಈ ಗುಟ್ಟನ್ನು ಅರಿತ ಸಂಸಾರ ಸುಖಮಯವಾಗಿರುತ್ತದೆ. ದಂಪತಿಗಳ ನಡುವೆ ವೈಮನಸ್ಯ ಮೂಡದೇ ಇರಲು ಹಾಗೂ ಶಾಂತಿಯುತ ಜೀವನಕ್ಕಾಗಿ ಹಲವು ಬಾರಿ ಪತಿ ಮೌನವಹಿಸುವುದೇ ಮೇಲು. (ಇದನ್ನೇ ಕುಹಕ ರೂಪದಲ್ಲಿ ದಂ ಕಳೆದುಕೊಂಡ ಪತಿ ಎಂದೂ ಹೇಳುತ್ತಾರೆ). ಸಾಮಾನ್ಯವಾಗಿ ಪತಿಯರು ತಮ್ಮ ಮನಸ್ಸಿಗೆ ಬಂದ ಪದಗಳನ್ನು ಅರಿವಿಲ್ಲದೇ ಉಪಯೋಗಿಸಿದ ಬಳಿಕ ಪ್ರಾರಂಭವಾದ ಕೋಳಿ ಜಗಳ ಯಾವಾಗ ಗೂಳಿ ಜಗಳಕ್ಕೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಪತಿಯೂ ಈ ಕೆಳಗೆ ವಿವರಿಸಿದ ವಿಷಯಗಳನ್ನು ಅರಿತು ಎಂದಿಗೂ ಈ ಪ್ರಶ್ನೆಗಳನ್ನು ಅಥವಾ ವಿಷಯಗಳನ್ನು ಪ್ರಸ್ತಾಪ ಮಾಡಬಾರದು.<br />
<img alt="ಇಷ್ಟೊಂದು ಮೇಕಪ್ ಅಗತ್ಯವೇ?" src="https://kannada.boldsky.com/img/2017/12/06-1512556079-14-1497433291-rkd5-05-1504589358.jpg" /><br />
<b>ಇಷ್ಟೊಂದು ಮೇಕಪ್ ಅಗತ್ಯವೇ?</b><br />
ಈ ಪ್ರಶ್ನೆ ಕೇಳಿದ ಬಳಿಕ ಪತಿಗೆ ಮೌನವೇ ಉತ್ತರವಾಗಿ ದೊರಕುತ್ತದೆ. (೧೦೦% ಖಚಿತ) ಒಂದು ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಶೇಖಡಾ ಎಂಭತ್ತಕ್ಕೂ ಹೆಚ್ಚು ಜಗಳಗಳು ಪತಿ ಪತ್ನಿಯರು ಜೊತೆಯಾಗಿ ಹೊರಹೊರಟಾಗ ಆಗುವ ಪುಟ್ಟ ವಾಗ್ವಾದದಿಂದ ಪ್ರಾರಂಭವಾಗುತ್ತವೆ. ಏಕೆಂದರೆ ಸಿಂಗರಿಸಿಕೊಳ್ಳುವುದು ಪ್ರತಿಯೊಬ್ಬ ಹೆಣ್ಣಿನ ಜನ್ಮಸಿದ್ಧ ಹಕ್ಕು ಆಗಿದ್ದು ಇದಕ್ಕಾಗಿ ಸಮಯ ವ್ಯಯಿಸುವುದು ತನ್ನ ಮೂಲಭೂತ ಕರ್ತವ್ಯ ಎಂದು ದೃಢವಾಗಿ ನಂಬುತ್ತಾರೆ. ಏಕೆಂದರೆ ನಾಲ್ಕು ಜನರ ನಡುವೆ ಹೋಗುವಾಗ ತಾವು ಅತ್ಯುತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದು ಇವರ ಪ್ರಯತ್ನವಾಗಿದ್ದು ಈ ಪ್ರಯತ್ನಕ್ಕೆ ಅಡ್ಡಿಬರುವುದನ್ನು ಈ ಜಗತ್ತಿನಲ್ಲಿರುವ ಯಾವುದೇ ಹೆಣ್ಣು ಸಹಿಸುವುದಿಲ್ಲ, ಸ್ವತಃ ತನ್ನ ಪತಿ ಅಥವಾ ತಂದೆಯೇ ಆಗಿರಲಿ! ಉತ್ತಮವಾಗಿ ಕಾಣಿಸಿಕೊಳ್ಳುವ ಮೂಲಕ ಮನವೂ ಪ್ರಫುಲ್ಲಿತವೇ ಆಗಿರುತ್ತದೆ. ಒಂದು ವೇಳೆ ಮೇಕಪ್ ಮಾಡಿಕೊಳ್ಳುವ ಮೂಲಕ ನಿಮ್ಮ ಪತ್ನಿಗೆ ನೆಮ್ಮದಿ ಸಿಗುವುದಾದರೆ ನೀವು ಇದರಿಂದ ತಡೆಯಲಾರಿರಿ, ತಡೆಯಲು ಯತ್ನಿಸುವುದೂ ಸಲ್ಲದು. ಆದ್ದರಿಂದ ಕೊಂಚ ತಾಳ್ಮೆಯಿಂದ ಆಕೆಯ ಮೇಕಪ್ ಮುಗಿಸುವುದನ್ನು ಕಾದು ಬಳಿಕವೇ ಹೊರಡುವುದರಿಂದ ಜಗಳವನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಈ ಕಾಯುವ ಸಮಯ ಅಸಹನೀಯವಾಗಿರುವ ಕಾರಣ ಈ ಸಮಯದಲ್ಲಿ ನಿಮ್ಮ ಮೆಚ್ಚಿನ ಯಾವುದಾದರೊಂದು ಚಟುವಟಿಕೆಯನ್ನು, ಉದಾಹರಣೆಗೆ ಓದುವುದು, ವೀಡೀಯೋ ಗೇಮ್ ಒಂದನ್ನು ಆಡುವುದು ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೇಸರ ದೂರವಾಗಿಸಬಹುದು. ಬೀಚಿಯವರು ಒಂದು ಕಡೆ ಹೇಳುತ್ತಾರೆ. ಪತ್ನಿ ಮೇಕಪ್ ಮಾಡಿದ ಬಳಿಕ ಕೇಳುತ್ತಾಳಂತೆ, ನೀವಿನ್ನೂ ದಾಡಿ ಮಾಡಿಕೊಂಡೇ ಇಲ್ಲವಲ್ಲ, ಪತಿ ಹೇಳಿದನಂತೆ-ನೀನು ಮೇಕಪ್ ಶುರು ಮಾಡುವ ಮೊದಲೊಮ್ಮೆ ಮಾಡಿಕೊಂಡಿದ್ದೆ ಕಣೇ!<br />
<br />
<b>ಶಾಪಿಂಗ್ ನಲ್ಲಿ ಎಷ್ಟು ಖರ್ಚು ಮಾಡಿದೆ?</b><br />
ಹಲವಾರು ಅಧ್ಯಯನಗಳಲ್ಲಿ ಈ ಪ್ರಶ್ನೆಯಿಂದ ಬಹಳಷ್ಟು ಜಗಳಗಳು ಪ್ರಾರಂಭವಾಗಿರುದನ್ನು ಸಾಬೀತು ಪಡಿಸಲಾಗಿದೆ. ಈ ಪ್ರಶ್ನೆಗಳು ಆಕೆಯ ಮನೋಭಾವವನ್ನು ಕೆಡಿಸಬಹುದು. ಇದಕ್ಕೂ ಮುನ್ನ ಮಾಡಿದ ಖರೀದಿಯಿಂದ ಆಕೆಗೆ ಆಗಿದ್ದ ಸಂತೋಷ, ಸಂಭ್ರಮಗಳೆಲ್ಲಾ ಒಂದೇ ಪ್ರಶ್ನೆಗೆ ನೀರಾಗಿ ಕರಗಿ ಹೋಗುತ್ತವೆ. ಇದಕ್ಕಾಗಿ ಆಕೆ ನಿಮ್ಮ ಹಣವನ್ನೇ ಉಪಯೋಗಿಸಿರಬಹುದು ಅಥವಾ ತನ್ನದೇ ಹಣವನ್ನು ಉಪಯೋಗಿಸಿರಬಹುದು. ಆದ್ದರಿಂದ ಶಾಪಿಂಗ್ ಮುಗಿಸಿ ಬಂದ ಬಳಿಕ ನೀವು ಈ ಪ್ರಶ್ನೆಯನ್ನು ಕೇಳದೇ ಇದ್ದಷ್ಟೂ ನಿಮಗೇ ಒಳ್ಳೆಯದು.<br />
<img alt="ಇಷ್ಟೊಂದು ಮೇಕಪ್ ಅಗತ್ಯವೇ?" src="https://kannada.boldsky.com/img/2017/12/06-1512556098-20-relationship-cover-jpg.jpg" /><br />
<b>ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?</b><br />
ನಿಮ್ಮ ಪತ್ನಿ ಮಾತ್ರವಲ್ಲ, ನಿಮ್ಮ ಆತ್ಮೀಯರಲ್ಲಿಯೇ ಹಲವರಿಗೆ ಈ (ಕೆಟ್ಟ) ಅಭ್ಯಾಸವಿರುತ್ತದೆ. ಪ್ರತಿ ಪತ್ನಿಯೂ ತನ್ನ ಪತಿಯ ಫೋನ್ ನ ಇತಿಹಾಸವನ್ನು ಅರಿಯುವುದು ತನ್ನ ಹಕ್ಕು ಎಂದೇ ಭಾವಿಸುತ್ತಾಳೆ. ತನ್ನ ಪತಿ ಎಲ್ಲೂ ದಾರಿ ತಪ್ಪಿ ಹೋಗುತ್ತಿಲ್ಲವಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾ ಇರುವುದು ಪ್ರತಿ ಪತ್ನಿಗೂ ಸಮಾಧಾನಪಟ್ಟುಕೊಳ್ಳುವ ವಿಷಯವೇ ಆಗಿದೆ. ಆದ್ದರಿಂದ ಈ ಪ್ರಶ್ನೆಯನ್ನು ಕೇಳುವ ಬದಲು ನಿಮ್ಮ ಫೋನ್ ಅನ್ನು ಹೇಗಿದ್ದರೂ ಮಡದಿ ಪರೀಕ್ಷಿಸಿಯೇ ಪರೀಕ್ಷಿಸುತ್ತಾಳೆ, ಪರೀಕ್ಷಿಸಿ ಸಮಾಧಾನಪಟ್ಟುಕೊಳ್ಳಲಿ ಎಂದು ಆಕೆಗೆ ಅವಕಾಶ ಮಾಡಿ ಕೊಡಿ. ಅದಕ್ಕೂ ಮುನ್ನ ನಿಮ್ಮ ವೈಯಕ್ತಿಕ ಹಾಗೂ ಅನಗತ್ಯವಾದ ಮೆಸೇಜ್, ಚಿತ್ರ, ವೀಡಿಯೋಗಳನ್ನು ಅಳಿಸಿಬಿಡಿ. ಇದರಿಂದ ಸುಖಸಂಸಾರದ ಸಾರ ಉಳಿದುಕೊಳ್ಳುತ್ತದೆ. ಅಲ್ಲದೇ ನೀವು ಆಕೆಗೆ ಮೋಸ ಮಾಡುತ್ತಲೇ ಇಲ್ಲದಿದ್ದರೆ ನಿಮ್ಮ ಫೋನ್ ತೋರಿಸಲು ನಿಮಗೇನು ಭಯ, ನೋಡಿಕೊಳ್ಳಲಿ ಬಿಡಿ!<br />
<img alt="ಶಾಪಿಂಗ್ ನಲ್ಲಿ ಎಷ್ಟು ಖರ್ಚು ಮಾಡಿದೆ?" src="https://kannada.boldsky.com/img/2017/12/06-1512556108-24-1435105970-fights4.jpg" /><br />
<b>ನೀನು ಗರ್ಭಿಣಿಯಾಗಿದ್ದಾಗಲೂ ನಾವು ಕೂಡಬಹುದೇ?</b><br />
ಈ ಪ್ರಶ್ನೆ ಕೇಳಿದ ಬಳಿಕ ಆಕೆಗೆ ನಿಮ್ಮ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಗುತ್ತದೆ. ನಿಮಗೆ ಕೇವಲ ದೈಹಿಕ ಸಂಪರ್ಕವೇ ಹೆಚ್ಚಿನ ಆದ್ಯತೆಯಾಯ್ತೇ? ಎಂದು ಆಕೆಯ ಮನದಲ್ಲಿ ತಕ್ಷಣ ಮೂಡುತ್ತದೆ. ದಿಟ್ಟ ಹೆಣ್ಣಾದರೆ ಆ ಕ್ಷಣವೇ ಪತಿಯ ಕೆನ್ನೆಗೊಂದು ಬಾರಿಸಲಿಕ್ಕೂ ಸಾಕು. ಗರ್ಭಾವಸ್ಥೆ ಪ್ರತಿ ಹೆಣ್ಣಿಗೂ ಅತಿ ಸೂಕ್ಷ್ಮವಾದ ಅವಧಿಯಾಗಿದ್ದು ಪ್ರತಿದಿನವೂ ದೈಹಿಕ ಹಾಗೂ ಮಾನಸಿಕವಾದ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತಾಳೆ. ಈ ಸಮಯದಲ್ಲಿ ಆತ್ಮೀಯರ ಸಾಮೀಪ್ಯ ಹಾಗೂ ಆದರವೇ ಮುಖ್ಯವಾಗುತ್ತದೆಯೇ ಹೊರತು ದೈಹಿಕ ಸಂಪರ್ಕವಲ್ಲ! ಆದ್ದರಿಂದ ಯಾವಾಗ ಆಕೆಯೇ ತಾನಾಗಿ ಈ ಬಗ್ಗೆ ಮಾತನಾಡಬಯಸುತ್ತಾಳೋ ಆಗ ಮಾತ್ರವೇ ಈ ಬಗ್ಗೆ ಚರ್ಚಿಸಬೇಕೇ ವಿನಃ ನಿಮಗೆ ಬೇಕಿನಿಸಿದಾಗ ಅಲ್ಲ!<br />
<img alt="ನಾನೊಬ್ಬ ಕೆಟ್ಟ ಪತಿಯೇ?" src="https://kannada.boldsky.com/img/2017/12/06-1512556088-18-couple-fighting.jpg" /><br />
<b>ನೀನು ಪ್ರತಿವಾರವೂ ತವರು ಮನೆಗೆ ಹೋಗುವುದೇಕೆ?</b><br />
ಒಂದು ವೇಳೆ ಆಕೆಯ ತವರು ಮನೆಯ ಸದಸ್ಯರನ್ನು ನೀವು ಇಷ್ಟಪಡದೇ ಇದ್ದರೂ ಈ ಪ್ರಶ್ನೆಯನ್ನು ಮಾತ್ರ ಸರ್ವಥಾ ಕೇಳಬೇಡಿ. ಒಂದು ವೇಳೆ ಕೇಳಿದರೆ ಆ ಕ್ಷಣದಿಂದ ಆಕೆ ನಿಮ್ಮನ್ನು ದ್ವೇಶಿಸಲು ಪ್ರಾರಂಭಿಸಬಹುದು. ಇಂತಹ ಪ್ರಶ್ನೆಗಳು ದಂಪತಿಗಳ ನಡುವೆ ಹುಳಿ ಹಿಂಡುತ್ತವೆ.<br />
<br />
<b>ನೀನು ಶೇವ್ ಮಾಡಿಕೊಂಡೆಯಾ?</b><br />
ಅನಗತ್ಯ ರೋಮಗಳ ನಿವಾರಣೆ ಪ್ರತಿಹೆಣ್ಣಿನ ಅತ್ಯಂತ ಖಾಸಗಿ ವಿಷಯ! ಇದು ಮುಖದ ರೋಮವೇ ಆಗಿರಬಹುದು ಅಥವಾ ಕಾಲಿನದ್ದು, ಈ ಬಗ್ಗೆ ಎಂದಿಗೂ ಪತಿಯರು ಪ್ರಸ್ತಾಪವನ್ನೇ ಎತ್ತಬಾರದು. ಏಕೆಂದರೆ ಈ ಬಗ್ಗೆ ಏನೇ ಮಾತನಾಡಿದರೂ ಅವರಿಗೆ ನೀವು ಅವರ ಖಾಸಗಿತನಕ್ಕೆ ಲಗ್ಗೆ ಇಡುವ ಪ್ರಯತ್ನವಾಗಿಯೇ ತೋರುತ್ತದೆ. ನೀವು ಕೇವಲ ಸೌಂದರ್ಯವನ್ನು ಆಸ್ವಾದಿಸಿದರೆ ಸಾಕು.<br />
<img alt="ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?" src="https://kannada.boldsky.com/img/2017/12/06-1512556116-25-1453719374-26-1445834736-1.jpg" /><br />
<b>ನಾನೊಬ್ಬ ಕೆಟ್ಟ ಪತಿಯೇ?</b><br />
ಈ ತರಹದ ಪ್ರಶ್ನೆಯನ್ನು ಕೇಳಿಯೇ ನೀವು ತಿಳಿಗೇಡಿಯಾಗುತ್ತೀರಿ. ಯಾವುದೇ ಪತ್ನಿ ತನ್ನ ಪತಿ ಕೆಟ್ಟವನಾಗಬೇಕೆಂದು ಬಯಸುವುದಿಲ್ಲ. ನೀವೇ ಹೀಗೆ ಕೇಳಿಬಿಟ್ಟರೆ ಯಾವುದೋ ಹಿಂದಿನ ಕ್ಷುಲ್ಲುಕ ಕಾರಣವನ್ನೇ ನೆಪವಾಗಿಸಿ ಆಕೆ ’ಹೌದು’ ಎಂದು ಬಿಟ್ಟರೆ? ಆಗ ನಿಮ್ಮ ಮುಂದಿನ ದಿನಗಳ ನಿದ್ದೆಗಳೆಲ್ಲಾ ಹಾರಿಹೋಗುವ ಸಂಭವವಿದೆ.<br />
<br />
ಈ ಬಗೆಯ ಪ್ರಶ್ನೆಗಳನ್ನು ಪತಿಯರು ಖಂಡಿತಾ ತಮ್ಮ ಪತ್ನಿಯರಲ್ಲಿ ಪ್ರಶ್ನಿಸಲೇಬಾರದು.<br />
****<br />
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-9576852156328441482017-12-06T07:36:00.002+04:302017-12-06T07:37:59.488+04:30ಗೃಹ ವಿಮೆ: ಏಕೆ ಬೇಕು ಎನ್ನಲು ನಾಲ್ಕು ಸಕಾರಣಗಳು<div dir="ltr" style="text-align: left;" trbidi="on">
ಗುಡ್ ರಿಟರ್ನ್ಸ್ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/3VUz8V<br />
<br />
ಸ್ವಂತ ಮನೆಯೊಂದನ್ನು ಹೊಂದುವುದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಹಲವು ವರ್ಷಗಳ ಕಠಿಣ ದುಡಿಮೆಯ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಜೀವಮಾನದ ದುಡಿಮೆಯನ್ನೇ ಮುಡಿಪಾಡಿಟ್ಟು ಪಡೆದ ಈ ಮನೆಯ ರಕ್ಷಣೆಯ ಕಾಳಜಿಯನ್ನು ವಹಿಸದಿದ್ದರೆ ಈ ಶ್ರಮ ವ್ಯರ್ಥವಾಗುತ್ತದೆ. ಈ ಅಗತ್ಯತೆಯನ್ನು ಕಂಡುಕೊಂಡ ಕಟ್ಟಡ ನಿರ್ಮಾತೃದಾರರು ಈಗ ಬಗೆಬಗೆಯ ವಿನ್ಯಾಸದ ಮನೆಗಳನ್ನು ಸಿದ್ಧರೂಪದಲ್ಲಿ ನೀಡುತ್ತಿದ್ದು ಇದರ ಮೊಬಲಗನ್ನು ಬ್ಯಾಂಕ್ ಸಾಲದ ಮೂಲಕ ಕಂತುಗಳಲ್ಲಿ ತೀರಿಸಬಹುದು. ಈ ವ್ಯವಸ್ಥೆಯಿಂದ ಇಂದು ಲಕ್ಷಾಂತರ ಜನರು ಮನೆಗಳನ್ನು ಹೊಂದುವ ಕನಸನ್ನು ನನಸಾಗಿಸಿದ್ದಾರೆ. ಆದರೆ ಇದನ್ನು ರಕ್ಷಿಸಲು ಅಗತ್ಯವಾದ ವಿಮೆಯ ಬಗ್ಗೆ ಅನಾದರ ತೋರುತ್ತಿದ್ದಾರೆ. ಹೆಚ್ಚಿನ ಜನರಿಗೆ ಹೀಗೊಂದು ವಿಮೆ ಇದೆ ಎಂದೇ ಗೊತ್ತಿಲ್ಲ!<br />
<br />
ಗೃಹ ವಿಮೆ ಎಂದರೆ ಹೆಸರೇ ಸೂಚಿಸುವಂತೆ ವಾಸಿಸುವ ಮನೆಗೆ ಅಥವಾ ಮನೆಯ ಪ್ರಮುಖ ವಸ್ತುಗಳಿಗೆ ಏನಾದರೂ ಘಾಸಿ ಅಥವಾ ನಷ್ಟವಾದರೆ ಇದನ್ನು ತುಂಬಿಕೊಡುವ ವ್ಯವಸ್ಥೆಯೇ ಆಗಿದೆ. ಗೃಹ ವಿಮೆಯನ್ನು ಪಡೆಯುವ ಮೂಲಕ ನೀವು ಪಡೆಯಬಹುದಾದ ನೆಮ್ಮದಿ ಹಾಗೂ ಲಾಭಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:<br />
<img alt="ನೈಸರ್ಗಿಕ ವಿಕೋಪ, ಮಾನವ ನಿರ್ಮಿತ ಪ್ರಕೋಪಗಳಿಂದ ರಕ್ಷಣೆ ಒದಗಿಸುತ್ತದೆ" src="https://kannada.goodreturns.in/img/2017/10/16-1508153741-13-1471063536-4.jpg" /><br />
<br />
ನೈಸರ್ಗಿಕ ವಿಕೋಪ, ಮಾನವ ನಿರ್ಮಿತ ಪ್ರಕೋಪಗಳಿಂದ ರಕ್ಷಣೆ ಒದಗಿಸುತ್ತದೆ.<br />
ಒಂದು ಒಟ್ಟಾರೆ ಅಥವಾ ಸಂಪೂರ್ಣ ಗೃಹವಿಮೆ ನಿಮ್ಮ ಮನೆಯನ್ನು ಕೆಲವಾರು ಆಪತ್ಕಾಲೀನ ಸ್ಥಿತಿಗಳಿಂದ ರಕ್ಷಣೆ ಒದಗಿಸುತ್ತದೆ. ಉದಾಹರಣೆಗೆ ಭಯೋತ್ಪಾದಕಾ ಧಾಳಿ, ಅಕಸ್ಮಿಕ ಬೆಂಕಿ ಅಪಘಾತ, ನೈಸರ್ಗಿಕ ವಿಕೋಪಗಳಾದ ಸಿಡಿಲು, ಮಹಾಪೂರ, ಭೂಕಂಪ, ಚಂಡಮಾರುತ ಇತ್ಯಾದಿಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಈ ವಿಮೆಯನ್ನು ಗ್ರಾಹಕನ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗುತ್ತದೆ. ಉದಾಹರಣೆಗೆ ಗ್ರಾಹಕನ ಮನೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಅತಿ ಹೆಚ್ಚಾಗಿರುವ ಸ್ಥಳದಲ್ಲಿದ್ದರೆ ಈ ಚಂಡಮಾರುತದಿಂದ ಮನೆಗೆ ಆಗುವ ಹಾನಿಯಿಂದಾಗುವ ನಷ್ಟಗಳನ್ನು ತುಂಬಿಕೊಡುವಂತೆ ರೂಪಿಸಿಕೊಳ್ಳಬಹುದು.<br />
<img alt="ವೈಯಕ್ತಿಯ ವಸ್ತುಗಳ ನಷ್ಟ ಅಥವಾ ಹಾನಿಯ ವಿರುದ್ದ ರಕ್ಷಣೆ" src="https://kannada.goodreturns.in/img/2017/10/16-1508153802-25-1429952703-land-home.jpg" /><br />
<br />
<b>ವೈಯಕ್ತಿಯ ವಸ್ತುಗಳ ನಷ್ಟ ಅಥವಾ ಹಾನಿಯ ವಿರುದ್ದ ರಕ್ಷಣೆ.</b><br />
ಗೃಹವಿಮೆಯಲ್ಲಿ ಮನೆಯ ಕಟ್ಟಡ ಮಾತ್ರವಲ್ಲ, ನಿತ್ಯಬಳಕೆಯ ವಸ್ತುಗಳ ಮೇಲೂ ವಿಮೆ ಮಾಡಿಸಬಹುದು. ಮನೆಯ ಸದಸ್ಯರಿಗೆ ಸೇರಿದ ಅಮೂಲ್ಯ ಚಿನ್ನ, ವಜ್ರ ಮೊದಲಾದ ಆಭರಣಗಳು, ದುಬಾರಿ ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣ, ವೈಭವದ ವಸ್ತುಗಳು ಹಾಗೂ ಕಲಾಕೃತಿಗಳು ಮೊದಲಾದವು ಸೇರಿವೆ. ಕಳ್ಳತನ ಮೊದಲಾದ ಸಂದರ್ಭಗಳಲ್ಲಿ ಅಥವಾ ಸಿಡಿಲು ಬಡಿದು ಮನೆಯ ಅಷ್ಟೂ ವಿದ್ಯುತ್ ಉಪಕರಣಗಳು ಹಾನಿಗೊಂಡ ಸಮಯದಲ್ಲಿ ಈ ವಿಮೆ ಆ ಉಪಕರಣವನ್ನು ರಿಪೇರಿ ಮಾಡಿಸುವ ಅಥವಾ ಹೊಸದನ್ನು ನೀಡುವ ಮೂಲಕ ಆ ನಷ್ಟವನ್ನು ಭರಿಸುತ್ತದೆ.<br />
<br />
<b>ತಾತ್ಕಾಲಿಕ ವಾಸದ ವೆಚ್ಚ</b><br />
ಕೆಲವೊಮ್ಮೆ ಮನೆಯ ರಿಪೇರಿ ಅಥವಾ ಬದಲಾವಣೆಯ ಸಂದರ್ಭದಲ್ಲಿ ಮನೆಯನ್ನು ತಾತ್ಕಾಲಿಕವಾಗಿ ಕೆಲವು ದಿನಗಳ ಮಟ್ಟಿಗೆ ಖಾಲಿ ಮಾಡಿ ಬೇರೆಡೆ ವಾಸಿಸಬೇಕಾಗಿ ಬರುತ್ತದೆ. ಇದಕ್ಕಾಗಿ ಹೋಟೆಲ್ ಅಥವಾ ಬಾಡಿಗೆ ಮನೆಯೇ ಗತಿ. ಈ ಬಾಡಿಗೆಯ ವೆಚ್ಚವನ್ನು ಗೃಹವಿಮೆಯ ಮೂಲಕ ಸರಿದೂಗಿಸಿಕೊಳ್ಲಬಹುದು. ಇದರಿಂದ ಆರ್ಥಿಕವಾಗಿ ಹೆಚ್ಚಿನ ಹೊಡೆತ ಬೀಳುವುದು ತಪ್ಪುತ್ತದೆ.<br />
<img alt="ಈ ವಿಮೆಯನ್ನು ಪಡೆಯುವುದು ಹೇಗೆ?" src="https://kannada.goodreturns.in/img/2017/10/16-1508153881-04-1470297579-5.jpg" /><br />
<b>ಈ ವಿಮೆಯನ್ನು ಪಡೆಯುವುದು ಹೇಗೆ?</b><br />
ಇದನ್ನು ಸುಲಭವಾಗಿ ಪಡೆಯಬಹುದು. ಪ್ರಾರಂಭದಲ್ಲಿ ನಿಮ್ಮ ಮನೆಯ ವಿಮೆ ಏನೇನನ್ನು ಒಳಗೊಂಡಿರಬೇಕು ಎಂಬುದನ್ನು ಗುರುತಿಸಿಕೊಳ್ಳಬೇಕು. ಅನ್ವಯವಾಗದ ಆಯ್ಕೆಗಳನ್ನು ಬಿಟ್ಟುಬಿಡಬೇಕು. ಉದಾಹರಣೆಗೆ ಮಳೆ ಅತಿ ಕಡಿಮೆ ಬೀಳುವ ಪ್ರದೇಶದಲ್ಲಿ ಅತಿವೃಷ್ಟಿಯ ವಿಮೆ ಬೇಡ. ವಿಮೆಯನ್ನು ಒದಗಿಸುವ ವಿವಿಧ ಸಂಸ್ಥೆಗಳ ಉತ್ಪನ್ನಗಳು ಹಾಗೂ ಇವುಗಳು ನೀಡುವ ಸೇವೆಯನ್ನು ಹೋಲಿಸಿ ನೋಡಿ ನಿಮ್ಮ ಮನೆಗೆ ಅತಿ ಹೆಚ್ಚು ಸೂಕ್ತವಾಗುವ ವಿಮೆಯನ್ನು ಆರಿಸಿಕೊಳ್ಳಬೇಕು. ಬಳಿಕವೇ ಅರ್ಜಿಯನ್ನು ಸಲ್ಲಿಸಬೇಕು.<br />
<img alt="ಕಟ್ಟಳೆಗಳನ್ನು ಓದಲು ಮರೆಯದಿರಿ" src="https://kannada.goodreturns.in/img/2017/10/16-1508153942-02-1422877082-loan6.jpg" /><br />
<b>ಕಟ್ಟಳೆಗಳನ್ನು ಓದಲು ಮರೆಯದಿರಿ.</b><br />
ಯಾವುದೇ ವಿಮಾ ಸೌಲಭ್ಯದಲ್ಲಿ ಸಂಸ್ಥೆ ತನ್ನದೇ ಆದ ಕಟ್ಟಳೆಗಳನ್ನು ಒದಗಿಸಿರುತ್ತದೆ. ಟರ್ಮ್ಸ್ ಅಂಡ್ ಕಂಡೀಶನ್ಸ್ ಎಂದು ಚಿಕ್ಕ ಅಕ್ಷರಗಳಲ್ಲಿ ಅಪಾರವಾದ ಪದಗಳ ಮೂಲಕ ಇದನ್ನು ಒದಗಿಸಿರಲಾಗಿರುತ್ತದೆ. ಕೊಂಚ ಹೆಚ್ಚು ಸಮಯ ಮತ್ತು ವ್ಯವಧಾನ ಆಗ್ರಹಿಸಿದರೂ ಪರವಾಗಿಲ್ಲ, ಈ ಮಾಹಿತಿಯನ್ನೊಮ್ಮೆ ಓದಿಕೊಳ್ಳಬೇಕು. ಇದರ ಮೂಲಕ ಈ ವಿಮೆಯಲ್ಲಿ ಯಾವ ವಿಷಯಗಳನ್ನು ಪರಿಗಣಿಸಲಾಗಿರುತ್ತದೆ ಹಾಗೂ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬಹುದು. ಅಲ್ಲದೇ ಇದಕ್ಕೆ ತಗಲುವ ವೆಚ್ಚದ ಬಗ್ಗೆಯೂ ಜಾಗರೂಕರಾಗಿರಬೇಕು. ಏಕೆಂದರೆ ನಿಯಮಿತ ಪ್ರಮಾಣದಲ್ಲಿ ಸಲ್ಲಿಸಬೇಕಾದ ಪ್ರೀಮಿಯಂ ನಿಮ್ಮ ಜೇಬಿಗೆ ಕನ್ನ ಹಾಕುವಷ್ಟಿರಬಾರದು.<br />
<img alt="ನಿಖರ ಮಾಹಿತಿ, ಪರಿಶೀಲನೆ ಅಗತ್ಯ" src="https://kannada.goodreturns.in/img/2017/10/16-1508153999-02-1478061832-1-homeloan-emi.jpg" /><br />
<span style="background-color: #f0f0f0; font-family: "tunga" , "lohit kannada" , "arial";"><b>ನಿಖರ ಮಾಹಿತಿ, ಪರಿಶೀಲನೆ ಅಗತ್ಯ</b></span><br />
<br />
ಅಲ್ಲದೇ ವಿಮೆಯಲ್ಲಿ ಒಳಗೊಳ್ಳುವ ವಸ್ತುಗಳ ನಿಖರ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ. ಇದರ ಪುರಾವೆಗಳನ್ನು, ಉದಾಹರಣೆಗೆ ಖರೀದಿ ಮೊತ್ತದ ರಸೀದಿಗಳನ್ನು ಒದಗಿಸುವುದು ತುಂಬಾ ಉತ್ತಮ. ಇದರಿಂದ ಸರಿಯಾದ ಮೊತ್ತಕ್ಕೆ ವಿಮೆ ಇಳಿಸಬಹುದು. ಅಲ್ಲದೇ ಪ್ರತಿ ಮೂರು ಅಥವಾ ಐದು ವರ್ಷಗಳೊಗೊಮ್ಮೆ ಮನೆಯ ವಿಮೆಯ ಮೊತ್ತವನ್ನು ಪರಿಶೀಲಿಸುತ್ತಿರಬೇಕು. ಏಕೆಂದರೆ ಮನೆ ಸ್ಥಿರಾಸ್ತಿಯಾಗಿದ್ದು ಇದರ ನವೀಕರಣದ ವೆಚ್ಚ ಹಣದುಬ್ಬರದಿಂದಾಗಿ ಪ್ರತಿವರ್ಷವೂ ಏರುತ್ತಲೇ ಹೋಗುತ್ತದೆ.<br />
<img alt="ಕೊನೆ ಮಾತು" src="https://kannada.goodreturns.in/img/2017/10/16-1508154034-01-1470053468-home-loan.jpg" /><br />
ಅಂತಿಮವಾಗಿ, ಗೃಹ ವಿಮೆ ಇದೆ ಎಂಬ ಒಂದೇ ಅಂಶ ನಿಮಗೆ ಅತಿ ಹೆಚ್ಚಿನ ನೆಮ್ಮದಿ ನೀಡಬಹುದು. ಏಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಕಳ್ಳತನ, ಸಿಡಿಲು, ಅತಿವೃಷ್ಟಿ, ಪಕ್ಕದ ಮರ ಬಿದ್ದು ಮನೆಯ ಛಾವಣಿ ಕುಸಿಯುವುದು ಮೊದಲಾದ, ಊಹೆಗೇ ನಿಲುಕದ ಸಂದರ್ಭಗಳಲ್ಲಿ ನೆರಯವರ ಸಾಂತ್ವಾನ, ಪೋಲೀಸರ ಭರವಸೆಗಿಂತಲೂ ವಿಮೆಯೇ ಹೆಚ್ಚಿನ ನೆಮ್ಮದಿ ನೀಡಿರುವುದನ್ನು ವಿಮೆ ಪಡೆದವರು ತಮ್ಮ ಅನುಭವದ ಮೂಲಕ ತಿಳಿಸುತ್ತಾರೆ.<br />
<div>
<br /></div>
</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-28048212422659053752017-12-03T23:05:00.002+04:302017-12-03T23:05:20.381+04:30ಇಂಗಿನ ಆರೋಗ್ಯಕರ ಉಪಯೋಗಗಳು, ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳು<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ . ಕಾಮ್ ನಲ್ಲಿ ಪ್ರಕಟವಾದ ಲೇಖನ<br />
https://goo.gl/J8FZES<br />
<br />
ಯಾವುದೇ ಅಡುಗೆಗೆ ರುಚಿ ನೀಡುವ ಉಪ್ಪಿನಂತೆಯೇ ಇಂಗು ಸಹಾ ಇನ್ನೊಂದು ರುಚಿಕಾರಕವಾಗಿದೆ. ವಿಶೇಷವಾಗಿ ಸಾಂಬಾರ್, ರಸಂ ಹಾಗೂ ಒಗ್ಗರಣೆ ನೀಡುವ ಇತರ ಅಡುಗೆಗಳಲ್ಲಿ ಚಿಟಿಕೆಯಷ್ಟು ಇಂಗು ಹಾಕಿದರೆ ರುಚಿ ಹೆಚ್ಚುತ್ತದೆ. ಇಂಗಿಲ್ಲದ ಉಪ್ಪಿನಕಾಯಿ ವಿರಳ. ಇಂಗನ್ನು ಹಾಗೇ ತಿನ್ನುವಂತಿಲ್ಲ ಆಷ್ಟೊಂದು ಕಹಿಯಾಗಿರುತ್ತದೆ. ಇದೇ ಕಾರಣಕ್ಕೆ ’ಇಂಗು ತಿಂದ ಮಂಗ’ ಎಂಬ ವಿಶೇಷಣವನ್ನು ಕನ್ನಡದಲ್ಲಿ ಧಾರಾಳವಾಗಿ ಬಳಸಲಾಗುತ್ತದೆ. ಒಂದು ಬಗೆಯ ಮರದ ತೊಗಟೆಯಿಂದ ಒಸರುವ ಗೋಂದನ್ನು ಒಣಗಿಸಿ ಪುಡಿಯಾಗಿಸಿದ ಇಂಗಿನ ಬಳಕೆ ಸಾವಿರಾರು ವರ್ಷಗಳ ಹಿಂದಿನಿಂದಲೇ ಆಯುರ್ವೇದದಲ್ಲಿದೆ. ಬನ್ನಿ, ಇದರ ಆರೋಗ್ಯಕರ ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳ ಬಗ್ಗೆ ಅರಿಯೋಣ:<br />
<br />
<img alt="ಜೀರ್ಣಶಕ್ತಿ ಹೆಚ್ಚಿಸಲು" src="https://kannada.boldsky.com/img/2017/09/26-1506401726-24-1458805414-shutterstock-207274876-600x450.jpg" /><br />
<b>ಜೀರ್ಣಶಕ್ತಿ ಹೆಚ್ಚಿಸಲು:</b><br />
ಯಾವುದೇ ಆಹಾರ ಚೆನ್ನಾಗಿ ಜೀರ್ಣಿಸಲೆಂದು ಒಗ್ಗರಣೆಯಲ್ಲಿ ಚಿಟಿಕೆಯಷ್ಟು ಇಂಗನ್ನು ಸೇರಿಸಲಾಗುತ್ತದೆ. ವಾಯು ಪ್ರಕೋಪವುಂಟು ಮಾಡುವ ಆಹಾರಗಳ ಪ್ರಭಾವದಿಂದ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳದಿರಲೂ ಇದು ನೆರವಾಗುತ್ತದೆ. ಹೊಟ್ಟೆಯುಬ್ಬರಿಕೆ ಎದುರಾದರೆ ತಕ್ಷಣ ಇಂಗು ಬೆರೆಸಿದ್ ಉಗುರುಬೆಚ್ಚನೆಯ ನೀರನ್ನು ಕುಡಿದರೆ ತಕ್ಷಣ ಪರಿಹಾರ ದೊರಕುತ್ತದೆ. ಕೆಲವಾರು ಸಂಶೋಧನೆಗಳಲಿ ಕಂಡುಕೊಂಡಿರುವ ಪ್ರಕಾರ ಇಂಗಿನ ಪುಡಿಯಲ್ಲಿ ಉರಿಯೂತ ಗುಣವಿರುವ ಜೊತೆಗೇ ಉತ್ತಮ್ ಆಂಟಿ ಆಕ್ಸಿಡೆಂಟು ಗುಣಗಳೂ ಇವೆ. ಅಷ್ಟೇ ಅಲ್ಲ, ಇದರಲ್ಲಿ ವಂಶವಾಹಿ ಧಾತುವನ್ನು ರೂಪಾಂತರಗೊಳಿಸುವ ಗುಣವೂ ಇದೆ.<br />
<img alt="ಕ್ಯಾನ್ಸರ್ ತಡೆಗಟ್ಟುತ್ತದೆ" src="https://kannada.boldsky.com/img/2017/09/26-1506401763-26-1477466585-cancerpic.jpg" /><br />
<b>ಕ್ಯಾನ್ಸರ್ ತಡೆಗಟ್ಟುತ್ತದೆ:</b><br />
ಇಂಗಿನಲ್ಲಿ ರುಚಿ ನೀಡುವ ಗುಣದ ಹೊರತಾಗಿ ಕ್ಯಾನ್ಸರ್ ತಡೆಗಟ್ಟುವ ಗುಣವೂ ಇದೆ. ಅಂದರೆ ಒಂದು ವೇಳೆ ದೇಹದ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆಯಾದರೆ ಇದು ವಂಶವಾಹಿನಿಯ ಸೂಚನೆಗೆ ವಿರುದ್ದವಾಗಿದ್ದು ಇಂಗಿನಲ್ಲಿರುವ ವಿಶೇಷ ಗುಣ ಈ ಜೀವಕೋಶಗಳನ್ನು ಇನ್ನಷ್ಟು ವೃದ್ದಿಗೊಳ್ಳದಂತೆ ತಡೆಯುತ್ತದೆ.<br />
<img alt="ಲೈಂಗಿಕ ರೋಗಗಳನ್ನು ತಡೆಗಟ್ಟುತ್ತದೆ" src="https://kannada.boldsky.com/img/2017/09/26-1506401755-24-1458805431-shutterstock-207414595-600x450.jpg" /><br />
<b>ಲೈಂಗಿಕ ರೋಗಗಳನ್ನು ತಡೆಗಟ್ಟುತ್ತದೆ:</b><br />
ಈಜಿಪ್ಟ್ ನಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ರುಚಿಕಾರಕವಾಗಿ ಬಳಸಲಾಗುವ ಇಂಗಿನಲ್ಲಿ ಪರಾವಲಂಬಿ ಕ್ರಿಮಿ ವಿರೋಧ ಗುಣ ಕೆಲವಾರು ಲೈಂಗಿಕ ರೋಗಗಳನ್ನು ಹರಡುವುದನ್ನು ತಡೆಯುತ್ತದೆ ಹಾಗೂ ಗುಣಪಡಿಸಲು ನೆರವಾಗುತ್ತದೆ. ವಿಶೇಷವಾಗಿ Trichomonas vaginalis ಅಥವಾ Trichomoniasis ಎಂಬ ಮಾರಕ ರೋಗಗಳನ್ನು ವಾಸಿ ಮಾಡಲೂ ಔಷಧಿಯಂತೆ ಕೆಲಸ ಮಾಡುತ್ತದೆ.<br />
<img alt="ಉಸಿರಾಟದ ತೊಂದರೆ" src="https://kannada.boldsky.com/img/2017/09/26-1506401683-24-1458805375-1m.jpg" /><br />
<b>ಉಸಿರಾಟದ ತೊಂದರೆ:</b><br />
ಉಸಿರಾಟದ ತೊಂದರೆ ಮೂಡಿಸುವ ಬ್ರಾಂಕೈಟಿಸ್, ಅಸ್ತಮಾ ಹಾಗೂ ನಾಯಿಕೆಮ್ಮು ಮೊದಲಾದ ರೋಗಗಳಿಗೆ ಬಿಸಿನೀರಿಗೆ ಕೊಂಚ ಇಂಗು, ಜೇನು ಮತ್ತು ಹಸಿಶುಂಠಿ ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ವಿಶೇಷವಾಗಿ ಮಕ್ಕಳಿಗೆ ಗಂಟಲು ಕಟ್ಟಿಕೊಂಡಿರುವ ಸ್ಥಿತಿಯನ್ನು ನಿವಾರಿಸಲು ಬಳಸಬಹುದು.<br />
<img alt="ನರವ್ಯವಸ್ಥೆಯ ಏರುಪೇರು" src="https://kannada.boldsky.com/img/2017/09/26-1506401734-24-1458805419-shutterstock-207274885-600x450.jpg" /><br />
<b>ನರವ್ಯವಸ್ಥೆಯ ಏರುಪೇರು:</b><br />
ಇಂಗು ಉತ್ತಮವಾದ ಉಪಶಮನಕಾರಿ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವಾಗಿ ಸೆಳೆತಕ್ಕೆ ಒಳಗಾಗಿರುವ ನರಗಳನ್ನು ಶಮನಗೊಳಿಸುತ್ತದೆ ಹಾಗೂ ಸಡಿಲಿಸಿ ನಿರಾಳವಾಗಿಸುತ್ತದೆ. ಇದು ಇಂಗಿನ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ. ವಿಶೇಷವಾಗಿ ಖಿನ್ನತೆ, ಮನೋಭಾವನೆಯಲ್ಲಿ ಬದಲಾವಣೆ, ಚಿತ್ತಕ್ಷೋಭೆ, ಅರಳುಮರಳು ಮೊದಲಾದ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳಿಗೆ ಉತ್ತಮ ಪರಿಹಾರ ಒದಗುತ್ತದೆ. ಒಂದರ್ಥದಲ್ಲಿ ಮಾದಕ ಪದಾರ್ಥವಾದ ಓಪಿಯಂ ಸೇವನೆಯ ಪರಿಣಾಮಗಳಿಗೆ ವಿರುದ್ದ ಪರಿಣಾಮ ನೀಡುವ ಮೂಲಕ ಇದರ ಹಿಡಿತದಿಂದ ಹೊರಬರಲು ನೆರವಾಗುತ್ತದೆ.<br />
<div class="para_head" style="background-color: white; font-family: "Lohit Kannada", Tunga, Arial; font-size: 16px; margin: 0px; padding: 0px; text-align: justify;">
<h2 style="color: #333333; font-family: "Trebuchet MS"; font-size: 21px; line-height: 20px; margin: 0px; padding: 5px 0px 0px;">
ಕಿವಿನೋವನ್ನು ಕಡಿಮೆ ಮಾಡುತ್ತದೆ</h2>
</div>
<div style="background-color: white; font-family: "Lohit Kannada", Tunga, Arial; font-size: 16px; padding: 16px 0px 0px; text-align: justify;">
ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಸೇರಿಸಿ ಮಿಶ್ರಣ ಮಾಡಿ ತಣಿಯಲು ಬಿಡಿ.ಇದು ತಣಿದ ಬಳಿಕ ಈ ಮಿಶ್ರಣವನ್ನು ಅಡ್ಡಮಲಗಿ ಕಿವಿಯೊಳಕ್ಕೆ ಒಂದೊಂದಾಗಿ ಹನಿಯಂತೆ ಬಿಡಿ. ಕೊಂಚ ಸಮಯ ಹಾಗೇ ಮಲಗಿದ್ದು ಬಳಿಕ ನಿಂತು ಹೆಚ್ಚಿನ ದ್ರವ ಹೊರಹರಿಯುವಂತೆ ಮಾಡಿ. ಇದರಿಂದ ಕಿವಿನೋವು ಕಡಿಮೆಯಾಗುತ್ತದೆ</div>
<img alt="ಕಿವಿನೋವನ್ನು ಕಡಿಮೆ ಮಾಡುತ್ತದೆ " src="https://kannada.boldsky.com/img/2017/09/26-1506401716-24-1458805404-08-1439012331-cove-rimage-.jpg" /><br />
<b>ಇತರ ಆರೋಗ್ಯಕರ ಗುಣಗಳು:</b><br />
ಕೀಟಗಳ ಕಡಿತದಿಂದ ಉರಿಯುತ್ತಿರುವ ಚರ್ಮ, ಹಾವಿನ ಕಡಿತ ಮೊದಲಾವುಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ನೋವಿಗೆ ಬಿಸಿನೀರಿಗೆ ಕೊಂಚ ಇಂಗು ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಕೀಟ ಕಡಿದ ಭಾಗ ಅಥವಾ ತಲೆನೋವು ಹೆಚ್ಚಿರುವ ಸ್ಥಳದಲ್ಲಿ ಇಂಗನ್ನು ದಪ್ಪನೆಯ ಲೇಪನವಾಗಿಸಿ ಲೇಪಿಸಿಕೊಂಡರೆ ಅತಿ ಶೀಘ್ರದಲ್ಲಿ ನೋವು ಕಡಿಮೆಯಾಗುತ್ತದೆ.<br />
<br />
<br /></div>
Arshad Hussainhttp://www.blogger.com/profile/13410279590093513740noreply@blogger.com1tag:blogger.com,1999:blog-8910708758309450943.post-35838390930215518182017-12-02T20:00:00.005+04:302017-12-02T20:00:41.772+04:30ಏಂಜಲಿಕ್ ಸಂಖ್ಯೆಗಳೆಂದರೇನು, ಇವುಗಳ ಅರ್ಥವೇನು?<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ<br />
https://goo.gl/n7ZrBj<br />
<br />
ಕೆಲವರು ತಾವು ಪಡೆಯುವ ಸಂಖ್ಯೆಗಳಲ್ಲಿನ ಕೆಲವು ಅಂಕೆಗಳಾದರೂ ವಿಶಿಷ್ಟವಾಗಿರಬೇಕೆಂದು ಬಯಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇದ್ದವರಂತೂ ಇಂತಹದ್ದೇ ಅಂಕೆಗಳು ಸತತವಾಗಿ ಬರಬೇಕೆಂದು ಬಯಸುತ್ತಾರೆ. ಇಂಥ ಹೆಚ್ಚಿನ ಬೇಡಿಕೆಗಳಲ್ಲಿ ಒಂದೇ ಅಂಕೆ ಸತತವಾಗಿ ಮೂರು ಬಾರಿ ಬರುವುದಾಗಿದೆ. ಈ ಸಂಖ್ಯೆಗೆ ಕೆಲವು ನಿಗೂಢವಾದ ಕಾರಣಗಳಿದ್ದು ಇವನ್ನು ಪಡೆಯಲು ಹೆಚ್ಚಿನ ಮೊತ್ತವನ್ನೂ ನೀಡಲು ಜನರು ತಯಾರಿರುತ್ತಾರೆ. ಎಷ್ಟೋ ದೇಶಗಳಲ್ಲಿ ಈ ಪರಿಯ ಅಂಕೆಗಳಿರುವ ವಾಹನ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಗಳನ್ನು ಹರಾಜು ಮಾಡಲಾಗಿದ್ದು ಕಡೆಯ ಮೂರು ಅಂಕೆಗಳು ಒಂದೇ ಆಗಿದ್ದರೆ ಇದು ಕೋಟಿಗಟ್ಟಲೆ ರೂಪಾಯಿಗೂ ಹರಾಜಾಗುತ್ತವೆ. ಕೋಟಿ ಕೊಟ್ಟು ಪಡೆದುಕೊಳ್ಳುವವರೇನೂ ದಡ್ಡರಲ್ಲ, ಬದಲಿಗೆ ಇದರ ಮೂಲಕ ಇವರು ಇನ್ನೂ ದೊಡ್ಡ ಅದೃಷ್ಟ ಪಡೆಯುತ್ತೇವೆ ಎಂದು ನಂಬುತ್ತಾರೆ. ಇವುಗಳು ಅದೃಷ್ಟದ ಜೊತೆಗೇ ಮುಂದಿನ ಜೀನವದಲ್ಲಿ ಮಹತ್ತರ ಬದಲಾವಣೆ ತರುತ್ತದೆ ಎಂದೂ ನಂಬುತ್ತಾರೆ.<br />
<br />
ಈ ಸಂಖ್ಯೆಗಳಿಗೆ ದೇವದೂತರ ಅಥವಾ ಏಂಜೆಲೆಕ್ ಸಂಖ್ಯೆಗಳೆಂದು ಕರೆಯುತ್ತಾರೆ. ಬನ್ನಿ, ಇವುಗಳ ಮಹತ್ವವೇನೆಂದು ನೋಡೋಣ:<br />
<img alt="ಒಂದು ವೇಳೆ 111 ಕಂಡುಬಂದರೆ" src="https://kannada.boldsky.com/img/2017/10/26-1508992001-1m.jpg" /><br />
<b>ಒಂದು ವೇಳೆ 111 ಕಂಡುಬಂದರೆ</b><br />
ಒಂದು ವೇಳೆ ಸಂಖ್ಯೆಯಲ್ಲಿ ಅಂಕೆ ಒಂದು ಸತತವಾಗಿ ಮೂರು ಬಾರಿ ಇದ್ದು, ದೊಡ್ಡ ಸಂಖ್ಯೆಯಲ್ಲಿ ಕನಿಷ್ಟ ಒಂದು ಕಡೆಯಾದರೂ ಅಡಕಗೊಂಡಿದ್ದರೆ ಇದು ದೇವದೂತರು ನಿಮ್ಮೊಂದಿಗೆ ಸಂವಾದ ನಡೆಸಲು ಯತ್ನಿಸುವ ಸಂಕೇತ ಎಂದು ಭಾವಿಸಲಾಗುತ್ತದೆ. ಅಂದರೆ ಉನ್ನತ ಅಧಿಕಾರದಿಂದ ಬರುವ ಸಂದೇಶ ನಿಮ್ಮ ಧನಾತ್ಮಕ ನಿಲುವನ್ನು ಎತ್ತಿ ಹಿಡಿಯುತ್ತದೆ ಹಾಗೂ ನಿಮ್ಮ ಹೃದಯ ಬಯಸುವ ಕೆಲಸವನ್ನೇ ಮಾಡಲು ನೆರವಾಗುತ್ತದೆ. ಈ ಸಂಖ್ಯೆ ಹೊಂದಿರುವ ವ್ಯಕ್ತಿಗಳ ಬಯಕೆಯನ್ನು ದೇವದೂತರು ನೆರವೇರಿಸುವಂತೆ ಮಾಡುತ್ತಾರೆ. ವಿಶೇಷವಾಗಿ 11:11 ಪವಿತ್ರ ಸಮಯವೆಂದೂ ಭಾವಿಸಲಾಗುತ್ತದೆ.<br />
<img alt="ಒಂದು ವೇಳೆ 222 ಕಂಡುಬಂದರೆ " src="https://kannada.boldsky.com/img/2017/10/26-1508992010-2m.jpg" /><br />
<br />
<b>ಒಂದು ವೇಳೆ 222 ಕಂಡುಬಂದರೆ </b><br />
ದೊಡ್ಡ ಸಂಖ್ಯೆಯಲ್ಲಿ ಇದು ಅಡಕಗೊಂಡಿರುವುದು ಕಂಡುಬಂದರೆ ನೀವು ಯಶಸ್ಸಿನ ಸರಿಯಾದ ಪಥದಲ್ಲಿದ್ದೀರಿ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ನಿಮ್ಮ ಯಾವುದೋ ನಡೆಯ ಬಗ್ಗೆ ಅನುಮಾನವಿದ್ದರೆ ಈ ಅಂಕೆ ಸತತವಾಗಿ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ತಾವು ನಡೆಯುತ್ತಿರುವ ದಾರಿ ಸರಿಯೋ ಅಲ್ಲವೋ ಎಂಬ ದ್ವಂದ್ವವಿರುತ್ತದೆ. ಆಗ ಈ ಅಂಕೆಗಳು ಕಾಣಿಸಿಕೊಳ್ಳುತ್ತವೆಯೋ ಎಂದು ಗಮನಿಸಬೇಕು ಹೌದು ಎಂದಾದರೆ ಈ ಪಥ ಸರಿಯಾದುದು ಹಾಗೂ ಈ ಪಥದಲ್ಲಿ ಹೆಚ್ಚಿನ ಅಧಿಕಾರ ಪ್ರಾಪ್ತವಾಗುತ್ತದೆ ಎಂದು ತಿಳಿದುಕೊಳ್ಳಬಹುದು. ನಿಮ್ಮ ಸಮಯ ಹಾಗೂ ಪ್ರಯತ್ನಗಳ ಬಗ್ಗೆ ನಂಬಿಕೆ ಇರಬೇಕು. ಎಲ್ಲವೂ ಸರಿಯಾಗಿಯೇ ಹೋಗುತ್ತಿವೆ ಎಂದು ಇವು ಸೂಚಿಸುತ್ತಿವೆ.<br />
<img alt="ಒಂದು ವೇಳೆ 333 ಕಂಡುಬಂದರೆ " src="https://kannada.boldsky.com/img/2017/10/26-1508992018-3m.jpg" /><br />
<b>ಒಂದು ವೇಳೆ 333 ಕಂಡುಬಂದರೆ </b><br />
ಈ ಅಂಕೆಗಳು ಕಂಡುಬಂದರೆ ಪ್ರಸ್ತುತ ನಿಮ್ಮ ಈಗಿನ ಸ್ಥಿತಿಗಿಂತಲೂ ಹೆಚ್ಚಿನ ಪ್ರಭಾವವಾದ ಶಕ್ತಿ ನಿಮ್ಮನ್ನು ಆವರಿಸಿದೆ ಎಂದು ತಿಳಿದುಕೊಳ್ಳಬಹುದು. ಈ ಶಕ್ತಿಗಳು ನಿಮಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ನಿಮ್ಮ ಕನಸುಗಳು ನನಸಾಗಲಿವೆ ಎಂದು ತಿಳಿಸುತ್ತವೆ.<br />
<img alt="ಒಂದು ವೇಳೆ 444 ಕಂಡುಬಂದರೆ " src="https://kannada.boldsky.com/img/2017/10/26-1508992026-4mm.jpg" /><br />
<b>ಒಂದು ವೇಳೆ 444 ಕಂಡುಬಂದರೆ </b><br />
ಈ ಅಂಕೆ ನಿಮ್ಮ ಒಳಗಿನ ವಿವೇಕವನ್ನು ಪ್ರತಿನಿಧಿಸುತ್ತದೆ. ಒಂದು ಅವಧಿಗೆ ಇದು ಸತತವಾಗಿ ಕಂಡುಬಂದರೆ ಈಗ ನೀವು ನಿಮ್ಮ ಕನಸಿನ ಉದ್ಯೋಗ ಅಥವಾ ಜೀವನದ ಗುರಿಯನ್ನು ಸಾಧಿಸಲು ಸರಿಯಾದ ಮಾರ್ಗದಲ್ಲಿ ನಡೆಯಿರಿ ಹಾಗೂ ಸೋಲೊಪ್ಪಿಕೊಳ್ಳಬೇಡಿ ಎಂದು ತಿಳಿಸುತ್ತಿದೆ. ಹೆಚ್ಚಿನದನ್ನು ಸಾಧಿಸುವ ಹಂಬಲ ಹಾಗೂ ನಿಮ್ಮಲ್ಲಿರುವ ಆತ್ಮವಿಶ್ವಾಸ ನಿಮ್ಮ ಗುರಿ ಸಾಧಿಸಲು ನೆರವಾಗುತ್ತದೆ.<br />
<br />
<img alt="ಒಂದು ವೇಳೆ 555 ಕಂಡುಬಂದರೆ" src="https://kannada.boldsky.com/img/2017/10/26-1508992034-5m.jpg" /><br />
<b>ಒಂದು ವೇಳೆ 555 ಕಂಡುಬಂದರೆ</b><br />
ಈ ಅಂಕೆಗಳು ಸತತವಾಗಿ ಕಂಡುಬಂದರೆ ದೇವದೂತರು ನಿಮ್ಮ ಅನುಕೂಲಕ್ಕಾಗಿ ಕೆಲವು ಪರಿಸ್ಥಿತಿಗಳನ್ನು ಬದಲಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ತನ್ಮೂಲಕ ಕೆಲವು ಧನಾತ್ಮಕ ಶಕ್ತಿ ಪ್ರವಹನಗೊಂಡು ನಿಮ್ಮ ಜೀವನದಲ್ಲಿ ಇನ್ನೂ ಮಹತ್ತರವಾದ ಅಥವಾ ಹೆಚ್ಚಿನ ಮಹತ್ವವುಳ್ಳದ್ದನ್ನು ಸಾಧಿಸಲು ನೆರವಾಗುತ್ತದೆ. ಅಲ್ಲದೇ ಉನ್ನತ ಅಧಿಕಾರದಿಂದ ನಿಮಗೆ ಇದಕ್ಕಾಗಿ ಒಪ್ಪಿಗೆ ದೊರಕುವಂತಹ ಅವಕಾಶವಾಗಿದ್ದು ಇದನ್ನು ಕಳೆದುಕೊಳ್ಳಬಾರದು.<br />
<br />
<img alt="ಒಂದು ವೇಳೆ 666 ಕಂಡುಬಂದರೆ " src="https://kannada.boldsky.com/img/2017/10/26-1508992043-6m.jpg" /><br />
<b>ಒಂದು ವೇಳೆ 666 ಕಂಡುಬಂದರೆ </b><br />
ಸಾಮಾನ್ಯಕ್ಕಿಂತಲೂ ಹೆಚ್ಚು ಬಾರಿ ಈ ಅಂಕೆಗಳು ಕಂಡುಬಂದರೆ ನೀವು ನಿಮ್ಮ ಜೀವನದಲ್ಲಿ ಏನು ಉಳಿದಿದೆ ಎಂಬುದನ್ನು ನೋಡಬೇಕಾಗಿರುವುದು ಅಗತ್ಯ. ಇದು ನೀವು ಬಹಳ ಗಂಭೀರವಾಗಿ ಯೋಚಿಸುತ್ತಿರುವುದು ಹಾಗೂ ಅತಿ ಸೂಕ್ಷ್ಮವಾದ ಸಂಗತಿಗಳ ಬಗ್ಗೆ ಚಿಂತಿಸುತ್ತಿರುವುದನ್ನು ತಿಳಿಸುತ್ತದೆ. ನೀವು ಅಗತ್ಯಕ್ಕೂ ಹೆಚ್ಚು ಚಿಂತಿಸುತ್ತಿದ್ದೀರಿ. ಈ ಅಂಕೆಗಳನ್ನು ಕಂಡಾಗ ನಿಮ್ಮ ಯೋಚನೆಗಳಿಗೆ ಕಡಿವಾಣ ಹಾಕಿ ನಿಮಗೆ ನಿಜವಾಗಿ ಗಮನ ನೀಡಬೇಕಾದ ವಿಷಯಗಳ ಬಗ್ಗೆ ಮಾತ್ರ ಯೋಚಿಸುವುದು ಉತ್ತಮ ಎಂದು ಇದು ಸೂಚಿಸುತ್ತದೆ.<br />
<img alt=" ಒಂದು ವೇಳೆ 777 ಕಂಡುಬಂದರೆ " src="https://kannada.boldsky.com/img/2017/10/26-1508992052-7m.jpg" /><br />
<b>ಒಂದು ವೇಳೆ 777 ಕಂಡುಬಂದರೆ </b><br />
ಈ ಅಂಕೆ ಕಂಡುಬಂದರೆ ನಿಮ್ಮ ಪ್ರಯತ್ನಗಳಿಗೆ ಉನ್ನತ ಅಧಿಕಾರದಿಂದ ಮನ್ನಣೆ ದೊರಕುತ್ತಿದೆ ಎಂದು ತಿಳಿಯಬಹುದು. ಇದು ನಿಮ್ಮ ಪ್ರಸ್ತುತ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಹಳೆಯ ತೊಂದರೆಗಳನ್ನು ಸರಿಪಡಿಸಲಿವೆ. ಅಷ್ಟೇ ಅಲ್ಲ, ನಿಮಗೆ ಯಾವುದೋ ಅವ್ಯಕ್ತ ಹಸ್ತವೊಂದು ನೆರವನ್ನು ನೀಡುತ್ತಿದೆ ಎಂದೂ ತಿಳಿದುಕೊಳ್ಳಬಹುದು.<br />
<img alt=" ಒಂದು ವೇಳೆ 888 ಕಂಡುಬಂದರೆ " src="https://kannada.boldsky.com/img/2017/10/26-1508992060-8m.jpg" /><br />
<br />
<b>ಒಂದು ವೇಳೆ 888 ಕಂಡುಬಂದರೆ </b><br />
ಈ ಅಂಕೆಗಳು ಸತತವಾಗಿ ಕಾಣಬರುವುದು ಅನಂತತೆಯ ಸಂಕೇತವಾಗಿದೆ. ಅಂದರೆ ಅಪರಿಮಿತ ಶಕ್ತಿ, ವಿವೇಕ, ಪ್ರೀತಿ, ಸಮೃದ್ಧಿ, ಏಳ್ಗೆ ಹಾಗೂ ಆರೋಗ್ಯ. ಈ ಅಂಕೆಗಳು ಕಂಡುಬಂದಾಗ ನೀವು ನಿಮ್ಮ ಹೃದಯ ಹಾಗೂ ಮನಸ್ಸನ್ನು ವಿಶಾಲವಾಗಿ ತೆರೆದು ನಿಮ್ಮ ದಾರಿಯಲ್ಲಿ ಬರುವ ಎಲ್ಲವನ್ನೂ ಮುಕ್ತಮನಸ್ಸಿನಿಂದ ಸ್ವೀಕರಿಸಿದರೆ ಒಳ್ಳೆಯದಾಗುತ್ತದೆ.<br />
<img alt="ಒಂದು ವೇಳೆ 999 ಕಂಡುಬಂದರೆ " src="https://kannada.boldsky.com/img/2017/10/26-1508992070-9m.jpg" /><br />
<br />
<b>ಒಂದು ವೇಳೆ 999 ಕಂಡುಬಂದರೆ </b><br />
ಒಂದಂಕೆಯಲ್ಲಿ ಒಂಭತ್ತು ಕಡೆಯ ಅಂಕೆಯಾಗಿದ್ದು ಒಂದು ವೃತ್ತವನ್ನು ಪೂರ್ಣಗೊಳಿಸುತ್ತದೆ. ಅಂದರೆ ಯಾವುದನ್ನು ಪಡೆಯಬೇಕೆಂದು ಇದುವರೆಗೆ ನಿಮ್ಮ ಪ್ರಯತ್ನಗಳು ಸಾಗಿದ್ದವೋ ಅವು ಈಗ ಫಲಕೊಡುವ ಸಮಯ ಬಂದಿದೆ ಎಂದು ತಿಳಿದುಕೊಳ್ಳಬಹುದು. ಅಂದರೆ ನಿಮ್ಮ ಪ್ರಯತ್ನಗಳ ಫಲಿತಾಂಶದ ಸಮಯ ಎನ್ನಬಹುದು. ಈ ಫಲಿತಾಂಶ ಒಳ್ಳೆಯದೇ ಇರಲಿ ಎಂದು ಹಾರೈಸುವ ಕಾಲವೂ ಆಗಿದೆ.<br />
ಈ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-25673778630174367262017-11-30T22:22:00.000+04:302017-11-30T22:23:07.417+04:30ಥಟ್ಟಂತ ತಯಾರಾಗುವ ನೂಡಲ್ ಏಕೆ ತಿನ್ನಬಾರದು?<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ . ಕಾಂ ನಲ್ಲಿ ಪ್ರಕಟವಾದ ಲೇಖನ<br />
https://goo.gl/7QV854<br />
<br />
ಇನ್ಸ್ಟಂಟ್ ನೂಡಲ್ಸ್ - ಇದು ಇಂದು ಪ್ರತಿ ಅಂಗಡಿಯಲ್ಲಿಯೂ ಥಟ್ಟನೇ ಕೈಗೆ ಸಿಗುವ ಸಿದ್ಧ ಆಹಾರದ ಪೊಟ್ಟಣವಾಗಿದೆ. ಹೆಸರೇ ತಿಳಿಸುವಂತೆ ಇದನ್ನು ಇನ್ಸ್ಟಂಟ್ ಅಥವಾ ಥಟ್ಟನೇ ತಯಾರಿಸಿ ಸೇವಿಸಬಹುದು. ರುಚಿಕರವೂ ಆರೋಗ್ಯಕರವೂ ಆಗಿರುವ ಈ ಮಸಾಲೆಭರಿತ ಶ್ಯಾವಿಗೆ ಸಮಯವಿಲ್ಲದವರ ಪಾಲಿಗೆ ಅಕ್ಷಯ ಪಾತ್ರೆಯೇ ಸರಿ. ವಿದ್ಯಾರ್ಥಿಗಳು, ಬೆಳಿಗ್ಗೆ ಧಾವಂತದಲ್ಲಿ ಬೇಗನೇ ಕಛೇರಿ, ಉದ್ಯೋಗದ ಸ್ಥಳಗಳಿಗೆ ತಲುಪಬೇಕಾದ ಉದ್ಯೋಗಸ್ಥರು, ಬೇರೆ ಕೆಲಸದಲ್ಲಿ ತೊಡಗಿದ್ದು ಅಡುಗೆಗೆ ಸಮಯವಿಲ್ಲದಿರುವ ಗೃಹಿಣಿಯರು ಒಟ್ಟಾರೆ ಎಲ್ಲರಿಗೂ ಈ ನೂಡಲ್ಸ್ ನೆಚ್ಚಿನ ಆಯ್ಕೆಯಾಗಿದೆ. ಥಟ್ಟಂತ ತಯಾರಿಸಬಹುದು ಹಾಗೂ ರುಚಿಕರವಾಗಿರುತ್ತದೆ ಎಂಬ ಎರಡು ಕಾರಣಗಳನ್ನು ಹೊರತುಪಡಿಸಿದರೆ ವಾಸ್ತವದಲ್ಲಿ ವಿಶ್ವದ ಅತ್ಯಂತ ಕೆಟ್ಟ ಆಹಾರವೇ ಈ ನೂಡಲ್ಸ್. ಎಷ್ಟೋ ದಿನಗಳಿಂದ ತಿನ್ನುತ್ತಿದ್ದೇವೆ, ನಮಗೇನೂ ತೊಂದರೆಯಾಗಿಲ್ಲವಲ್ಲ ಎಂದು ನೂಡಲ್ಸ್ ನ ಗುಣಗಾನ ಮಾಡುವವರಿಗೆ ನಿರಾಶೆ ಕಾದಿದೆ. ಏಕೆಂದರೆ ಇದರ ಸೇವನೆಯಿಂದ ಹೊಟ್ಟೆ ತುಂಬಿದಂತಾಗುವುದು, ವಾಯುಪ್ರಕೋಪ, ಅಜೀರ್ಣ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ.<br />
<br />
ಈ ನೂಡಲ್ಸ್ ಮಕ್ಕಳಿಗೆ ಹೆಚ್ಚು ಇಷ್ಟ. ಮಕ್ಕಳಿಗೆ ಹಸಿವಾದರೆ ತಕ್ಷಣವೇ ಏನಾದರೂ ತಿನ್ನಬೇಕಿರುತ್ತದೆ ಹಾಗೂ ಇವರ ನೆಚ್ಚಿನ ಕಾರ್ಟೂನು ಪಾತ್ರಗಳನ್ನೂ ಇದರ ಪ್ಯಾಕೆಟ್ಟಿನ ಮೇಲೆ ಮುದ್ರಿಸುವ ಮೂಲಕ ಮಕ್ಕಳು ಇನ್ನಷ್ಟು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳು ಇಷ್ಟಪಡ್ತುತಾರೆ ಎಂದೇ ಹೆಚ್ಚಿನ ಪಾಲಕರು ಹೆಚ್ಚು ಹೆಚ್ಚು ಪ್ರಮಾಣ ಹಾಗೂ ಭಿನ್ನವಾದ ರುಚಿಯ ನೂಡಲ್ಸ್ ಪ್ಯಾಕೆಟ್ಟುಗಳನ್ನು ಕೊಂಡು ತರುತ್ತಾರೆ. ಈ ನೂಡಲ್ಸ್ ಏಕೆ ಕೆಟ್ಟ ಆಹಾರವಾಗಿದೆ ಎಂದರೆ ಇದನ್ನು ತಯಾರಿಸಲು ಮೊದಲಾಗಿ ನಾರಿನ ಅಂಶವೇ ಇಲ್ಲದ ಮೈದಾ ಹಿಟ್ಟಿನ ಶಾವಿಗೆಯನ್ನು ಯಂತ್ರಗಳ ಮೂಲಕ ತಯಾರಿಸಿ ಇದಕ್ಕೆ ಹಲವಾರು ಮಸಾಲೆ ಹಾಗೂ ಕೆಡದೇ ಇರುವಂತೆ ಸಂರಕ್ಷಕಗಳು ಹಾಗೂ ಕೃತಕ ರುಚಿಬರುವ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕಗಳೆಲ್ಲಾ ರುಚಿಯಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಬಲ್ಲವು.<br />
<img alt="ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ" src="https://kannada.boldsky.com/img/2017/11/30-1512043664-17-1439807450-noodles.jpg" /><br />
<br />
ಬನ್ನಿ, ಥಟ್ಟಂತ ತಯಾರಾಗುವ ನೋಡಲ್ಸ್ ಏಕೆ ಕೆಟ್ಟ ಆಹಾರವಾಗಿದೆ ಎಂಬುದನ್ನು ನೋಡೋಣ:<br />
೧) ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ.<br />
ಸತತವಾಗಿ ನೂಡಲ್ಸ್ ಸೇವಿಸುವ ಮೂಲಕ ಜೀರ್ಣಕ್ರಿಯೆಯ ಲಯಬದ್ದತೆ ಹಾನಿಗೊಳಗಾಗುತ್ತದೆ. ಕೆಲವು ದಿನಗಳ ಬಳಿಕ ಮಲಬದ್ದತೆ, ಆಮಶಂಕೆ, ಹೊಟ್ಟೆಯಲ್ಲಿ ನೋವು, ಆಮ್ಲೀಯತೆ, ಎದೆಯುರಿ, ಹೊಟ್ಟೆಯಲ್ಲಿ ಗುಡುಗುಡು, ಹೊಟ್ಟೆಯುಬ್ಬರಿಕೆ ಹಾಗೂ ಸದಾ ಹೊಟ್ಟೆ ತುಂಬಿದಂತಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.<br />
<img alt="ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ" src="https://kannada.boldsky.com/img/2017/11/30-1512043579-2m.jpg" /><br />
೨) ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ:<br />
ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದೆ. ಇದು ರಕ್ತದ ಒತ್ತಡವನ್ನು ಹೆಚ್ಚಿಸಲು ಪ್ರಮುಖವಾದ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಹೆಚ್ಚುವರಿ ಪ್ರಮಾಣವನ್ನು ನಮ್ಮ ದೇಹದಿಂದ ಹೊರಹಾಕಲು ನಮ್ಮ ಮೂತ್ರಪಿಂಡಗಳು ಅತಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದಕ್ಕಾಗಿ ಮೂತ್ರಪಿಂಡಗಳು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಬೇಕಾಗುತ್ತದೆ (fluid retention) ಪರಿಣಾಮವಾಗಿ ಕೈಕಾಲುಗಳು ನೀರುತುಂಬಿಕೊಂಡಂತೆ ಊದಿಕೊಳ್ಳುತ್ತವೆ. ಒಂದು ವೇಳೆ ಈಗಾಗಲೇ ಹೃದಯದೊತ್ತಡ ಮತ್ತು ಮೂತ್ರಪಿಂಡದ ತೊಂದರೆ ಇರುವ ವ್ಯಕ್ತಿಗಳಿಗೆ ನೂಡಲ್ಸ್ ನೇರವಾದ ವಿಷಾಹಾರವಾಗಿದೆ.<br />
<img alt="ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ" src="https://kannada.boldsky.com/img/2017/11/30-1512043678-17-1439807550-12-mint-pasta.jpg" /><br />
೩) ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ.<br />
ಒಂದು ವೇಳೆ ನಿಮ್ಮ ಜೀವರಾಸಾಯನಿಕ ಕ್ರಿಯೆ ಕುಗ್ಗಿದರೆ ಇದು ಸ್ಥೂಲಕಾಯಕ್ಕೆ ನೇರವಾದ ಕಾರಣವಾಗುತ್ತದೆ. ಈ ಆಹಾರ ದೇಹದಲ್ಲಿ ವಿಷವಸ್ತುಗಳ ಸಂಗ್ರಹ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಜೀವರಾಸಾಯನಿಕ ಕ್ರಿಯೆ ಕುಗ್ಗುತ್ತದೆ. ಈ ವಿಷಗಳೆಲ್ಲಾ ನಾಲಿಗೆಗೆ ರುಚಿಕರವಾಗಿರುವ ರಾಸಾಯನಿಕ ಹಾಗೂ ಸಂರಕ್ಷಕಗಳಾಗಿದ್ದು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನುವಂತೆ ಪ್ರಚೋದಿಸುತ್ತದೆ.<br />
<br />
೪) ಅಜಿನೋಮೋಟೋ ಸಹಾ ಇದೆ<br />
Mono Sodium Glutamate (MSG) ಅಥವ Chinese Salt ಎಂದೂ ಕರೆಯಲ್ಪಡುವ ಅಜಿನೋಮೋಟೋ (ವಾಸ್ತವವಾಗಿ ಇದು ಉತ್ಪಾದಿಸುವ ಸಂಸ್ಥೆಯ ಹೆಸರು) ಒಂದು ರುಚಿಹೆಚ್ಚಿಸುವ ಉಪ್ಪಾಗಿದ್ದರೂ ಮಾರಕವಾದ ರಾಸಾಯನಿಕವಾಗಿದೆ. ಇದರ ಹೆಸರು ಗೊತ್ತಿಲ್ಲದ ಮುಗ್ಧ ಬಾಣಸಿಗರು ಇಂದಿಗೂ ಇದಕ್ಕೆ ಟೇಸ್ಟಿಂಗ್ ಪೌಡರ್ ಎಂದೇ ಕರೆಯುತ್ತಾರೆ. ಆದರೆ ಸಂಶೋಧನೆಗಳ ಮೂಲಕ ಈ ರಾಸಾಯನಿಕದ ಸೇವನೆ ಮೆದುಳಿಗೆ ಹಾನಿಕಾರಕ ಎಂದು ಸಾಬೀತಾಗಿದೆ. ಅಲ್ಲದೇ ಮೂತ್ರಪಿಂಡಗಳ ವೈಫಲ್ಯ ಹಾಗೂ ಇತರ ದೈಹಿಕ ತೊಂದರೆಗಳನ್ನೂ ತಂದೊಡ್ಡುತ್ತದೆ. ಕೆಲವರಿಗೆ ಈ ರಾಸಾಯನಿಕ ಅಲರ್ಜಿಕಾರಕವಾಗಿದ್ದು ಕೊಂಚ ಹೆಚ್ಚಿನ ಪ್ರಮಾಣ ದೇಹ ಸೇರಿದರೂ ಇವರಿಗೆ ಎದೆಯಲ್ಲಿ ನೋವು, ತಲೆನೋವು ಮೊದಲಾದವು ಎದುರಾಗುತ್ತವೆ.<br />
<img alt="ಮೇಣ" src="https://kannada.boldsky.com/img/2017/11/30-1512043620-5m.jpg" /><br />
೫) ಮೇಣ<br />
ಶ್ಯಾವಿಗೆಯ ನೂಲುಗಳು ಒಂದಕ್ಕೊಂದು ಅಂಟಿಕೊಂಡಿರದಂತೆ ಇರಲು ಈ ಉತ್ಪನ್ನಗಳಲ್ಲಿ ಮೇಣವನ್ನು ಬಳಸಲಾಗುತ್ತದೆ. ಒಣಗಿದ್ದಾಗ ಈ ಮೇಣ ಕಾಣಲು ಬರುವುದಿಲ್ಲ. ಇದನ್ನು ಪರೀಕ್ಷಿಸಬೇಕೆಂದರೆ ಕುದಿಯುವ ನೀರಿನಲ್ಲಿ ಕೊಂಚ ನೂಡಲ್ಸ್ ಗಳನ್ನು ಮಾತ್ರ ಹಾಕಿ ಒಂದು ನಿಮಿಷ ಬಿಟ್ಟರೆ ಸಾಕು. ಮೇಣಕರಗಿ ನೀರಿನ ಮೇಲ್ಮೈಯಲ್ಲಿ ತೇಲುತ್ತಾ ರಂಗುರಂಗಿನ ಚಿತ್ತಾರ ಬಿಡಿಸುವುದನ್ನು ಕಾಣಬಹುದು. ಈ ಮೇಣವನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇದು ವಿಸರ್ಜನೆಗೊಳ್ಳುವ ಮೊದಲು ಕರುಳುಗಳಲ್ಲಿ ತೊಂದರೆ, ಮಲಬದ್ದತೆ, ವಾಯುಪ್ರಕೋಪ ಮೊದಲಾದವುಗಳನ್ನು ಉಂಟುಮಾಡಿಯೇ ವಿದಾಯ ಹೇಳುತ್ತದೆ.<br />
<img alt="ಕ್ಯಾನ್ಸರ್ಕಾರಕ ಕಣಗಳು" src="https://kannada.boldsky.com/img/2017/11/30-1512043629-6m.jpg" /><br />
೬) ಕ್ಯಾನ್ಸರ್ ಕಾರಕ ಕಣಗಳು:<br />
ಈ ನೂಡಲ್ಸ್ ಗಳಲ್ಲಿ ಕೆಲವಾರು ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಹೊಂದಿವೆ. ವಿಶೇಷವಾಗಿ ಕಪ್ ಗಳಲ್ಲಿ ಪ್ಯಾಕ್ ಮಾಡಿಸುವ ಉತ್ಪನ್ನಗಳು. ಈ ಕಪ್ ಗಳನ್ನು ಥರ್ಮೋಕೋಲ್ ಆಧಾರಿತ ಉತ್ಪನ್ನಗಳಿಂದ ತಯಾರಿಸಲಾಗಿದ್ದು ಇದಕ್ಕೆ ಬಿಸಿನೀರು ತಗುಲಿದೊಡನೆ ಇದರಲ್ಲಿರುವ ಕೆಲವು ರಾಸಾಯನಿಕಗಳು ಕರಗಿ ನೀರಿನೊಡನೆ ಬೆರೆಯುತ್ತವೆ. ಎಷ್ಟೋ ಮುಂದುವರೆದ ರಾಷ್ಟ್ರಗಳಲ್ಲಿ ಥರ್ಮೋಕೋಲ್ ಆಧಾರಿತ ಉತ್ಪನ್ನಗಳನ್ನು ಬಿಸಿದ್ರವಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ಇದರ ನಿಷೇಧದ ಅಗತ್ಯವಿದ್ದು ಈಗಲೂ ಈ ಉತ್ಪನ್ನಗಳನ್ನು ನೂಡಲ್ಸ್ ನಲ್ಲಿ ಪ್ಯಾಕ್ ಮಾಡಿರುವ ಕಾರಣ ಇದನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇದ್ದೇ ಇರುತ್ತದೆ.<br />
<img alt=" ಯಕೃತ್ಗೆ ಆಗುವ ಹಾನಿಯ ಸಾಧ್ಯತೆ" src="https://kannada.boldsky.com/img/2017/11/30-1512043638-7m.jpg" /><br />
೭) ಯಕೃತ್ ಗೆ ಆಗುವ ಹಾನಿಯ ಸಾಧ್ಯತೆ<br />
ನೂಡಲ್ಸ್ ನಲ್ಲಿರುವ humectants ಅಥವಾ ಮಂಜುಗಡ್ಡೆಯಾಗದಂತೆ ತಡೆಯಲು ಬಳಸಲಾಗುವ ಕೆಲವು ರಾಸಾಯನಿಕಗಳು ವಿಶೇಷವಾಗಿ ಯಕೃತ್ ಮತ್ತು ಮೂತ್ರಪಿಂಡಗಳಿಗೆ ಹಾನಿ ಎಸಗುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ ಬಳಸಲಾಗುವ propylene glycol ಎಂಬ ರಾಸಾಯನಿಕ ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಬಲ್ಲುದು.<br />
<img alt="ತೂಕದಲ್ಲಿ ಹೆಚ್ಚಳ " src="https://kannada.boldsky.com/img/2017/11/30-1512043593-3m.jpg" /><br />
೮) ತೂಕದಲ್ಲಿ ಹೆಚ್ಚಳ:<br />
ಥಟ್ಟನೇ ತಯಾರಾಗುವ ನೂಡಲ್ಸ್ ನಲ್ಲಿ ಸಂಸ್ಕರಿತ ಕಾರ್ಬೋಹೈಡ್ರೇಟುಗಳಾದ ಮೈದಾ ಹಾಗೂ ಇತರ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದರೊಂದಿಗೇ ಅಜಿನೋಮೋಟೋ, ಉಪ್ಪು, ರುಚಿಕಾರಕಗಳು ಹೆಚ್ಚು ಹೆಚ್ಚು ತಿನ್ನಲು ಹಾಗೂ ತೂಕ ಹೆಚ್ಚಲು ಬೆಂಬಲ ನೀಡುತ್ತವೆ. ಅಲ್ಲದೇ ಈ ಆಹಾರದ ಸೇವನೆಯಿಂದ ನಮ್ಮ ರಕ್ತದಲ್ಲಿಯೂ ಸಕ್ಕರೆಯ ಪ್ರಮಾಣ ಥಟ್ಟಂತ ಏರುತ್ತದೆ ಹಾಗೂ ಈ ಆಗಾಧ ಪ್ರಮಾಣವನ್ನು ನಿಭಾಯಿಸಲು ಮೇದೋಜೀರಕ ಗ್ರಂಥಿ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅನ್ನೂ ಬಿಡುಗಡೆಗೊಳಿಸಬೇಕಾಗಿ ಬರುತ್ತದೆ. ಇದು ದೇಹದಲ್ಲಿ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ ಹಾಗೂ ಈ ಏರುಪೇರು ಹಲವಾರು ತೊಂದರೆಗಳನ್ನು ಹುಟ್ಟುಹಾಕುತ್ತದೆ.<br />
<br />
೯) ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ<br />
ನೂಡಲ್ಸ್ ಅನ್ನೇ ಹೆಚ್ಚು ಇಷ್ಟಪಟ್ಟು ತಿನ್ನುವವರಿಗೆ ಕೊಂಚ ನಿರಾಶೆಯಾಗುವುದಂತೂ ಖಂಡಿತಾ. ಏಕೆಂದರೆ ಈ ಆಹಾರ ನಮ್ಮ ಕರುಳುಗಳ ಒಳಗಿನ ವಿಲ್ಲೈ ಎಂಬ ಹೀರುಕ ಭಾಗಕ್ಕೆ ಅಂಟಿಕೊಳ್ಳುವ ಗುಣವಿದ್ದು ಇದು ಮುಂದೆಹೋಗದೇ ಅಲ್ಲಿಯೇ ವಾಯುವಿನ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ, ಹುಳಿತೇಗು, ಅಜೀರ್ಣತೆ ಮೊದಲಾದ ತೊಂದರೆಗಳು ಎದುರಾಗುತ್ತವೆ.<br />
<img alt="ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ" src="https://kannada.boldsky.com/img/2017/11/30-1512043570-1m.jpg" /><br />
ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?<br />
ಕೆಲದಿನಗಳ ಹಿಂದೆ ಮ್ಯಾಗಿ ಎಂಬ ಉತ್ಪನ್ನವನ್ನು ಭಾರತದ ಮಾರುಕಟ್ಟೆ ನಿಷೇಧಿಸಿತ್ತು. ಈ ಉತ್ಪನ್ನಗಳಲ್ಲಿ ಅಪಾಯಕರ ಮಟ್ಟದಲ್ಲಿ ಬೂದಿ ಇದೆ ಎಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸಿ ತೋರಿಸಲಾಗಿತ್ತು. ಇದನ್ನು ಸರಿಪಡಿಸಿದ ಬಳಿಕ ಮತ್ತೆ ಇದು ಮಾರುಕಟ್ಟೆಗೆ ಬಂದಿದೆ. ಆದರೆ ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವಾಗ ಇದರ ಸೇವನೆ ಆರೋಗ್ಯಕ್ಕೆ ಹೇಗೆ ಮಾರಕ ಎಂದು ಅಧ್ಯಯನ ಮಾಡಿಯೇ ಬಿಡುಗಡೆಮಾಡಲಾಗುತ್ತದೆ. ಆದ್ದರಿಂದ ಇದರ ಪರಿಣಾಮಗಳು ತಕ್ಷಣದ ಬಳಕೆಯಿಂದ ಗೋಚರಿಸಲ್ಪಡುವುದಿಲ್ಲ. ಹಾಗಾಗಿ ಈ ಸಂಸ್ಥೆಗಳು ಬಚಾವು. ಒಂದು ವರ್ಷದ ಮೇಲೆ ಯಾವುದಾದರೂ ತೊಂದರೆ ಎದುರಾದರೂ ಅದು ನೀವು ಒಂದು ವರ್ಷದಿಂದ ನೂಡಲ್ಸ್ ತಿಂದಿದ್ದಕ್ಕೇ ಬಂದಿರುವುದು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ಇವನ್ನು ನಿಷೇಧಿಸಲು ಸರ್ಕಾರಕ್ಕೂ ಸ್ಪಷ್ಟ ಕಾರಣ ದೊರಕುವುದಿಲ್ಲ. ಹಾಗಾಗಿ ಇವು ಎಗ್ಗಿಲ್ಲದೇ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಆದರೆ ಬಳಕೆದಾರರಾದ ನಾವೇ ಎಚ್ಚೆತ್ತು ಸ್ವತಃ ಈ ಉತ್ಪನ್ನಗಳನ್ನು ಕೊಳ್ಳದೇ ಇರುವ ಮೂಲಕ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುವುದೇ ಜಾಣತನ.<br />
<div>
<br /></div>
</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-31094205792546940142017-11-28T22:05:00.004+04:302017-11-28T22:05:54.093+04:30ನೆಮ್ಮದಿಯ ಆರ್ಥಿಕ ದಿನಗಳಿಗಾಗಿ ಇಂದಿನಿಂದೇ ಈ ಆರು ಸೂತ್ರಗಳನ್ನು ಪಾಲಿಸಲು ಪ್ರಾರಂಭಿಸಿ<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ .ಕಾಂ ತಾಣದಲ್ಲಿ ಪ್ರಕಟವಾಗಿರುವ ಲೇಖನ<br />
https://goo.gl/RfXJnT<br />
<br />
<br />
ಬಾಳಿನಲ್ಲಿ ಏನೇ ಸಾಧಿಸಿದರೂ ನೆಮ್ಮದಿಯ ನಾಳೆಗಾಗಿ ಮಾತ್ರ ಆರ್ಥಿಕ ಸುದೃಢತೆ ತುಂಬಾ ಅಗತ್ಯ. ಬಾಳಿನ ಸಂಜೆ ಸುಖಕರವಾಗಿರಬೇಕೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಆರ್ಥಿಕ ಹವ್ಯಾಸಗಳನ್ನು ಅನುಸರಿಸುತ್ತಾ ಬರಬೇಕು. ನಿಮ್ಮ ವೈಯಕ್ತಿಕ ಖರ್ಚುಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದರ ಮೇಲೆ ಈ ಆರ್ಥಿಕ ಸ್ಥಿರತೆ ಹಾಗೂ ಸುರಕ್ಷತೆ ಅವಲಂಬಿಸಿದೆ.<br />
<br />
ನಮಗೆ ಮೊದಲ ಕೆಲಸ ಸಿಕ್ಕಾಗ ಹೊರಜಗತ್ತಿನಲ್ಲಿ ನಮ್ಮ ವೈಯಕ್ತಿಕ ಖರ್ಚುಗಳು ಇಷ್ಟಾಗಬಹುದೆಂಬ ಅಂದಾಜು ನಮಗಾಗುವುದಿಲ್ಲ. ನಿಧಾನವಾಗಿ, ಈ ಖರ್ಚುಗಳು ಒಂದಾದ ಮೇಲೊಂದರಂತೆ ಆವರಿಸುತ್ತಾ ಬರುತ್ತವೆ ಹಾಗೂ ಹೊರಜಗತ್ತಿನ ಆಕರ್ಷಣೆಗಳಿಗೆ ಬಲಿಯಾಗುತ್ತೇವೆ. ಆದರೆ ಚಿಕ್ಕ ವಯಸ್ಸಿನಿಂದಲೇ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ಸೂಕ್ತವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾ ಬಂದರೆ ನಮ್ಮ ಭವಿಶ್ಯದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಅಥವಾ ಅವಕಾಶಗಳನ್ನು ಎದುರಿಸಲು ಸಾಮರ್ಥ್ಯ ದೊರಕುವುದು ಮಾತ್ರವಲ್ಲ, ಮಾನಸಿಕವಾದ ಬೆಂಬಲವೂ ದೊರಕುತ್ತದೆ.<br />
<br />
ಇದಕ್ಕೆ ಜಾದೂದಂಡ ಅಥವಾ ಅಲ್ಲಾವುದ್ದೀನನ ಮಾಯಾದೀಪವೇನೂ ಬೇಕಾಗಿಲ್ಲ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸುವ ಜಾಣ್ಮೆ ಹಾಗೂ ಅನವಾಶ್ಯಕ ಖರ್ಚುಗಳಿಗೆ ಬೇಡ ಎನ್ನಲು ಅಗತ್ಯವಿರುವ ಮನೋಬಲ ಇಷ್ಟೇ ಸಾಕು, ನಿಮ್ಮ ಆರ್ಥಿಕ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಸುಖಕರವಾಗಿಸಲು.<br />
<br />
ಈ ನಿಟ್ಟಿನಲ್ಲಿ ಆರ್ಥಿಕ ತಜ್ಞರು ನೀಡುವ ಆರು ಸೂತ್ರಗಳನ್ನು ಒಂದು ನಿಯಮದಂತೆ ಪಾಲಿಸಿಕೊಂಡು ಬರುತ್ತಿದ್ದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಯೋಜನೆಗಳು ಸಫಲವೂ ಆಗುತ್ತವೆ.<br />
<img alt="1. ಬಜೆಟ್ ರೂಪಿಸಿ ಮತ್ತು ಅದಕ್ಕೆ ಬದ್ದರಾಗಿರಿ " src="https://kannada.goodreturns.in/img/2017/11/11-1510390006-finance-planning.jpg" /><br />
1. ಒಂದು ಆಯವ್ಯಯದ ಲೆಕ್ಕಾಚಾರವಿರಲಿ, ಇದಕ್ಕೆ ಬದ್ದರಾಗಿರಿ:<br />
ನೀವು ಬದ್ದರಾಗಬೇಕಾಗಿರುವ ಆರ್ಥಿಕ ಸೂತ್ರಗಳಲ್ಲಿ ಇದು ಪ್ರಥಮ ಆದ್ಯತೆಯ ಸೂತ್ರವಾಗಿದೆ. ಅರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಆಯವ್ಯಯದ ಲೆಕ್ಕಾಚಾರ ಅಥವಾ ಬಜೆಟ್ ಒಂದನ್ನು ಹಮ್ಮಿಕೊಳ್ಳುವುದು ಅಡಿಪಾಯವಾಗಿದೆ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ ಒಂದು ನಿಗದಿತ ಅವಧಿಯಲ್ಲಿ ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಪರಿಗಣಿಸಿ ಇದರ ಸಾಧಕ ಬಾಧಕಗಳ ರೂಪುರೇಶೆಗಳನ್ನು ಹಾಕಿಕೊಳ್ಳುವುದು. ಒಂದು ಬಜೆಟ್ ಇದ್ದು ಆ ಪ್ರಕಾರವೇ ನಡೆದುಕೊಳ್ಳುತ್ತಾ ಬಂದರೆ ನಿಮ್ಮ ಅರ್ಥಿಕ ಗುರಿಗಳನ್ನು ಸುಲಭವಾಗಿ ಮುಟ್ಟಬಹುದು.<br />
<br />
ನಿಮ್ಮ ಬಜೆಟ್ ಈ ವಿಷಯಗಳನ್ನು ಅವಲಂಬಿಸಿರುತ್ತದೆ:<br />
ಮಾಸಿಕ ಆದಾಯ: ನಿಮ್ಮ ನಿಯಮಿತವಾದ ಮಾಸಿಕ ವೇತನವೆಷ್ಟು? ನಿಮಗೆ ಇನ್ನೂ ಯಾವುದಾದರೂ ಪರ್ಯಾಯ ಆದಾಯ ಅಥವಾ ಪರೋಕ್ಷ ಗಳಿಕೆ ಇದೆಯೇ?<br />
ಮಾಸಿಕ ಖರ್ಚು: ಬಾಡಿಗೆ, ಮೊಬೈಲ್ ವೆಚ್ಚ, ವಿದ್ಯುತ್, ಸಾಲದ ಮಾಸಿಕ ಕಂತು, ದಿನಸಿ, ಬಟ್ಟೆಬರೆ, ಮನರಂಜನೆ ಇತ್ಯಾದಿಗಳು.<br />
ಮಾಸಿಕ ಉಳಿತಾಯ: ಒಂದು ಸಾಮಾನ್ಯವಾದ ತಿಂಗಳಲ್ಲಿ ನಿಮ್ಮ ಉಳಿತಾಯ ಎಷ್ಟು?<br />
ಯಾವುದೇ ಕುಟುಂಬಕ್ಕೆ ಮೇಲಿನ ಖರ್ಚುಗಳು ಎಲ್ಲಾ ತಿಂಗಳಲ್ಲಿ ಸರಿಸಮನಾಗಿರಲು ಸಾಧ್ಯವೇ ಇಲ್ಲ. ಕೊಂಚ ಹೆಚ್ಚು ಕಡಿಮೆ ಅನುಸರಿಸಿ, ವಾರ್ಷಿಕ ಸರಾಸರಿಯನ್ನು ಪರಿಗಣಿಸುವ ಮೂಲಕ ಈ ಲೆಕ್ಕಗಳನ್ನು ಒಂದು ಹಂತದಲ್ಲಿರುವಂತೆ ನೋಡಿಕೊಳ್ಳಬೇಕು. ಆ ಪ್ರಕಾರ ನಿಮ್ಮ ಬಜೆಟ್ ನಿಗದಿಪಡಿಸಬೇಕು. ಆದರೆ ಬಜೆಟ್ ಇಲ್ಲದೇ ಇರುವುದು ಮಾತ್ರ ಸಲ್ಲದು.<br />
<br />
<img alt="2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು" src="https://kannada.goodreturns.in/img/2017/11/11-1510390720-rrr-28-1506595294.jpg" /><br />
2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು:<br />
ಇದು ನಮ್ಮ ಹಿರಿಯರು ಸದಾ ಹೇಳುತ್ತಾ ಬಂದಿರುವ ಸೂತ್ರವಾಗಿದ್ದು ಇದನ್ನು ಕಡೆಗಣಿಸುವ ಮೂಲಕ ಭಾರಿ ಆರ್ಥಿಕ ಗಂಡಾಂತರವೇ ಎದುರಾಗಬಹುದು. ಇದರ ಪರಿಣಾಮ ಪ್ರಾರಂಭದಲ್ಲಿ ಚಿಕ್ಕದಾಗಿ ತೋರಿದ್ದು ಹೆಚ್ಚಿನವರು ಕಡೆಗಣಿಸುತ್ತಾರೆ. ಆದರೆ ಮುಂದೊಂದು ದಿನ ಇದು ಬುಡವನ್ನೇ ಕಡಿದು ಬಿಡುವಷ್ಟು ಭಾರಿಯಾದ ಭಾರವಾಗಿ ಪರಿಗಣಿಸಬಹುದು. ಹಿರಿಯರ ಈ ಮಾತನ್ನು ನಾವು ಎಷ್ಟು ಬೇಗ ಕಲಿತು ಮನಗಾಣುತ್ತೇವೋ ಅಷ್ಟೇ ಉತ್ತಮ ಹಾಗೂ ನೆಮ್ಮದಿಯ ಜೀವನ ಸಾಗಿಸಬಹುದು.<br />
<br />
ಈ ಬಗ್ಗೆ ಬೆಂಜಮಿನ್ ಫ್ರಾಂಕ್ಲಿನ್ ರವರು ಹೀಗೆ ಹೇಳುತ್ತಾರೆ: "ನಿಮ್ಮ ಚಿಕ್ಕ ಚಿಕ್ಕ ಖರ್ಚುಗಳ ಬಗ್ಗೆಯೂ ಕಾಳಜಿ ಇರಲಿ. ನೆನಪಿರಲಿ, ಒಂದು ಚಿಕ್ಕ ತೂತು ಸಹಾ ದೊಡ್ಡ ಹಡಗನ್ನೇ ಮುಳುಗಿಸಿಬಿಡಬಲ್ಲುದು"<br />
<br />
ಈ ಮಾತನ್ನು ಸಮರ್ಥಿಸಲು ಕೆಲವು ಉದಾಹರಣೆಗಳನ್ನು ನೋಡೋಣ:<br />
* ಮಾರುಕಟ್ಟೆಯಲ್ಲಿ ಅಥವಾ ಜಾಹೀರಾತುಗಳಲ್ಲಿ ಕಂಡ ಯಾವುದೇ ವಸ್ತು ನಮಗೆ ಬೇಕೆನಿಸುತ್ತದೆ. ಹೀಗೆ ಅನ್ನಿಸುವಂತೆಯೇ ಈ ಜಾಹೀರಾತುಗಳಲ್ಲಿ ಭಾರೀ ಸುಳ್ಳನ್ನು ಸೇರಿಸಿರುತ್ತಾರೆ. ಆದರೆ ಈ ಸುಳ್ಳುಗಳಿಗೆ ನಿಮ್ಮ ಭಾವನೆಯನ್ನು ಬಲಿಗೊಡದೇ ನಿಮಗೆ ಅಗತ್ಯವಿದ್ದರೆ ಮಾತ್ರ, ಉತ್ತಮ ಗುಣಮಟ್ಟದ್ದನ್ನು ಕೊಳ್ಳಿ. ಅಗತ್ಯವಿಲ್ಲದೇ ಇದ್ದರೆ, ಆಫರ್ ಇದ್ದರೂ ಸಹಾ, ಕೊಳ್ಳಲೇಬೇಡಿ. (ಮಹಿಳೆಯರಿಗೆ ಹೆಚ್ಚು ಅನ್ವಯ)<br />
* ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಕೊಳ್ಳುವಾಗ ನಿಮ್ಮ ಮಿತಿಗಳನ್ನು ಅರಿತೇ ಮುಂದುವರೆಯಿರಿ.<br />
* ನಿಯಮಿತವಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನ ಹರಿಸಿ.<br />
* ಯಾವಾಗ ನಿಮ್ಮ ಆದಾಯದ ಮಿತಿಯೊಳಗೇ ಖರ್ಚು ಮಾಡಲು ಕಲಿತಿರೋ, ಆಗ ಉಳಿತಾಯದ ಕೆಲವಾರು ದಾರಿಗಳು ತೆರೆದುಕೊಳ್ಳುತ್ತವೆ. ಈ ಉಳಿತಾಯ ಭವಿಷ್ಯದಲ್ಲಿ ನಿಮ್ಮ ಕೈಹಿಡಿಯುತ್ತದೆ.<br />
<img alt="3. ಬಿಲ್ ಗಳನ್ನು ದಿನಾಂಕ ಮೀರುವ ಮುನ್ನ ಪಾವತಿಸಿ" src="https://kannada.goodreturns.in/img/2017/11/11-1510390763-18-1434630406-happy9.jpg" /><br />
3. ಪಾವತಿಗಳನ್ನು ದಿನಾಂಕ ಮೀರುವ ಮುನ್ನವೇ ಪಾವತಿಸಿಬಿಡಿ<br />
ನಿಮ್ಮ ಆರ್ಥಿಕ ಬದ್ದತೆಗೆ ಇದು ತುಂಬಾ ಅಗತ್ಯವಾಗಿದೆ. ನಿತ್ಯ ಜೀವನದ ಅಗತ್ಯಗಳಾದ ವಿದ್ಯುತ್, ನೀರು, ಮೊಬೈಲ್ ಮೊದಲಾದ ಕೆಲವಾರು ಸೇವೆಗಳಿಗೆ ನಾವು ಪಾವತಿಸಬೇಕಾದ ಬಿಲ್ಲುಗಳಿಗೆ ಕಡೆಯ ದಿನಾಂಕ ಎಂದೊಂದಿರುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಈ ಕಡೆಯ ದಿನಾಂಕಕ್ಕೆ ಮುನ್ನ ಕಟ್ಟಿಬಿಟ್ಟರೆ ಸಾಕಲ್ಲ, ಅರ್ಜೆಂಟ್ ಏನಿದೆ ಎಂದೇ ಪ್ರತಿಕ್ರಿಯಿಸುತ್ತೇವೆ. ಆದರೆ ಈ ಕಡೆಗಣನೆ ನಮಗೆ ಭಾರಿಯಾಗಬಹುದು, ಅಂತಿಮ ದಿನಾಂಕ ದಾಟಿ ಹೋದರೂ ಈ ಬಿಲ್ಲು ಪಾವತಿಯಾಗಲಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ನಿಲುಗಡೆ, ಪರಿಣಾಮವಾಗಿ ಸುತ್ತಮುತ್ತಲಿನವರಿಂದ ಭಾರೀ ಮುಜುಗರಕ್ಕೆ ಒಳಗಾಗಬಹುದು. ತಡವಾಗಿ ಹಣ ಕಟ್ಟಿದರೂ ದಂಡ ಕಟ್ಟಬೇಕಾಗಿ ಬಂದು ಹೆಚ್ಚು ಹಣ ತೆರಬೇಕಾಗಿಬರಬಹುದು. ಆದ್ದರಿಂದ ಅಂತಿಮ ದಿನಾಂಕ ಎಂದು ಕಾಯದೇ ಯಾವಾಗ ಸಾಧ್ಯವೋ ಅಷ್ಟು ಬೇಗನೇ ಕಟ್ಟಿಬಿಡುವುದೇ ಮೇಲು. ಅಷ್ಟಿಲ್ಲದೇ ನಮ್ಮ ಹಿರಿಯರು "ಸುಡಬೇಕಾದ ಹೆಣ, ಕೊಡಬೇಕಾದ ಹಣ ಎಷ್ಟು ಬೇಗ ಮುಗಿಸಿದರೆ ಅಷ್ಟೂ ಒಳ್ಳೆಯದು" ಎಂದು ಹೇಳಿಲ್ಲವೇ!<br />
<br />
ಈ ಬದ್ದತೆಯನ್ನು ಸಾಧಿಸುವುದೇನೂ ಕಷ್ಟಕರವಾದ ವಿಷಯವಲ್ಲ. ಇಂದಿನ ದಿನಗಳಲ್ಲಿ ಇದು ತುಂಬಾ ಸುಲಭ.<br />
ನಿಮ್ಮ ಮೊಬೈಲಿನಲ್ಲಿ ರಿಮೈಂಡರ್ ಇರಿಸುವುದು<br />
ಬ್ಯಾಂಕ್ ನ ಖಾತೆಯಿಂದ ನೇರವಾಗಿ ಪಾವತಿಸುವ ಸೌಲಭ್ಯವಿದ್ದರೆ ’ಆಟೋ ಪೇಮೆಂಟ್’ ಸೌಲಭ್ಯವನ್ನು ಪಡೆದುಕೊಳ್ಳುವುದು.<br />
ನಿಮ್ಮ ಬಿಲ್ಲುಗಳನ್ನು ಕಾಲಕಾಲಕ್ಕೆ ಸರಿಯಾಗಿ ಪರೀಕ್ಷಿಸಿ ಸರಿಯಾಗಿ ಪಾವತಿಸುತ್ತಾ ಬಂದಿದ್ದೀರೋ ಎಂದು ಪರಿಶೀಲಿಸುವುದು.<br />
<img alt="4. ಸಾಲ ಪಡೆಯದಿರುವುದು ಅಥವಾ ಸಾಲ ನೀಡದಿರುವುದು" src="https://kannada.goodreturns.in/img/2017/11/11-1510390194-30-loan-against-shares.jpg" /><br />
4. ಸಾಲ ಪಡೆಯದೇ ಇರುವುದು ಅಥವಾ ಸಾಲ ನೀಡದೇ ಇರುವುದು<br />
ಸಾಲ ಪಡೆದಾಗ ಮೇಲೋಗರವುಂಡಂತೆ ಸಾಲಿಗರು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ಆ ಕಾಲದಲ್ಲಿಯೇ ಹೇಳಿದ್ದಾನೆ. ನಿಮ್ಮ ಆದಾಯಕ್ಕೆ ಮೀರಿದ ಖರ್ಚು ನಿಮ್ಮದಾಗಿದ್ದರೆ ಇದನ್ನು ಸರಿದೂಗಿಸಲು ಸಾಲ ಮಾಡದೇ ನಿರ್ವಾಹವಿಲ್ಲ. ಪ್ರಾರಂಭದಲ್ಲಿ ಆತ್ಮೀಯರ, ಸ್ನೇಹಿತರ ಹತ್ತಿರ ಪಡೆಯುವ ಕೈಸಾಲ ಬರುತ್ತಾ ಬರುತ್ತಾ ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಸಾಲಕ್ಕೆ ನಾಂದಿಯಾಗುತ್ತದೆ. ಮೇಲೆ ಹೇಳಿದಂತೆ ಹಾಸಿಗೆ ಇದ್ದಷ್ಟು ಕಾಲು ಚಾಚದೇ ಇದ್ದರೆ ಈ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಅನಿವಾರ್ಯ ಕಾರಣಗಳ ಹೊರತಾಗಿ ಸಾಲ ಪಡೆಯದಿರುವುದೇ ಒಳ್ಳೆಯದು. ಒಂದು ವೇಳೆ ಕೈಸಾಲ ಪಡೆದರೂ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಹಿಂದಿರುಗಿಸಿಬಿಡಬೇಕು. ಇಲ್ಲದಿದ್ದರೆ ಸ್ನೇಹ, ಆತ್ಮೀಯತೆಯನ್ನೂ ಈ ಪುಡಿಗಾಸಿಗೆ ಕಳೆದುಕೊಳ್ಳಬೇಕಾಗಬಹುದು.<br />
<br />
ಸಾಲ ನೀಡದೇ ಇರುವುದು ಸಹಾ ಆರ್ಥಿಕ ಬದ್ದತೆಗೆ ಇನ್ನೊಂದು ಅಗತ್ಯವಾಗಿದೆ. ನಮ್ಮ ಸುತ್ತಮುತ್ತ ನೂರಾರು ನಯವಂಚಕರಿರುತ್ತಾರೆ. ಇವರಿಗೆ ಸಾಲ ಪಡೆಯುವ ವಿದ್ಯೆ ಕರತಲಾಮಲಕವಾಗಿರುತ್ತದೆ. ಇವರು ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿ ನಿಮ್ಮಿಂದ ಸಾಲ ಪಡೆಯುತ್ತಾರೆ. ಇದರಲ್ಲಿ ಪ್ರಮುಖವಾದ ಅಸ್ತ್ರವೆಂದರೆ "ಯಾವುದೋ ಕೆಲಸಕ್ಕೆ ಕೊಂಚ ಹಣ ಕಡಿಮೆಯಾಗಿದೆ, ಅರ್ಜೆಂಟಾಗಿ ಹಣ ಬೇಕು, ನಾಳೆ ನಾಡಿದ್ದಿರಲ್ಲಿ ನನಗೆ ಇನ್ನೊಂದು ಕಡೆಯಿಂದ ಹಣ ಬರಲಿಕ್ಕಿದೆ, ತಕ್ಷಣ ಕೊಟ್ಟು ಬಿಡುತ್ತೇನೆ" ಈ ನಾಳೆ ನಾಡಿದ್ದು ಎನ್ನುವುದು ಎಷ್ಟು ವರ್ಷಗಳ ಬಳಿಕ ಬರುತ್ತದೆ ಎಂದು ಅವರಿಗೇ ಗೊತ್ತಿಲ್ಲ, ಇನ್ನು ನಿಮಗೆ ಎಲ್ಲಿಂದ ಗೊತ್ತಾಗಬೇಕು?<br />
<br />
<br />
5. ಆಪತ್ಕಾಲಕ್ಕೊಂದು ನಿಧಿ ಕೂಡಿಡುವುದು<br />
ಇದನ್ನೊಂದು ಆರ್ಥಿಕ ಅಭ್ಯಾಸವೆಂದು ಮಾತ್ರ ಪರಿಗಣಿಸಬೇಡಿ, ಇದು ನಿಮ್ಮ ತುರ್ತು ಅಗತ್ಯಕ್ಕಿರುವ ಅನಿವಾರ್ಯತೆ ಎಂದೇ ಪರಿಗಣಿಸಿ ಪ್ರಥಮ ಆದ್ಯತೆ ನೀಡಬೇಕು. ಯಾರಿಗೂ, ಯಾವುದೋ ಕ್ಷಣದಲ್ಲಿ ತಕ್ಷಣ ಹಣದ ಅಗತ್ಯ ಒದಗಿಬರಬಹುದು. ಆ ಸಮಯದಲ್ಲಿ ಈ ಆಪತ್ಕಾಲದ ನಿಧಿ ನೀಡುವಷ್ಟು ಮಾನಸಿಕ ಸ್ಥೈರ್ಯವನ್ನು ಯಾರೂ ನೀಡಲಾರರು. ಆ ಅಗತ್ಯಕ್ಕೆ ಸಾಲ ದೊರಕುವುದಾದರೂ, ಇದು ಸಾಲವೇ ಹೊರತು ನೆರವಲ್ಲ. ಅಷ್ಟೇ ಅಲ್ಲ, ಈ ಸಮಯಕ್ಕೆ ಸಾಲ ನೀಡಿದವರು ಇದೇ ವಿಷಯವನ್ನು ನಿಮ್ಮನ್ನು ಮಣಿಸಲು ಮುಂದೊಂದು ದಿನ ಅಸ್ತ್ರವಾಗಿಯೂ ಪರಿಗಣಿಸುತ್ತಾರೆ. ’ನಾನು ಅಂದು ಅವನಿಗೆ ಹಣ ಕೊಟ್ಟಿರದೇ ಹೋಗಿದ್ದರೆ ನೇಣು ಹಾಕಿಕೊಳ್ತಾ ಇದ್ದ’ ಎಂಬ ಮಾತುಗಳು ನಿಮ್ಮನ್ನು ನೇಣು ಹಾಕಿಕೊಳ್ಳಲೂ ಪ್ರೇರೇಪಿಸಬಹುದು! ಆದ್ದರಿಂದ ಆಪತ್ಕಾಲದ ನಿಧಿಯನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾಪಿಸಿಕೊಳ್ಳುವುದು ನಿಮಗೇ ಒಳ್ಳೆಯದು.<br />
<br />
ಹೆಚ್ಚಿನ ಸಂದರ್ಭಗಳಲ್ಲಿ ಈ ನಿಧಿ ವೈದ್ಯಕೀಯ ತುರ್ತು ಸಂದರ್ಭ, ಯಾವುದಾದರೊಂದು ಅಮೂಲ್ಯ ವಸ್ತು ಕೈಗೆ ಸಿಗುವ ಅವಕಾಶ ಮೊದಲಾದ ಕಡೆಗಳಲ್ಲಿ ಬಳಕೆಯಾಗುತ್ತದೆ.<br />
<br />
ಇದನ್ನು ಸಾಧಿಸಲು ಮನೆಯಲ್ಲಿಯೇ ಹಣವನ್ನು ಕೂಡಿಡುವ ಬದಲು ಬ್ಯಾಂಕಿನ ಫಿಕ್ಸೆಡ್ ಡಿಪಾಸಿಟ್ ಅಥವಾ ಲಿಕ್ವಿಡ್ ಡೆಬ್ಟ್ ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳಬಹುದು.<br />
<br />
ಕನಿಷ್ಟ ಆರು ತಿಂಗಳಾದರೂ ಈ ನಿಧಿಯಲ್ಲಿ ನಿಯಮಿತವಾಗಿ ಹಣ ಹೂಡಬೇಕು. ಬಳಿಕ ಈ ಮೊತ್ತವನ್ನು ಹಾಗೇ ಬೆಳೆಯಲು ಬಿಡುವುದು ಹಾಗೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಚಿಂತಿಸಲು ಸಾಧ್ಯವಾಗುತ್ತದೆ.<br />
<img alt="6. ನಿವೃತ್ತಿಯ ಬಗ್ಗೆ ಯೋಜನೆ" src="https://kannada.goodreturns.in/img/2017/11/11-1510390270-06-1436182065-money.jpg" /><br />
6. ನಿವೃತ್ತಿಯ ಬಗ್ಗೆ ಯೋಜನೆ:<br />
ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖವಾದ ಘಟ್ಟವೆಂದರೆ ನಿವೃತ್ತಿಯ ಬಗ್ಗೆ ಯೋಜನೆ ರೂಪಿಸುವುದು. ಇದು ಕೇವಲ ಶಿಸ್ತು ಮಾತ್ರವಲ್ಲ, ಬದಲಿಗೆ ಜೀವಮಾನದ ಆರ್ಥಿಕ ವ್ಯವಸ್ಥೆಯ ನಿರ್ಣಾಯಕ ಸ್ಥಂಭವೂ ಆಗಿದೆ. ನಿವೃತ್ತಿ ಯೋಜನೆ ಯಾವಾಗಲೂ ದೀರ್ಘಾವಧಿಯದ್ದಾಗಿರಬೇಕು ಹಾಗೂ ಇದನ್ನು ನಿಮ್ಮ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಬೇಕು. ಈಗಾಗಲೇ ನಡುವಯಸ್ಸು ದಾಟಿರುವವರಿಗೆ ಈ ಮಾತನ್ನು ಅವರ ತಾರುಣ್ಯದಲ್ಲಿ ಯಾರೂ ಹೇಳಿರದೇ ಇದ್ದ ಕಾರಣ ಇಂದು ಇವರಿಗೆ ನಿವೃತ್ತಿಯ ಬಗ್ಗೆ ಯೋಚನೆ ಪ್ರಾರಂಭವಾಗುತ್ತದೆ. ಈಗಲೂ ತಡವಾಗಿಲ್ಲ, ನಿವೃತ್ತಿಗೆ ಉಳಿದಿರುವ ವರ್ಷಗಳಲ್ಲಿ ಸಾಧ್ಯವಾದಷ್ಟು ನಿವೃತ್ತಿಗಾಗಿ ನಿಯೋಜಿಸುವುದೂ ಅಸಾಧ್ಯವೇನಲ್ಲ. ಆದರೂ, ಚಿಕ್ಕವಯಸ್ಸಿನಿಂದ ಯೋಜನೆ ಪ್ರಾರಂಭಿಸಿದರೆ ನಿವೃತ್ತಿಯ ಸಮಯದಲ್ಲಿ ನಿರಾಳವಾದ ಜೀವನ ಪಡೆಯಬಹುದು.<br />
<br />
ಪ್ರತಿತಿಂಗಳೂ ಚಿಕ್ಕದಾದ ಮೊತ್ತವನ್ನು ನಿವೃತ್ತಿಗಾಗಿ ಮೀಸಲಿಡುವುದು ಇದರ ಪ್ರಮುಖ ಅಂಗವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ಈ ಹೂಡಿಕೆಯನ್ನು ನಡುವಿನಲ್ಲಿ ತುಂಡರಿಸದೇ ಇರುವುದು. ನೀವೇ ನಿಮ್ಮ ಸ್ವಂತ ಯೋಜನೆಯಿಂದ ನಿವೃತ್ತಿಗಾಗಿ ಆರ್ಡಿ ಖಾತೆಯೊಂದನ್ನು ತೆರೆದು (ರಿಕರೆಂಟ್ ಡಿಪಾಸಿಟ್) ನಿಮ್ಮ ಖಾತೆಯ ಮೂಲಕ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಸೇರುವಂತೆ ಮಾಡಬಹುದು. ಅಥವಾ ಆರ್ಥಿಕ ತಜ್ಞರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಬಹುದು. ಸಾಮಾನ್ಯವಾಗಿ ಆರ್ಥಿಕ ತಜ್ಞರ ಅನುಭವ ನಿಮಗೆ ಹೆಚ್ಚು ಲಾಭಕರವಾಗಿರುತ್ತದೆ. ಯೋಜನೆ ಯಾವುದಾದರೂ ಸರಿ, ನಿವೃತ್ತಿಯವರೆಗೂ ಈ ಮೊತ್ತವನ್ನು ನಗದೀಕರಿಸುವ ಕುರಿತು ಯೋಚಿಸಲೇ ಬಾರದು.<br />
<img alt="ಕೊನೆ ಮಾತು" src="https://kannada.goodreturns.in/img/2017/11/11-1510390343-invest.jpg" /><br />
<br />
ಅಂತಿಮವಾಗಿ:<br />
ಆರ್ಥಿಕವಾಗಿ ಸಬಲರಾಗುವುದು ಇಂದಿನ ಎಲ್ಲರ ಕನಸಾಗಿದೆ. ಆದರೆ ಇದನ್ನು ಸಾಧ್ಯವಾಗಿಸುವುದು ಮಾರ್ತ ಆರ್ಥಿಕ ಶಿಸ್ತು. ಇದು ದೂರದಿಂದ ನೋಡಲು ಕೊಂಚ ಕಷ್ಟಕರ ಎಂದು ಕಂಡುಬಂದರೂ ಸತತವಾಗಿ ಅನುಸರಿಸುವುದನ್ನು ಪ್ರಾರಂಭಿಸಿದರೆ ಮತ್ತೇನೂ ಕಷ್ಟವಾಗಲಾರದು. ಇದಕ್ಕೆ ಅಗತ್ಯವಿರುವುದು ದೃಢವಾದ ಮನೋಬಲ ಹಾಗೂ ಯೋಜನೆಯನ್ನು ಸರಿಯಾಗಿ, ಎಲ್ಲಿಯೂ ನಿಲ್ಲಿಸದೇ, ಯಾವ ತಿಂಗಳೂ ತಪ್ಪದೇ ಅನುಸರಿಸಿಕೊಂಡು ಹೋಗುವ ಬದ್ದತೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.<br />
<br />
ನಿಮಗೀಗ ಯಾವುದೇ ವಯಸ್ಸಾಗಿದ್ದು ನಿಮ್ಮ ಆರ್ಥಿಕ ಸ್ಥಿತಿ ಏನೇ ಇರಲಿ, ಆರ್ಥಿಕ ಶಿಸ್ತನ್ನು ಪ್ರಾರಂಭಿಸಲು ಎಂದೂ ತಡವಾಗುವುದಿಲ್ಲ. ಇದುವರೆಗೆ ನೀವು ಸಾಧಿಸದೇ ಹೋದ ಎಷ್ಟೋ ವಿಷಯಗಳನ್ನು ಆರ್ಥಿಕ ಶಿಸ್ತಿನ ಮೂಲಕ ಸಾಧಿಸಬಹುದು ಹಾಗೂ ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಆರ್ಥಿಕ ಸ್ವಾತಂತ್ರ್ಯದೆಡೆಗೆ ಸುಲಲಿತವಾಗಿ ಸಾಗಿ ಗಮ್ಯಸ್ಥಾನ ತಲುಪಬಹುದು.</div>
Arshad Hussainhttp://www.blogger.com/profile/13410279590093513740noreply@blogger.com5tag:blogger.com,1999:blog-8910708758309450943.post-8365501070082912462017-11-25T21:54:00.000+04:302017-11-25T21:54:16.725+04:30ಸಂಧಿವಾತ ಹಾಗೂ ಇತರ ತೊಂದರೆಗಳಿಗೆ ತಕ್ಷಣ ಪರಿಹಾರ ಪಡೆಯಲು ಹರಳೆಣ್ಣೆಯೇ ಸಾಕು<div dir="ltr" style="text-align: left;" trbidi="on">
ಬೋಲ್ಡ್ ಸ್ಕೈ.ಕಾಂ ನಲ್ಲಿ ಪ್ರಕಟವಾದ ಲೇಖನ<br />
https://kannada.boldsky.com/health/wellness/2017/castor-oil-benefits-for-arthritis-skin-menstrual-disorder/articlecontent-pf71885-015925.html<br />
<br />
ಅಡುಗೆಗೆ ಬಳಸುವ ಎಣ್ಣೆಗಳಲ್ಲಿಯೇ ಅತಿ ಹೆಚ್ಚು ಸ್ನಿಗ್ಧವಾದ ಹರಳೆಣ್ಣೆ ಹಿಂದಿನ ದಿನಗಳಲ್ಲಿ ಅಡುಗೆ, ಸೌಂದರ್ಯ ಹಾಗೂ ಔಷಧಿಯ<br />
<br />
ರೂಪದ ಜೊತೆಗೇ ಬಂಡಿಗಳ ಗಾಲಿಗಳಿಗೆ ಗ್ರೀಸ್ ಬದಲಿಗೆ ಉಪಯೋಗಿಸಲಾಗುತ್ತಿತ್ತು. ಹರಳೆಣ್ಣೆ ಹಲವಾರು ತೊಂದರೆಗಳಿಗೆ<br />
<br />
ಔಷಧಿಯಾಗಿದೆ. ಇದು ಚರ್ಮ ಕೂದಲುಗಳ ಜೊತೆಗೇ ಹೊಟ್ಟೆಯ ತೊಂದರೆಗಳು, ವಿವಿಧ ನೋವುಗಳಿಗೂ ಉತ್ತಮ ಪರಿಹಾರ<br />
<br />
ಒದಗಿಸುತ್ತದೆ. ಈ ಎಣ್ಣೆಯಲ್ಲಿ ಪ್ರಮುಖವಾಗಿ ರಿಸಿನೋಲಿಕ್ ಆಮ್ಲ ಎಂಬ ಪೋಷಕಾಂಶವಾಗಿದ್ದು ಎಣ್ಣೆಯ 85%-95%ರಷ್ಟು ಭಾಗವನ್ನು<br />
<br />
ಆಕ್ರಮಿಸಿಕೊಂಡಿದೆ. ಉಳಿದಂತೆ ಇದರಲ್ಲಿ ಓಲಿಕ್ ಆಮ್ಲ, ಲಿನೋಲಿ ಆಮ್ಲ ಮೊದಲಾದ ಪೋಷಕಾಂಶಗಳಿವೆ.<br />
<br />
ಈ ಅಮ್ಲ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವುದೇ ಈ ಎಣ್ಣೆಯ ಪ್ರಾಮುಖ್ಯತೆಯಾಗಿದೆ. ಇದು ಸುಲಭವಾಗಿ ಬೆಳೆಯಲಾಗುವ ಮರಗಳ<br />
<br />
ಬೀಜದಿಂದ ಸಾಂಪ್ರಾದಾಯಿಕ ವಿಧಾನದಲ್ಲಿಯೂ ಹಿಂಡಿ ತೆಗೆಯಬಹುದಾದುದರಿಂದ ಅಗ್ಗವೂ ಆಗಿದೆ. ಆದರೆ ಈ ಎಣ್ಣೆಯ ಬಳಕೆಯಿಂದ<br />
<br />
ಪಡೆಯಬಹುದಾದ ಲಾಭವನ್ನು ಪರಿಗಣಿಸಿದರೆ ಈ ಎಣ್ಣೆಗೆ ನೀಡುವ ಬೆಲೆ ಅತ್ಯಲ್ಪ ಎಂದು ಮನವರಿಕೆಯಾಗುತ್ತದೆ. ಇದು ತ್ವಚೆಯ<br />
<br />
ಹೊಳಪಿಗೆ, ಕೂದಲ ಕಾಂತಿಗೆ ಮಾತ್ರವಲ್ಲ ಮೂಳೆಗಳ ಸಂದುಗಳಲ್ಲಿ ನೋವು ಅಥವಾ ಸಂಧಿವಾತಕ್ಕೂ ಉತ್ತಮ ಔಷಧಿಯಾಗಿದೆ. ಬನ್ನಿ,<br />
<br />
ಈ ಅದ್ಭುತ ಎಣ್ಣೆಯ ಕೆಲವು ಪ್ರಯೋಜನಗಳ ಬಗ್ಗೆ ಅರಿಯೋಣ:<br />
<img alt="ಸಂಧಿವಾತ ಗುಣಪಡಿಸಲು ನೆರವಾಗುತ್ತದೆ" src="https://kannada.boldsky.com/img/2017/11/25-1511588783-x24-1511525566-1-arthritis-jpg-pagespeed-ic-fstlddj-t9.jpg" />c<br />
<br />
1. ಸಂಧಿವಾತ ಗುಣಪಡಿಸಲು ನೆರವಾಗುತ್ತದೆ.<br />
ಈ ಎಣ್ಣೆಯಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿರುವ ರಿಸಿನೋಲಿಕ್ ಆಮ್ಲ, ಓಲಿಕ್, ಲಿನೋಲಿಕ್ ಆಮ್ಲಗಳು ಹಾಗೂ ಇತರ ಕೊಬ್ಬಿನ ಆಮ್ಲಗಳು<br />
<br />
ಸಂಧಿವಾತ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲರೆ ರ್ಯೂಮಾಟಿಕ್ ನೋವು ಹಾಗೂ ಗಂಟುಗಳು ಊದಿಕೊಳ್ಳುವುದನ್ನೂ<br />
<br />
ಕಡಿಮೆ ಮಾಡುತ್ತದೆ. ಈ ತೊಂದರೆಗಳು ಇರುವ ಯಾವುದೇ ವಯೋಮಾನದ ವ್ಯಕ್ತಿಗಳಿಗೂ ಹರಳೆಣ್ಣೆಯನ್ನು ಸುರಕ್ಷಿತವಾಗಿ<br />
<br />
ಬಳಸಬಹುದು. ಹರಳೆಣ್ಣೆಯನ್ನು ಕೊಂಚವೇ ಬಿಸಿಮಾಡಿ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡರೆ ಇದು ಚರ್ಮದ<br />
<br />
ಸೂಕ್ಷ್ಮರಂಧ್ರಗಳ ಮೂಲಕ ಇಳಿದು ನೋವಿಗೆ ಕಾರಣವಾದ ಅಂಶಗಳನ್ನು ನಿವಾರಿಸಿ ನೋವು ಕಡಿಮೆ ಮಾಡುತ್ತದೆ. ಇನ್ನೂ ಉತ್ತಮ<br />
<br />
ಪರಿಣಾಮ ಪಡೆಯಲು ಹರಳೆಣ್ಣೆಯೊಂದಿಗೆ ಬೇರೆ ಔಷಧಿಗಳನ್ನು ಬೆರೆಸಿಯೂ ಬಳಸಬಹುದು.<br />
<img alt="ಸಂಧಿವಾತ ಗುಣಪಡಿಸಲು ನೆರವಾಗುತ್ತದೆ" src="https://kannada.boldsky.com/img/2017/11/25-1511588704-21-1469108328-castrooil-12-1510489272.jpg" /><br />
<br />
2. ಗರ್ಭನಿರೋಧಕವಾಗಿ ಬಳಕೆಯಾಗುತ್ತದೆ<br />
ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಹಲವು ಮಹಿಳೆಯರು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳು<br />
<br />
ಅಡ್ಡಪರಿಣಾಮದಿಂದ ಹೊರತಾಗಿರದ ಕಾರಣ ಬೇರೆ ತೊಂದರೆ ಎದುರಾಗುತ್ತದೆ. ಆದ್ದರಿಂದ ಮಹಿಳೆಯರು ಈ ಮಾತ್ರೆಗಳ ಬದಲಿಗೆ<br />
<br />
ಹರಳೆಣ್ಣೆಯನ್ನು ಬಳಸಬಹುದು. ಈ ಎಣ್ಣೆಯಲ್ಲಿರುವ ರಿಸಿನ್ ಎಂಬ ಪ್ರೋಟೀನುಗಳು, ಒಂದು ವೇಳೆ ಕಡಿಮೆ ಪ್ರಮಾಣದಲ್ಲಿ<br />
<br />
ಬಳಕೆಯಾದರೆ ಇದು ರೋಗಾಣುಹಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದೇಕಾರಣಕ್ಕೆ ಕೆಲವಾರು ಗರ್ಭನಿರೋಧಕ ಜೆಲ್ ಹಾಗೂ<br />
<br />
ಲೋಷನ್ ಗಳಲ್ಲಿ ಬಳಸಲಾಗುತ್ತದೆ. ಒಂದು ವೇಳೆ ಪ್ರಾರಂಭಿಕ ಹಂತದ ಗರ್ಭವತಿಯಾಗಿರುವ ಮಹಿಳೆ ಹರಳೆಣ್ಣೆಯನ್ನು ಅಧಿಕ<br />
<br />
ಪ್ರಮಾಣದಲ್ಲಿ ಸೇವಿಸಿದರೆ ಇದು ಬಲವಂತವಾಗಿ ಗರ್ಭಪಾತಕ್ಕೆ ಕಾರಣವಾಗುತ್ತದೆ. ಆದರೆ ಇದು ಅಪಾಯಕಾರಿಯಾದ ಕ್ರಮವಾಗಿದೆ<br />
<br />
ಹಾಗೂ ಇನ್ನೂ ಹುಟ್ಟದೇ ಇರುವ ಜೀವವೊಂದನ್ನು ಭೂಮಿಗೆ ಬರುವ ಮುನ್ನವೇ ಕೊಂದ ಪಾಪಭಾವನೆಯೂ ಎದುರಾಗುತ್ತದೆ.<br />
<img alt="ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ" src="https://kannada.boldsky.com/img/2017/11/25-1511588893-24-1511525578-3-menstrualdisorder.jpg" /><br />
3. ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ.<br />
ಇಂದು ಎಷ್ಟೋ ಮಹಿಳೆಯರು ತಮ್ಮ ಮಾಸಿಕ ದಿನಗಳು ಕ್ರಮಬದ್ದವಾಗಿಲ್ಲ ಎಂಬ ತೊಂದರೆಯನ್ನು ಹೇಳಿಕೊಳ್ಳುತ್ತಾರೆ. ಇದರಿಂದ<br />
<br />
ಮನೋಭಾವನೆಯಲ್ಲಿ ಏರುಪೇರು, ಅನಿಯಂತ್ರಿತ ರಕ್ತಸ್ರಾವ ಹಾಗೂ ಕೆಳಹೊಟ್ಟೆಯಲ್ಲಿ ನೋವು ಹಾಗೂ ಸೆಡೆತ ಕಾಣಿಸಿಕೊಳ್ಳುತ್ತದೆ. ಈ<br />
<br />
ತೊಂದರೆಗಳನ್ನು ನಿವಾರಿಸಲು ಹರಳೆಣ್ಣೆ ನೆರವಾಗುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲ ಮಾಸಿಕ ಸ್ರಾವದ ಪ್ರಮಾಣವನ್ನು<br />
<br />
ಹೆಚ್ಚಿಸುವ ಗುಣ ಹೊಂದಿದೆ. ಈ ಸ್ರಾವ ಹೊರಬರದೇ ಸಂಗ್ರಹವಾಗಿರುವ ಮೂಲಕವೇ ಹೊಟ್ಟೆನೋವಿನ ಸಹಿತ ಇತರ ತೊಂದರೆಗಳು<br />
<br />
ಎದುರಾಗಿರುತ್ತವೆ. ಯಾವಾಗ ಈ ಸ್ರಾವ ಹೊರಹೋಯಿತೋ ಈ ಮೂಲಕ ಎದುರಾಗಿದ್ದ ತೊಂದರೆಗಳೆಲ್ಲಾ ಸರಿಯಾಗುತ್ತವೆ.<br />
<br />
4.ತ್ವಚೆಯ ಆರೈಕೆಗೆ ನೆರವಾಗುತ್ತದೆ.<br />
ಹೊಳಪುಳ್ಳ, ಕಲೆಯಿಲ್ಲದ ಹಾಗೂ ನುಣುಪಾದ ತ್ವಚೆಗಾಗಿ ಹರಳೆಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಾ ಬರಲಾಗಿದೆ.<br />
<br />
ಇದರಲ್ಲಿರುವ ಅಂಡಿಸೈಲೆನಿಕ್ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸುವ ಕ್ಷಮತೆ ಹೊಂದಿದ್ದು ವಿಶೇಷವಾಗಿ ಚರ್ಮದಲ್ಲಿ<br />
<br />
ಉಂಟಾಗಿರುವ ಕೀವು ಹಾಗೂ ಸೋಂಕುಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರ ನಿವಾರಕ<br />
<br />
ಗುಣಗಳು ತ್ವಚೆಯ ಆರೈಕೆಯಲ್ಲಿ ನೆರವಾಗುತ್ತವೆ.<br />
<br />
5.ಮಲಬದ್ದತೆಯಿಂದ ರಕ್ಷಿಸುತ್ತದೆ.<br />
’ಹರಳೆಣ್ಣೆ ಕುಡಿದವರಂತೆ ಆಡುತ್ತಾನೆ’ ಎಂಬ ಕನ್ನಡದ ನುಡಿಗಟ್ಟಿಗೆ ಇದರ ವಿರೇಚಲ ಗುಣವೇ ಕಾರಣವಾಗಿದೆ. ಹರಳೆಣ್ಣೆಯನ್ನು<br />
<br />
ನೇರವಾಗಿ ಕುಡಿಯುವ ಮೂಲಕ ಜೀರ್ಣಾಂಗಗಳಲ್ಲಿದ್ದ ಕಲ್ಮಶಗಳನ್ನು ಬಲವಂತವಾಗಿ ಹೊರಹಾಕಲು ಸಾಧ್ಯವಾಗುವ ಮೂಲಕ<br />
<br />
ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮಲಬದ್ದತೆಯಿಂದ ನರಳುತ್ತಿರುವ ರೋಗಿಗಳಿಗೆ ದುಬಾರಿ<br />
<br />
ಔಷಧಿಯಿಂದಲೂ ಆಗದೇ ಇರುವ ಕಾರ್ಯ ಹರಳೆಣ್ಣೆ ಸುಲಭವಾಗಿ ನಿರ್ವಹಿಸುತ್ತದೆ.<br />
<img alt="ಎದೆಹಾಲನ್ನು ಹೆಚ್ಚಿಸುತ್ತದೆ" src="https://kannada.boldsky.com/img/2017/11/25-1511588990-24-1511525597-6-breastfeeding.jpg" /><br />
6. ಎದೆಹಾಲನ್ನು ಹೆಚ್ಚಿಸುತ್ತದೆ:<br />
ಬಾಣಂತಿಯರ ದೇಹದಲ್ಲಿ ಹೆಚ್ಚಿನ ಹಾಲು ಉತ್ಪತ್ತಿಯಾಗಲು ಹರಳೆಣ್ಣೆ ಸಹಕರಿಸುತ್ತದೆ. ಅಲ್ಲದೇ ಹೆಚ್ಚಿನ ಪ್ರಮಾಣದ ಹಾಲು<br />
<br />
ಸುಲಭವಾಗಿ ಮಗುವಿಗೆ ಲಭ್ಯವಾಗುವ ಮೂಲಕ ಮಗುವಿನ ಆರೋಗ್ಯವೂ ಉತ್ತಮವಾಗಲು ನೆರವಾಗುತ್ತದೆ. ಆದರೆ ಹರಳೆಣ್ಣೆಯನ್ನು<br />
<br />
ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ಏಕೆಂದರೆ ಹರಳೆಣ್ಣೆಯ ಪ್ರಮಾಣ ಹೆಚ್ಚಾದರೆ ಹಾಲಿನ ಗುಣಮಟ್ಟವೂ ಕೊಂಚ<br />
<br />
ಬದಲಾಗಬಹುದು ಹಾಗೂ ಮಗುವಿನ ಆರೋಗ್ಯವನ್ನು ಬಾಧಿಸಬಹುದು.<br />
<br />
ಇದುವರೆಗೆ ಹರಳೆಣ್ಣೆಯ ಪ್ರಯೋಜನಗಳ ಬಗ್ಗೆ ಅರಿತೆವು. ಈಗ ಸಂಧಿವಾತಕ್ಕೆ ಹರಳೆಣ್ಣೆಯನ್ನು ಹೇಗೆ ಬಳಸುವುದು ಎಂಬುದನ್ನು<br />
<br />
ನೋಡೋಣ:<br />
<br />
ಈ ಎಣ್ಣೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯವಿರುವ ಸಾಮಾಗ್ರಿಗಳೆಂದರೆ:<br />
* ಸಾಂಪ್ರಾದಾಯಿಕ ವಿಧಾನದಲ್ಲಿ ಹಿಂಡಿ ತಗೆದ ಹರಳೆಣ್ಣೆ (ಅಥವಾ ತಣ್ಣನೆಯ ವಿಧಾನ)<br />
* ಎಣ್ಣೆ ಬಿಸಿಮಾಡಲು ದಪ್ಪತಳದ ಪಾತ್ರೆ<br />
* ಗಂಟುಗಳಿಗೆ ಸುತ್ತಲು ಪ್ಲಾಸ್ಟಿಕ್ ಹಾಳೆ<br />
* ಒಂದು ದೊಡ್ಡ ಸ್ನಾನದ ಟವೆಲ್<br />
* ಉಣ್ಣೆಯ ಬಟ್ಟೆ, ಅಥವಾ ಹತ್ತಿಯ ದಪ್ಪನೆಯ ಬಟ್ಟೆ ಸುಮಾರು ಒಂದು ಚದರಡಿಯಷ್ಟು.<br />
<br />
ವಿಧಾನ:<br />
ಪಾತ್ರೆಯಲ್ಲಿ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಉಣ್ಣೆಯ ಅಥವಾ ಹತ್ತಿಯ ಬಟ್ಟೆಯನ್ನು ಇದರಲ್ಲಿ ಮುಳುಗಿಸಿ ಚೆನ್ನಾಗಿ<br />
<br />
ಹೀರಿಕೊಳ್ಳುವಂತೆ ಮಾಡಿ.<br />
ನೋವಿರುವ ಭಾಗಕ್ಕೆ ಬೆಚ್ಚನೆಯ ಎಣ್ಣೆಯಿಂದ ಕೊಂಚ ಹೊತ್ತು ಮಸಾಜ್ ಮಾಡಿ<br />
ಬಳಿಕ ಎಣ್ಣೆಯಲ್ಲಿ ತೋಯ್ದಿರುವ ಬಟ್ಟೆಯನ್ನು ಗಂಟು ಆವರಿಸುವಂತೆ ಇರಿಸಿ ಪ್ಲಾಸ್ಟಿಕ್ ಹಾಳೆಯನ್ನು ಸುತ್ತಿಬಿಗಿಯಾಗಿಸಿ.<br />
ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಈ ಭಾಗದ ಮೇಲೆ ದಪ್ಪನೆಯ ಟವೆಲ್ ಹಾಕಿ ರಾತ್ರಿಯಿಡೀ ಹಾಗೇ ಇರಿಸಿ.<br />
ಮರುದಿನ ಬೆಳಿಗ್ಗೆ ಎಲ್ಲವನ್ನೂ ಬಿಚ್ಚಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು.<br />
ನೋವಿನ ಪ್ರಮಾಣವನ್ನು ಅನುಸರಿಸಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪುನರಾವರ್ತಿಸಬೇಕು.</div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-63863726807816556242017-11-24T06:55:00.000+04:302017-11-24T06:55:09.660+04:30ಆಲುಗಡ್ಡೆ ರಸದ ಹತ್ತು ಅದ್ಭುತ ಪ್ರಯೋಜನಗಳು<div dir="ltr" style="text-align: left;" trbidi="on">
(ಬೋಲ್ಡ್ ಸ್ಕೈ. ಕಾಂ ನಲ್ಲಿ ಪ್ರಕಟವಾಗಿರುವ ಲೇಖನ)<br />
https://goo.gl/kKLouv<br />
<br />
<img alt="ಉಸಿರಾಟದ ತೊಂದರೆ ನಿವಾರಿಸಲು ನೆರವಾಗುತ್ತದೆ" src="https://kannada.boldsky.com/img/2017/11/06-1509943233-benefitsofpotatojuice-04-1449227703.jpg" /><br />
<br />
ನಿಸರ್ಗದ ವಿಸ್ಮಯಗಳು ಅಗಣಿತ. ಪ್ರತಿ ಜೀವಿಯ ಆಹಾರಕ್ಕಾಗಿ ನೀಡಿರುವ ವ್ಯವಸ್ಥೆಯೂ ಅದ್ಭುತ. ಅದರಲ್ಲೂ ಅತಿ ಹೆಚ್ಚು ವೈವಿಧ್ಯತೆಯ ಆಹಾರ ಸೇವಿಸುವ ಮನುಷ್ಯರಿಗೆ ಲಭ್ಯವಿರುವ ತರಕಾರಿ ಹಾಗೂ ಹಣ್ಣುಗಳು ದೇವರ ಅಮೂಲ್ಯ ಕೊಡುಗೆ. ಪ್ರತಿ ಹಣ್ಣು ಮತ್ತು ತರಕಾರಿಯಲ್ಲಿಯೂ ತನ್ನದೇ ಆದ ಪೋಷಕಾಂಶಗಳ ಭಂಡಾರವಿದ್ದು ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ.<br />
<br />
ಇಂತಹ ಒಂದು ಅದ್ಭುತ ತರಕಾರಿಯಾಗಿದ್ದರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರದ ತರಕಾರಿ ಎಂದರೆ ಎಲ್ಲರ ಮನೆಯಲ್ಲಿ ಸದ ಇರುವ ಆಲುಗಡ್ಡೆ. ಇದರ ಪೋಷಕಾಂಶಗಳ ಪಟ್ಟಿಯನ್ನು ಗಮನಿಸಿದರೆ ಇದನ್ನು ಅತಿ ಆರೋಗ್ಯಕರ ಎಂದು ನಾವು ಪರಿಗಣಿಸಿ ಮಹತ್ವ ನೀಡುವ ತರಕಾರಿಗಳಲ್ಲಿ ಆಲುಗಡ್ಡೆಯನ್ನೂ ಸೇರಿಸಬೇಕಾಗುತ್ತದೆ.<br />
<br />
ಸಾಮಾನ್ಯವಾಗಿ ಆಲುಗಡ್ಡೆಯನ್ನು ಬೇಯಿಸಿ ಅಥವಾ ಹುರಿದು ತಿನ್ನಲಾಗುತ್ತದೆ. ಏಕೆಂದರೆ ಹಸಿಯಾಗಿ ತಿನ್ನಲು ಸಾಧ್ಯವಿಲ್ಲ, ರುಚಿಯೂ ಅಲ್ಲ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಹಸಿಯಾಗಿಯೂ ಆಲುಗಡ್ಡೆಯಲ್ಲಿ ಹಲವಾರು ಅವಶ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ.<br />
<br />
ಆಲುಗಡ್ಡೆಯಲ್ಲಿ ಕಡಿಮೆ ಕ್ಯಾಲೋರಿಗಳಿದ್ದು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಇದರ ಪೋಷಕಾಂಶಗಳಲ್ಲಿ ಪ್ರಮುಖವಾಗಿ ವಿಟಮಿನ್ B6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಇವೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಫೈಟೋ ನ್ಯೂಟ್ರಿಯೆಂಟ್ಸ್ (ಹೋರಡುವ ಗುಣವುಳ್ಳ ಪೋಷಕಾಂಶಗಳು) ಹಾಗೂ ಫ್ಲೇವನಾಯ್ಡುಗಳಿವೆ. ಇದರ ಆಂಟಿ ಆಕ್ಸಿಡೆಂಟ್ ಗುಣ ದೇಹದಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.<br />
<br />
ಆಲುಗಡ್ಡೆಯನ್ನು ಹಸಿಯಾಗಿ ತಿಂದರೆ ಇದರ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸುವುದಿಲ್ಲವಾದುದರಿಂದ ಇದರನ್ನು ಹಸಿಯಾಗಿ ತುರಿದು ರುಬ್ಬಿ ಹಿಂಡಿ ತೆಗೆದ ರಸವನ್ನು ಕುಡಿಯುವ ಮೂಲಕ ಪಡೆಯಬಹುದು. ಅಲುಗಡ್ಡೆ ರಸದ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದು ಹೊಟ್ಟೆಯಲ್ಲಿನ ಆಮ್ಲೀಯತೆಗೆ ಅತ್ಯುತ್ತಮವಾದ ಪ್ರತ್ಯಾಮ್ಲದಂತೆ ಕೆಲಸ ಮಾಡುತ್ತದೆ. ಅಲ್ಲದೇ ಹೊಟ್ಟೆಹುಣ್ಣು, ಹೊಟ್ಟೆಯಲ್ಲಿ ಉರಿ, ವಾಯುಪ್ರಕೋಪ ಮೊದಲಾದ ತೊಂದರೆಗಳಿಗೆ ಸಿದ್ಧೌಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ರಸ ಕೊಂಚ ಕ್ಷಾರೀಯವಾಗಿದ್ದು ಜಠರ ಹಾಗೂ ಕರುಳುಗಳಲ್ಲಿ ಉಂಟಾಗಿರುವ ಆಮ್ಲೀಯತೆಯನ್ನು ಶಮನಗೊಳಿಸಲು ನೆರವಾಗುತ್ತದೆ. ಆಲುಗಡ್ಡೆಯನ್ನು ತಿಂದ ಬಳಿಕ ಹೊಟ್ಟೆ ಕೆಡದೇ ಇರಲು ಹಾಗೂ ಹೆಚ್ಚು ಹೊತ್ತು ಹಸಿವಾಗದಂತಿರುವ ಕಾರಣಕ್ಕೆ ಪ್ರಥಮ ವಿಶ್ವಯುದ್ದದ ಸಮಯದಲ್ಲಿ ಯೋಧರಿಗೆ ಹಸಿ ಆಲುಗಡ್ಡೆಯನ್ನೇ ಪ್ರಮುಖ ಆಹಾರವಾಗಿ ನೀಡಲಾಗುತ್ತಿತ್ತು. ಇದನ್ನು ತಿನ್ನುವ ಯೋಧರಿಗೆಂದೂ ವಾಯುಪ್ರಕೋಪದ ತೊಂದರೆ ಕಂಡುಬಂದಿರಲಿಲ್ಲ. ಬಳಿಕ ಆಲುಗಡ್ಡೆಯ ಈ ಮಹತ್ವವನ್ನು ಅರಿತ ಜಗತ್ತು ಅಂದಿನಿಂದಲೂ ಆಲುಗಡ್ಡೆಯನ್ನು ರಸದ ರೂಪದಲ್ಲಿ ಸೇವಿಸಲು ಪ್ರಾರಂಭಿಸಿತು.<br />
<br />
ಬನ್ನಿ, ಆಲುಗಡ್ಡೆ ರಸದ ಸೇವನೆಯಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:<br />
<br />
1) ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ:<br />
ಇದರಲ್ಲಿ ಕರಗುವ ನಾರು ಸಹಾ ಉತ್ತಮ ಪ್ರಮಾಣದಲ್ಲಿದ್ದು ಹೆಚ್ಚಿನ್ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಅಂದರೆ ಆಲುಗಡ್ಡೆಯನ್ನು ಜೀರ್ಣಗೊಳಿಸಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಸಮಯ ಬೇಕು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರದೇ ನಿಧಾನವಾಗಿ ಏರುತ್ತದೆ. ಇದು ಮಧುಮೇಹಿಗಳಿಗೆ ವರದಾನವಾಗಿದ್ದು ತಮ್ಮ ನಿತ್ಯದ ಕೆಲಸಗಳನ್ನು ಯಾವುದೇ ತೊಂದರೆ ಇಲ್ಲದೇ ನಿರ್ವಹಿಸಲು ನೆರವಾಗುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲೂ ಸಾಧ್ಯವಾಗುತ್ತದೆ.<br />
<img alt="ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ" src="https://kannada.boldsky.com/img/2017/11/06-1509943142-1.jpg" /><br />
<br />
<br />
2) ಶ್ವಾಸಕೋಶದ ಕಾಯಿಲೆಗಳನ್ನುಕಡಿಮೆ ಮಾಡಲು ನೆರವಾಗುತ್ತದೆ:<br />
ಆಲುಗಡ್ಡೆಯಲ್ಲಿರುವ ಕೆಲವು ಪೋಷಕಾಂಶಗಳು ಕೆಲವಾರು ಬಗೆಯ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಗಟ್ಟಿ ಇನ್ನಷ್ಟು ಬೆಳೆಯುವುದರ ವಿರುದ್ದ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಹಾಗೂ ಶ್ವಾಸಕೋಶ ಸಂಬಂಧಿತ ರೋಗಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ.<br />
<img alt="ಶ್ವಾಸಕೋಶದ ಕಾಯಿಲೆಗಳನ್ನುಕಡಿಮೆ ಮಾಡಲು ನೆರವಾಗುತ್ತದೆ" src="https://kannada.boldsky.com/img/2017/11/06-1509943150-2.jpg" /><br />
<br />
3) ಉಸಿರಾಟದ ತೊಂದರೆ ನಿವಾರಿಸಲು ನೆರವಾಗುತ್ತದೆ:<br />
ಆಲುಗಡ್ಡೆಯ ರಸದ ಸೇವನೆಯಿಂದ ಉಸಿರಾಟಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿಸುವ ಮೂಲಕ ಶ್ವಾಸಕೋಶಗಳು ಹೆಚ್ಚಿನ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ.<br />
<br />
4) ಯೂರಿಕ್ ಆಮ್ಲ ಹಾಗೂ ಸಂಧಿವಾತಕ್ಕೆ ಉಪಶಮನ ನೀಡುತ್ತದೆ.<br />
ಆಲುಗಡ್ಡೆಯಲ್ಲಿರುವ ಉರಿಯೂತ ನಿವಾರಕ ಗುಣ ಮೂಳೆಗಂಟುಗಳು ಊದಿಕೊಂಡು ಎದುರಾಗಿದ್ದ ಸಂಧಿವಾತದಿಂದ ಉಪಶಮನ ನೀಡುತ್ತದೆ. ತನ್ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಯೂರಿಕ್ ಆಮ್ಲವನ್ನು ವಿಸರ್ಜಿಸಲು ನೆರವಾಗುತ್ತದೆ. ವಿಶೇಷವಾಗಿ, ಆಲುಗಡ್ಡೆ ರಸ ಯೂರಿಕ್ ಆಮ್ಲದೊಡನೆ ಸಂಯೋಜನೆಗೊಂಡು ತಟಸ್ಥಗೊಳಿಸಲು ನೆರವಾಗುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಸಂಧಿವಾತವೂ ಕಡಿಮೆಯಾಗುತ್ತದೆ.<br />
<img alt="ಯೂರಿಕ್ ಆಮ್ಲ ಹಾಗೂ ಸಂಧಿವಾತಕ್ಕೆ ಉಪಶಮನ ನೀಡುತ್ತದೆ" src="https://kannada.boldsky.com/img/2017/11/06-1509943165-4.jpg" /><br />
<br />
5) ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ<br />
ಇದರಲ್ಲಿರುವ ವಿಟಮಿನ್ ಬಿ ಕಾಂಪ್ಲೆಕ್ಸ್ ರಕ್ತಕಣಗಳು ಆಮ್ಲಜನಕವನ್ನು ಕೊಂಡೊಯ್ಯುವ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಹೆಚ್ಚುವರಿ ಆಮ್ಲಜನಕ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುವ ಮೂಲಕ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ.<br />
<img alt="ಕೀಲುನೋವನ್ನು ಗುಣಪಡಿಸಲು ನೆರವಾಗುತ್ತದೆ" src="https://kannada.boldsky.com/img/2017/11/06-1509943182-6.jpg" /><br />
<br />
6) ಕೀಲುನೋವನ್ನು ಗುಣಪಡಿಸಲು ನೆರವಾಗುತ್ತದೆ:<br />
ಇದರಲ್ಲಿರುವ ಪ್ರಬಲ ಉರಿಯೂತ ನಿವಾರಕ ಗುಣ ಕೀಲುನೋವು ಹಾಗೂ ಗಂಟುಗಳನ್ನು ಮಡಚುವಾಗ ಆಗುವ ಉರಿಯನ್ನು ಕಡಿಮೆಗೊಳಿಸುತ್ತದೆ. ನಿಯಮಿತ ಸೇವನೆಯಿಂದ ಕೀಲುನೋವು ಕಡಿಮೆಯಾಗುತ್ತದೆ ಹಾಗೂ ಸಂಧಿವಾತವನ್ನೂ ಗುಣಪಡಿಸುತ್ತದೆ.<br />
<br />
7) ಬೆನ್ನುನೋವು ಕಡಿಮೆಗೊಳಿಸಲು ನೆರವಾಗುತ್ತದೆ:<br />
ಬೆನ್ನುನೋವು ಸಹಾ ಸಂಧಿವಾತದಂತೆಯೇ ನೋವು ಕೊಡುವ ತೊಂದರೆಯಾಗಿದ್ದು ನಿಯಮಿತವಾಗಿ ಆಲುಗಡ್ಡೆ ರಸ ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಬೆನ್ನುನೋವಿಗೆ ಆಲುಗಡ್ಡೆಯನ್ನು ದಪ್ಪನೆಯ ಬಿಲ್ಲೆಗಳಾಗಿ ಕತ್ತರಿಸಿ ನೋವಿರುವ ಭಾಗದ ಮೇಲೆ ಇರಿಸುವುದರಿಂದಲೂ ತಕ್ಷಣ ಪರಿಹಾರ ಪಡೆಯಬಹುದು. ವಿಶೇಷವಾಗಿ ನೋವಿರುವ ಭಾಗದಲ್ಲಿ ಊದಿಕೊಂಡಿದ್ದು ಚರ್ಮ ಕೆಂಪಗಾಗಿದ್ದರೆ ಈ ವಿಧಾನ ತುಂಬಾ ಉಪಯುಕ್ತವಾಗಿದೆ.<br />
<img alt=" ಬೆನ್ನುನೋವು ಕಡಿಮೆಗೊಳಿಸಲು ನೆರವಾಗುತ್ತದೆ" src="https://kannada.boldsky.com/img/2017/11/06-1509943190-7.jpg" /><br />
<br />
8) ತೂಕ ಇಳಿಸಲು ನೆರವಾಗುತ್ತದೆ:<br />
ಇದರಲ್ಲಿರುವ ವಿಟಮಿನ್ ಸಿ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ನಿತ್ಯವೂ ಕೊಂಚ ಆಲುಗಡ್ಡೆಯ ರಸವನ್ನು ಸೇವಿಸುವ ಮೂಲಕ ದೇಹದಲ್ಲಿ ಹಸಿವಾಗುವುದನ್ನು ಕಡಿಮೆಗೊಳಿಸಿ ಅನಗತ್ಯವಾಗಿ ಹೆಚ್ಚುವರಿ ಆಹಾರವನ್ನು ತಿನ್ನುವುದರಿಂದ ತಡೆಯಬಹುದು. ಪರಿಣಾಮವಾಗಿ ತೂಕ ಇಳಿಕೆಯ ಪ್ರಯತ್ನಗಳು ಹೆಚ್ಚು ಫಲಕಾರಿಯಾಗುತ್ತವೆ.<br />
<img alt="ತೂಕ ಇಳಿಸಲು ನೆರವಾಗುತ್ತದೆ" src="https://kannada.boldsky.com/img/2017/11/06-1509943199-8.jpg" /><br />
9) ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ:<br />
ದೇಹದ ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಆಲುಗಡ್ಡೆಯ ರಸ ಉತ್ತಮ ಆಯ್ಕೆಯಾಗಿದೆ. ಇದು ದೇಹದಿಂದ ಅನಗತ್ಯ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಯಕೃತ್ ಮತ್ತು ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಿ ಇವುಗಳ ಆರೋಗ್ಯವನ್ನೂ ವೃದ್ದಿಸುತ್ತದೆ.<br />
<img alt="ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ" src="https://kannada.boldsky.com/img/2017/11/06-1509943208-9.jpg" /><br />
<br />
10) ವಾಯುಪ್ರಕೋಪ ಗುಣಪಡಿಸಲು ನೆರವಾಗುತ್ತದೆ.<br />
ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ನಿಷ್ಫಲಗೊಳಿಸುವ ಮೂಲಕ ಆಲುಗಡ್ಡೆಯ ರಸ ಹಲವಾರು ವಾಯುಪ್ರಕೋಪ ಆಧಾರಿತ ತೊಂದರೆಗಳನ್ನು ಗುಣಪಡಿಸುತ್ತದೆ. ಇದರ ಕ್ಷಾರೀಯ ಗುಣ ಜಠರರಸದ ಆಮ್ಲೀಯತೆಯನ್ನು ಸೌಮ್ಯಗೊಳಿಸಿ ಜೀರ್ಣಕ್ರಿಯೆ ಸುಲಭಗೊಳಿಸಲು ನೆರವಾಗುತ್ತದೆ. ಹಸಿ ಆಲುಗಡ್ಡೆಯಂತೆಯೇ ಆಲುಗಡ್ಡೆಯ ರಸವೂ ಕೊಂಚ ಕಹಿಯಾಗಿರುವ ಕಾರಣ ಹೆಚ್ಚಿನವರು ಇದನ್ನು ಕುಡಿಯಲು ಹಿಂದೇಟು ಹಾಕುತ್ತಾರೆ. ಇದಕ್ಕೊಂದು ಸುಲಭ ಉಪಾಯವಿದೆ. ನಿಮ್ಮ ನೆಚ್ಚಿನ ಹಣ್ಣಿನ ರಸದೊಂದಿಗೆ ಬೆರೆಸಿ ಕುಡಿಯುವುದು. ಇದರಿಂದ ಎರಡೂ ಫಲಗಳ ಪ್ರಯೋಜನವನ್ನು ಪಡೆಯಬಹುದು. ಆಲುಗಡ್ಡೆಯ ರಸವನ್ನು ಹಿಂಡುವ ಮೊದಲು ಆಲುಗಡ್ಡೆ ತಾಜಾ ಇದೆ ಹಾಗೂ ಮೊಳಕೆಯೊಡೆದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ.<br />
<br /></div>
Arshad Hussainhttp://www.blogger.com/profile/13410279590093513740noreply@blogger.com0tag:blogger.com,1999:blog-8910708758309450943.post-89339701330740908652017-11-21T21:52:00.000+04:302017-11-22T07:56:09.482+04:30ಸೀತಾಫಲದ ನೀವು ಅರಿತಿರಲೇಬೇಕಾದ ಪ್ರಮುಖ ಆರೋಗ್ಯಕರ ಪ್ರಯೋಜನಗಳು<div dir="ltr" style="text-align: left;" trbidi="on">
ಒನ್ ಇಂಡಿಯಾ.ಕಾಂ ನಲ್ಲಿ ಪ್ರಕಟವಾಗಿರುವ ಲೇಖನ<br />
https://goo.gl/d9NRvv<br />
<br />
<img alt="ಅಸ್ತಮಾ ರೋಗ ಬರದಂತೆ ತಡೆಯುತ್ತದೆ" src="https://kannada.boldsky.com/img/2017/11/18-1510999806-24-1490338912-custardfruits1.jpg" /><br />
<br />
ಸೀತಾಫಲ ಒಂದು ಅದ್ಭುತವಾದ ಫಲವಾಗಿದ್ದು ಬಹುತೇಕ ಜನರ ನೆಚ್ಚಿನ ಹಣ್ಣೂ ಆಗಿದೆ. ಸಸ್ಯಶಾಸ್ತ್ರದಲ್ಲಿ ಆನೋನಾಸಿಯಾ (Annonacea) ಎಂಬ ವರ್ಗಕ್ಕೆ ಸೇರಿರುವ ಈ ಫಲವನ್ನು ಭಾರತದೆಲ್ಲೆಡೆ ಬೆಳೆಯಲಾಗುತ್ತಿದ್ದು ಎಲ್ಲೆಡೂ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಉಷ್ಣವಲಯದಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಈ ಮರದ ಕಾಂಡ ಅಷ್ಟೇನೂ ದೃಢವಲ್ಲ. ಅಲ್ಲದೇ ಆಲುಗಡ್ಡೆಯಂತೆಯೇ ಈ ಹಣ್ಣಿನ ಆಕೃತಿಯೂ ಒಂದೇ ರೀತಿಯಾಗಿಲ್ಲ. ಕೆಲವು ದುಂಡಗಿದ್ದರೆ ಕೆಲವು ಮೊಟ್ಟೆಯಾಕಾರ, ಕೆಲವು ಮಾವಿನಂತೆ ಒಟ್ಟಾರೆ ಬೇರೆಬೇರೆಯಾಗಿರುತ್ತದೆ. ಆದರೆ ಹೊರಭಾಗ ನಸು ಹಸಿರು ಬಣ್ಣದ ಮೇಲೆ ಬೂದಿ ಎರಚಿದಂತಹ ಬಣ್ಣ ಪಡೆದಿದ್ದು ಒಳಭಾಗದಲ್ಲಿ ನೂರಾರು ಬೀಜಗಳಿರುತ್ತವೆ. ಪ್ರತಿ ಬೀಜವನ್ನೂ, ಅತಿ ಸಿಹಿಯಾದ ಹಣ್ಣಿನ ತಿರುಳು ಆವರಿಸಿಕೊಂಡಿರುತ್ತದೆ. ಈ ಬೀಜಗಳು ಗಟ್ಟಿಯಾಗಿದ್ದು ಕೊಂಚ ವಿಷಕಾರಿಯೂ ಆಗಿರುವ ಕಾರಣ ಬೀಜಗಳನ್ನು ತಿನ್ನಬಾರದು. ತಿರುಳಿನ ಭಾಗ ಹಾಗೂ ಸಿಪ್ಪೆಯ ಒಳಭಾಗವನ್ನೂ ಕೆರೆದು ಸೇವಿಸಬಹುದು. ಈ ತಿರುಳಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ದೇಹದ ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಲು ನೆರವಾಗುತ್ತವೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ನಿಯಾಸಿನ್, ವಿಟಮಿನ್ ಎ, ಕರಗುವ ನಾರು ಹಾಗೂ ಮೆಗ್ನೇಶಿಯಂ ಸಹಾ ಇವೆ.<br />
<br />
ಅಲ್ಲದೇ ಈ ಹಣ್ಣಿನ ಸೇವನೆಯಿಂದ ಹೆಚ್ಚಿನ ಕ್ಯಾಲೋರಿಗಳೂ ದೊರಕುತ್ತವೆ ಹಾಗೂ ನೈಸರ್ಗಿಕ ಸಕ್ಕರೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಸೀತಾಫಲವನ್ನು ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಇದರ ತಿರುಳನ್ನು ನೇರವಾಗಿಯೂ ಸೇವಿಸಬಹುದು ಅಥವಾ ಸ್ಮೂಥಿ, ಜ್ಯೂಸ್, ರಾಸಾಯನ, ಐಸ್ ಕ್ರೀಂ ಗಳ ರೂಪದಲ್ಲಿಯೂ ಸೇವಿಸಬಹುದು. ಇದರ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಪಟ್ಟಿ ಬಹಳ ದೊಡ್ಡದಿದ್ದು ನಿಮ್ಮನ್ನು ಚಕಿತಗೊಳಿಸಬಹುದು. ಇದು ಕೇವಲ ಉತ್ತಮ ಆರೋಗ್ಯ ಮಾತ್ರವಲ್ಲ, ತ್ವಚೆ, ಕೂದಲು, ರಕ್ತದೊತ್ತಡ ನಿರ್ವಹಣೆ, ಆರೋಗ್ಯಕರ ಮೂಳೆಗಳು ಮೊದಲಾದ ಹಲವು ಪ್ರಯೋಜನಗಳನ್ನೂ ಒದಗಿಸುತ್ತದೆ. ಈ ಮರದ ಎಲೆಗಳಲ್ಲಿ ಸಹಾ ಔಷಧೀಯ ಗುಣವಿದ್ದು ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುತ್ತದೆ. ಮರದ ಕಾಂಡದ ತೊಗಟೆಯನ್ನು ಹಲ್ಲುನೋವು ಮತ್ತು ಒಸಡುಗಳ ನೋವಿನ ಶಮನಕ್ಕಾಗಿ ಬಳಸಲಾಗುತ್ತದೆ. ಇಂದಿನ ಲೇಖನದಲ್ಲಿ ಸೀತಾಫಲದ ಹತ್ತು ಪ್ರಮುಖ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ:<br />
<br />
೧) ಅಸ್ತಮಾ ರೋಗ ಬರದಂತೆ ತಡೆಯುತ್ತದೆ:<br />
ಇದರಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ B6 ವಿಶೇಷವಾಗಿ ಶ್ವಾಸನಾಳಗಳ ಉರಿಯೂತವನ್ನು ತಡೆಯುವ ಕ್ಷಮತೆ ಹೊಂದಿದ್ದು ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸಿ ಅಸ್ತಮಾಘಾತ ಎದುರಾಗುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.<br />
<br />
೨) ಹೃದಯಾಘಾತದಿಂದ ರಕ್ಷಿಸುತ್ತದೆ:<br />
ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರಗಳು ನಮ್ಮ ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲ, ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯಸಂಬಂಧಿ ರೋಗಗಳಿಗೂ ಆಹ್ವಾನ ನೀಡುತ್ತಿವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೃದಯದ ಕ್ಷಮತೆಗೆ ಅಗತ್ಯವಾಗಿದೆ. ಸೀತಾಫಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಲು ಪೂರಕವಾದ ಹಲವು ಪೋಷಕಾಂಶಗಳಿವೆ. ವಿಶೇಷವಾಗಿ ಇದರಲ್ಲಿರುವ ಮೆಗ್ನೇಶಿಯಂ ಹೃದಯದ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಸ್ನಾಯುಗಳ ಸೆಡೆತವನ್ನು ಕಡಿಮೆಗೊಳಿಸಿ ರಕ್ತಸಂಚಾರ ಸುಗಮಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್ B6 ರಕ್ತದಲ್ಲಿ ಹೀಮೋಸಿಸ್ಟೈನ್ (homocystein)(ಅಥವಾ ಪ್ರೋಟೀನುಗಳಲ್ಲಿರುವ ಗಂಧಕ ಆಧಾರಿತ ಅಮೈನೋ ಆಮ್ಲ ಹಾಗೂ ಸಿಸ್ಟೈನ್ ಎಂಬ ಕಿಣ್ವಗಳ ನಡುವಣ ಜೀವರಾಸಾಯನಿಕ ಕ್ರಿಯೆಗೆ ಸಹಕರಿಸುವ ಕಿಣ್ವ) ಸಂಗ್ರಹವನ್ನು ಕಡಿಮೆಗೊಳಿಸಿ ಈ ಮೂಲಕ ಎದುರಾಗಬಹುದಾಗಿದ್ದ ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.<br />
<br />
೩) ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ<br />
ಮಧುಮೇಹ ಇಂದು ಹೆಚ್ಚು ಹೆಚ್ಚು ಜನರಲ್ಲಿ ಕಂಡುಬರುತ್ತಿದ್ದು ವಿಶ್ವದಾದ್ಯಂತ ಪ್ರಮುಖ ಕೊಲೆಗಾರ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹ ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಕಾಲ ಮುಂದೂಡಬಹುದು. ಇದರಲ್ಲಿರುವ ಕರಗುವ ನಾರು ಆಹಾರದಲ್ಲಿರುವ ಸಕ್ಕರೆಯನ್ನು ಕರುಳುಗಳು ಹೀರಿಕೊಳ್ಳಲು ನೆರವಾಗುತ್ತದೆ, ತನ್ಮೂಲಕ ಟೈಪ್ ೨ ವಿಧದ ಮಧುಮೇಹದ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಮಧುಮೇಹದ ವಿರುದ್ದ ಇನ್ನಷ್ಟು ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತವೆ. ಇವೆಲ್ಲಾ ಕಾರಣಗಳಿಂದ ಮಧುಮೇಹಿಗಳು ಹಾಗೂ ಮಧುಮೇಹದ ಅನುವಂಶಿಕ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಸೀತಾಫಲ ಸೂಕ್ತ ಫಲವಾಗಿದೆ.<br />
<br />
೪) ಜೀರ್ಣಕ್ರಿಯೆಗೆ ಸಹಕರಿಸುತ್ತದೆ:<br />
ಇದರ ತಿರುಳು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲ, ಜಠರ ಹಾಗೂ ಕರುಳುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ಇಲ್ಲವಾಗಿಸುತ್ತದೆ. ವಿಶೇಷವಾಗಿ ಕರುಳುಗಳಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಅಜೀರ್ಣತೆಯಿಂದ ಎದುರಾಗುವ ಹೊಟ್ಟೆಯುರಿ, ಕರುಳಿನ ಹುಣ್ಣು, ಆಮ್ಲೀಯತೆ, ಹುಳಿತೇಗು ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ. ಒಂದು ಮಧ್ಯಮ ಗಾತ್ರದ ಸೀತಾಫಲದಲ್ಲಿ ಆರು ಗ್ರಾಂಗಳಷ್ಟು ಕರಗುವ ನಾರು ಇದ್ದು ಈ ಪ್ರಮಾಣ ಮಲಬದ್ದತೆಯಿಂದ ರಕ್ಷಿಸಲು ಸೂಕ್ತವಾಗಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ದೊರೆತಾಗ ತಿರುಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಿಟ್ಟು ಪುಡಿಯಾಗಿಸಿದರೆ ಈ ಪುಡಿಯನ್ನು ವರ್ಷವಿಡೀ ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ಅತಿಸಾರ ಹಾಗೂ ಬೇಧಿಗೆ ಔಷಧಿಯಾಗಿ ಬಳಸಬಹುದು.<br />
<br />
೫) ಕೊಲೆಸ್ಟ್ರಾಲ್ ಕಡಿಮೆಯಾಗಿಸುತ್ತದೆ:<br />
ಇದರಲ್ಲಿರುವ ನಿಯಾಸಿನ್ ಹಾಗೂ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಹಾಗೂ ಒಳ್ಳೆಯ ಕೊಲೆಸ್ಟಾರ್ ಅನ್ನು ಹೆಚ್ಚು ಮಾಡುತ್ತವೆ. ಅಲ್ಲದೇ ಆಹಾರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕರುಳುಗಳು ಹೀರಿಕೊಳ್ಳುವುದರಿಂದ ರಕ್ಷಿಸುತ್ತವೆ. ಅಲ್ಲದೇ ನಮ್ಮ ದೇಹದಲ್ಲಿರುವ ಕಿಣ್ವಗಳ ಮೇಲೆ ಆಕ್ರಮಣ ಎಸಗುವ ಫ್ರೀ ರ್ಯಾಡಿಕಲ್ ಎಂಬ ಕಣಗಳಿಂದಲೂ ರಕ್ಷಣೆ ಒದಗಿಸುತ್ತದೆ.<br />
<br />
೬) ಹೃದಯದ ಒತ್ತಡ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ:<br />
ಇದರಲ್ಲಿ ಸಮತೋಲನದ ಪ್ರಮಾಣದಲ್ಲಿ ಸೋಡಿಯಂ ಹಾಗೂ ಪೊಟ್ಯಾಶಿಯಂ ಲವಣಗಳಿವೆ. ಇವು ರಕ್ತದ ಒತ್ತಡದ ಏರುಪೇರನ್ನು ನಿಯಂತ್ರಿಸಲು ಅಗತ್ಯವಾಗಿದೆ. ಮೆಗ್ನೀಶಿಯಂ ಪ್ರಮಾಣ ಕೊಂಚ ಹೆಚ್ಚಿರುವ ಕಾರಣ ಹೃದಯದ ಸ್ನಾಯುಗಳನ್ನು ನಿರಾಳಗೊಳಿಸಿ ಈ ಮೂಲಕ ಎದುರಾಗುವ ಸೆಳೆತ ಹಾಗೂ ನಡುನಡುವೆ ಎದುರಾಗುವ ನೂಕಲುಗಳಿಂದ ರಕ್ಷಿಸುತ್ತದೆ. ತನ್ಮೂಲಕ ಹೃದಯಾಘಾತ ಹಾಗೂ ಸ್ತಂಭನಗಳ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.<br />
<br />
೭) ರಕ್ತಹೀನತೆಯ ಚಿಕಿತ್ಸೆಗೆ ನೆರವಾಗುತ್ತದೆ:<br />
ಸೀತಾಫಲದಲ್ಲಿ ಪ್ರಚೋದಕ, ಕಫ ನಿವಾರಕ, ದೇಹವನ್ನು ತಂಪುಮಾಡುವ ಹಾಗೂ ಅಸ್ತಿಮಜ್ಜೆಗಳಲ್ಲಿ ರಕ್ತಕಣಗಳ ಉತ್ಪಾದನೆಗೆ ಸಹಕರಿಸುವ ಗುಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ತಾಮ್ರ, ಕಬ್ಬಿಣಗಳೂ ಇದ್ದು ರಕ್ತಕಣಗಳ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತವೆ. ಈ ಗುಣಗಳು ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉತ್ತಮವಾಗಿವೆ.<br />
<br />
೮) ಗರ್ಭಿಣಿಯರಿಗೂ ಸೂಕ್ತವಾಗಿದೆ:<br />
ಇದರಲ್ಲಿರುವ ತಾಮ್ರ ಮತ್ತು ಕಬ್ಬಿಣ ರಕ್ತದ ಹೀಮೋಗ್ಲೋಬಿನ್ ನಲ್ಲಿರುವ ಪ್ರಮುಖ ಘಟಕಗಳಾಗಿರುವ ಕಾರಣದಿಂದ ವಿಶೇಷವಾಗಿ ಗರ್ಭಿಣಿಯರು ಈ ಫಲವನ್ನು ಹೆಚ್ಚಾಗಿ ಸೇವಿಸಲು ಸಲಹೆ ಮಾಡಲಾಗುತ್ತದೆ.<br />
<br />
೯) ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:<br />
ಸೀತಾಫಲದಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಆಂಟಿ ಆಕ್ಸಿಡೆಂಟು ಅಥವಾ ವಿಟಮಿನ್ ಸಿ ಇದೆ. ವಿಟಮಿನ್ ಸಿ ಅತ್ಯುತ್ತಮವಾದ ಉರಿಯೂತ ನಿವಾರಕ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶವಾಗಿದೆ. ನಿತ್ಯವೂ ಒಂದು ಪ್ರಮಾಣದ ಸೀತಾಫಲವನ್ನು ಸೇವಿಸುವ ಮೂಲಕ ದೇಹ ಚಿಕ್ಕಪುಟ್ಟ ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ದೇಹಕ್ಕೆ ಹಾನಿಕರವಾದ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದವೂ ಈ ಪೋಷಕಾಂಶ ಹೋರಾಡುವ ಮೂಲಕ ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.<br />
<br />
೧೦) ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ತೂಕವನ್ನು ನೀಡುತ್ತದೆ:<br />
ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ದೈಹಿಕ ಚಟುವಟಿಕೆಯಿಂದ ಬೇಗನೇ ಸುಸ್ತಾಗುವುದರಿಂದ ತಡೆಯುತ್ತದೆ. ಅಲ್ಲದೇ ಸ್ನಾಯುಗಳು ಬೇಗನೇ ದಣಿಯಲು ಬಿಡದೇ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ತೂಕ ಕಡಿಮೆಯಿದ್ದು ತೂಕ ಹೆಚ್ಚಿಸಿಕೊಳ್ಳಬಯಸುವ ವ್ಯಕ್ತಿಗಳಿಗೂ ಈ ಫಲ ಅತ್ಯಂತ ಸೂಕ್ತವಾಗಿದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವ ಕಾರಣ ಹಸಿವೂ ಹೆಚ್ಚಾಗುತ್ತದೆ. ಆದರೆ ಇದೇ ಗುಣ ಸ್ಥೂಲದೇಹವನ್ನು ಇನ್ನಷ್ಟು ಸ್ಥೂಲವಾಗಿಸುವ ಕಾರಣ ಸ್ಥೂಲದೇಹಿಗಳು ಈ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವಿಸಬೇಕು.</div>
Arshad Hussainhttp://www.blogger.com/profile/13410279590093513740noreply@blogger.com1tag:blogger.com,1999:blog-8910708758309450943.post-2449891947671900512017-01-15T18:35:00.001+04:302017-01-15T18:35:46.926+04:30ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ<div dir="ltr" style="text-align: left;" trbidi="on">
<div dir="auto">
<div dir="auto">
<span id="goog_703731584"></span><a href="https://www.blogger.com/"></a><span id="goog_703731585"></span> </div>
<div dir="auto">
</div>
<div dir="auto">
ಮಾನವನಲ್ಲಿ
ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು
ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ
ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ
ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು
ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ.ಮಧುಮೇಹದ ವಿಚಾರದಲ್ಲಿ ಹೇಳುವುದಾದರೆ,
ವೈದ್ಯರಿ೦ದ ಶಿಫಾರಿಸಲ್ಪಟ್ಟ, ಔಷಧಗಳ ಸೇವನೆಯು ಮುಖ್ಯವಾಗಿದ್ದರೂ ಸಹ, ನೈಸರ್ಗಿಕವಾದ
ರೀತಿಯಲ್ಲಿ ಮಧುಮೇಹವನ್ನು ಸರಿದಾರಿಗೆ ತರುವುದು ಇನ್ನೂ ಸುಲಭ.ಮಧುಮೇಹದ
ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ
ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು.
ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ
ರೋಗಿಗಳಿಗೆ ಅತ್ಯುತ್ತಮವಾಗಿದೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ
ಮನೆಮದ್ದುಇಷ್ಟೇ ಅಲ್ಲದೆ ನಿಮ್ಮ ಅನೇಕ ಆರೋಗ್ಯ ಸ೦ಬ೦ಧೀ ತೊ೦ದರೆಗಳಿಗೆ ಅದು
ಪರಿಹಾರವನ್ನು ಒದಗಿಸಬಲ್ಲದು. ಇದರಲ್ಲಿರುವ ಬೃಹತ್ ಪ್ರಮಾಣದ acetogenin ಗಳು ಮಧುಮೇಹ
ವಿರುದ್ಧ ಹೋರಾಡುವುದು ಮಾತ್ರವಲ್ಲದೇ, ಇವು ಇನ್ನೂ ಅನೇಕ ಇತರ ಆರೋಗ್ಯಕಾರಿ
ಪ್ರಯೋಜನಗಳನ್ನು ಹೊ೦ದಿವೆ...</div>
<div dir="auto">
</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEi6ly7_IImhZJFA9ZTTTrTijc0ipL6ouomxa24F6Exi-ehtoFn9vHFc0XhUkv-aRvdvIu9G5IO445iwQhwcEjPkh8zP6o4ayFUPINtTksbcmPcSTZPFxBQvGL5In6Psz5dhv5QUv6t6-A5T/s1600/sweet+potato.jpg" imageanchor="1" style="margin-left: 1em; margin-right: 1em;"><img border="0" height="212" src="https://blogger.googleusercontent.com/img/b/R29vZ2xl/AVvXsEi6ly7_IImhZJFA9ZTTTrTijc0ipL6ouomxa24F6Exi-ehtoFn9vHFc0XhUkv-aRvdvIu9G5IO445iwQhwcEjPkh8zP6o4ayFUPINtTksbcmPcSTZPFxBQvGL5In6Psz5dhv5QUv6t6-A5T/s320/sweet+potato.jpg" width="320" /></a></div>
<div dir="auto">
<br /> </div>
<div dir="auto">
ಮಧುಮೇಹಿಗಳಿಗೆ ಒಳ್ಳೆಯದು</div>
<div dir="auto">
ಸಿಹಿಗೆಣಸುಗಳಲ್ಲಿ
ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್
ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು
ಕಾಯ್ದುಕೊಳ್ಳುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಜೀರ್ಣಕ್ರಿಯೆಗೆ ಸಹಕಾರಿ</div>
<div dir="auto">
ಸಿಹಿ ಗೆಣಸಿನಲ್ಲಿ ಡಯಟೆರಿ ಫೈಬರ್ಗಳು ಅಧಿಕವಾಗಿರುತ್ತವೆ. ಇವು ಕೋಲನ್ ಕ್ಯಾನ್ಸರ್ ಬರದಂತೆ ತಡೆಯುತ್ತವೆ ಮತ್ತು ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.</div>
<div dir="auto">
</div>
<div dir="auto">
<br /></div>
<div dir="auto">
ವಾತರೋಗವನ್ನು ನಿವಾರಿಸುತ್ತದೆ</div>
<div dir="auto">
ವಾತ
ರೋಗ ಅಥವಾ ಎಂಫಿಸೆಮ ಎಂಬ ಕಾಯಿಲೆಯು ಧೂಮಪಾನಿಗಳನ್ನು ಹೆಚ್ಚಾಗಿ ಕಾಡುತ್ತದೆ. ಏಕೆಂದರೆ
ಅವರಿಗೆ ವಿಟಮಿನ್ ಎ ಸಮಸ್ಯೆಯಿಂದಾಗಿ ಅವರಿಗೆ ಇದು ಕಾಡುತ್ತದೆ (ಇದು ಶ್ವಾಸಕೋಶಗಳನ್ನು
ಹಾಳು ಮಾಡುತ್ತದೆ) ಸಿಹಿ ಗೆಣಸುಗಳಲ್ಲಿ ಕೆರೊಟಿನಾಯ್ಡ್ಗಳು ಹೆಚ್ಚಾಗಿ ಇರುತ್ತವೆ.
ಇವು ವಿಟಮಿನ್ ಎಯನ್ನು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತವೆ ಮತ್ತು ಅವು
ಶ್ವಾಸಕೋಶದ ವ್ಯವಸ್ಥೆಯನ್ನು ಮರು ನವೀಕರಿಸುತ್ತವೆ.</div>
<div dir="auto">
</div>
<div dir="auto">
<br /></div>
<div dir="auto">
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ</div>
<div dir="auto">
ಸಿಹಿ
ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಥೈರಾಯ್ಡ್
ಗ್ರಂಥಿಗಳ ಕಾರ್ಯ ಮಾಡಲು ಅತ್ಯಾವಶ್ಯಕ. ಜೊತೆಗೆ ಇದು ಹಲ್ಲು, ಮೂಳೆ, ಹೃದಯ, ತ್ವಚೆ
ಮತ್ತು ನಮ್ಮ ಶಕ್ತಿಯ ಮಟ್ಟದ ಕಾರ್ಯ ನಿರ್ವಹಿಸುವಿಕೆಯಲ್ಲಿ ಪ್ರಧಾನ ಪಾತ್ರ
ನಿರ್ವಹಿಸುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಆರೋಗ್ಯಕರ ಹೃದಯ</div>
<div dir="auto">
ಸಿಹಿ
ಗೆಣಸುಗಳಲ್ಲಿರುವ ಪೊಟಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ
ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ. ಜೊತೆಗೆ ಇದು ರಕ್ತದ
ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ಗಳನ್ನು
ಸಮತೋಲನದಲ್ಲಿಡುತ್ತದೆ. ಸಿಹಿಗೆಣಸುಗಳಲ್ಲಿ, ವಿಟಮಿನ್ ಬಿ6 ಹೆಚ್ಚಾಗಿರುತ್ತದೆ. ಇದು
ಪಾರ್ಶ್ವವಾಯು, ಪದೇ ಪದೇ ಕಾಣಿಸಿಕೊಳ್ಳುವ ರೋಗಗಳು ಮತ್ತು ಹೃದ್ರೋಗಗಳನ್ನು
ತಡೆಯುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಆರೋಗ್ಯಕರ ಮೂಳೆಗಳಿಗೆ</div>
<div dir="auto">
ಪೊಟಾಶಿಯಂ
ಅಥ್ಲೆಟ್ಗಳಿಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಸ್ನಾಯು ಸೆಳೆತದ ಮೇಲೆ ಹೋರಾಡುತ್ತದೆ
ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಸ್ನಾಯುಗಳು ವಿಶ್ರಾಂತಿಯನ್ನು
ಪಡೆಯಲು ಸಹ ನೆರವು ನೀಡುತ್ತದೆ. ಸಿಹಿ ಗೆಣಸುಗಳು, ನರಗಳಿಂದ ಹೊರಡುವ ಸಂಕೇತಗಳನ್ನು
ಮತ್ತು ಹೃದಯದ ಬಡಿತಗಳನ್ನು ಸಹ ಸರಾಗಗೊಳಿಸಬಲ್ಲವು.</div>
<div dir="auto">
</div>
<div dir="auto">
<br /></div>
<div dir="auto">
ಆಂಟಿ-ಆಕ್ಸಿಡೆಂಟ್</div>
<div dir="auto">
ಸಿಹಿ
ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ನಿಂದ
ನಮ್ಮನ್ನು ಕಾಪಾಡುತ್ತವೆ. ಇದು ಅಸ್ತಮಾ, ಸಂಧಿವಾತ ಮತ್ತು ಅರ್ಥರಿಟಿಸ್ ಸಮಸ್ಯೆಗಳಿಗೆ
ಉಪಶಮನ ನೀಡುತ್ತದೆ. ಜೊತೆಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಭ್ರೂಣದ ಬೆಳವಣಿಗೆ</div>
<div dir="auto">
ಸಿಹಿಗೆಣಸುಗಳಲ್ಲಿ ಫೊಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಒತ್ತಡ-ನಿವಾರಕ</div>
<div dir="auto">
ಸಿಹಿ
ಗೆಣಸುಗಳಲ್ಲಿ ದೊರೆಯುವ ಮೆಗ್ನಿಶಿಯಂನಲ್ಲಿ ಒತ್ತಡ ನಿವಾರಕ ಅಂಶ ಅಡಗಿರುತ್ತದೆ. ಯಾವಾಗ
ಪೊಟಾಶಿಯಂ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಒದಗಿಸುತ್ತದೋ, ಆಗ ಹೃದಯದ ಬಡಿತವು
ಸಾಮಾನ್ಯವಾಗುತ್ತದೆ ಮತ್ತು ಆಮ್ಲಜನಕದ ಹರಿವು ಸರಾಗವಾಗುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಯೌವನದಿಂದ ಕೂಡಿದ ತ್ವಚೆಗಾಗಿ</div>
<div dir="auto">
ಸಿಹಿಗೆಣಸುಗಳನ್ನು
ಬೇಯಿಸಿರುವ ನೀರನ್ನು ನಿಮ್ಮ ಮುಖವನ್ನು ತೊಳೆಯಲು ಬಳಸಿ. ಇದರಿಂದ ನಿಮ್ಮ ಮುಖದಲ್ಲಿರುವ
ಕಲೆಗಳು, ರಂಧ್ರಗಳು ಮತ್ತು ಧೂಳು ಎಲ್ಲವೂ ನಿವಾರಣೆಯಾಗುತ್ತದೆ. ಇದರಲ್ಲಿರುವ ವಿಟಮಿನ್
ಸಿಯು ಕೊಲ್ಲಾಜೆನ್ ಉತ್ಪಾದನೆಗೆ ಸಹಕರಿಸುತ್ತದೆ, ವಿಟಮಿನ್ ಡಬ್ಲ್ಯೂ ತ್ವಚೆಯ
ಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಂಥೋಸಿಯಾನಿನ್ಗಳು ಸುಕ್ಕುಗಳನ್ನು, ಕಪ್ಪು
ವೃತ್ತಗಳನ್ನು ಸಹ ನಿವಾರಿಸಿ, ಕಣ್ಣುಗಳು ಕಾಂತಿಯಿಂದ ಕಂಗೊಳಿಸಲು ನೆರವು ನೀಡುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಋತು ಚಕ್ರ ಪೂರ್ವ ಸಮಸ್ಯೆಗಳು</div>
ಮ್ಯಾಂಗನೀಸ್
ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ
ಸಮಸ್ಯೆಗಳನ್ನು ನಿವಾರಿಸುತ್ತವೆ. ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ*</div>
<div dir="auto">
<br /></div>
<div dir="auto">
ಮಾನವನಲ್ಲಿ
ಪ್ರಕೃತಿದತ್ತವಾಗಿಯೇ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗನಿರೋಧಕ ಶಕ್ತಿಯು
ಆತನಿಗೆ ಇರುವ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಶಕ್ತವಾಗಿದೆ. ಇದರ ಜೊತೆಗೆ
ಪ್ರಕೃತಿಯ ಮಡಿಲಿನಲ್ಲಿ ಉತ್ಪನ್ನವಾಗುವ ಅನೇಕ ಗಿಡಮೂಲಿಕೆಗಳು, ತರಕಾರಿಗಳು, ಹಾಗೂ
ಹಣ್ಣುಹ೦ಪಲು ಮಾನವನನ್ನು ಮಾರಣಾ೦ತಿಕ ರೋಗಗಳಿ೦ದ ರಕ್ಷಿಸಬಲ್ಲ ಸಾಮರ್ಥ್ಯವನ್ನು
ಹೊ೦ದಿರುವ ವಿಷಯವ೦ತೂ ಸೋಜಿಗವೆ೦ದೆನಿಸುತ್ತದೆ.ಮಧುಮೇಹದ ವಿಚಾರದಲ್ಲಿ ಹೇಳುವುದಾದರೆ,
ವೈದ್ಯರಿ೦ದ ಶಿಫಾರಿಸಲ್ಪಟ್ಟ, ಔಷಧಗಳ ಸೇವನೆಯು ಮುಖ್ಯವಾಗಿದ್ದರೂ ಸಹ, ನೈಸರ್ಗಿಕವಾದ
ರೀತಿಯಲ್ಲಿ ಮಧುಮೇಹವನ್ನು ಸರಿದಾರಿಗೆ ತರುವುದು ಇನ್ನೂ ಸುಲಭ.ಮಧುಮೇಹದ
ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ
ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು.
ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ
ರೋಗಿಗಳಿಗೆ ಅತ್ಯುತ್ತಮವಾಗಿದೆ. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ
ಮನೆಮದ್ದುಇಷ್ಟೇ ಅಲ್ಲದೆ ನಿಮ್ಮ ಅನೇಕ ಆರೋಗ್ಯ ಸ೦ಬ೦ಧೀ ತೊ೦ದರೆಗಳಿಗೆ ಅದು
ಪರಿಹಾರವನ್ನು ಒದಗಿಸಬಲ್ಲದು. ಇದರಲ್ಲಿರುವ ಬೃಹತ್ ಪ್ರಮಾಣದ acetogenin ಗಳು ಮಧುಮೇಹ
ವಿರುದ್ಧ ಹೋರಾಡುವುದು ಮಾತ್ರವಲ್ಲದೇ, ಇವು ಇನ್ನೂ ಅನೇಕ ಇತರ ಆರೋಗ್ಯಕಾರಿ
ಪ್ರಯೋಜನಗಳನ್ನು ಹೊ೦ದಿವೆ...</div>
<div dir="auto">
<br /></div>
<div dir="auto">
ಮಧುಮೇಹಿಗಳಿಗೆ ಒಳ್ಳೆಯದು</div>
<div dir="auto">
ಸಿಹಿಗೆಣಸುಗಳಲ್ಲಿ
ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್
ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು
ಕಾಯ್ದುಕೊಳ್ಳುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಜೀರ್ಣಕ್ರಿಯೆಗೆ ಸಹಕಾರಿ</div>
<div dir="auto">
ಸಿಹಿ ಗೆಣಸಿನಲ್ಲಿ ಡಯಟೆರಿ ಫೈಬರ್ಗಳು ಅಧಿಕವಾಗಿರುತ್ತವೆ. ಇವು ಕೋಲನ್ ಕ್ಯಾನ್ಸರ್ ಬರದಂತೆ ತಡೆಯುತ್ತವೆ ಮತ್ತು ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.</div>
<div dir="auto">
</div>
<div dir="auto">
<br /></div>
<div dir="auto">
ವಾತರೋಗವನ್ನು ನಿವಾರಿಸುತ್ತದೆ</div>
<div dir="auto">
ವಾತ
ರೋಗ ಅಥವಾ ಎಂಫಿಸೆಮ ಎಂಬ ಕಾಯಿಲೆಯು ಧೂಮಪಾನಿಗಳನ್ನು ಹೆಚ್ಚಾಗಿ ಕಾಡುತ್ತದೆ. ಏಕೆಂದರೆ
ಅವರಿಗೆ ವಿಟಮಿನ್ ಎ ಸಮಸ್ಯೆಯಿಂದಾಗಿ ಅವರಿಗೆ ಇದು ಕಾಡುತ್ತದೆ (ಇದು ಶ್ವಾಸಕೋಶಗಳನ್ನು
ಹಾಳು ಮಾಡುತ್ತದೆ) ಸಿಹಿ ಗೆಣಸುಗಳಲ್ಲಿ ಕೆರೊಟಿನಾಯ್ಡ್ಗಳು ಹೆಚ್ಚಾಗಿ ಇರುತ್ತವೆ.
ಇವು ವಿಟಮಿನ್ ಎಯನ್ನು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತವೆ ಮತ್ತು ಅವು
ಶ್ವಾಸಕೋಶದ ವ್ಯವಸ್ಥೆಯನ್ನು ಮರು ನವೀಕರಿಸುತ್ತವೆ.</div>
<div dir="auto">
</div>
<div dir="auto">
<br /></div>
<div dir="auto">
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ</div>
<div dir="auto">
ಸಿಹಿ
ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಥೈರಾಯ್ಡ್
ಗ್ರಂಥಿಗಳ ಕಾರ್ಯ ಮಾಡಲು ಅತ್ಯಾವಶ್ಯಕ. ಜೊತೆಗೆ ಇದು ಹಲ್ಲು, ಮೂಳೆ, ಹೃದಯ, ತ್ವಚೆ
ಮತ್ತು ನಮ್ಮ ಶಕ್ತಿಯ ಮಟ್ಟದ ಕಾರ್ಯ ನಿರ್ವಹಿಸುವಿಕೆಯಲ್ಲಿ ಪ್ರಧಾನ ಪಾತ್ರ
ನಿರ್ವಹಿಸುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಆರೋಗ್ಯಕರ ಹೃದಯ</div>
<div dir="auto">
ಸಿಹಿ
ಗೆಣಸುಗಳಲ್ಲಿರುವ ಪೊಟಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ
ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ. ಜೊತೆಗೆ ಇದು ರಕ್ತದ
ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ಗಳನ್ನು
ಸಮತೋಲನದಲ್ಲಿಡುತ್ತದೆ. ಸಿಹಿಗೆಣಸುಗಳಲ್ಲಿ, ವಿಟಮಿನ್ ಬಿ6 ಹೆಚ್ಚಾಗಿರುತ್ತದೆ. ಇದು
ಪಾರ್ಶ್ವವಾಯು, ಪದೇ ಪದೇ ಕಾಣಿಸಿಕೊಳ್ಳುವ ರೋಗಗಳು ಮತ್ತು ಹೃದ್ರೋಗಗಳನ್ನು
ತಡೆಯುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಆರೋಗ್ಯಕರ ಮೂಳೆಗಳಿಗೆ</div>
<div dir="auto">
ಪೊಟಾಶಿಯಂ
ಅಥ್ಲೆಟ್ಗಳಿಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಸ್ನಾಯು ಸೆಳೆತದ ಮೇಲೆ ಹೋರಾಡುತ್ತದೆ
ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಸ್ನಾಯುಗಳು ವಿಶ್ರಾಂತಿಯನ್ನು
ಪಡೆಯಲು ಸಹ ನೆರವು ನೀಡುತ್ತದೆ. ಸಿಹಿ ಗೆಣಸುಗಳು, ನರಗಳಿಂದ ಹೊರಡುವ ಸಂಕೇತಗಳನ್ನು
ಮತ್ತು ಹೃದಯದ ಬಡಿತಗಳನ್ನು ಸಹ ಸರಾಗಗೊಳಿಸಬಲ್ಲವು.</div>
<div dir="auto">
</div>
<div dir="auto">
<br /></div>
<div dir="auto">
ಆಂಟಿ-ಆಕ್ಸಿಡೆಂಟ್</div>
<div dir="auto">
ಸಿಹಿ
ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ನಿಂದ
ನಮ್ಮನ್ನು ಕಾಪಾಡುತ್ತವೆ. ಇದು ಅಸ್ತಮಾ, ಸಂಧಿವಾತ ಮತ್ತು ಅರ್ಥರಿಟಿಸ್ ಸಮಸ್ಯೆಗಳಿಗೆ
ಉಪಶಮನ ನೀಡುತ್ತದೆ. ಜೊತೆಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಭ್ರೂಣದ ಬೆಳವಣಿಗೆ</div>
<div dir="auto">
ಸಿಹಿಗೆಣಸುಗಳಲ್ಲಿ ಫೊಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಒತ್ತಡ-ನಿವಾರಕ</div>
<div dir="auto">
ಸಿಹಿ
ಗೆಣಸುಗಳಲ್ಲಿ ದೊರೆಯುವ ಮೆಗ್ನಿಶಿಯಂನಲ್ಲಿ ಒತ್ತಡ ನಿವಾರಕ ಅಂಶ ಅಡಗಿರುತ್ತದೆ. ಯಾವಾಗ
ಪೊಟಾಶಿಯಂ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಒದಗಿಸುತ್ತದೋ, ಆಗ ಹೃದಯದ ಬಡಿತವು
ಸಾಮಾನ್ಯವಾಗುತ್ತದೆ ಮತ್ತು ಆಮ್ಲಜನಕದ ಹರಿವು ಸರಾಗವಾಗುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಯೌವನದಿಂದ ಕೂಡಿದ ತ್ವಚೆಗಾಗಿ</div>
<div dir="auto">
ಸಿಹಿಗೆಣಸುಗಳನ್ನು
ಬೇಯಿಸಿರುವ ನೀರನ್ನು ನಿಮ್ಮ ಮುಖವನ್ನು ತೊಳೆಯಲು ಬಳಸಿ. ಇದರಿಂದ ನಿಮ್ಮ ಮುಖದಲ್ಲಿರುವ
ಕಲೆಗಳು, ರಂಧ್ರಗಳು ಮತ್ತು ಧೂಳು ಎಲ್ಲವೂ ನಿವಾರಣೆಯಾಗುತ್ತದೆ. ಇದರಲ್ಲಿರುವ ವಿಟಮಿನ್
ಸಿಯು ಕೊಲ್ಲಾಜೆನ್ ಉತ್ಪಾದನೆಗೆ ಸಹಕರಿಸುತ್ತದೆ, ವಿಟಮಿನ್ ಡಬ್ಲ್ಯೂ ತ್ವಚೆಯ
ಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಂಥೋಸಿಯಾನಿನ್ಗಳು ಸುಕ್ಕುಗಳನ್ನು, ಕಪ್ಪು
ವೃತ್ತಗಳನ್ನು ಸಹ ನಿವಾರಿಸಿ, ಕಣ್ಣುಗಳು ಕಾಂತಿಯಿಂದ ಕಂಗೊಳಿಸಲು ನೆರವು ನೀಡುತ್ತದೆ.</div>
<div dir="auto">
</div>
<div dir="auto">
<br /></div>
<div dir="auto">
ಋತು ಚಕ್ರ ಪೂರ್ವ ಸಮಸ್ಯೆಗಳು</div>
<div dir="auto">
ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.</div>
</div>
Arshad Hussainhttp://www.blogger.com/profile/13410279590093513740noreply@blogger.com0